AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ

2012ರಿಂದ 2 ಲಕ್ಷಕ್ಕಿಂತಲೂ ಹೆಚ್ಚು ಬಂದೂಕು ಪರವಾನಗಿಗಳು ಜಮ್ಮು-ಕಾಶ್ಮೀರದಿಂದ ಬೇರೆಬೇರೆಕಡೆಗೆ ಮಾರಾಟ ಆಗಿವೆ. ಇದು ಭಾರತದ ಅತ್ಯಂತ ದೊಡ್ಡ ನಕಲಿ ಬಂದೂಕು ಪರವಾನಗಿ ರಾಕೆಟ್​ ಎಂದೇ ಪರಿಗಣಿಸಲಾಗಿದ್ದು, ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ.

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ
ಜಮ್ಮು-ಕಾಶ್ಮೀರದ ವಿವಿಧೆಡೆ ಸಿಬಿಐ ದಾಳಿ
TV9 Web
| Updated By: Lakshmi Hegde|

Updated on: Jul 24, 2021 | 3:03 PM

Share

ಶ್ರೀನಗರ: ಜಮ್ಮು-ಕಾಶ್ಮೀರ ಮತ್ತು ದೆಹಲಿ ಸೇರಿ ಒಟ್ಟು 40 ಪ್ರದೇಶಗಳಲ್ಲಿ ಇಂದು ಸಿಬಿಐ (CBI) ತನಿಖಾ ದಳ ದಾಳಿ ನಡೆಸಿದೆ. ಬಂದೂಕು ಪರವಾನಗಿ (Gun Licenses) ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ರೇಡ್​ ನಡೆದಿದ್ದು, ಜಮ್ಮು-ಕಾಶ್ಮೀರ (Jammu-Kashmir)ದ ಹಿರಿಯ ಐಎಎಸ್​ ಅಧಿಕಾರಿ ಶಾಹೀದ್ ಇಕ್ಬಾಲ್​ ಚೌಧರಿ ಅವರ ಶ್ರೀನಗರದಲ್ಲಿರುವ ನಿವಾಸ ಸೇರಿ, ಉದ್ಧಾಂಪುರ, ರಾಜೌರಿ, ಅನಂತನಾಗ್​ ಮತ್ತು ಬಾರಾಮುಲ್ಲಾ ಸೇರಿ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ಇಕ್ಬಾಲ್​ ಚೌಧರಿಯವರು ಸದ್ಯ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿಯಾಗಿದ್ದಾರೆ ಮತ್ತು ಜಮ್ಮು-ಕಾಶ್ಮೀರದ ಮಿಷನ್ ಯೂತ್​ನ ಸಿಇಒನೂ ಹೌದು. ಈ ಹಿಂದೆ ಕಥುರಾ, ಕಥುವಾ, ರಿಯಾಸಿ, ರಾಜೌರಿಯಂಡ್ ಉಧಂಪುರ್ ಜಿಲ್ಲೆಗಳ ಜಿಲ್ಲಾಧಿಕಾರಿಯೂ ಆಗಿದ್ದರು. ಇವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೇರೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಾವಿರಾರು ಬಂದೂರು ಪರವಾನಗಿಗಳನ್ನು ನಕಲಿ ಹೆಸರುಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇವಲ ಇವರೊಬ್ಬರೇ ಅಲ್ಲದೆ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಎಂಟು ಮಂದಿ ಜಿಲ್ಲಾಧಿಕಾರಿಗಳ ಮೇಲೆ ಸಿಬಿಐ ಕಣ್ಣಿಟ್ಟಿದ್ದು, ತನಿಖೆ ನಡೆಸುತ್ತಿದೆ.

2012ರಿಂದ 2 ಲಕ್ಷಕ್ಕಿಂತಲೂ ಹೆಚ್ಚು ಬಂದೂಕು ಪರವಾನಗಿಗಳು ಜಮ್ಮು-ಕಾಶ್ಮೀರದಿಂದ ಬೇರೆಬೇರೆಕಡೆಗೆ ಮಾರಾಟ ಆಗಿವೆ. ಇದು ಭಾರತದ ಅತ್ಯಂತ ದೊಡ್ಡ ನಕಲಿ ಬಂದೂಕು ಪರವಾನಗಿ ರಾಕೆಟ್​ ಎಂದೇ ಪರಿಗಣಿಸಲಾಗಿದ್ದು, ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಕಳೆದ ವರ್ಷ ಐಎಎಸ್​ ಅಧಿಕಾರಿ ರಾಜೀವ್​ ರಂಜನ್​ ಎಂಬುವರು ಇದೇ ಕಾರಣಕ್ಕೆ ಅರೆಸ್ಟ್ ಆಗಿದ್ದರು. ಇವರು ಕುಪ್ವಾರಾ ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ಮಾರಾಟದಲ್ಲಿ ಪಾಲುದಾರರಾಗಿದ್ದರು. ಜಮ್ಮು-ಕಾಶ್ಮೀರದಲ್ಲಿ ನಡೆದ ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣದ ತನಿಖೆಯನ್ನು ಮಾಜಿ ಗವರ್ನರ್​ ಎಂ.ಎನ್​.ವೋಹ್ರಾ ಅವರು ಸಿಬಿಐಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳೇ ಪಾಲ್ಗೊಂಡಿದ್ದಾರೆ ಎಂಬುನ್ನು ಕಂಡುಕೊಂಡಿದ್ದ ವೋಹ್ರಾ, ಈ ಕ್ರಮ ಕೈಗೊಂಡಿದ್ದರು. ಅಂದ ಹಾಗೆ, ಈ ಲೈಸೆನ್ಸ್​ ಸ್ಕ್ಯಾಮ್​​ನ್ನು ಮೊದಲು ಪತ್ತೆ ಹಚ್ಚಿದ್ದು 2017ರಲ್ಲಿ ರಾಜಸ್ಥಾನದ ಆ್ಯಂಟಿ ಟೆರರ್​ ಸ್ಕ್ವಾಡ್​.

ಇದನ್ನೂ ಓದಿ: ನಾಲ್ಕು ಕ್ರಿಕೆಟ್ ತಂಡಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸುವ ಬೆಂಚ್ ಸಾಮರ್ಥ್ಯ ಟೀಂ ಇಂಡಿಯಾದಲ್ಲಿದೆ

ರಾಜ್ಯ ಉಳಿಸೋಕೆ ಕಾಂಗ್ರೆಸ್ ಪಕ್ಷವನ್ನ ತೆಗೆಯಬೇಕು”: ತುಮಕೂರಿನಲ್ಲಿ ಮಾತು ತಪ್ಪಿದ ಸಿದ್ದರಾಮಯ್ಯ

CBI Raids 40 Locations in related to Jammu Kashmir Gun License Scam

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!