AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HAL ನಿರ್ಮಿತ 83 ತೇಜಸ್ ಲಘು ಯುದ್ಧವಿಮಾನ ಖರೀದಿಗೆ ಕೇಂದ್ರದ ಅನುಮೋದನೆ

ಎಚ್​ಎಎಲ್​ನಿಂದ ಲಘು ಯುದ್ಧ ವಿಮಾನಗಳ ಖರೀದಿಯಿಂದಾಗಿ ಮೇಕ್​ ಇನ್​ ಇಂಡಿಯಾಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಇದು ಹೊಸ ಉದ್ಯೋಗಗಳ ಸೃಷ್ಟಿಗೆ ಸಹಾಯವಾಗುತ್ತದೆ. ಇಂದು ಭದ್ರತಾ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಿದ್ದು, ಐತಿಹಾಸಿಕ ನಿರ್ಧಾರವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

HAL ನಿರ್ಮಿತ 83 ತೇಜಸ್ ಲಘು ಯುದ್ಧವಿಮಾನ ಖರೀದಿಗೆ ಕೇಂದ್ರದ ಅನುಮೋದನೆ
ತೇಜಸ್ ಲಘು​ ಯುದ್ಧ ವಿಮಾನ
Lakshmi Hegde
| Edited By: |

Updated on:Jan 13, 2021 | 7:17 PM

Share

ನವದೆಹಲಿ: ಹಿಂದೂಸ್ತಾನ್ ಎರೊನಾಟಿಕ್ಸ್​ ಲಿಮಿಟೆಡ್ (ಎಚ್​ಎಎಲ್)​ ನಿರ್ಮಿತ 83 ತೇಜಸ್​ ಲಘು ಯುದ್ಧ ವಿಮಾನಗಳನ್ನು ₹ 48 ಸಾವಿರ ಕೋಟಿ ಮೊತ್ತಕ್ಕೆ ಖರೀದಿಸುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ. ಭಾರತದ ರಕ್ಷಣಾ ಇತಿಹಾಸದಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಚಿವ ಸಂಪುಟ ಉಪಸಮಿತಿಯ ಸಭೆಯಲ್ಲಿ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. ಅದರ ಅನ್ವಯ ಶೀಘ್ರದಲ್ಲೇ ಕೇಂದ್ರ ಸರ್ಕಾರ 83 ತೇಜಸ್​ ಲಘು ಯುದ್ಧ ವಿಮಾನಗಳನ್ನು ಖರೀದಿಸಿ, ವಾಯುಪಡೆಗೆ ಹಸ್ತಾಂತರ ಮಾಡಲಿದೆ. ಇಂದು ಅನುಮೋದನೆ ಸಿಕ್ಕ ಬಗ್ಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಟ್ವೀಟ್​ ಮಾಡಿ, ಮಾಹಿತಿ ನೀಡಿದ್ದಾರೆ.

ವಾಯುಪಡೆಗೆ ಇನ್ನಷ್ಟು ಬಲ ತುಂಬುವ ಸಲುವಾಗಿ ಇಂದು ಅತಿ ದೊಡ್ಡ ದೇಶೀಯ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. 48,000 ಕೋಟಿ ರೂಪಾಯಿ ವೆಚ್ಚದಲ್ಲಿ ಎಚ್ಎಎಲ್​ನಿಂದ 83 ತೇಜಸ್​ ಲಘು ಯುದ್ಧ ವಿಮಾನಗಳನ್ನು (LCA-Tejas) ಖರೀದಿಸಲಾಗುವುದು. ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಈ ಒಪ್ಪಂದ ಬಹುದೊಡ್ಡ ಗೇಮ್​ಚೇಂಜರ್​ ಆಗಲಿದೆ ಎಂದು ರಾಜನಾಥ್​ ಸಿಂಗ್​ ಟ್ವೀಟ್​​ನಲ್ಲಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ಈ ತೇಜಸ್​ ಲಘು ಯುದ್ಧವಿಮಾನಗಳು ಇಂಡಿಯನ್ ಏರ್​ಫೋರ್ಸ್​ನ ಬೆನ್ನೆಲುಬಾಗಲಿವೆ ಎಂದೂ ಹೇಳಿದ್ದಾರೆ.

ಸದ್ಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಘು ಯುದ್ಧ ವಿಮಾನ (LAC) Mk1ಗಿಂತಲೂ ಇದೀಗ ವಾಯುಪಡೆ ಸೇರ್ಪಡೆಯಾಗುತ್ತಿರುವ ಈ ತೇಜಸ್​ Mk1A ಲಘು ಯುದ್ಧ ವಿಮಾನಗಳು ಸುಧಾರಿತ ಹಾಗೂ ಮುಂದುವರಿದ ವ್ಯವಸ್ಥೆಗಳನ್ನು ಹೊಂದಿವೆ. ಸದ್ಯ ಈ Mk1Aಗಳಲ್ಲಿ ಶೇ 50ರಷ್ಟು ಸ್ವದೇಶಿ ಸಲಕರಣೆಗಳು ಇದ್ದು, ಅದನ್ನು ಶೇ 60ಕ್ಕೆ ವರ್ಧಿಸಲಾಗುವುದು. ಈ ಲಘುಯುದ್ಧ ವಿಮಾನಗಳಲ್ಲಿ ಹಲವು ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸಲಾಗಿದ್ದು, ಹಿಂದೆಂದೂ ಭಾರತದಲ್ಲಿ ತಯಾರಾದ ಯಾವುದೇ ಜೆಟ್ ಯುದ್ಧವಿಮಾನಗಳಲ್ಲಿ ಈ ಪ್ರಯೋಗ ಮಾಡಿರಲಿಲ್ಲ ಎಂದು ರಾಜನಾಥ್​ ಸಿಂಗ್ ತಿಳಿಸಿದ್ದಾರೆ.

ಎಚ್​ಎಎಲ್​ ನಿರ್ಮಿತ ಲಘು ಯುದ್ಧ ವಿಮಾನಗಳ ಖರೀದಿಯಿಂದಾಗಿ ಮೇಕ್​ ಇನ್​ ಇಂಡಿಯಾಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಇದು ಹೊಸ ಉದ್ಯೋಗಗಳ ಸೃಷ್ಟಿಗೆ ಸಹಾಯವಾಗುತ್ತದೆ. ಇಂದು ಭದ್ರತಾ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಿದ್ದು, ಐತಿಹಾಸಿಕ ನಿರ್ಧಾರವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ಯುದ್ಧವಿಮಾನಗಳಲ್ಲಿ ಅತ್ಯಾಧುನಿಕ ರಾಡಾರ್, ಕಣ್ಣಿಗೆ ಕಾಣಿಸದಷ್ಟು ದೂರದ ಗುರಿಗಳನ್ನು ಧ್ವಂಸಪಡಿಸಬಲ್ಲ ಕ್ಷಿಪಣಿಗಳು, ಎಲೆಕ್ಟ್ರಾನಿಕ್ ಯುದ್ಧತಂತ್ರ, ಆಕಾಶದಲ್ಲಿಯೇ ಇಂಧನ ಭರ್ತಿ ಸೌಲಭ್ಯ ಇರುತ್ತದೆ.

ಸಾವರಿನ್ ಗೋಲ್ಡ್​ಬಾಂಡ್​ ನೋಂದಣಿಗೆ ಜ.15 ಕೊನೆಯದಿನ; ಪ್ರತಿ ಗ್ರಾಂಗೆ ₹ 5104 ನಿಗದಿ

Published On - 7:16 pm, Wed, 13 January 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು