AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಾ ಬಂಡಾಯ ಗುಂಪು NSCN-K ಜೊತೆ ಕದನ ವಿರಾಮ ವಿಸ್ತರಿಸಿದ ಕೇಂದ್ರ

ಕದನ ವಿರಾಮ ಒಪ್ಪಂದವು ಸರ್ಕಾರ ಮತ್ತು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಕೆ) ನಿಕಿ ಗುಂಪಿನ ನಡುವೆ ಕಾರ್ಯನಿರ್ವಹಿಸುತ್ತಿದೆ. ಒಪ್ಪಂದವನ್ನು ಸೆಪ್ಟೆಂಬರ್ 8, 2024 ರಿಂದ ಸೆಪ್ಟೆಂಬರ್ 7, 2025 ರವರೆಗೆ ಒಂದು ವರ್ಷದ ಅವಧಿಗೆ ವಿಸ್ತರಿಸಲು ನಿರ್ಧರಿಸಲಾಯಿತು ಎಂದು  ಸಚಿವಾಲಯ ಹೇಳಿಕೆ ನೀಡಿದೆ

ನಾಗಾ ಬಂಡಾಯ ಗುಂಪು NSCN-K ಜೊತೆ ಕದನ ವಿರಾಮ ವಿಸ್ತರಿಸಿದ ಕೇಂದ್ರ
ಗೃಹ ಸಚಿವಾಲಯ
ರಶ್ಮಿ ಕಲ್ಲಕಟ್ಟ
|

Updated on: Sep 05, 2024 | 8:11 PM

Share

ದೆಹಲಿ ಸೆಪ್ಟೆಂಬರ್ 05: ನರೇಂದ್ರ ಮೋದಿ (Narendra Modi) ಸರ್ಕಾರ ಗುರುವಾರ ನಿಕಿ ಸುಮಿ ನೇತೃತ್ವದ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಕೆ) ಬಂಡಾಯ ಗುಂಪಿನೊಂದಿಗಿನ ಕದನ ವಿರಾಮ ಒಪ್ಪಂದವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಪ್ರಕಟಿಸಿದೆ. 2015 ರಲ್ಲಿ ಮಣಿಪುರದಲ್ಲಿ 18 ಸೇನಾ ಯೋಧರನ್ನು ಕೊಂದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ₹10 ಲಕ್ಷ ಬಹುಮಾನವನ್ನು ಘೋಷಿಸಿದ ನಿಕಿ ಸುಮಿ ನೇತೃತ್ವದ ಗುಂಪಾಗಿದೆ ಎನ್ ಎಸ್ ಸಿಎನ್.

“ಕದನ ವಿರಾಮ ಒಪ್ಪಂದವು ಸರ್ಕಾರ ಮತ್ತು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಕೆ) ನಿಕಿ ಗುಂಪಿನ ನಡುವೆ ಕಾರ್ಯನಿರ್ವಹಿಸುತ್ತಿದೆ. ಒಪ್ಪಂದವನ್ನು ಸೆಪ್ಟೆಂಬರ್ 8, 2024 ರಿಂದ ಸೆಪ್ಟೆಂಬರ್ 7, 2025 ರವರೆಗೆ ಒಂದು ವರ್ಷದ ಅವಧಿಗೆ ವಿಸ್ತರಿಸಲು ನಿರ್ಧರಿಸಲಾಯಿತು ಎಂದು  ಸಚಿವಾಲಯ ಹೇಳಿಕೆ ನೀಡಿದೆ.  ಕದನ ವಿರಾಮ ಒಪ್ಪಂದವನ್ನು ಮೊದಲ ಬಾರಿಗೆ ಸೆಪ್ಟೆಂಬರ್ 6, 2021 ರಂದು ಸಹಿ ಮಾಡಲಾಯಿತು.

” ಬಂಡಾಯ ಮುಕ್ತ ಮತ್ತು ಸಮೃದ್ಧ ಈಶಾನ್ಯ’ ಮತ್ತು ನಾಗಾ ಶಾಂತಿ ಪ್ರಕ್ರಿಯೆಗೆ ಗಮನಾರ್ಹ ಉತ್ತೇಜನದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತ ಸರ್ಕಾರವು ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಮಂಡಳಿ (ಕೆ) ನಿಕಿ ಗ್ರೂಪ್‌ನೊಂದಿಗೆ ಕದನ ವಿರಾಮ ಒಪ್ಪಂದವನ್ನು ಮಾಡಿಕೊಂಡಿದೆ.”ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.

ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ 2015 ರ ಆಗಸ್ಟ್ 3 ರಂದು ಪ್ರಮುಖ ನಾಗಾ ಗುಂಪು NSCN-IM ನೊಂದಿಗೆ ಕೇಂದ್ರವು ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಕದನ ವಿರಾಮ ಒಪ್ಪಂದಕ್ಕೆ 1997 ರಲ್ಲಿ ಸಹಿ

ಕದನ ವಿರಾಮ ಒಪ್ಪಂದವು 18 ವರ್ಷಗಳ ಕಾಲ ನಡೆದ 80 ಸುತ್ತಿನ ಮಾತುಕತೆಗಳ ನಂತರ ಅಸ್ತಿತ್ವಕ್ಕೆ ಬಂದಿತು. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ಪ್ರಾರಂಭವಾದ ನಾಗಾಲ್ಯಾಂಡ್‌ನಲ್ಲಿ ದಶಕಗಳ ದಂಗೆಯ ನಂತರ ಕದನ ವಿರಾಮ ಒಪ್ಪಂದವನ್ನು 1997 ರಲ್ಲಿ ಮೊಹರು ಮಾಡಿದಾಗ ಮೊದಲ ಪ್ರಗತಿಯನ್ನು ಸಾಧಿಸಲಾಯಿತು.

ಇದನ್ನೂ ಓದಿ: ಹಿಮಾಚಲ ಪ್ರದೇಶ: ಶಿಮ್ಲಾದಲ್ಲಿ ‘ಅಕ್ರಮವಾಗಿ ನಿರ್ಮಿಸಿದ’ ಮಸೀದಿ ಕೆಡವಿ ಎಂದು ಒತ್ತಾಯಿಸಿ ಪ್ರತಿಭಟನೆ

ಎನ್‌ಎಸ್‌ಸಿಎನ್-ಐಎಂ ಜೊತೆಗಿನ ಮಾತುಕತೆಗಳು ಎಲ್ಲಿಗೂ ತಲುಪಿಲ್ಲ,  ಏಕೆಂದರೆ ಗುಂಪು ಪ್ರತ್ಯೇಕ ನಾಗಾ ಧ್ವಜ ಮತ್ತು ಸಂವಿಧಾನಕ್ಕಾಗಿ ಒತ್ತಾಯಿಸುತ್ತಿದೆ, ಕೇಂದ್ರ ಸರ್ಕಾರವು ಈ ಬೇಡಿಕೆಯನ್ನು ತಿರಸ್ಕರಿಸಿದೆ. ಕದನ ವಿರಾಮ ಒಪ್ಪಂದಗಳಿಗೆ ಪ್ರವೇಶಿಸಿದ ನಂತರ ಕೇಂದ್ರವು NSCN ನ ಸ್ಪ್ಲಿಂಟರ್ ಗುಂಪುಗಳೊಂದಿಗೆ ಶಾಂತಿ ಮಾತುಕತೆಗಳನ್ನು ನಡೆಸುತ್ತಿದೆ.

ಕದನ ವಿರಾಮ ಒಪ್ಪಂದಗಳನ್ನು ಮಾಡಿಕೊಂಡಿರುವ ಗುಂಪುಗಳೆಂದರೆ: NSCN-NK, NSCN-R, NSCN K-Khango ಮತ್ತು NSCN (K) Niki.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ