ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್

ಅಜಂ ಖಾನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಕೆಲವೇ ದಿನಗಳ ಮೊದಲು ಮೇ 6 ರಂದು ಇತ್ತೀಚಿನ ಪ್ರಕರಣವನ್ನು ದಾಖಲಿಸಲಾಗಿದೆ.

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್
ಆಜಂ ಖಾನ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:May 19, 2022 | 9:46 PM

ದೆಹಲಿ: ವಂಚನೆ ಪ್ರಕರಣದಲ್ಲಿ (cheating case) ಫೆಬ್ರವರಿ 2020 ರಿಂದ ಬಂಧಿತರಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ (Azam Khan) ಸುಪ್ರೀಂಕೋರ್ಟ್ (Supreme Court) ಗುರುವಾರ ಮಧ್ಯಂತರ ಜಾಮೀನು ನೀಡಿದೆ, ಇದು ಅವರ ವಿರುದ್ಧ ದಾಖಲಾಗಿರುವ 88 ನೇ ಪ್ರಕರಣವಾಗಿದೆ. ಈ ಹಿಂದೆ 87 ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ಪಡೆದಿರುವುದರಿಂದ ಸಮಾಜವಾದಿ ಪಕ್ಷದ ನಾಯಕ ಈಗ ಜೈಲಿನಿಂದ ಹೊರಬರಬಹುದು. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಬಿ.ಆರ್.ಗವಾಯಿ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಸುಪ್ರೀಂಕೋರ್ಟ್ ನ ನ್ಯಾಯ ಪೀಠವು ಅಜಂ ಖಾನ್ ವಿರುದ್ಧ ರಾಜ್ಯ ಸರ್ಕಾರವು ಒಂದರ ನಂತರ ಒಂದರಂತೆ ದಾಖಲಾದ ಪ್ರಕರಣಗಳ ಕಾಲಾನುಕ್ರಮವನ್ನು ಗಣನೆಗೆ ತೆಗೆದುಕೊಂಡು ಮಧ್ಯಂತರ ಜಾಮೀನು ನೀಡುವುದು ಸೂಕ್ತ ಪ್ರಕರಣ ಎಂದು ಹೇಳಿದೆ. ಅಜಂ ಖಾನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಕೆಲವೇ ದಿನಗಳ ಮೊದಲು ಮೇ 6 ರಂದು ಇತ್ತೀಚಿನ ಪ್ರಕರಣವನ್ನು ದಾಖಲಿಸಲಾಗಿದೆ. “ಎಫ್‌ಐಆರ್ ಅನ್ನು ಮಾರ್ಚ್ 18, 2020 ರಂದು ದಾಖಲಿಸಲಾಗಿದೆ. ಈ ಎಫ್‌ಐಆರ್‌ನಲ್ಲಿನ ಆರೋಪಪಟ್ಟಿಯನ್ನು ಸೆಪ್ಟೆಂಬರ್ 10, 2020 ರಂದು ಸಲ್ಲಿಸಲಾಗಿದ್ದರೂ ಹೇಳಲಾದ ಎಫ್‌ಐಆರ್‌ನಲ್ಲಿನ ಅರ್ಜಿದಾರರು ಈಗಷ್ಟೇ, ಅಂದರೆ, 1 ವರ್ಷ ಮತ್ತು 7 ತಿಂಗಳ ಅವಧಿಯ ನಂತರ ಮೇ 6, 2022 ರಂದು ರಾಂಪುರ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್  ಅವರು ಹೊರಡಿಸಿದ ಆದೇಶದ ಮೂಲಕ ಆರೋಪಿಸಲ್ಪಟ್ಟಿದ್ದಾರೆ. ಈಗ ಅರ್ಜಿದಾರರ ವಿರುದ್ಧ ಮಾಡಬೇಕೆಂದಿರುವ ಆರೋಪಗಳನ್ನು ಆ ಸಮಯದಲ್ಲಿ ಮಾಡಲಾಗಲಿಲ್ಲವಂತೆ. ಎಫ್‌ಐಆರ್‌ನಲ್ಲಿ ಅರ್ಜಿದಾರರ ವಿರುದ್ಧದ ಪ್ರಮುಖ ಆರೋಪವೆಂದರೆ ಪ್ರಮಾಣಪತ್ರಗಳು ನಕಲಿ ಎಂಬುದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಸೂಚನೆಯ ವಿಳಂಬ ಮತ್ತು ಅದರಲ್ಲಿ ಮಾಡಲಾದ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಅರ್ಜಿದಾರರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ನ್ಯಾಯದ ಹಿತಾಸಕ್ತಿಯಲ್ಲ ಎಂದು ನಾವು ಪರಿಗಣಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ. 87 ಕ್ರಿಮಿನಲ್ ಪ್ರಕರಣಗಳು/ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ತಮ್ಮ ಕಕ್ಷಿದಾರರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಾಗಿ ಸಿಲುಕಿಸಲಾಗುತ್ತಿದೆ. ಪ್ರಸ್ತುತ ಯುಪಿ ಸರ್ಕಾರವು ಅವರ ವಿರುದ್ಧ 85 ಪ್ರಕರಣಗಳನ್ನು ದಾಖಲಿಸಿದೆ ಎಂದು ವಾದಿಸಿದ್ದಾರೆ. ಖಾನ್ ನೇರವಾಗಿ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸಂಪೂರ್ಣ ನ್ಯಾಯವನ್ನು ನೀಡಲು ಅದರ ಅಸಾಧಾರಣ ಅಧಿಕಾರವನ್ನು ಕೋರಿದ ಪೀಠವು ಅವರಿಗೆ ಮಧ್ಯಂತರ ಜಾಮೀನು ನೀಡಿತು ಮತ್ತು ನಿಯಮಿತ ಜಾಮೀನಿಗಾಗಿ ಕೆಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕೇಳಿತು.

ಇದನ್ನೂ ಓದಿ
Image
ಉತ್ತರ ಪ್ರದೇಶ: ಲಖನೌ ವಿಶ್ವವಿದ್ಯಾಲಯದಲ್ಲಿ ದಲಿತ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ
Image
ಆದೇಶ ಪಾಲಿಸುತ್ತಿಲ್ಲ, ಕೆಲಸದಲ್ಲಿಯೂ ಇಲ್ಲ ಆಸಕ್ತಿ; ಪೊಲೀಸ್ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಉತ್ತರ ಪ್ರದೇಶ ಸರ್ಕಾರ
Image
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್ 

“ಪ್ರಸ್ತುತ ಆದೇಶದ ಮೂಲಕ ಅರ್ಜಿದಾರರಿಗೆ ನೀಡಲಾದ ಮಧ್ಯಂತರ ಜಾಮೀನು ನಿಯಮಿತ ಜಾಮೀನು ಅರ್ಜಿಯಲ್ಲಿ ಸಕ್ಷಮ ನ್ಯಾಯಾಲಯದ ತೀರ್ಪಿನವರೆಗೆ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಜಾಮೀನು ಅರ್ಜಿಯು ಅರ್ಜಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಮಾನಿಸಿದರೆ ಪ್ರಸ್ತುತ ಮಧ್ಯಂತರ ನಿಯಮಿತ ಜಾಮೀನು ಅರ್ಜಿಯಲ್ಲಿ ಸಕ್ಷಮ ನ್ಯಾಯಾಲಯವು ಹೊರಡಿಸಿದ ಆದೇಶದ ದಿನಾಂಕದಿಂದ ಇನ್ನೂ ಎರಡು ವಾರಗಳವರೆಗೆ ಜಾಮೀನು ಕಾರ್ಯನಿರ್ವಹಿಸುತ್ತದೆ ಎಂದು ಪೀಠ ಹೇಳಿದೆ.

Published On - 9:30 pm, Thu, 19 May 22