AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್​ಮಸ್​ ಮರುದಿನವೇ ಯೇಸು ಪ್ರತಿಮೆ ಧ್ವಂಸ; ದುಷ್ಕೃತ್ಯದಿಂದ ನೊಂದ ಚರ್ಚ್​ ಪಾದ್ರಿ

ಮಧ್ಯಾಹ್ನ 12.30ರ ಹೊತ್ತಿಗೆ ಈ ಚರ್ಚ್​​ನ ದೊಡ್ಡ ಗೋಡೆಯನ್ನು ಹಾರಿದ್ದು, ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸುತ್ತಿದೆ. ನಂತರ ಮಧ್ಯಾಹ್ನ 1.40ರ ಹೊತ್ತಿಗೆ ಯೇಸು ಪ್ರತಿಮೆ ಧ್ವಂಸಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಸ್​ಮಸ್​ ಮರುದಿನವೇ ಯೇಸು ಪ್ರತಿಮೆ ಧ್ವಂಸ; ದುಷ್ಕೃತ್ಯದಿಂದ ನೊಂದ ಚರ್ಚ್​ ಪಾದ್ರಿ
ಚರ್ಚ್​ ಹೊರಗೆ ಇದ್ದ ಯೇಸು ಪ್ರತಿಮೆ ಧ್ವಂಸ
TV9 Web
| Edited By: |

Updated on: Dec 26, 2021 | 6:43 PM

Share

ಹರ್ಯಾಣದ ಅಂಬಾಲಾದಲ್ಲಿ ಇರುವ ಬ್ರಿಟಿಷ್​ ಕಾಲದ ಹೋಲಿ ರಿಡೀಮರ್​ ಚರ್ಚ್​​ನ ಹೊರಭಾಗದಲ್ಲಿದ್ದ ಯೇಸು ಪ್ರತಿಮೆಯನ್ನು ಇಂದು ಮಧ್ಯಾಹ್ನ ಧ್ವಂಸಗೊಳಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯೇಸು ಪ್ರತಿಮೆಯನ್ನು ಹಾಳು ಮಾಡಿದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಈ ಕೃತ್ಯ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಸ್ಥಳೀಯ ಸರ್ದಾರ್​ ಪೊಲೀಸ್ ಠಾಣೆಯ ಅಧಿಕಾರಿ ನರೇಶ್​ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.  ಕ್ರಿಸ್​ಮಸ್​ ಹಬ್ಬದ ಮರುದಿನವೇ ಯೇಸು ಪ್ರತಿಮೆ ಧ್ವಂಸವಾಗಿದೆ. ಇಂದು ಮುಂಜಾನೆ ಕ್ರಿಶ್ಚಿಯನ್ ಸಮುದಾಯದವರ ಪವಿತ್ರ ಪ್ರಾರ್ಥನೆ ಇತ್ತು. ಅದನ್ನು ಮುಗಿಸಿ ತೆರಳುತ್ತಿದ್ದಂತೆ ಇತ್ತ, ಪ್ರತಿಮೆ ಹಾಳಾಗಿದೆ.

ಚರ್ಚ್​ ಸುತ್ತಮುತ್ತಲಿನ ಸ್ಥಳಗಳನ್ನೂ ಪರಿಶೀಲನೆ ನಡೆಸಿದ್ದೇವೆ. ಮಧ್ಯಾಹ್ನ 12.30ರ ಹೊತ್ತಿಗೆ ಈ ಚರ್ಚ್​​ನ ದೊಡ್ಡ ಗೋಡೆಯನ್ನು ಹಾರಿದ್ದು, ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸುತ್ತಿದೆ. ನಂತರ ಮಧ್ಯಾಹ್ನ 1.40ರ ಹೊತ್ತಿಗೆ ಯೇಸು ಪ್ರತಿಮೆ ಧ್ವಂಸಗೊಂಡಿದೆ. ಅಲ್ಲದೆ, ಅಲ್ಲಿದ್ದ ಲೈಟ್​​ಗಳನ್ನು ಒಡೆಯಲಾಗಿದೆ. ಆದರೆ ಅವರು ಯಾರೆಂಬ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಖಂಡಿತವಾಗಿಯೂ ಪತ್ತೆ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ  ಅಂಬಾಲಾ ಪೊಲೀಸ್​ ಹೆಚ್ಚುವರಿ ಎಸ್​ಪಿ ಪೂಜಾ ಡಾಬ್ಲಾ, ಡಿಎಸ್​ಪಿ, ರಾಮ್​ ಕುಮಾರ್​, ಅಂಬಾಲಾ ಕಂಟೋನ್ಮೆಂಟ್​ ಪೊಲೀಸ್​ ಠಾಣೆ ಅಧಿಕಾರಿಗಳು, ಕ್ರೈಂ ಮತ್ತು ತನಿಖಾ ಏಜೆನ್ಸಿ ಸಿಬ್ಬಂದಿ ಚರ್ಚ್​ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.  ಮಾಧ್ಯಮದವರೊಂದಿಗೆ ಮಾತನಾಡಿದ ಚರ್ಚ್​ ಪಾದ್ರಿ, ಪತ್ರಾಸ್​ ಮುಂಡು, ಈ ಹೋಲಿ ರಿಡೀಮರ್​ ಚರ್ಚ್​  ಅತ್ಯಂತ ಹಳೆಯ ಮತ್ತು ಐತಿಹಾಸಿಕ ಪ್ರಸಿದ್ಧವಾಗಿದೆ. 1840ರಲ್ಲಿ ಸ್ಥಾಪನೆಯಾಗಿದ್ದು. ಆಗಿನಿಂದ ಇಲ್ಲಿಯವರೆಗೂ ಇಂಥ ಯಾವುದೇ ಘಟನೆ ನಡೆದ ಉದಾಹರಣೆ ಇಲ್ಲ. ಆದರೆ ಈ ಘಟನೆಯಿಂದ ತುಂಬ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಎಎಸ್​ಪಿ ಪೂಜಾ ಮಾತನಾಡಿ, ಯೇಸು ಪ್ರತಿಮೆ ಧ್ವಂಸ ಮಾಡಿದವರಲ್ಲಿ ಇಬ್ಬರಿದ್ದಾರೆ ಎಂಬುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಇವರು ಯೇಸು ಪ್ರತಿಮೆ ಧ್ವಂಸ ಮಾಡುವ ಮೂಲಕ ಆ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.  ಚರ್ಚ್​ ಆಡಳಿತ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಪರಾಧಿಗಳನ್ನು ಶೀಘ್ರವೇ ಪತ್ತೆ ಹಚ್ಚಿ, ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ; ಡೆತ್​​ನೋಟ್ ಬರೆದು ಗುಂಡು ಹಾರಿಸಿಕೊಂಡು ಬಿಇಒ ಟಿಎನ್ ಕಮಲಾಕರ್ ಆತ್ಮಹತ್ಯೆ

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ