AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್​ಮಸ್​ ಮರುದಿನವೇ ಯೇಸು ಪ್ರತಿಮೆ ಧ್ವಂಸ; ದುಷ್ಕೃತ್ಯದಿಂದ ನೊಂದ ಚರ್ಚ್​ ಪಾದ್ರಿ

ಮಧ್ಯಾಹ್ನ 12.30ರ ಹೊತ್ತಿಗೆ ಈ ಚರ್ಚ್​​ನ ದೊಡ್ಡ ಗೋಡೆಯನ್ನು ಹಾರಿದ್ದು, ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸುತ್ತಿದೆ. ನಂತರ ಮಧ್ಯಾಹ್ನ 1.40ರ ಹೊತ್ತಿಗೆ ಯೇಸು ಪ್ರತಿಮೆ ಧ್ವಂಸಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಸ್​ಮಸ್​ ಮರುದಿನವೇ ಯೇಸು ಪ್ರತಿಮೆ ಧ್ವಂಸ; ದುಷ್ಕೃತ್ಯದಿಂದ ನೊಂದ ಚರ್ಚ್​ ಪಾದ್ರಿ
ಚರ್ಚ್​ ಹೊರಗೆ ಇದ್ದ ಯೇಸು ಪ್ರತಿಮೆ ಧ್ವಂಸ
TV9 Web
| Edited By: |

Updated on: Dec 26, 2021 | 6:43 PM

Share

ಹರ್ಯಾಣದ ಅಂಬಾಲಾದಲ್ಲಿ ಇರುವ ಬ್ರಿಟಿಷ್​ ಕಾಲದ ಹೋಲಿ ರಿಡೀಮರ್​ ಚರ್ಚ್​​ನ ಹೊರಭಾಗದಲ್ಲಿದ್ದ ಯೇಸು ಪ್ರತಿಮೆಯನ್ನು ಇಂದು ಮಧ್ಯಾಹ್ನ ಧ್ವಂಸಗೊಳಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯೇಸು ಪ್ರತಿಮೆಯನ್ನು ಹಾಳು ಮಾಡಿದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಈ ಕೃತ್ಯ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಸ್ಥಳೀಯ ಸರ್ದಾರ್​ ಪೊಲೀಸ್ ಠಾಣೆಯ ಅಧಿಕಾರಿ ನರೇಶ್​ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.  ಕ್ರಿಸ್​ಮಸ್​ ಹಬ್ಬದ ಮರುದಿನವೇ ಯೇಸು ಪ್ರತಿಮೆ ಧ್ವಂಸವಾಗಿದೆ. ಇಂದು ಮುಂಜಾನೆ ಕ್ರಿಶ್ಚಿಯನ್ ಸಮುದಾಯದವರ ಪವಿತ್ರ ಪ್ರಾರ್ಥನೆ ಇತ್ತು. ಅದನ್ನು ಮುಗಿಸಿ ತೆರಳುತ್ತಿದ್ದಂತೆ ಇತ್ತ, ಪ್ರತಿಮೆ ಹಾಳಾಗಿದೆ.

ಚರ್ಚ್​ ಸುತ್ತಮುತ್ತಲಿನ ಸ್ಥಳಗಳನ್ನೂ ಪರಿಶೀಲನೆ ನಡೆಸಿದ್ದೇವೆ. ಮಧ್ಯಾಹ್ನ 12.30ರ ಹೊತ್ತಿಗೆ ಈ ಚರ್ಚ್​​ನ ದೊಡ್ಡ ಗೋಡೆಯನ್ನು ಹಾರಿದ್ದು, ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸುತ್ತಿದೆ. ನಂತರ ಮಧ್ಯಾಹ್ನ 1.40ರ ಹೊತ್ತಿಗೆ ಯೇಸು ಪ್ರತಿಮೆ ಧ್ವಂಸಗೊಂಡಿದೆ. ಅಲ್ಲದೆ, ಅಲ್ಲಿದ್ದ ಲೈಟ್​​ಗಳನ್ನು ಒಡೆಯಲಾಗಿದೆ. ಆದರೆ ಅವರು ಯಾರೆಂಬ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಖಂಡಿತವಾಗಿಯೂ ಪತ್ತೆ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ  ಅಂಬಾಲಾ ಪೊಲೀಸ್​ ಹೆಚ್ಚುವರಿ ಎಸ್​ಪಿ ಪೂಜಾ ಡಾಬ್ಲಾ, ಡಿಎಸ್​ಪಿ, ರಾಮ್​ ಕುಮಾರ್​, ಅಂಬಾಲಾ ಕಂಟೋನ್ಮೆಂಟ್​ ಪೊಲೀಸ್​ ಠಾಣೆ ಅಧಿಕಾರಿಗಳು, ಕ್ರೈಂ ಮತ್ತು ತನಿಖಾ ಏಜೆನ್ಸಿ ಸಿಬ್ಬಂದಿ ಚರ್ಚ್​ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.  ಮಾಧ್ಯಮದವರೊಂದಿಗೆ ಮಾತನಾಡಿದ ಚರ್ಚ್​ ಪಾದ್ರಿ, ಪತ್ರಾಸ್​ ಮುಂಡು, ಈ ಹೋಲಿ ರಿಡೀಮರ್​ ಚರ್ಚ್​  ಅತ್ಯಂತ ಹಳೆಯ ಮತ್ತು ಐತಿಹಾಸಿಕ ಪ್ರಸಿದ್ಧವಾಗಿದೆ. 1840ರಲ್ಲಿ ಸ್ಥಾಪನೆಯಾಗಿದ್ದು. ಆಗಿನಿಂದ ಇಲ್ಲಿಯವರೆಗೂ ಇಂಥ ಯಾವುದೇ ಘಟನೆ ನಡೆದ ಉದಾಹರಣೆ ಇಲ್ಲ. ಆದರೆ ಈ ಘಟನೆಯಿಂದ ತುಂಬ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಎಎಸ್​ಪಿ ಪೂಜಾ ಮಾತನಾಡಿ, ಯೇಸು ಪ್ರತಿಮೆ ಧ್ವಂಸ ಮಾಡಿದವರಲ್ಲಿ ಇಬ್ಬರಿದ್ದಾರೆ ಎಂಬುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಇವರು ಯೇಸು ಪ್ರತಿಮೆ ಧ್ವಂಸ ಮಾಡುವ ಮೂಲಕ ಆ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.  ಚರ್ಚ್​ ಆಡಳಿತ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಪರಾಧಿಗಳನ್ನು ಶೀಘ್ರವೇ ಪತ್ತೆ ಹಚ್ಚಿ, ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ; ಡೆತ್​​ನೋಟ್ ಬರೆದು ಗುಂಡು ಹಾರಿಸಿಕೊಂಡು ಬಿಇಒ ಟಿಎನ್ ಕಮಲಾಕರ್ ಆತ್ಮಹತ್ಯೆ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ