AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BoycottFabindia ಟ್ರೆಂಡ್; ದೀಪಾವಳಿ ಜಾಹೀರಾತಿನಿಂದ ಜಷ್ನ್- ಎ-ರಿವಾಜ್ ಹೆಸರು ಕೈಬಿಟ್ಟ ಫ್ಯಾಬ್ ಇಂಡಿಯಾ

ದೀಪಾವಳಿ 2021 ಕಲೆಕ್ಷನ್ ದಿರಿಸು ಧರಿಸಿದ ಮಾಡೆಲ್​​ಗಳ ಚಿತ್ರವಿರುವ ಫ್ಯಾಬ್ ಇಂಡಿಯಾ ಪ್ರೊಮೋಷನಲ್ ಪೋಸ್ಟ್ ನಲ್ಲಿ "ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವಂತೆ, ಫ್ಯಾಬ್ ಇಂಡಿಯಾದ ಜಷ್ನ್-ಎ-ರಿವಾಜ್ ಭಾರತೀಯ ಸಂಸ್ಕೃತಿಗೆ ಸುಂದರವಾಗಿ ಗೌರವ ಸಲ್ಲಿಸುವ ಒಂದು ಸಂಗ್ರಹವಾಗಿದೆ" ಎಂದು ಬರೆದಿತ್ತು.

BoycottFabindia ಟ್ರೆಂಡ್; ದೀಪಾವಳಿ ಜಾಹೀರಾತಿನಿಂದ ಜಷ್ನ್- ಎ-ರಿವಾಜ್ ಹೆಸರು ಕೈಬಿಟ್ಟ ಫ್ಯಾಬ್ ಇಂಡಿಯಾ
ಫ್ಯಾಬ್ ಇಂಡಿಯಾ
TV9 Web
| Edited By: |

Updated on:Oct 18, 2021 | 10:58 PM

Share

ದೆಹಲಿ: ಜನಪ್ರಿಯ ವಸ್ತ್ರ ಬ್ರಾಂಡ್ ಫ್ಯಾಬ್ ಇಂಡಿಯಾ (Fabindia) ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಕೂಗು ಎದ್ದಿದ್ದು BoycottFabindia ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದೆ. ದೀಪಾವಳಿಯ ಹೊಸ ಕಲೆಕ್ಷನ್​​ಗೆ ಜಷ್ನ್-ಎ-ರಿವಾಜ್ (Jashn-e-Riwaaz) ಎಂದು ಹೆಸರಿಡುವ ಮೂಲಕ ಫ್ಯಾಬ್ ಇಂಡಿಯಾ ಹಿಂದೂ ಹಬ್ಬವಾದ ದೀಪಾವಳಿಯ ಹೆಸರು ಕೆಡಿಸಿದೆ. ಮಾತ್ರವಲ್ಲದೆ ಹಿಂದೂ ಹಬ್ಬದಲ್ಲಿ ಜಾತ್ಯತೀತತೆ ಮತ್ತು ಮುಸ್ಲಿಂ ಸಿದ್ಧಾಂತಗಳನ್ನು ಅನಗತ್ಯವಾಗಿ ಎತ್ತಿಹಿಡಿದಿರುವುದಕ್ಕೆ ಅನೇಕರು ಬ್ರಾಂಡ್‌ ಅನ್ನು ಟೀಕಿಸಿದ್ದಾರೆ.

ಫ್ಯಾಬ್ ಇಂಡಿಯಾ ಟ್ವೀಟ್​​ನಲ್ಲಿ ಏನಿತ್ತು? ದೀಪಾವಳಿ 2021 ಕಲೆಕ್ಷನ್ ದಿರಿಸು ಧರಿಸಿದ ಮಾಡೆಲ್​​ಗಳ ಚಿತ್ರವಿರುವ ಫ್ಯಾಬ್ ಇಂಡಿಯಾ ಪ್ರೊಮೋಷನಲ್ ಪೋಸ್ಟ್ ನಲ್ಲಿ “ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವಂತೆ, ಫ್ಯಾಬ್ ಇಂಡಿಯಾದ ಜಷ್ನ್-ಎ-ರಿವಾಜ್ ಭಾರತೀಯ ಸಂಸ್ಕೃತಿಗೆ ಸುಂದರವಾಗಿ ಗೌರವ ಸಲ್ಲಿಸುವ ಒಂದು ಸಂಗ್ರಹವಾಗಿದೆ” ಎಂದು ಬರೆದಿತ್ತು. ಅದು ಈಗ ಡಿಲೀಟ್ ಆಗಿದೆ.

ಟ್ವೀಟ್ ಇನ್ನೂ ಲಭ್ಯವಿದೆಯೇ? ಇಲ್ಲ. #BoycottFabIndia ಟ್ವಿಟರ್‌ನಲ್ಲಿ  ಟ್ರೆಂಡಿಂಗ್ ಆದ ನಂತರ ಟ್ವೀಟ್ ಅನ್ನು ತಕ್ಷಣವೇ ತೆಗೆದುಹಾಕಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ತೇಜಸ್ವಿ ಸೂರ್ಯ ಕೂಡ ಟ್ವಿಟರ್‌ನ ಪೋಸ್ಟ್‌ನಲ್ಲಿ ಜಾಹೀರಾತನ್ನು ಟೀಕಿಸಿದ್ದಾರೆ.

ಟ್ವೀಟ್ ಅನ್ನು ತೆಗೆದುಹಾಕಿದ್ದೇಕೆ? ಈ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮದ ಹಲವಾರು ಜನರು “ಸಾಂಸ್ಕೃತಿಕವಾಗಿ ಸೂಕ್ತವಲ್ಲ” ಎಂದು ಹೇಳಿದ್ದಾರೆ. ವಿವರಣೆಯಲ್ಲಿ ಸರಳವಾದ ‘ದೀವಾಲಿ’ ಅಥವಾ ‘ದೀಪಾವಳಿ’ ಪ್ರಚಾರಕ್ಕೆ ಸಾಕಾಗುತ್ತಿತ್ತು ಎಂದು ಹಲವಾರು ಬಳಕೆದಾರರು ಗಮನಸೆಳೆದರೆ, ಇತರರು ಹಿಂದೂ ಹಬ್ಬವನ್ನು ಪುನರ್ರಚಿಸುವ ಮತ್ತು ಅದರಲ್ಲಿ ಜಾತ್ಯತೀತತೆಯನ್ನು ತುಂಬುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಕೆಲವರು ಹಿಂದೂ ಹಬ್ಬಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹಬ್ಬಗಳಷ್ಟೇ ಮಹತ್ವವನ್ನು ಹೊಂದಿವೆ ಮತ್ತು ಅವುಗಳನ್ನು ಸಂಯೋಜಿಸುವುದು ನಿರ್ದಿಷ್ಟ ಧರ್ಮವನ್ನು ಅಗೌರವಿಸುವುದರಲ್ಲಿ ಏನೂ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಹಲವಾರು ಪ್ರಖ್ಯಾತ ವ್ಯಕ್ತಿಗಳು ಮತ್ತು ರಾಜಕಾರಣಿಗಳ ಟ್ವೀಟ್‌ಗಳು ಫ್ಯಾಬ್ ಇಂಡಿಯಾ ಬಹಿಷ್ಕಾರಕ್ಕೆ ಒತ್ತಾಯಿಸಿದ್ದರಿಂದ ಪ್ರಸ್ತುತ ಕಂಪನಿ ಟ್ವೀಟ್ ಅನ್ನು ತಕ್ಷಣವೇ ತೆಗೆದು ಹಾಕಿತು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ತೇಜಸ್ವಿ ಸೂರ್ಯ ಅವರು ಫ್ಯಾಬ್ ಇಂಡಿಯಾ ಜಾಹೀರಾತನ್ನು ಟೀಕಿಸಿದ್ದು, ” ದೀಪಾವಳಿ ಜಷ್ನ್-ಇ-ರಿವಾಜ್ ಅಲ್ಲ.  ಸಾಂಪ್ರದಾಯಿಕ ಹಿಂದೂ ಉಡುಗೆ ಧರಿಸದ ಮಾಡೆಲ್​​ಗಳನ್ನಿಟ್ಟು  ಹಿಂದೂ ಹಬ್ಬಗಳ ಅಬ್ರಹಾಮೈಸೇಶನ್‌ನ ಉದ್ದೇಶಪೂರ್ವಕ ಪ್ರಯತ್ನವನ್ನು ನಿಲ್ಲಿಸಬೇಕು. ಫ್ಯಾಬ್ ಇಂಡಿಯಾದಂತಹ ಬ್ರಾಂಡ್‌ಗಳು ಇಂತಹ ಉದ್ದೇಶಪೂರ್ವಕ ದುಷ್ಕೃತ್ಯಗಳಿಗಾಗಿ ಆರ್ಥಿಕ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ

ಟ್ವೀಟ್  ಪ್ರತಿಕ್ರಿಯೆಗಳಲ್ಲಿ ಕೆಲವು ಹೀಗಿವೆ.

ಇದನ್ನೂ ಓದಿ: ಮತಾಂತರ ಆರೋಪ: ಹುಬ್ಬಳ್ಳಿಯ ಚರ್ಚ್​ನಲ್ಲಿ ಕುಳಿತು ಭಜನೆ ಮಾಡಿ ಪ್ರತಿಭಟಿಸಿದ ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

Published On - 10:57 pm, Mon, 18 October 21

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ