ಕೊಯಮತ್ತೂರಿನಲ್ಲಿ ಕಾಡಾನೆ ದಾಳಿಗೆ 73 ವರ್ಷದ ವ್ಯಕ್ತಿ ಸಾವು

ಆನೆಯ ದಾಳಿಗೆ 73 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಕಾಡು ಆನೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು.

ಕೊಯಮತ್ತೂರಿನಲ್ಲಿ ಕಾಡಾನೆ ದಾಳಿಗೆ 73 ವರ್ಷದ ವ್ಯಕ್ತಿ ಸಾವು
ಆನೆ-ಸಾಂದರ್ಭಿಕ ಚಿತ್ರ
Follow us
|

Updated on: Dec 26, 2023 | 1:09 PM

ಆನೆಯ ದಾಳಿಗೆ 73 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಕಾಡು ಆನೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು.

ನರಸೀಪುರಂ ವಲಯಾರಣ್ಯಾಧಿಕಾರಿ ಮಾತನಾಡಿ, ಇಂದು ಬೆಳಗ್ಗೆ ನರಸೀಪುರಂ ವಿಭಾಗದ ರಂಗನಾಥನ್ ಎಂಜಿನಿಯರಿಂಗ್ ಕಾಲೇಜು ಹಿಂಭಾಗದ ಪೆರಿಯಸಾಮಿ ಗಾರ್ಡನ್​ನಲ್ಲಿ ವಿರಾಲಿಯೂರಿನ ಇಂದಿರಾ ಕಾಲೋನಿಯ ಸುಮಾರು 73 ವರ್ಷದ ಚಿನ್ನಕುಟ್ಟಿ ಕುಟ್ಟೇನ್ ಎಂಬುವವರು ಬಯಲು ಶೌಚಕ್ಕೆ ಬಂದಿದ್ದ ಸಮಯದಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಸಾವು, ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಿದ್ದರಾಮಯ್ಯ ಸೂಚನೆ

ದುರಾದೃಷ್ಟವಶಾತ್ ಕಾಡಾನೆ ಆ ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನರಸೀಪುರದಿಂದ ಕೆಂಪನೂರುವರೆಗಿನ ಅರಣ್ಯ ಸಿಬ್ಬಂದಿಗೆ ಕಾಡು ಆನೆ ತುಳಿದಿರುವ ಮಾಹಿತಿ ಲಭ್ಯವಾಗಿತ್ತು. ವ್ಯಕ್ತಿಯ ಶವ ಪತ್ತೆಯಾಗಿದೆ. ದೇಹವನ್ನು ಆಂಬ್ಯುಲೆನ್ಸ್​ನಲ್ಲಿ ಶವಾಗಾರಕ್ಕೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ