AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಯಮತ್ತೂರಿನಲ್ಲಿ ಕಾಡಾನೆ ದಾಳಿಗೆ 73 ವರ್ಷದ ವ್ಯಕ್ತಿ ಸಾವು

ಆನೆಯ ದಾಳಿಗೆ 73 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಕಾಡು ಆನೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು.

ಕೊಯಮತ್ತೂರಿನಲ್ಲಿ ಕಾಡಾನೆ ದಾಳಿಗೆ 73 ವರ್ಷದ ವ್ಯಕ್ತಿ ಸಾವು
ಆನೆ-ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Dec 26, 2023 | 1:09 PM

Share

ಆನೆಯ ದಾಳಿಗೆ 73 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಕಾಡು ಆನೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು.

ನರಸೀಪುರಂ ವಲಯಾರಣ್ಯಾಧಿಕಾರಿ ಮಾತನಾಡಿ, ಇಂದು ಬೆಳಗ್ಗೆ ನರಸೀಪುರಂ ವಿಭಾಗದ ರಂಗನಾಥನ್ ಎಂಜಿನಿಯರಿಂಗ್ ಕಾಲೇಜು ಹಿಂಭಾಗದ ಪೆರಿಯಸಾಮಿ ಗಾರ್ಡನ್​ನಲ್ಲಿ ವಿರಾಲಿಯೂರಿನ ಇಂದಿರಾ ಕಾಲೋನಿಯ ಸುಮಾರು 73 ವರ್ಷದ ಚಿನ್ನಕುಟ್ಟಿ ಕುಟ್ಟೇನ್ ಎಂಬುವವರು ಬಯಲು ಶೌಚಕ್ಕೆ ಬಂದಿದ್ದ ಸಮಯದಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಸಾವು, ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಿದ್ದರಾಮಯ್ಯ ಸೂಚನೆ

ದುರಾದೃಷ್ಟವಶಾತ್ ಕಾಡಾನೆ ಆ ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನರಸೀಪುರದಿಂದ ಕೆಂಪನೂರುವರೆಗಿನ ಅರಣ್ಯ ಸಿಬ್ಬಂದಿಗೆ ಕಾಡು ಆನೆ ತುಳಿದಿರುವ ಮಾಹಿತಿ ಲಭ್ಯವಾಗಿತ್ತು. ವ್ಯಕ್ತಿಯ ಶವ ಪತ್ತೆಯಾಗಿದೆ. ದೇಹವನ್ನು ಆಂಬ್ಯುಲೆನ್ಸ್​ನಲ್ಲಿ ಶವಾಗಾರಕ್ಕೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ