Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಚಳಿಚಳಿ: 3.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದ ಉಷ್ಣಾಂಶ, ನಡುಗಿದ ಜನ

ದೆಹಲಿಯಲ್ಲಿ ನಿನ್ನೆ 3.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಂದು ಮತ್ತೆ 0.5ನಷ್ಟು ತಾಪಮಾನ ಕಡಿಮೆಯಾಗಿದೆ. ಜನರು ಚಳಿಯಲ್ಲಿ ನಡುಗುವಂತಾಗಿದೆ.

ದೆಹಲಿಯಲ್ಲಿ ಚಳಿಚಳಿ: 3.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದ ಉಷ್ಣಾಂಶ, ನಡುಗಿದ ಜನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 11:31 PM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಭಾನುವಾರ ಈ ವರ್ಷದ ಅತ್ಯಂತ ತೀವ್ರ ಚಳಿಯನ್ನು ಅನುಭವಿಸಿತು. ಇಂದು ಬೆಳಿಗ್ಗೆ ಉಷ್ಣಾಂಶವು ಈ ವರ್ಷದ ಅತ್ಯಂತ ಕನಿಷ್ಠ ಅಂದರೆ 3.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿತ್ತು.

ದೆಹಲಿಯಲ್ಲಿ ನಿನ್ನೆ 3.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಂದು ಮತ್ತೆ 0.5ನಷ್ಟು ತಾಪಮಾನ ಕಡಿಮೆಯಾಗಿದೆ. ಜನರು ಚಳಿಯಲ್ಲಿ ನಡುಗುವಂತಾಗಿದೆ. ದೆಹಲಿಯ ಲೋಧಿ ರೋಡ್​ ಬಳಿ ಶೀತಗಾಳಿ ಬೀಸಿದ ಪರಿಣಾಮ ತಾಪಮಾನ 3.3 ಡಿಗ್ರಿ ಸೆಲ್ಸಿಯಸ್​ಗೂ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಪಶ್ಚಿಮ ಹಿಮಾಲಯ ಭಾಗದಿಂದ ಬೀಸಿದ ಗಾಳಿಯಿಂದ ಚಳಿ ಮತ್ತಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಗುರುವಾರ 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಶುಕ್ರವಾರ ಗರಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಜಫಾರ್​ಪುರ್ ಕಳೆದ ಶುಕ್ರವಾರ ಕನಿಷ್ಠ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡಿತ್ತು. ಮುಂದಿನ ಐದಾರು ದಿನಗಳ ಕಾಲ, ದೆಹಲಿಯ ಕನಿಷ್ಠ ತಾಪಮಾನವು 5 ಡಿಗ್ರಿ ಸೆಲ್ಸಿಯಸ್​ನಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನದ ಮೌಂಟ್ ಅಬು ಪ್ರದೇಶದಲ್ಲೂ ಶೀತಗಾಳಿಯ ಪರಿಣಾಮ ಮೈನಸ್ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಚಳಿ ಅನುಭವಿಸುತ್ತಿರುವ ಪ್ರವಾಸಿಗರು, ಮನಾಲಿಯಂಥಾ ಸ್ಥಳಗಳಲ್ಲಿ ನೋಡಬಹುದಾದ ಮಂಜುಗಡ್ಡೆಯನ್ನು ನಾವು ಇಲ್ಲಿ ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲೂ ಜನರು ಅತಿಯಾದ ಚಳಿ ಅನುಭವಿಸುತ್ತಿದ್ದಾರೆ. ನಸುಕಿನಲ್ಲಿ ಕೆಲಸಕ್ಕೆ ತೊಡಗುವವರು ರಸ್ತೆ ಬದಿಗಳಲ್ಲಿ ಬೆಂಕಿಹಾಕಿ ಮೈಕಾಯಿಸಿಕೊಳ್ಳುತ್ತಿರುವ ದೃಶ್ಯಗಳನ್ನು ANI ಪ್ರಕಟಿಸಿದೆ.

ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

Published On - 4:15 pm, Sun, 20 December 20

ಎಣ್ಣೆ ದೀಪ ಮತ್ತು ತುಪ್ಪದ ದೀಪಗಳ ಆಧ್ಯಾತ್ಮಿಕ ಮಹತ್ವ
ಎಣ್ಣೆ ದೀಪ ಮತ್ತು ತುಪ್ಪದ ದೀಪಗಳ ಆಧ್ಯಾತ್ಮಿಕ ಮಹತ್ವ
Daily Horoscope: ವೃಷಭ ರಾಶಿಯವರಿಗೆ ಏಳು ಗ್ರಹಗಳ ಶುಭಫಲವಿದೆ
Daily Horoscope: ವೃಷಭ ರಾಶಿಯವರಿಗೆ ಏಳು ಗ್ರಹಗಳ ಶುಭಫಲವಿದೆ
ಸದನದಲ್ಲಿ ಹೊಸ ರೇಷನ್​ ಕಾರ್ಡ್ ಬಗ್ಗೆ ಪ್ರಸ್ತಾಪ: ಸಚಿವ ಹೇಳಿದ್ದಿಷ್ಟು
ಸದನದಲ್ಲಿ ಹೊಸ ರೇಷನ್​ ಕಾರ್ಡ್ ಬಗ್ಗೆ ಪ್ರಸ್ತಾಪ: ಸಚಿವ ಹೇಳಿದ್ದಿಷ್ಟು
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ
ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ
ಕೆಲಸದ ವಿಷಯದಲ್ಲಿ ಶಿವಕುಮಾರ್​ಗೆ ಸದನದಲ್ಲಿ ಸವಾಲೆಸೆದ ಅಶ್ವಥ್ ನಾರಾಯಣ
ಕೆಲಸದ ವಿಷಯದಲ್ಲಿ ಶಿವಕುಮಾರ್​ಗೆ ಸದನದಲ್ಲಿ ಸವಾಲೆಸೆದ ಅಶ್ವಥ್ ನಾರಾಯಣ
ಟ್ರೋಲಿಂಗ್: ರಶ್ಮಿಕಾ ಮಂದಣ್ಣ ಪರ ನಿಂತ ನಟಿ ರಮ್ಯಾ
ಟ್ರೋಲಿಂಗ್: ರಶ್ಮಿಕಾ ಮಂದಣ್ಣ ಪರ ನಿಂತ ನಟಿ ರಮ್ಯಾ
ಮಾನಸ ಗಂಗೋತ್ರಿ ಒಂದೇ ಸಾಕಿತ್ತಲ್ಲ, ಬೇರೆ ಯಾಕೆ ಬೇಕಿತ್ತು? ಅಶ್ವಥ್ ನಾರಾಯಣ
ಮಾನಸ ಗಂಗೋತ್ರಿ ಒಂದೇ ಸಾಕಿತ್ತಲ್ಲ, ಬೇರೆ ಯಾಕೆ ಬೇಕಿತ್ತು? ಅಶ್ವಥ್ ನಾರಾಯಣ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ