AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಜಾದಿ ಉತ್ಸವದ ಬ್ಯಾನರ್​​ನಲ್ಲಿಲ್ಲ ನೆಹರೂ ಫೋಟೋ; ಕಾಂಗ್ರೆಸ್​ ನಾಯಕರ ಆಕ್ರೋಶ

Azadi ka Amrit Mahotsav: ಟ್ವೀಟ್ ಮಾಡಿರುವ ಶಶಿ ತರೂರ್​, ಭಾರತೀಯ ಸ್ವಾತಂತ್ರ್ಯದ ಮುಂಚೂಣಿ ಧ್ವನಿಯಾಗಿರುವ ಜವಾಹರ್​ ಲಾಲ್​ ನೆಹರೂರವರನ್ನು ಬಿಟ್ಟು ಆಜಾದಿ ಕಾ ಅಮೃತ್​ ಮಹೋತ್ಸವ ಆಚರಣೆ ಮಾಡುವುದು ತೀರ ಕ್ಷುಲ್ಲಕ ಎಂದು ಹೇಳಿದ್ದಾರೆ.

ಆಜಾದಿ ಉತ್ಸವದ ಬ್ಯಾನರ್​​ನಲ್ಲಿಲ್ಲ ನೆಹರೂ ಫೋಟೋ; ಕಾಂಗ್ರೆಸ್​ ನಾಯಕರ ಆಕ್ರೋಶ
ಆಜಾದಿ ಕಿ ಅಮೃತ್​ ಮಹೋತ್ಸವ್​
TV9 Web
| Edited By: ಆಯೇಷಾ ಬಾನು|

Updated on:Oct 29, 2021 | 3:18 PM

Share

ದೆಹಲಿ: ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ್​ ಮಹೋತ್ಸವ ಆಚರಿಸುತ್ತಿದೆ. ಆದರೆ ಭಾರತೀಯ ಸಂಶೋಧನಾ ಐತಿಹಾಸಿಕ ಮಂಡಳಿ (ICHR) ವೆಬ್​ಸೈಟ್​​ನಲ್ಲಿರುವ ಬ್ಯಾನರ್​​ನಲ್ಲಿ ಜವಾಹರ್​ ಲಾಲ್​ ನೆಹರೂ ಫೋಟೋವನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್​ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR)ಯ ವೆಬ್​ಸೈಟ್​​ನಲ್ಲಿ ಈ ಆಜಾದಿ ಕಾ ಅಮೃತ ಮಹೋತ್ಸವ್​​​ದ ಬ್ಯಾನರ್​ ಹಾಕಲಾಗಿದೆ. ಅದರಲ್ಲಿ ಗಾಂಧೀಜಿ, ಸುಭಾಷ್ ಚಂದ್ರ ಬೋಸ್​, ಭಗತ್​ ಸಿಂಗ್​, ವಿನಾಯಕ್​ ದಾಮೋದರ್​ ಸಾವರ್ಕರ್​, ಬಿ.ಆರ್​.ಅಂಬೇಡ್ಕರ್ ಸೇರಿ ಹಲವು ಪ್ರಮುಖರ ಫೋಟೋ ಇದೆ. ಆದರೆ ಅದರಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್​ ಲಾಲ್ ನೆಹರೂ ಫೋಟೋವನ್ನು ಹಾಕಿಯೇ ಇಲ್ಲ. ಅದೀಗ ಕಾಂಗ್ರೆಸ್ ಸಂಸದ ಶಶಿ ತರೂರ್​ ಸೇರಿ, ಹಲವು ಗಣ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ವೀಟ್ ಮಾಡಿರುವ ಶಶಿ ತರೂರ್​, ಭಾರತೀಯ ಸ್ವಾತಂತ್ರ್ಯದ ಮುಂಚೂಣಿ ಧ್ವನಿಯಾಗಿರುವ ಜವಾಹರ್​ ಲಾಲ್​ ನೆಹರೂರವರನ್ನು ಬಿಟ್ಟು ಆಜಾದಿ ಕಾ ಅಮೃತ್​ ಮಹೋತ್ಸವ ಆಚರಣೆ ಮಾಡುವುದು ತೀರ ಕ್ಷುಲ್ಲಕ. ಈ ಬ್ಯಾನರ್​ ಮೂಲಕ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ಮತ್ತೊಮ್ಮೆ ತನ್ನನ್ನು ತಾನು ಅವಮಾನಿಸಿಕೊಂಡಿದೆ. ಇದೊಂದು ಹವ್ಯಾಸವಾಗುತ್ತಿದೆ ಎಂದು ಹೇಳಿದ್ದಾರೆ.

Azadi Ka Amrit Mahotsav

ಆಜಾದಿ ಕಿ ಅಮೃತ್​ ಮಹೋತ್ಸವ್​

ಶಶಿ ತರೂರ್​ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಚತ್ತೀಸ್​ಗಡ್​ ಆರೋಗ್ಯ ಸಚಿವ ಟಿ.ಎಸ್​. ಸಿಂಗ್​ ಡಿಯೋ, ಜವಾಹರ್​ ಲಾಲ್​ ನೆಹರೂ ಅವರು ತಮ್ಮ ಮನಸು ಮತ್ತು ಹೃದಯದಿಂದ ಭಾರತೀಯರನ್ನು ಪ್ರೀತಿಸುತ್ತಿದ್ದರು..ಹಾಗೇ, ದೇಶದ ಜನರಿಗೂ ಪ್ರೀತಿ ಪಾತ್ರರಾಗಿದ್ದರು ಎಂದು ಹೇಳಿದ್ದಾರೆ. ಹಾಗೇ, ಗೌರವ್​ ಗೊಗೊಯಿ ಕೂಡ ಟ್ವೀಟ್ ಮಾಡಿದ್ದು, ಇನ್ಯಾವುದೇ ದೇಶದ ಸ್ವಾತಂತ್ರ್ಯ ಹೋರಾಟದ ವೆಬ್​ಸೈಟ್​​ನಲ್ಲೂ ನಾವು ಇಂಥದ್ದನ್ನು ನೋಡಲು ಸಾಧ್ಯವಿಲ್ಲ. ಯಾವ ದೇಶವೂ ತನ್ನ ಮೊದಲ ಪ್ರಧಾನಿಯ ಫೋಟೋವನ್ನು ಕೈಬಿಡುವುದಿಲ್ಲ. ಜವಾಹರ್​ ಲಾಲ್ ನೆಹರೂ ಮತ್ತು ಅಬುಲ್ ಕಲಾಂ ಆಜಾದ್ ಫೋಟೋ ಹಾಕದೆ ಇರುವುದು ಸರ್ಕಾರದ ಸಣ್ಣತನ ತೋರಿಸುತ್ತದೆ ಎಂದು ಹೇಳಿದ್ದಾರೆ. ಆರ್​ಎಸ್​ಎಸ್​ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರವೇ ಇತ್ತು ಎಂಬುದನ್ನು ಭಾರತ ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Whatsapp Scam: ವಾಟ್ಸ್​ಆ್ಯಪ್​ನಲ್ಲಿ ಬರುವ ಸ್ಕ್ಯಾಮ್ ಮೆಸೇಜ್ ಪತ್ತೆ ಮಾಡುವುದು ಈಗ ಸುಲಭ: ಹೀಗೆ ಮಾಡಿ

Kerala Corona cases: ಕೇರಳ ಈಗಲಾದರೂ ಲಾಕ್​ಡೌನ್​ ಹೇರಬೇಕು, ಗಡಿ ಬಂದ್​ ಮಾಡಲಿ: ಬರುಣ್​ ದಾಸ್

Azadi Ka Amrit Mahotsav

ಆಜಾದಿ ಕಿ ಅಮೃತ್​ ಮಹೋತ್ಸವ್​

Published On - 3:46 pm, Sat, 28 August 21

Follow Us
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ