AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಜಾದಿ ಉತ್ಸವದ ಬ್ಯಾನರ್​​ನಲ್ಲಿಲ್ಲ ನೆಹರೂ ಫೋಟೋ; ಕಾಂಗ್ರೆಸ್​ ನಾಯಕರ ಆಕ್ರೋಶ

Azadi ka Amrit Mahotsav: ಟ್ವೀಟ್ ಮಾಡಿರುವ ಶಶಿ ತರೂರ್​, ಭಾರತೀಯ ಸ್ವಾತಂತ್ರ್ಯದ ಮುಂಚೂಣಿ ಧ್ವನಿಯಾಗಿರುವ ಜವಾಹರ್​ ಲಾಲ್​ ನೆಹರೂರವರನ್ನು ಬಿಟ್ಟು ಆಜಾದಿ ಕಾ ಅಮೃತ್​ ಮಹೋತ್ಸವ ಆಚರಣೆ ಮಾಡುವುದು ತೀರ ಕ್ಷುಲ್ಲಕ ಎಂದು ಹೇಳಿದ್ದಾರೆ.

ಆಜಾದಿ ಉತ್ಸವದ ಬ್ಯಾನರ್​​ನಲ್ಲಿಲ್ಲ ನೆಹರೂ ಫೋಟೋ; ಕಾಂಗ್ರೆಸ್​ ನಾಯಕರ ಆಕ್ರೋಶ
ಆಜಾದಿ ಕಿ ಅಮೃತ್​ ಮಹೋತ್ಸವ್​
TV9 Web
| Updated By: ಆಯೇಷಾ ಬಾನು|

Updated on:Oct 29, 2021 | 3:18 PM

Share

ದೆಹಲಿ: ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ್​ ಮಹೋತ್ಸವ ಆಚರಿಸುತ್ತಿದೆ. ಆದರೆ ಭಾರತೀಯ ಸಂಶೋಧನಾ ಐತಿಹಾಸಿಕ ಮಂಡಳಿ (ICHR) ವೆಬ್​ಸೈಟ್​​ನಲ್ಲಿರುವ ಬ್ಯಾನರ್​​ನಲ್ಲಿ ಜವಾಹರ್​ ಲಾಲ್​ ನೆಹರೂ ಫೋಟೋವನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್​ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR)ಯ ವೆಬ್​ಸೈಟ್​​ನಲ್ಲಿ ಈ ಆಜಾದಿ ಕಾ ಅಮೃತ ಮಹೋತ್ಸವ್​​​ದ ಬ್ಯಾನರ್​ ಹಾಕಲಾಗಿದೆ. ಅದರಲ್ಲಿ ಗಾಂಧೀಜಿ, ಸುಭಾಷ್ ಚಂದ್ರ ಬೋಸ್​, ಭಗತ್​ ಸಿಂಗ್​, ವಿನಾಯಕ್​ ದಾಮೋದರ್​ ಸಾವರ್ಕರ್​, ಬಿ.ಆರ್​.ಅಂಬೇಡ್ಕರ್ ಸೇರಿ ಹಲವು ಪ್ರಮುಖರ ಫೋಟೋ ಇದೆ. ಆದರೆ ಅದರಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್​ ಲಾಲ್ ನೆಹರೂ ಫೋಟೋವನ್ನು ಹಾಕಿಯೇ ಇಲ್ಲ. ಅದೀಗ ಕಾಂಗ್ರೆಸ್ ಸಂಸದ ಶಶಿ ತರೂರ್​ ಸೇರಿ, ಹಲವು ಗಣ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ವೀಟ್ ಮಾಡಿರುವ ಶಶಿ ತರೂರ್​, ಭಾರತೀಯ ಸ್ವಾತಂತ್ರ್ಯದ ಮುಂಚೂಣಿ ಧ್ವನಿಯಾಗಿರುವ ಜವಾಹರ್​ ಲಾಲ್​ ನೆಹರೂರವರನ್ನು ಬಿಟ್ಟು ಆಜಾದಿ ಕಾ ಅಮೃತ್​ ಮಹೋತ್ಸವ ಆಚರಣೆ ಮಾಡುವುದು ತೀರ ಕ್ಷುಲ್ಲಕ. ಈ ಬ್ಯಾನರ್​ ಮೂಲಕ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ಮತ್ತೊಮ್ಮೆ ತನ್ನನ್ನು ತಾನು ಅವಮಾನಿಸಿಕೊಂಡಿದೆ. ಇದೊಂದು ಹವ್ಯಾಸವಾಗುತ್ತಿದೆ ಎಂದು ಹೇಳಿದ್ದಾರೆ.

Azadi Ka Amrit Mahotsav

ಆಜಾದಿ ಕಿ ಅಮೃತ್​ ಮಹೋತ್ಸವ್​

ಶಶಿ ತರೂರ್​ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಚತ್ತೀಸ್​ಗಡ್​ ಆರೋಗ್ಯ ಸಚಿವ ಟಿ.ಎಸ್​. ಸಿಂಗ್​ ಡಿಯೋ, ಜವಾಹರ್​ ಲಾಲ್​ ನೆಹರೂ ಅವರು ತಮ್ಮ ಮನಸು ಮತ್ತು ಹೃದಯದಿಂದ ಭಾರತೀಯರನ್ನು ಪ್ರೀತಿಸುತ್ತಿದ್ದರು..ಹಾಗೇ, ದೇಶದ ಜನರಿಗೂ ಪ್ರೀತಿ ಪಾತ್ರರಾಗಿದ್ದರು ಎಂದು ಹೇಳಿದ್ದಾರೆ. ಹಾಗೇ, ಗೌರವ್​ ಗೊಗೊಯಿ ಕೂಡ ಟ್ವೀಟ್ ಮಾಡಿದ್ದು, ಇನ್ಯಾವುದೇ ದೇಶದ ಸ್ವಾತಂತ್ರ್ಯ ಹೋರಾಟದ ವೆಬ್​ಸೈಟ್​​ನಲ್ಲೂ ನಾವು ಇಂಥದ್ದನ್ನು ನೋಡಲು ಸಾಧ್ಯವಿಲ್ಲ. ಯಾವ ದೇಶವೂ ತನ್ನ ಮೊದಲ ಪ್ರಧಾನಿಯ ಫೋಟೋವನ್ನು ಕೈಬಿಡುವುದಿಲ್ಲ. ಜವಾಹರ್​ ಲಾಲ್ ನೆಹರೂ ಮತ್ತು ಅಬುಲ್ ಕಲಾಂ ಆಜಾದ್ ಫೋಟೋ ಹಾಕದೆ ಇರುವುದು ಸರ್ಕಾರದ ಸಣ್ಣತನ ತೋರಿಸುತ್ತದೆ ಎಂದು ಹೇಳಿದ್ದಾರೆ. ಆರ್​ಎಸ್​ಎಸ್​ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರವೇ ಇತ್ತು ಎಂಬುದನ್ನು ಭಾರತ ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Whatsapp Scam: ವಾಟ್ಸ್​ಆ್ಯಪ್​ನಲ್ಲಿ ಬರುವ ಸ್ಕ್ಯಾಮ್ ಮೆಸೇಜ್ ಪತ್ತೆ ಮಾಡುವುದು ಈಗ ಸುಲಭ: ಹೀಗೆ ಮಾಡಿ

Kerala Corona cases: ಕೇರಳ ಈಗಲಾದರೂ ಲಾಕ್​ಡೌನ್​ ಹೇರಬೇಕು, ಗಡಿ ಬಂದ್​ ಮಾಡಲಿ: ಬರುಣ್​ ದಾಸ್

Azadi Ka Amrit Mahotsav

ಆಜಾದಿ ಕಿ ಅಮೃತ್​ ಮಹೋತ್ಸವ್​

Published On - 3:46 pm, Sat, 28 August 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!