AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ

2021ನೇ ಸಾಲಿನ ಭುವನ ಸುಂದರಿ(Miss Universe)ಯಾಗಿ ಆಯ್ಕೆಯಾದ ಹರ್ನಾಜ್​ ಕೌರ್ ಸಂಧು(Harnaaz Kaur Sandhu) ನಿನ್ನೆ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹರ್ನಾಜ್​ ಸಂಧು 70ನೇ ಮಿಸ್​ ಯೂನಿವರ್ಸ್​ ಆಗಿ ಆಯ್ಕೆಯಾಗುವ ಜತೆಗೆ ಬರೋಬ್ಬರಿ 21 ವರ್ಷದ ಬಳಿಕ ಭಾರತಕ್ಕೆ ಈ ಪಟ್ಟ ತಂದುಕೊಟ್ಟವರು. 2000ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ದರು. ಅದಾದ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ಬಂದಿರಲ್ಲಿ. ಈ ಬಾರಿ ಪಂಜಾಬ್​ನ ಸುಂದರಿ ಹರ್ನಾಜ್​ ಸಂಧು […]

ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ
ಭುವನ ಸುಂದರಿಯೊಂದಿಗೆ ಫೋಟೋ ತೆಗೆದುಕೊಂಡ ಶಶಿ ತರೂರ್​
TV9 Web
| Edited By: |

Updated on: Dec 16, 2021 | 9:15 AM

Share

2021ನೇ ಸಾಲಿನ ಭುವನ ಸುಂದರಿ(Miss Universe)ಯಾಗಿ ಆಯ್ಕೆಯಾದ ಹರ್ನಾಜ್​ ಕೌರ್ ಸಂಧು(Harnaaz Kaur Sandhu) ನಿನ್ನೆ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹರ್ನಾಜ್​ ಸಂಧು 70ನೇ ಮಿಸ್​ ಯೂನಿವರ್ಸ್​ ಆಗಿ ಆಯ್ಕೆಯಾಗುವ ಜತೆಗೆ ಬರೋಬ್ಬರಿ 21 ವರ್ಷದ ಬಳಿಕ ಭಾರತಕ್ಕೆ ಈ ಪಟ್ಟ ತಂದುಕೊಟ್ಟವರು. 2000ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ದರು. ಅದಾದ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ಬಂದಿರಲ್ಲಿ. ಈ ಬಾರಿ ಪಂಜಾಬ್​ನ ಸುಂದರಿ ಹರ್ನಾಜ್​ ಸಂಧು ಆ ಗರಿಮೆ ಮುಡಿದಿದ್ದಾರೆ. ಮಿಸ್​ ಯೂನಿವರ್ಸ್​ ಆಯ್ಕೆಯ ಕೊನೇ ಹಂತದ ಸಮಾರಂಭದ ಇಸ್ರೇಲ್​ನ ಐಲಾಟ್​​ನಲ್ಲಿ ಡಿಸೆಂಬರ್​ 13ರಂದು ನಡೆದಿತ್ತು. 

ಹರ್ನಾಜ್​ ಸಂಧು ಅವರಿಗೆ ಈಗಾಗಲೇ ಹಲವು ಗಣ್ಯರು ಶುಭಕೋರಿದ್ದಾರೆ. ಈ ಮಧ್ಯೆ ಗಮನಸೆಳೆದಿದ್ದು, ಕಾಂಗ್ರೆಸ್​ನ ಸಂಸದ ಶಶಿ ತರೂರ್​. ಹರ್ನಾಜ್​ ಸಂಧು ನಿನ್ನೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಶಶಿ ತರೂರ್​ ಹೋಗಿ ಅವರನ್ನು ಭೇಟಿಯಾಗಿದ್ದಾರೆ. ನಂತರ ಟ್ವಿಟರ್​ನಲ್ಲಿ ಮಿಸ್ ಯೂನಿವರ್ಸ್​ ಹರ್ನಾಜ್​ ಜತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಭುವನಸುಂದರಿ ಹರ್ನಾಜ್​ ಕೌರ್ ಸಂಧು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆ. ಹರ್ನಾಜ್​ ವಿಜಯದೊಂದಿಗೆ ಭಾರತಕ್ಕೆ ಮರಳಿದ್ದಾರೆ. ಭಾರತ ಹೆಮ್ಮೆಯಿಂದ ಅವರನ್ನು ಸ್ವಾಗತಿಸಿದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹರ್ನಾಜ್​ ವೇದಿಕೆ ಮೇಲೆ ಹೇಗೆ ಆಕರ್ಷಕವಾಗಿ ಮತ್ತು ಸಮಚಿತ್ತದಿಂದ ಕಾಣಿಸಿಕೊಂಡಿದ್ದರೋ, ಹಾಗೇ ನೈಜವಾಗಿಯೂ ಇದ್ದಾರೆ ಎಂದು ಶಶಿ ತರೂರ್​ ಹೇಳಿದ್ದಾರೆ.

ಇನ್ನು ಹರ್ನಾಜ್ ಕೌರ್ ಸಂಧು ಅವರು ಶಶಿ ತರೂರ್​ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ಶಶಿ ತರೂರ್​ರನ್ನು ಭೇಟಿಯಾಗಿದ್ದು ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಚಂಡಿಗಢದ ಸಿಖ್​ ಮನೆತದ ಹರ್ನಾಜ್​ ಕೌರ್​ ಸಂಧುಗೆ ಇದೀಗ 21 ವರ್ಷ.. ಅವರ ವಾರ್ಷಿಕ ಆದಾಯ ಒಂದು ಮಿಲಿಯನ್​ ಡಾಲರ್​ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.  ಹರ್ನಾಜ್ 2017ರಲ್ಲಿ ಮಿಸ್​ ಚಂಡೀಗಡ ಹಾಗೂ 2018ರಲ್ಲಿ ಮಿಸ್​ ಮಾಕ್ಸ್​ ಸ್ಟಾರ್​ ಆಫ್​ ಇಂಡಿಯಾ ಪಟ್ಟವನ್ನು ಗೆದ್ದಿದ್ದರು. ನಂತರ 2019ರಲ್ಲಿ ಪಂಜಾಬ್​ನ ಫೆಮಿನಾ ಮಿಸ್​ ಇಂಡಿಯಾ ಪಟ್ಟ ಗೆದ್ದು ಫೆಮಿನಾ ಮಿಸ್​ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಇದೀಗ 2021ರಲ್ಲಿ ಮಿಸ್​ ಯುನಿವರ್ಸ್​ ಆಗಿ ಗೆದ್ದು ಭಾರತಕ್ಕೆ ಹೊಸ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ: T Natarajan: ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ: ಹುಟ್ಟೂರಿನಲ್ಲೇ ಸ್ವಂತ ಕ್ರಿಕೆಟ್ ಮೈದಾನ ಕಟ್ಟಿದ ಸ್ಟಾರ್ ಆಟಗಾರ

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್