AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವ ಎಸ್​.ಜೈಶಂಕರ್ ಮಾತಿನಿಂದ ಶಶಿ ತರೂರ್ ಫುಲ್​ ಖುಷ್​; ಸೆಲ್ಫೀ ತೆಗೆದುಕೊಂಡು ಟ್ವೀಟ್ ಮಾಡಿ, ಧನ್ಯವಾದ ಸಲ್ಲಿಸಿದ ಸಂಸದ !

ಯಾವುದಾದರೂ ಹೀರೋಯಿನ್​ಗಳ ಜತೆ, ಮಾಡೆಲ್​ ಜತೆ ಫೋಟೋ ತೆಗೆಸಿಕೊಂಡೋ, ಮಹಿಳೆಯರೊಂದಿಗೆ ಫೋಟೋಕ್ಕೆ ಪೋಸ್​ ಕೊಟ್ಟೋ..ಟ್ರೋಲ್ ಆಗುತ್ತಿದ್ದ ಶಶಿ ತರೂರ್ ಈ ಬಾರಿ ವಿಭಿನ್ನವಾಗಿ ಸುದ್ದಿಯಾಗಿದ್ದಾರೆ.

ಕೇಂದ್ರ ಸಚಿವ ಎಸ್​.ಜೈಶಂಕರ್ ಮಾತಿನಿಂದ ಶಶಿ ತರೂರ್ ಫುಲ್​ ಖುಷ್​; ಸೆಲ್ಫೀ ತೆಗೆದುಕೊಂಡು ಟ್ವೀಟ್ ಮಾಡಿ, ಧನ್ಯವಾದ ಸಲ್ಲಿಸಿದ ಸಂಸದ !
ಎಸ್​.ಜೈಶಂಕರ್​ ಮತ್ತು ಶಶಿ ತರೂರ್
TV9 Web
| Edited By: |

Updated on: Apr 26, 2022 | 3:19 PM

Share

ಕಾಂಗ್ರೆಸ್​ ಸಂಸದ ಶಶಿ ತರೂರ್​ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರು ಮತ್ತು ತುಸು ಸೆಲ್ಪಿ ಫೋಟೋ ಪ್ರಿಯರು. ಇದೀಗ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್​. ಜೈಶಂಕರ್​ ಅವರೊಂದಿಗೆ ಸೆಲ್ಪೀ ತೆಗೆದುಕೊಂಡು, ಆ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಲ್ಲದೆ, ಜೈಶಂಕರ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ.  ಯಾವುದಾದರೂ ಹೀರೋಯಿನ್​ಗಳ ಜತೆ, ಮಾಡೆಲ್​ ಜತೆ ಫೋಟೋ ತೆಗೆಸಿಕೊಂಡೋ, ಮಹಿಳೆಯರೊಂದಿಗೆ ಫೋಟೋಕ್ಕೆ ಪೋಸ್​ ಕೊಟ್ಟೋ..ಟ್ರೋಲ್ ಆಗುತ್ತಿದ್ದ ಶಶಿ ತರೂರ್ ಈ ಬಾರಿ ವಿಭಿನ್ನವಾಗಿ ಸುದ್ದಿಯಾಗಿದ್ದಾರೆ.

ಯಾಕೆ ಹೊಗಳಿದ್ದಾರೆ ಎಂದು ಹೇಳುವುದಕ್ಕೂ ಮೊದಲು ಒಂದು ಸಣ್ಣ ಹಿನ್ನೆಲೆ ಹೇಳಬೇಕು. ಭಾರತದ ವಿದೇಶಾಂಗ ನೀತಿಯಲ್ಲಿ ಅಲಿಪ್ತ ನೀತಿ ಎಂಬುದು ಒಂದು ಪ್ರಮುಖ ತತ್ವ.  ಅಂದು ಎರಡನೇ ವಿಶ್ವ ಯುದ್ಧದ ಬಳಿಕ ವಿಶ್ವ ಎರಡು ಶಕ್ತಿಶಾಲಿ ಬಣಗಳಾದಾಗ (ಅಮೆರಿಕ ಸಂಯುಕ್ತ ಸಂಸ್ಥಾನ ನೇತೃತ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಬಣ ಮತ್ತು ರಷ್ಯಾ ಸೋವಿಯತ್ ಒಕ್ಕೂಟ ನೇತೃತ್ವದ ಕಮ್ಯೂನಿಷ್ಟ್ ಬಣ) ಭಾರತ ಯಾವುದೇ ಬಣಕ್ಕೆ ಸೇರದೆ ಅಲಿಪ್ತವಾಗಿತ್ತು. ಅಂದಿನಿಂದಲೂ ಬಹುತೇಕ ಪ್ರಮುಖ ಹಂತಗಳಲ್ಲೆಲ್ಲ ಭಾರತ ಅಲಿಪ್ತ ನೀತಿಯನ್ನೇ ಅನುಸರಿಸಿತು.  ಇದಕ್ಕೆ Non Alignments ಎಂದು ಕರೆಯಲಾಗುತ್ತಿತ್ತು. ಭಾರತದ ವಿದೇಶಾಂಗ ನೀತಿ ಅಲಿಪ್ತ ನೀತಿಯಿಂದ, ಸಮತೋಲಿತ ನೀತಿಯಾಗಿ (Multi -Alignments) ಬದಲಾಗಬೇಕು ಎಂದು ಈಗೊಂದು 15ವರ್ಷಗಳ ಹಿಂದೆ ಶಶಿ ತರೂರ್​ ಪ್ರಸ್ತಾಪ ಮಾಡಿದ್ದರು. ಅಂದರೆ 21 ಶತಮಾನದಲ್ಲಿ ಅಲಿಪ್ತ ನೀತಿ ಕೆಲಸ ಮಾಡುವುದಿಲ್ಲ. ಇದು ಮಹತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಭಾರತವೂ ಕೂಡ Non Alignments ನಿಂದ Multi -Alignments ಕಡೆಗೆ ಸಾಗಬೇಕು. ಅಂದರೆ ಅಲಿಪ್ತವಾಗಿರುವುದಕ್ಕಿಂತ ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಂಡು, ಸಮತೋಲಿತ ಸ್ನೇಹ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದರು. ಅಂತೆಯೇ ಈಗೀಗ ಭಾರತ ಅದೇ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಅಲಿಪ್ತ ನೀತಿಯನ್ನು ಸಂಪೂರ್ಣವಾಗಿ ಬಿಡದೆ ಹೋದರೂ ಮಲ್ಟಿ ಅಲೈನ್​ಮೆಂಟ್​ ನೀತಿಯನ್ನೂ ಪ್ರದರ್ಶಿಸುತ್ತಿದೆ.

ಈಗ ಇದೇ ವಿಚಾರಕ್ಕೆ ಸಂಬಂಧಪಟ್ಟು ಜೈಶಂಕರ್ ಅವರನ್ನು ಶಶಿ ತರೂರ್ ಹೊಗಳಿದ್ದಾರೆ. ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ರೈಸಿನಾ ಡೈಲಾಗ್ ಕಾನ್ಫರೆನ್ಸ್​​ನಲ್ಲಿ ಎಸ್​.ಜಶಂಕರ್ ಅವರು ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವಾಗ ಮಲ್ಟಿ ಅಲೈನ್​ಮೆಂಟ್​ ನೀತಿ ಬಗ್ಗೆ ಪ್ರಸ್ತಾಪ ಮಾಡಿದ್ದಲ್ಲದೆ, ಇದನ್ನು ಮೊದಲು ಪ್ರಸ್ತಾಪ ಮಾಡಿದ್ದು ಶಶಿ ತರೂರ್​ ಎಂದೂ ಹೇಳಿದ್ದಾರೆ. ಇದರಿಂದಾಗಿ ಫುಲ್ ಖುಷಿಯಾದ ಶಶಿ ತರೂರ್​, ಜೈಶಂಕರ್ ಜತೆಗೆ ಸೆಲ್ಫೀ ತೆಗೆದುಕೊಂಡು,  ಭಾರತ ವಿದೇಶಾಂಗ ನೀತಿಯಲ್ಲಿ ಸೌಹಾರ್ದ, ಸಮತೋಲನ (Multi-alignment) ಸಂಬಂಧ ಬೆಳೆಸಿಕೊಳ್ಳುವ ಅಂಶಗಳನ್ನು ಸೇರಿಸಿಕೊಳ್ಳಬೇಕು ಎಂಬ ಅಂಶವನ್ನು 15ವರ್ಷಗಳ ಹಿಂದೆ ಪ್ರಸ್ತಾಪಿಸಿದ್ದೆ. ಆಗ ಅದನ್ನು ಹೆಚ್ಚಾಗಿ ಯಾರೂ ಒಪ್ಪಿಕೊಂಡಿರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ನನ್ನ ಕಲ್ಪನೆ ಒಪ್ಪಿದ್ದರು.  ಆದರೆ ಇಂದು ಜೈಶಂಕರ್​ ಅವರು ಕಾನ್ಫರೆನ್ಸ್​ನಲ್ಲಿ ಮಲ್ಟಿ ಅಲೈನ್​ಮೆಂಟ್​ ಬಗ್ಗೆ ಮಾತನಾಡುವಾಗ ಆ ಪರಿಕಲ್ಪನೆ ನನ್ನದು ಎಂಬುದನ್ನು ಬಹಿರಂಗವಾಗಿ ಹೇಳಿ, ನನಗೆ ಮನ್ನಣೆ ಸಿಗುವಂತೆ ಮಾಡಿದರು. ಇದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿ: ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ; ಎತ್ತಿಗೆ ಮುತ್ತಿಟ್ಟ ಸಿಎಂ ಬೊಮ್ಮಾಯಿ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು