AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಶಶಿ ತರೂರ್​​ ನೋಟ, ನಗುವಿಗೆ ಮನಸೋತ ನೆಟ್ಟಿಗರು; ಸಂಸತ್ತಿನಲ್ಲಿ ಸುಪ್ರಿಯಾ ಸುಲೆ ಜತೆ ಮಾತಾಡುತ್ತ ಕುಳಿತ ಭಂಗಿ ನೋಡಿ !

ನೆಟ್ಟಿಗರಂತೂ ಶಶಿ ತರೂರ್​ರನ್ನು ಸಿಕ್ಕಾಪಟೆ ಕಾಲೆಳೆದಿದ್ದಾರೆ. ಸುಪ್ರಿಯಾ ಸುಲೆ ಮಾತನಾಡುತ್ತಿದ್ದರೆ, ಶಶಿ ತರೂರ್​ ಮುಖಭಾವ ಹೇಗಿತ್ತು ಎಂಬುದನ್ನು ಝೂಮ್ ಮಾಡಿ ತೋರಿಸಲಾಗಿದೆ.

Video: ಶಶಿ ತರೂರ್​​ ನೋಟ, ನಗುವಿಗೆ ಮನಸೋತ ನೆಟ್ಟಿಗರು; ಸಂಸತ್ತಿನಲ್ಲಿ ಸುಪ್ರಿಯಾ ಸುಲೆ ಜತೆ ಮಾತಾಡುತ್ತ ಕುಳಿತ ಭಂಗಿ ನೋಡಿ !
ಸುಪ್ರಿಯಾ ಸುಲೆ-ಶಶಿ ತರೂರ್​ ಮಾತು
TV9 Web
| Edited By: |

Updated on:Apr 07, 2022 | 4:23 PM

Share

ನೀವೇನೇ ಹೇಳಿ, ಕಾಂಗ್ರೆಸ್​ ಸಂಸದ ಶಶಿ ತರೂರ್​ ಪದೇಪದೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವುದು ಹೆಚ್ಚು. ಕೆಲವು ವಿಭಿನ್ನ, ವಿಶಿಷ್ಟ ಕಾರಣಗಳಿಗೆ ಅವರು ಟ್ರೋಲ್ ಆಗುತ್ತಿರುತ್ತಾರೆ. ಈಗ ಮತ್ತೊಮ್ಮೆ ಶಶಿ ತರೂರ್​ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ.. ಅದೂ ಲೋಕಸಭೆಯಲ್ಲಿ ಕಂಡುಬಂದ ಒಂದು ಸನ್ನಿವೇಶದಿಂದಾಗಿ !.

Farrago Abdullah ಎಂಬ ಟ್ವಿಟರ್ ಅಕೌಂಟ್​​ನಿಂದ ವಿಡಿಯೋವೊಂದು ಶೇರ್ ಆಗಿದೆ. ಅದರಲ್ಲಿ ಫಾರೂಕ್ ಅಬ್ದುಲ್ಲಾ ಎದ್ದು ನಿಂತು, ಸದನವನ್ನು ಉದ್ದೇಶಿಸಿ ಗಂಭೀರವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರ ತುಸು ಹಿಂದೆ ಕುಳಿತ ಶಶಿ ತರೂರ್​, ಸಂಸದೆ ಸುಪ್ರಿಯಾ ಸುಲೆಯೊಂದಿಗೆ ಏನೋ ಹರಟೆಹೊಡೆಯುತ್ತಿದ್ದಾರೆ. ಅದೂ ಹೇಗೆ ಅಂತೀರಿ, ಮುಂದಿನ ಸಾಲಿನಲ್ಲಿ ಕುಳಿತ ಸುಪ್ರಿಯಾ ಹಿಂದಿರುಗಿ ಕುಳಿತು ಶಶಿ ತರೂರ್​ಗೆ ಏನೋ ಹೇಳುತ್ತಿದ್ದಾರೆ. ಶಶಿ ತರೂರ್​ ತಮ್ಮ ಮುಂದಿನ ಡೆಸ್ಕ್​ ಮೇಲೆ ಎರಡೂ ಕೈಯಿಟ್ಟು, ಆ ಕೈಗಳ ಮೇಲೆ ತಮ್ಮ ಗಲ್ಲವನ್ನಿಟ್ಟು, ಮುಗುಳ್ನಗುತ್ತ ಸುಪ್ರಿಯಾ ಮಾತುಗಳಿಗೆ ತಲೆ ಹಾಕುತ್ತ ಆಲಿಸುತ್ತಿದ್ದಾರೆ. ಅದನ್ನು ನೋಡಿದರೆ ಕಾಲೇಜು ಹುಡುಗರ ಫೀಲ್ ಬಾರದೆ ಇರದು. ಹೀಗೆ ಸುಪ್ರಿಯಾ ಸುಲೆಯ ಮಾತುಗಳನ್ನು ಅಷ್ಟು ಮಗ್ನವಾಗಿ ಆಲಿಸುತ್ತ, ಅದಕ್ಕೆ ತಲೆ ಅಲ್ಲಾಡಿಸುತ್ತಿರುವ ಶಶಿ ತರೂರ್​​ರನ್ನು ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ. ಈ ವಿಡಿಯೋಕ್ಕೆ ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡನ್ನು ಹಾಕಿ ವೈರಲ್ ಮಾಡಲಾಗಿದೆ. ಹೀಗಾಗಿ ಫಾರೂಕ್​ ಅಬ್ದುಲ್ಲಾ ಯಾವ ವಿಚಾರ ಮಾತನಾಡುತ್ತಿದ್ದರು ಎಂಬುದು ಗೊತ್ತಾಗುತ್ತಿಲ್ಲ.

ನೆಟ್ಟಿಗರಂತೂ ಶಶಿ ತರೂರ್​ರನ್ನು ಸಿಕ್ಕಾಪಟೆ ಕಾಲೆಳೆದಿದ್ದಾರೆ. ಸುಪ್ರಿಯಾ ಸುಲೆ ಮಾತನಾಡುತ್ತಿದ್ದರೆ, ಶಶಿ ತರೂರ್​ ಮುಖಭಾವ ಹೇಗಿತ್ತು ಎಂಬುದನ್ನು ಝೂಮ್ ಮಾಡಿ ತೋರಿಸಲಾಗಿದೆ. ವೃತ್ತಿಜೀವನವನ್ನೂ ಹೇಗೆ ಬೋರ್​ ಬಾರದಂತೆ ಮಾಡಬೇಕು ಎಂಬುದನ್ನು ಶಶಿ ತರೂರ್​ ತೋರಿಸುತ್ತಿದ್ದಾರೆ ಎಂಬಂಥ ಕಮೆಂಟ್​ಗಳನ್ನೂ ನೆಟ್ಟಿಗರು ಮಾಡಿದ್ದಾರೆ ಇಲ್ಲಿದೆ ನೋಡಿ ಫನ್ನಿ ವಿಡಿಯೋ..

ಇದನ್ನೂ ಓದಿತಂದೆಯಿಂದಲೇ ಮಗನಿಗೆ ಬೆಂಕಿ ಹಾಕಿ ಹತ್ಯೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗ ಸಾವು; ಬೆಂಕಿ ಹಾಕುವ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆ

Published On - 4:23 pm, Thu, 7 April 22

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು