AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mallikarjun Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಖರ್ಗೆ ಅವರಿಗೆ ಭದ್ರತೆ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.ಈ ಭದ್ರತಾ ವ್ಯವಸ್ಥೆಯು 55 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಜೊತೆಗೆ CRPF ಕಮಾಂಡೋಗಳು ದಿನದ 24 ಗಂಟೆಯೂ ಸುತ್ತ ಕಾವಲು ಕಾಯುತ್ತಿದ್ದಾರೆ.

Mallikarjun Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ
ಮಲ್ಲಿಕಾರ್ಜುನ ಖರ್ಗೆ
ರಶ್ಮಿ ಕಲ್ಲಕಟ್ಟ
|

Updated on:Feb 22, 2024 | 7:06 PM

Share

ದೆಹಲಿ ಫೆಬ್ರುವರಿ 22:  ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಝಡ್ ಪ್ಲಸ್ ಭದ್ರತೆ (Z plus Security) ನೀಡಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅವರಿಗೆ ಭದ್ರತೆ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ. Z ಪ್ಲಸ್ ಭದ್ರತೆಯು ಅತ್ಯುನ್ನತ ಮಟ್ಟದ ಭದ್ರತೆ ಯಾಗಿದೆ. SPG ಭದ್ರತೆ ನಂತರ,ಜೀವಕ್ಕೆ ಹೆಚ್ಚಿನ ಮಟ್ಟದ ಬೆದರಿಕೆಯನ್ನು ಹೊಂದಿರುವ ವ್ಯಕ್ತಿಗೆ ಸರ್ಕಾರವು ಈ ಭದ್ರತೆ  ಒದಗಿಸುತ್ತದೆ. ಈ ಭದ್ರತಾ ವ್ಯವಸ್ಥೆಯು 55 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಜೊತೆಗೆ CRPF ಕಮಾಂಡೋಗಳು ದಿನದ 24 ಗಂಟೆಯೂ ಸುತ್ತ ಕಾವಲು ಕಾಯುತ್ತಿದ್ದಾರೆ. ಈ ಕವರ್ ಮೂರು ಪಾಳಿಗಳಲ್ಲಿ ಬುಲೆಟ್ ಪ್ರೂಫ್ ವಾಹನ ಮತ್ತು ಬೆಂಗಾವಲು ಸಹ ಒಳಗೊಂಡಿದೆ. ವಿಐಪಿ ಸೆಕ್ಯುರಿಟಿ Z ಪ್ಲಸ್, Z, Y ಮತ್ತು X ನಾಲ್ಕು ವಿಭಾಗಗಳಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಝಡ್ ಪ್ಲಸ್ ರಕ್ಷಣೆ ಇದೆ. 2019 ರವರೆಗೆ, ಗಾಂಧಿ ಕುಟುಂಬವು SPG ಭದ್ರತೆಯನ್ನು ಹೊಂದಿತ್ತು ಅದನ್ನು Z ಪ್ಲಸ್‌ಗೆ ಇಳಿಸಲಾಯಿತು.

SPG ಅಥವಾ ವಿಶೇಷ ರಕ್ಷಣಾ ಗುಂಪು ಪ್ರಧಾನ ಮಂತ್ರಿಯ ಭದ್ರತೆಯನ್ನು ನೋಡಿಕೊಳ್ಳುತ್ತದೆ. ಇದು ಪ್ರಧಾನ ಮಂತ್ರಿ, ಮಾಜಿ ಪ್ರಧಾನಿಗಳು ಮತ್ತು ಅವರ ನಿಕಟ ಕುಟುಂಬದ ರಕ್ಷಣೆಗಾಗಿ ಸ್ಥಾಪಿಸಲಾದ ಗಣ್ಯ ಪಡೆ. 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಇದನ್ನು ಸ್ಥಾಪಿಸಲಾಯಿತು.

ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರ ಮೇಲಿನ ಬೆದರಿಕೆಯ ಗ್ರಹಿಕೆಯನ್ನು ಎತ್ತಿ ತೋರಿಸುವ ಫೆಡರಲ್ ಗುಪ್ತಚರ ಸಂಸ್ಥೆಗಳ ವರದಿಗಳ ನಂತರ ಕೇಂದ್ರ ಗೃಹ ಸಚಿವಾಲಯವು ಹಿರಿಯ ಕಾಂಗ್ರೆಸ್ ನಾಯಕನಿಗೆ Z ಪ್ಲಸ್ ಭದ್ರತೆಯನ್ನು ಆದೇಶಿಸಿದೆ ಎಂದು ವರದಿ ಹೇಳಿದೆ. 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಗಣ್ಯ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರ ಮೇಲಿನ ಬೆದರಿಕೆಯ ಗ್ರಹಿಕೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ ಮೋದಿ; ಸಂದೇಶ್‌ಖಾಲಿ ಸಂತ್ರಸ್ತರನ್ನು ಭೇಟಿ ಮಾಡುವ ಸಾಧ್ಯತೆ

ಈ ಹಿಂದೆ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಲೋಪವಾಗಿದೆ ಎಂದು ಹೇಳಲಾದ ನಂತರ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸುವಂತೆ ಖರ್ಗೆ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Thu, 22 February 24