AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಬರ್ತಿದ್ದಂಗೆ ಕಾಲರ್​ ಟ್ಯೂನ್​ ಬದಲಾಯ್ತು!

ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಾಗ ಲಸಿಕೆ ಸಿಗುತ್ತದೆ ಎಂದು ಖುಷಿಪಟ್ಟವರಂತೆಯೇ, ಲಸಿಕೆ ಬಂದ ಮೇಲಾದರೂ ಕಾಲರ್​ ಟ್ಯೂನ್​ನಿಂದ ಮುಕ್ತಿ ಸಿಗಬಹುದು ಎಂದು ಭಾವಿಸಿದವರಿದ್ದಾರೆ. ಆದರೆ ಅವರೆಲ್ಲರ ಊಹೆ ಸುಳ್ಳಾಗಿದ್ದು, ಈಗ ಲಸಿಕೆಯ ಜೊತೆಗೆ ಹೊಸ ಕಾಲರ್​ ಟ್ಯೂನ್​ ಬಂದುಬಿಟ್ಟಿದೆ!

ಕೊರೊನಾ ಲಸಿಕೆ ಬರ್ತಿದ್ದಂಗೆ ಕಾಲರ್​ ಟ್ಯೂನ್​ ಬದಲಾಯ್ತು!
ಕೊರೊನಾ ಕಾಲರ್​ ಟ್ಯೂನ್​ ಬದಲಾಯ್ತು!
Skanda
| Edited By: |

Updated on: Jan 16, 2021 | 12:37 PM

Share

ದೇಶದಲ್ಲಿ ಕೊರೊನಾ ಬಂದಮೇಲೆ ಏನೇನೆಲ್ಲಾ ಬದಲಾಯ್ತು.. ಮುಖಕ್ಕೆ ಮಾಸ್ಕ್​ ಬಂತು, ಕೈಗೆ ಪದೇ ಪದೇ ಸ್ಯಾನಿಟೈಸರ್​ ಹಚ್ಚಿಕೊಳ್ಳೋದು ಶುರುವಾಯ್ತು, ಪಕ್ಕದಲ್ಲಿದ್ದವರು ಕೆಮ್ಮಿದ್ರೂ, ಸೀನಿದ್ರೂ ಅನುಮಾನಪಡುವಂತಾಯ್ತು.. ಹೀಗೆ ನಿತ್ಯ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಬದಲಾವಣೆಗಳಿಗೆ ನಾವು ಒಗ್ಗಿಕೊಂಡುಬಿಟ್ಟೆವು. ಆದರೆ, ಈ ಎಲ್ಲಾ ಬದಲಾವಣೆಗಳಿಗಿಂತಲೂ ಜನರನ್ನು ಅತಿ ಹೆಚ್ಚು ಕಾಡಿದ್ದು, ತಾಳ್ಮೆ ಪರಿಶೀಲಿಸಿದ್ದು ಕೊರೊನಾ ಕಾಲರ್​ ಟ್ಯೂನ್!

ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆ ಮೂಡಿಸುವ ಸಲುವಾಗಿ ಆರಂಭವಾದ ಕಾಲರ್​ ಟ್ಯೂನ್​ ಒಂದೆರೆಡು ತಿಂಗಳು ಕಳೆಯುವಷ್ಟರಲ್ಲೇ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅದು ಮುಗಿಯುವ ತನಕ ಕಾಲ್​ ಕನೆಕ್ಟ್​ ಆಗೋದೂ ಇಲ್ಲ, ಏನಾದರೂ ತುರ್ತು ಕೆಲಸ ಇದ್ದಾಗಲೇ ಬಂದು ಕಾಡುತ್ತೆ ಎಂದು ಬೈದುಕೊಂಡವರಿಗೆ ಲೆಕ್ಕವಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕೊರೊನಾ ಕಾಲರ್​ ಟ್ಯೂನ್​ ತೆಗೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದವರೂ ಇದ್ದಾರೆ.

ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಾಗ ಲಸಿಕೆ ಸಿಗುತ್ತದೆ ಎಂದು ಖುಷಿಪಟ್ಟವರಂತೆಯೇ, ಲಸಿಕೆ ಬಂದ ಮೇಲಾದರೂ ಕಾಲರ್​ ಟ್ಯೂನ್​ನಿಂದ ಮುಕ್ತಿ ಸಿಗಬಹುದು ಎಂದು ಭಾವಿಸಿದವರಿದ್ದಾರೆ. ಆದರೆ ಅವರೆಲ್ಲರ ಊಹೆ ಸುಳ್ಳಾಗಿದ್ದು, ಈಗ ಲಸಿಕೆಯ ಜೊತೆಗೆ ಹೊಸ ಕಾಲರ್​ ಟ್ಯೂನ್​ ಬಂದುಬಿಟ್ಟಿದೆ!

ಕೊರೊನಾ ವೈರಸ್​ ಅಂದರೆ ಕೊವಿಡ್​ 19 ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ.. ಎಂಬ ಎಚ್ಚರಿಕೆ ಸಂದೇಶ ನೀಡುತ್ತಿದ್ದ ಕಾಲರ್​ ಟ್ಯೂನ್​ ಇದೀಗ ಕೊರೊನಾ ಲಸಿಕೆಯನ್ನು ಯಾವುದೇ ಹಿಂಜರಿಕೆಯಿಲ್ಲದೇ ತೆಗೆದುಕೊಳ್ಳಿ, ಲಸಿಕೆಯ ಮೇಲೆ ವಿಶ್ವಾಸವಿಡಿ ಎಂಬ ಮನವಿಯಾಗಿ ಬದಲಾಗಿದೆ.

ಕೆಮ್ಮಿನೊಂದಿಗೆ ಆರಂಭವಾಗುತ್ತಿದ್ದ ಮತ್ತು ಹಿರಿಯ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಧ್ವನಿಯಲ್ಲಿ ಮೂಡಿಬರುತ್ತಿದ್ದ ಕಾಲರ್​ ಟ್ಯೂನ್​ ಸಹ ಸ್ಥಗಿತವಾಗಿದ್ದು, ಹೊಸಾ ಕಾಲರ್​ ಟ್ಯೂನ್​ನಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮತ್ತು ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬೇಕು ಎಂಬೆಲ್ಲಾ ವಿವರಗಳನ್ನು ನೀಡಲಾಗುತ್ತಿದೆ.

ಭಾರತದಲ್ಲಿ ತಯಾರಾದ ಲಸಿಕೆಗಳ ಮೇಲೆ ವಿಶ್ವಾಸವಿಡಿ. ಅವು ಪರಿಣಾಮಕಾರಿಯಾಗಿದ್ದು, ನಿಮ್ಮನ್ನು ರೋಗದಿಂದ ರಕ್ಷಿಸಲಿವೆ ಎಂದು ಮಾಹಿತಿ ನೀಡಲಾಗುತ್ತಿದೆ. ಅದರೊಂದಿಗೆ ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲಿಸುವ ಕುರಿತೂ ಸಂದೇಶ ಸಾರಲಾಗುತ್ತಿರುವ ಕಾಲರ್​ ಟ್ಯೂನ್ ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಆರಂಭವಾಗಿದೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆಟ್ಟಿ ನಿಲ್ಲಲು ಶುರುವಾಯ್ತು ಲಸಿಕೆ ಪರ್ವ, ಯಾವ ಜಿಲ್ಲೆಯಲ್ಲಿ ಎಲ್ಲೆಲ್ಲಿ?

Follow Us
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್