AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಬರ್ತಿದ್ದಂಗೆ ಕಾಲರ್​ ಟ್ಯೂನ್​ ಬದಲಾಯ್ತು!

ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಾಗ ಲಸಿಕೆ ಸಿಗುತ್ತದೆ ಎಂದು ಖುಷಿಪಟ್ಟವರಂತೆಯೇ, ಲಸಿಕೆ ಬಂದ ಮೇಲಾದರೂ ಕಾಲರ್​ ಟ್ಯೂನ್​ನಿಂದ ಮುಕ್ತಿ ಸಿಗಬಹುದು ಎಂದು ಭಾವಿಸಿದವರಿದ್ದಾರೆ. ಆದರೆ ಅವರೆಲ್ಲರ ಊಹೆ ಸುಳ್ಳಾಗಿದ್ದು, ಈಗ ಲಸಿಕೆಯ ಜೊತೆಗೆ ಹೊಸ ಕಾಲರ್​ ಟ್ಯೂನ್​ ಬಂದುಬಿಟ್ಟಿದೆ!

ಕೊರೊನಾ ಲಸಿಕೆ ಬರ್ತಿದ್ದಂಗೆ ಕಾಲರ್​ ಟ್ಯೂನ್​ ಬದಲಾಯ್ತು!
ಕೊರೊನಾ ಕಾಲರ್​ ಟ್ಯೂನ್​ ಬದಲಾಯ್ತು!
Skanda
| Edited By: |

Updated on: Jan 16, 2021 | 12:37 PM

Share

ದೇಶದಲ್ಲಿ ಕೊರೊನಾ ಬಂದಮೇಲೆ ಏನೇನೆಲ್ಲಾ ಬದಲಾಯ್ತು.. ಮುಖಕ್ಕೆ ಮಾಸ್ಕ್​ ಬಂತು, ಕೈಗೆ ಪದೇ ಪದೇ ಸ್ಯಾನಿಟೈಸರ್​ ಹಚ್ಚಿಕೊಳ್ಳೋದು ಶುರುವಾಯ್ತು, ಪಕ್ಕದಲ್ಲಿದ್ದವರು ಕೆಮ್ಮಿದ್ರೂ, ಸೀನಿದ್ರೂ ಅನುಮಾನಪಡುವಂತಾಯ್ತು.. ಹೀಗೆ ನಿತ್ಯ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಬದಲಾವಣೆಗಳಿಗೆ ನಾವು ಒಗ್ಗಿಕೊಂಡುಬಿಟ್ಟೆವು. ಆದರೆ, ಈ ಎಲ್ಲಾ ಬದಲಾವಣೆಗಳಿಗಿಂತಲೂ ಜನರನ್ನು ಅತಿ ಹೆಚ್ಚು ಕಾಡಿದ್ದು, ತಾಳ್ಮೆ ಪರಿಶೀಲಿಸಿದ್ದು ಕೊರೊನಾ ಕಾಲರ್​ ಟ್ಯೂನ್!

ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆ ಮೂಡಿಸುವ ಸಲುವಾಗಿ ಆರಂಭವಾದ ಕಾಲರ್​ ಟ್ಯೂನ್​ ಒಂದೆರೆಡು ತಿಂಗಳು ಕಳೆಯುವಷ್ಟರಲ್ಲೇ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅದು ಮುಗಿಯುವ ತನಕ ಕಾಲ್​ ಕನೆಕ್ಟ್​ ಆಗೋದೂ ಇಲ್ಲ, ಏನಾದರೂ ತುರ್ತು ಕೆಲಸ ಇದ್ದಾಗಲೇ ಬಂದು ಕಾಡುತ್ತೆ ಎಂದು ಬೈದುಕೊಂಡವರಿಗೆ ಲೆಕ್ಕವಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕೊರೊನಾ ಕಾಲರ್​ ಟ್ಯೂನ್​ ತೆಗೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದವರೂ ಇದ್ದಾರೆ.

ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಾಗ ಲಸಿಕೆ ಸಿಗುತ್ತದೆ ಎಂದು ಖುಷಿಪಟ್ಟವರಂತೆಯೇ, ಲಸಿಕೆ ಬಂದ ಮೇಲಾದರೂ ಕಾಲರ್​ ಟ್ಯೂನ್​ನಿಂದ ಮುಕ್ತಿ ಸಿಗಬಹುದು ಎಂದು ಭಾವಿಸಿದವರಿದ್ದಾರೆ. ಆದರೆ ಅವರೆಲ್ಲರ ಊಹೆ ಸುಳ್ಳಾಗಿದ್ದು, ಈಗ ಲಸಿಕೆಯ ಜೊತೆಗೆ ಹೊಸ ಕಾಲರ್​ ಟ್ಯೂನ್​ ಬಂದುಬಿಟ್ಟಿದೆ!

ಕೊರೊನಾ ವೈರಸ್​ ಅಂದರೆ ಕೊವಿಡ್​ 19 ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ.. ಎಂಬ ಎಚ್ಚರಿಕೆ ಸಂದೇಶ ನೀಡುತ್ತಿದ್ದ ಕಾಲರ್​ ಟ್ಯೂನ್​ ಇದೀಗ ಕೊರೊನಾ ಲಸಿಕೆಯನ್ನು ಯಾವುದೇ ಹಿಂಜರಿಕೆಯಿಲ್ಲದೇ ತೆಗೆದುಕೊಳ್ಳಿ, ಲಸಿಕೆಯ ಮೇಲೆ ವಿಶ್ವಾಸವಿಡಿ ಎಂಬ ಮನವಿಯಾಗಿ ಬದಲಾಗಿದೆ.

ಕೆಮ್ಮಿನೊಂದಿಗೆ ಆರಂಭವಾಗುತ್ತಿದ್ದ ಮತ್ತು ಹಿರಿಯ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಧ್ವನಿಯಲ್ಲಿ ಮೂಡಿಬರುತ್ತಿದ್ದ ಕಾಲರ್​ ಟ್ಯೂನ್​ ಸಹ ಸ್ಥಗಿತವಾಗಿದ್ದು, ಹೊಸಾ ಕಾಲರ್​ ಟ್ಯೂನ್​ನಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮತ್ತು ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬೇಕು ಎಂಬೆಲ್ಲಾ ವಿವರಗಳನ್ನು ನೀಡಲಾಗುತ್ತಿದೆ.

ಭಾರತದಲ್ಲಿ ತಯಾರಾದ ಲಸಿಕೆಗಳ ಮೇಲೆ ವಿಶ್ವಾಸವಿಡಿ. ಅವು ಪರಿಣಾಮಕಾರಿಯಾಗಿದ್ದು, ನಿಮ್ಮನ್ನು ರೋಗದಿಂದ ರಕ್ಷಿಸಲಿವೆ ಎಂದು ಮಾಹಿತಿ ನೀಡಲಾಗುತ್ತಿದೆ. ಅದರೊಂದಿಗೆ ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲಿಸುವ ಕುರಿತೂ ಸಂದೇಶ ಸಾರಲಾಗುತ್ತಿರುವ ಕಾಲರ್​ ಟ್ಯೂನ್ ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಆರಂಭವಾಗಿದೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆಟ್ಟಿ ನಿಲ್ಲಲು ಶುರುವಾಯ್ತು ಲಸಿಕೆ ಪರ್ವ, ಯಾವ ಜಿಲ್ಲೆಯಲ್ಲಿ ಎಲ್ಲೆಲ್ಲಿ?

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!