ಪ್ರಧಾನಿ ಮೋದಿಯಂತೆ ಕಾಟನ್ ಸ್ಕಾರ್ಫ್ ಧರಿಸ್ತೀರಾ? ಹಾಗಿದ್ರೆ ಕೊರೊನಾ ವೈರಸ್ ಅಟ್ಯಾಕ್ ಮಾಡಬಹುದು ಎಚ್ಚರ

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಮುಖಕ್ಕೆ ಕಾಟನ್​ ಸ್ಕಾರ್ಪ್​ ಧರಿಸಿ ಮಾತನಾಡುತ್ತಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

ಪ್ರಧಾನಿ ಮೋದಿಯಂತೆ ಕಾಟನ್ ಸ್ಕಾರ್ಫ್ ಧರಿಸ್ತೀರಾ? ಹಾಗಿದ್ರೆ ಕೊರೊನಾ ವೈರಸ್ ಅಟ್ಯಾಕ್ ಮಾಡಬಹುದು ಎಚ್ಚರ
ಪ್ರಧಾನಿ ನರೇಂದ್ರ ಮೋದಿ

Updated on: Apr 30, 2021 | 5:13 PM

ದೇಶದಲ್ಲಿ ಕೊರೊನಾ ವೈರಸ್​ ಮೊದಲ ಅಲೆ ಶಾಂತವಾಗುತ್ತಿದ್ದಂತೆ ಎರಡನೇ ಅಲೆ ಕಾಣಿಸಿಕೊಂಡಿದೆ. ಪ್ರತಿನಿತ್ಯ ಭಾರತದಲ್ಲಿ ಸುಮಾರು ನಾಲ್ಕು ಲಕ್ಷ ಕೇಸ್​ಗಳು ಬರುತ್ತಿವೆ. ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೂ ಅದು ಯಶಸ್ಸು ಕಾಣುತ್ತಿಲ್ಲ. ಹೀಗಿರುವಾಗಲೇ ಯಾವ ರೀತಿಯ ಮಾಸ್ಕ್​ ಧರಿಸಬೇಕು ಎನ್ನುವ ಬಗ್ಗೆ ಚರ್ಚೆ ಶುರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಮುಖಕ್ಕೆ ಕಾಟನ್​ ಸ್ಕಾರ್ಪ್​ ಧರಿಸಿ ಮಾತನಾಡುತ್ತಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಟವೆಲ್​ಅನ್ನು ಮಾಸ್ಕ್​ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಬಳಕೆ ಮಾಡುವುದು ಎಷ್ಟು ಪ್ರಯೋಜನಕಾರಿ  ಎನ್ನುವ ಚರ್ಚೆ ಜೋರಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಶಾಲನ್ನು ಮಾಸ್ಕ್​ ರೀತಿ ಬಳಕೆ ಮಾಡಿಕೊಂಡಿದ್ದನ್ನು ನೋಡಿದ ಅನೇಕರು ಅದನ್ನೇ ಅನುಸರಿಸಿದ್ದರು. ತಮ್ಮ ಬಳಿ ಇದ್ದ ಕರ್ಚೀಫ್​​​ಅನ್ನು ಬಳಕೆ ಮಾಡಿಕೊಂಡು ಅದನ್ನು ಮಾಸ್ಕ್​ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದರು. ಆದರೆ, ಇದು ವೈರಸ್​ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಮಾಸ್ಕ್​ ಯಾವ ರೀತಿ ಇರಬೇಕು ಮತ್ತು ಮಾಸ್ಕ್​ ಅನ್ನು ಯಾವ ರೀತಿ ಧರಿಸಬೇಕು ಎನ್ನುವ ಬಗ್ಗೆ ವೈದ್ಯರು ಸೂಚನೆ ನೀಡಿದ್ದಾರೆ. ಅಲ್ಲದೆ, ಕರ್ಚೀಫ್​ ಹಾಗೂ ಟವೆಲ್​ ಅನ್ನು ಮಾಸ್ಕ್​ ರೀತಿ ಬಳಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೂಡ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬಟ್ಟೆಯ ಮಾಸ್ಕ್​​ ಧರಿಸಿದಾಗ ಅದರ ಮೂಲಕ ವೈರಸ್​ ಸುಲಭವಾಗಿ ವ್ಯಕ್ತಿಯ ಮೂಗು ಸೇರಬಹುದು. ಅಲ್ಲದೆ, ಮೂಗನ್ನು ಬಿಟ್ಟು ಕೇವಲ ಬಾಯಿಗೆ ಮಾಸ್ಕ್​ ಹಾಕಿದರೂ ವೈರಸ್​ ದೇಹ ಸೇರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ, ಬಟ್ಟೆಯ ಮಾಸ್ಕ್​ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಾಯಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ವೈದ್ಯರು ಹೇಳುವ ಪ್ರಕಾರ ವ್ಯಕ್ತಿ ಎರಡೆರಡು ಮಾಸ್ಕ್​ ಧರಿಸಬೇಕಂತೆ. ಇದರಿಂದ ಡಬಲ್​ ಸುರಕ್ಷೆ ಸಿಗಲಿದೆ. ಬಟ್ಟೆಯ ಮಾಸ್ಕ್​ ಧರಿಸುವುದು ಅಷ್ಟು ಉತ್ತಮವಲ್ಲ. ಒಂದೊಮ್ಮೆ ಬಟ್ಟೆಯ ಮಾಸ್ಕ್​ ಧರಿಸುತ್ತೇನೆ ಎಂದರೆ ಎರಡು ಅಥವಾ ಮೂರು ಮಾಸ್ಕ್​ಗಳನ್ನು ಒಟ್ಟಿಗೆ ಧರಿಸಬೇಕು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ ಮೆಡಿಸನ್‌ ತಗೊಂಡ್ರೆ 99.97 % ಕೊರೊನಾ ಬರಲ್ವಂತೆ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us