AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಸ್ಫೋಟ, ಬಂಧಿತ ಉಗ್ರರಿಂದ ಜಪ್ತಿ ಮಾಡಲಾದ ಫೋನ್​ಗಳಲ್ಲಿ ಏನಿತ್ತು ಗೊತ್ತೇ?

ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ನಿಗೂಢ ಸ್ಫೋಟ ಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಡಾ. ಮುಜಮ್ಮಿಲ್, ಆದಿಲ್, ಡಾ. ಶಾಹೀನ್ ಮತ್ತು ಇರ್ಫಾನ್​ನನ್ನು ಬಂಧಿಸಲಾಗಿತ್ತು. ಡಾ. ಮುಜಮ್ಮಿಲ್ ಶಕೀಲ್ ಗನೈ ಮೊಬೈಲ್‌ನಿಂದಲೇ ಸುಮಾರು 200 ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಇವುಗಳಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್, ಇತರ ಜೈಶ್ ಕಮಾಂಡರ್‌ಗಳು ಮತ್ತು ಐಸಿಸ್-ಸಂಬಂಧಿತ ಭಯೋತ್ಪಾದಕರು ಮಾಡಿದ ಭಾಷಣಗಳ ರೆಕಾರ್ಡಿಂಗ್‌ಗಳಿವೆ. ಇದು ಉಗ್ರಗಾಮಿ ಬೋಧನೆ ಎಂದು ಸ್ಪಷ್ಟಪಡಿಸಲಾಗಿದೆ.

ದೆಹಲಿ ಸ್ಫೋಟ, ಬಂಧಿತ ಉಗ್ರರಿಂದ ಜಪ್ತಿ ಮಾಡಲಾದ ಫೋನ್​ಗಳಲ್ಲಿ ಏನಿತ್ತು ಗೊತ್ತೇ?
ಉಗ್ರರು
ನಯನಾ ರಾಜೀವ್
|

Updated on: Nov 21, 2025 | 10:52 AM

Share

ನವದೆಹಲಿ, ನವೆಂಬರ್ 21: ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ನಿಗೂಢ ಸ್ಫೋಟ(Blast) ಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಡಾ. ಮುಜಮ್ಮಿಲ್, ಆದಿಲ್, ಡಾ. ಶಾಹೀನ್ ಮತ್ತು ಇರ್ಫಾನ್​ನನ್ನು ಬಂಧಿಸಲಾಗಿತ್ತು. ಡಾ. ಮುಜಮ್ಮಿಲ್ ಶಕೀಲ್ ಗನೈ ಮೊಬೈಲ್‌ನಿಂದಲೇ ಸುಮಾರು 200 ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಇವುಗಳಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್, ಇತರ ಜೈಶ್ ಕಮಾಂಡರ್‌ಗಳು ಮತ್ತು ಐಸಿಸ್-ಸಂಬಂಧಿತ ಭಯೋತ್ಪಾದಕರು ಮಾಡಿದ ಭಾಷಣಗಳ ರೆಕಾರ್ಡಿಂಗ್‌ಗಳಿವೆ. ಇದು ಉಗ್ರಗಾಮಿ ಬೋಧನೆ ಎಂದು ಸ್ಪಷ್ಟಪಡಿಸಲಾಗಿದೆ.

ಇವುಗಳಲ್ಲಿ ಸುಮಾರು 80 ವೀಡಿಯೊಗಳು ಭಯೋತ್ಪಾದಕ ತರಬೇತಿ, ಬಾಂಬ್ ತಯಾರಿಕೆ ತಂತ್ರಗಳು ಮತ್ತು ರಾಸಾಯನಿಕ ಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತವೆ .ಈ ಗುಂಪುಗಳು ಕಾರ್ಯಕರ್ತರಿಗೆ ತರಬೇತಿ ನೀಡಲು ಮತ್ತು ಸ್ಫೋಟಕಗಳನ್ನು ರಚಿಸಲು ಬಳಸುವ ವಿಧಾನಗಳ ಒಳನೋಟವನ್ನು ಈ ಸಾಮಗ್ರಿಗಳು ನೀಡುತ್ತವೆ.

ಈ ಫೋನ್‌ಗಳಲ್ಲಿ ದೆಹಲಿ, ಉತ್ತರ ಪ್ರದೇಶ, ಮುಂಬೈ ಮತ್ತು ಇತರ ರಾಜ್ಯಗಳಲ್ಲಿನ ಧಾರ್ಮಿಕ ಸ್ಥಳಗಳು ಮತ್ತು ಜನದಟ್ಟಣೆಯ ಮಾರುಕಟ್ಟೆಗಳ ವೀಡಿಯೊಗಳು ಸಹ ಇದ್ದವು ಹಾಗಾದರೆ ದಾಳಿ ನಡೆಸಲು ವಿವಿಧ ಸ್ಥಳಗಳನ್ನು ಇವರುಗಳು ನೋಡಿಟ್ಟಿದ್ದರು ಎಂಬುದು ಸಾಬೀತಾಗಿದೆ.

2022 ರಲ್ಲಿ, ಡಾ. ಮುಜಮ್ಮಿಲ್ ಮತ್ತು ಡಾ. ಉಮರ್ ಟರ್ಕಿಯಲ್ಲಿ ಜೈಶ್ ಕಮಾಂಡರ್‌ನ ಆದೇಶದ ಮೇರೆಗೆ ಸಿರಿಯನ್ ಐಸಿಸ್ ಭಯೋತ್ಪಾದಕ ಕಮಾಂಡರ್‌ನನ್ನು ಭೇಟಿಯಾಗಿದ್ದರು.ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಹೊರಗೆ ನಡೆದ ಮಾರಕ ಕಾರು ಸ್ಫೋಟ ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳನ್ನು ಪಟಿಯಾಲ ಹೌಸ್‌ನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ 10 ದಿನಗಳ ಕಸ್ಟಡಿಗೆ ನೀಡಿದೆ.

ಮತ್ತಷ್ಟು ಓದಿ: ದೆಹಲಿ ಸ್ಫೋಟ; ಎನ್​ಐಎಯಿಂದ ಮುಜಮ್ಮಿಲ್, ಶಾಹೀನ್ ಸೇರಿ ನಾಲ್ವರ ಬಂಧನ

ಆರೋಪಿಗಳಾದ ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನೈ, ಅನಂತನಾಗ್‌ನ ಡಾ. ಅದೀಲ್ ಅಹ್ಮದ್ ರಾಥರ್, ಲಕ್ನೋದ ಡಾ. ಶಾಹೀನ್ ಸಯೀದ್ ಮತ್ತು ಶೋಪಿಯಾನ್‌ನ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ – ಇವರೆಲ್ಲರನ್ನೂ ಹೆಚ್ಚಿನ ವಿಚಾರಣೆ ಮತ್ತು ತನಿಖೆಗಾಗಿ ಎನ್‌ಐಎಗೆ ಒಪ್ಪಿಸಲಾಗಿದೆ.

ಸ್ಫೋಟಕ್ಕೆ ಸಂಬಂಧಿಸಿದ ಭಯೋತ್ಪಾದಕ ಪಿತೂರಿಯ ವ್ಯಾಪ್ತಿಯನ್ನು ಬಯಲು ಮಾಡಲು ಎನ್​ಐಎ ಆರಂಭದಲ್ಲಿ 15 ದಿನಗಳ ಕಸ್ಟಡಿಗೆ ಕೋರಿತ್ತು. ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ