ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲು ಪ್ರಸಾದ್ ಮತ್ತು ಪುತ್ರರಿಗೆ ದೆಹಲಿ ಕೋರ್ಟ್ ಜಾಮೀನು

ನ್ಯಾಯಾಲಯವು ಈ ಹಿಂದೆ ನೀಡಿದ್ದ ಸಮನ್ಸ್‌ ಸ್ವೀಕರಿಸಿ ಲಾಲು ಪ್ರಸಾದ್, ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ದೆಹಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಆರೋಪಿಗಳ ವಿರುದ್ಧದ ಪೂರಕ ಆರೋಪ ಪಟ್ಟಿಯನ್ನು ಪರಿಗಣಿಸಿದ ಬಳಿಕ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದರು.

ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲು ಪ್ರಸಾದ್ ಮತ್ತು ಪುತ್ರರಿಗೆ ದೆಹಲಿ ಕೋರ್ಟ್ ಜಾಮೀನು
ಲಾಲು ಪ್ರಸಾದ್ ಕುಟುಂಬ
Follow us
|

Updated on:Oct 07, 2024 | 12:43 PM

ದೆಹಲಿ ಅಕ್ಟೋಬರ್ 07: ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ (land-for-jobs case) ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ (Lalu Prasad), ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಆರ್‌ಜೆಡಿ ನಾಯಕರಿಗೆ ತಲಾ ₹ 1 ಲಕ್ಷ ವೈಯಕ್ತಿಕ ಬಾಂಡ್‌ನಲ್ಲಿ ಜಾಮೀನು ನೀಡಿದ್ದು, ತನಿಖೆಯ ಸಮಯದಲ್ಲಿ ಅವರನ್ನು ಬಂಧಿಸಲಾಗಿಲ್ಲ ಎಂದು ಗಮನಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 25 ರಂದು ನಡೆಯಲಿದೆ.

ನ್ಯಾಯಾಲಯವು ಈ ಹಿಂದೆ ನೀಡಿದ್ದ ಸಮನ್ಸ್‌ ಸ್ವೀಕರಿಸಿ ಲಾಲು ಪ್ರಸಾದ್, ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ದೆಹಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಆರೋಪಿಗಳ ವಿರುದ್ಧದ ಪೂರಕ ಆರೋಪ ಪಟ್ಟಿಯನ್ನು ಪರಿಗಣಿಸಿದ ಬಳಿಕ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದರು. ಅಂತಿಮ ವರದಿಯನ್ನು ಆಗಸ್ಟ್ 6 ರಂದು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದೆ.

ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ.

“ಅವರು ರಾಜಕೀಯ ಪಿತೂರಿಯಲ್ಲಿ ತೊಡಗುತ್ತಾರೆ. ಅವರು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯಾವುದೂ ನಿಶ್ಚಿತ ಏನೂ ಇಲ್ಲ. ನಮ್ಮ ಗೆಲುವು ನಿಶ್ಚಿತ…” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ತೇಜ್ ಪ್ರತಾಪ್ ಅವರು ಲಾಲು ಪ್ರಸಾದ್ ಅವರ ಕುಟುಂಬದ ಆರನೇ ಸದಸ್ಯರಾಗಿದ್ದಾರೆ, ಅವರ ಹೆಸರು ಪ್ರಕರಣದಲ್ಲಿ ಕಾಣಿಸಿಕೊಂಡಿದೆ. ಲಾಲು ಪ್ರಸಾದ್ ಅವರ ಹೊರತಾಗಿ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ, ಮಾಜಿ ಉಪ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಪುತ್ರಿಯರಾದ ಲೋಕಸಭಾ ಸಂಸದ ಮಿಸಾ ಭಾರತಿ ಮತ್ತು ಹೇಮಾ ಯಾದವ್ ಇದರಲ್ಲಿದ್ದಾರೆ.

ಅಖಿಲೇಶ್ವರ್ ಸಿಂಗ್ ಮತ್ತು ಅವರ ಪತ್ನಿ ಕಿರಣ್ ದೇವಿ ಸೇರಿದಂತೆ ಇತರ ಆರೋಪಪಟ್ಟಿಗಳನ್ನು ಸಮನ್ಸ್ ಮಾಡಲಾಗಿದೆ. ಸಿಂಗ್ ಅವರನ್ನು ಇಡಿ ಆರೋಪಿಯನ್ನಾಗಿ ಮಾಡಿದ್ದರೆ, ಅವರ ಪತ್ನಿ ಕಿರಣ್ ಅವರನ್ನು ಆರಂಭದಲ್ಲಿ ಆರೋಪ ಮಾಡಿರಲಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಾಬ್ರಿ ದೇವಿ ಮತ್ತು ಇತರ ಆರೋಪಿಗಳಾದ ಮಿಸಾ, ಹೀಮಾ ಯಾದವ್ ಮತ್ತು ಹೃದಯಾನಂದ ಚೌಧರಿ ಅವರಿಗೆ ಈ ವರ್ಷ ಮಾರ್ಚ್ 7 ರಂದು ಇಡಿ ಪ್ರಕರಣದಲ್ಲಿ ಸಾಮಾನ್ಯ ಜಾಮೀನು ನೀಡಲಾಯಿತು . ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಅವರಿಗೆ ನ್ಯಾಯಾಲಯವು ಅಕ್ಟೋಬರ್ 4, 2023 ರಂದು ಜಾಮೀನು ನೀಡಿತು.

ಜಾರಿ ನಿರ್ದೇಶನಾಲಯ (ಇಡಿ) ಆಗಸ್ಟ್ 6 ರಂದು ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ಲಲ್ಲನ್ ಚೌಧರಿ, ಹಜಾರಿ ರೈ, ಧರ್ಮೇಂದರ್ ಕುಮಾರ್, ಅಖಿಲೇಶ್ವರ್ ಸಿಂಗ್, ರವೀಂದರ್ ಕುಮಾರ್, ಲಾಲ್ ಬಾಬು ರಾಯ್, ಸೋನ್ಮತಿಯಾ ದೇವಿ, ಕಿಶುನ್ ದೇವ್ ರಾಯ್ ಮತ್ತು ಸಂಜಯ್ ರಾಯ್ ಎಂದು 11 ಆರೋಪಿಗಳನ್ನು ಪಟ್ಟಿಮಾಡಿದೆ.

ಇದನ್ನೂ ಓದಿ: ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಮಾಡುವುದಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು

ಏನಿದು ಉದ್ಯೋಗಕ್ಕಾಗಿ ಭೂಮಿ ಪ್ರಕರಣ ?

ಲಾಲು ಪ್ರಸಾದ್ ಅವರು 2004 ರಿಂದ 2009 ರ ವರೆಗೆ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಧ್ಯಪ್ರದೇಶದ ಜಬಲ್‌ಪುರ ಮೂಲದ ರೈಲ್ವೆಯ ಪಶ್ಚಿಮ ಮಧ್ಯ ವಲಯದಲ್ಲಿ ಮಾಡಿದ ಗ್ರೂಪ್-ಡಿ ನೇಮಕಾತಿಗಳಿಗೆ ಸಂಬಂಧಿಸಿದಂತೆ ಲಾಲು ಕುಟುಂಬಕ್ಕೆ ಜಮೀನು ಮಾರಾಟ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Mon, 7 October 24