ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​​ ಲಾರೆನ್ಸ್​​​ ಬಿಷ್ಣೋಯ್​​ಯನ್ನು 5 ದಿನಗಳ ಕಾಲ ವಶಕ್ಕೆ ಪಡೆದ ದೆಹಲಿ ಪೊಲೀಸ್​​

ಬಲ್ಲಮೂಲಗಳ ಪ್ರಕಾರ ದೆಹಲಿ ಪೊಲೀಸರ ವಿಶೇಷ ಸೆಲ್ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಬಗ್ಗೆ ಬಿಷ್ಣೋಯ್​ಯನ್ನು ವಿಚಾರಣೆ ನಡೆಸಲಿದೆ. ಇದಕ್ಕಿಂತ ಮುನ್ನ ಬಿಷ್ಣೋಯ್ ತನ್ನನ್ನು ಪೊಲೀಸರು ನಕಲಿ...

ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​​ ಲಾರೆನ್ಸ್​​​ ಬಿಷ್ಣೋಯ್​​ಯನ್ನು 5 ದಿನಗಳ ಕಾಲ ವಶಕ್ಕೆ ಪಡೆದ ದೆಹಲಿ ಪೊಲೀಸ್​​
ಲಾರೆನ್ಸ್ ಬಿಷ್ಣೋಯ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: May 31, 2022 | 9:07 PM

ದೆಹಲಿ: ಪಂಜಾಬಿ ಗಾಯಕ, ಕಾಂಗ್ರೆಸ್ ರಾಜಕಾರಣಿ ಸಿಧು ಮೂಸೆ ವಾಲಾ (Sidhu Moose Wala) ಹತ್ಯೆ ಪ್ರಕರಣದ ಆರೋಪಿ ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್​​ಯನ್ನು(Lawrence Bishnoi) ದೆಹಲಿ ಪೊಲೀಸರು (Delhi Police) 5 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತನನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಬಲ್ಲಮೂಲಗಳ ಪ್ರಕಾರ ದೆಹಲಿ ಪೊಲೀಸರ ವಿಶೇಷ ಸೆಲ್ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಬಗ್ಗೆ ಬಿಷ್ಣೋಯ್​ಯನ್ನು ವಿಚಾರಣೆ ನಡೆಸಲಿದೆ. ಇದಕ್ಕಿಂತ ಮುನ್ನ ಬಿಷ್ಣೋಯ್ ತನ್ನನ್ನು ಪೊಲೀಸರು ನಕಲಿ ಎನ್​​ಕೌಂಟರ್ ಮೂಲಕ ಕೊಲ್ಲುವ ಭಯವಿದೆ ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದನು. ಇದಾದ ನಂತರ ಈತನಿಗೆ ತಿಹಾರ್ ಜೈಲಿನಲ್ಲಿ ಭದ್ರತೆ ಜಾಸ್ತಿ ಮಾಡಲಾಯಿತು. ಒಂದು ದಿನದ ಹಿಂದೆ, ಕೆಳ ನ್ಯಾಯಾಲಯವು ಅವರ ನಕಲಿ ಎನ್‌ಕೌಂಟರ್ ಭಯದ ಬಗ್ಗೆ ಮತ್ತು ಅವರ ವಿರುದ್ಧದ ತನಿಖೆಯನ್ನು ತಿಹಾರ್ ಜೈಲಿನಲ್ಲಿ ನಡೆಸಬಹುದು ಎಂದು ಅವರು ಮಾಡಿದ ಮನವಿಯನ್ನು ತಿರಸ್ಕರಿಸಿತ್ತು. ತನ್ನನ್ನು ವಶಕ್ಕೆ ಪಡೆಯಲು ಯಾವುದೇ ಪೊಲೀಸ್ ಇಲಾಖೆಗೆ ಅವಕಾಶ ನೀಡಬಾರದು ಎಂದು ಬಿಷ್ಣೋಯ್ ಮನವಿ ಮಾಡಿದ್ದ.

ದೆಹಲಿ ಪೊಲೀಸರ ವಿಶೇಷ ಸೆಲ್ ಸೋಮವಾರವೇ ಜೈಲಿನಲ್ಲಿ ಬಿಷ್ಣೋಯ್ ಅವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಹೇಳಲಾಗುತ್ತಿದೆ. ಬಿಷ್ಣೋಯ್ ಮಾತ್ರವಲ್ಲ ಕೆನಡಾ ಮೂಲದ ಗೋಲ್ಡಿ ಬ್ರಾರ್​​ಗೂ ಮೂಸೆ ವಾಲಾ ಹತ್ಯೆಯಲ್ಲಿರ ಕೈವಾಡವಿದೆ ಎಂದು ಪಂಜಾಬ್ ಪೊಲೀಸರು ಶಂಕಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ