AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಪಂಜಾಬ್ ಸಿಎಂ ಮಾನ್ ಜತೆ ಗ್ಯಾಂಗ್​​ಸ್ಟರ್​​ ಗೋಲ್ಡಿ ಬ್ರಾರ್ ಫೋಟೊ? ಆರೋಪಿ ಹೆಸರಲ್ಲಿ ಅಮಾಯಕ ಉದ್ಯಮಿಯ ಫೋಟೊ ವೈರಲ್

Goldy Brar ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಆರೋಪಿ ಗೋಲ್ಡಿ ಬ್ರಾರ್ ಪಂಜಾಬ್ ಸಿಎಂ ಭಗವಂತ್ ಮಾನ್ ಜತೆಗಿರುವ ಚಿತ್ರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊದ ಫ್ಯಾಕ್ಟ್ ಚೆಕ್ ಇಲ್ಲಿದೆ.

Fact Check ಪಂಜಾಬ್ ಸಿಎಂ ಮಾನ್ ಜತೆ ಗ್ಯಾಂಗ್​​ಸ್ಟರ್​​ ಗೋಲ್ಡಿ ಬ್ರಾರ್ ಫೋಟೊ? ಆರೋಪಿ ಹೆಸರಲ್ಲಿ ಅಮಾಯಕ ಉದ್ಯಮಿಯ ಫೋಟೊ ವೈರಲ್
ಪಂಜಾಬ್ ಸಿಎಂ ಜತೆ ಗೋಲ್ಡಿ ಬ್ರಾರ್ (ವೈರಲ್ ಚಿತ್ರ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 31, 2022 | 8:00 AM

Share

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರೊಂದಿಗೆ ಪಂಜಾಬ್‌ನ ಗೋಲ್ಡಿ ಬ್ರಾರ್ (Goldy Brar) ಹೆಸರಿನ ಮೊಹಾಲಿಯ ಉದ್ಯಮಿಯೊಬ್ಬರ ಫೋಟೋವನ್ನು ಅವರು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ (Gangster Goldy Brar) ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಭಾನುವಾರ ಹತ್ಯೆಯಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ (Sidhu Moose Wala) ಅವರ ಹತ್ಯೆಯ ಹೊಣೆಯನ್ನು ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾನೆ. ಪಂಜಾಬ್‌ನಿಂದ ದರೋಡೆಕೋರನ ಹೆಸರಿನೊಂದಿಗೆ ತನ್ನ ಫೋಟೋ ವೈರಲ್‌ ಆಗುತ್ತಿರುವುದನ್ನು ಗಮನಿಸಿರುವ ಉದ್ಯಮಿ ಗೋಲ್ಡಿ ಬ್ರಾರ್ ಈ ಫೋಟೊವನ್ನು ಹಂಚಿಕೊಳ್ಳಬೇಡಿ, ನಾನು ಆರೋಪಿಯಲ್ಲ ಎಂದು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. 28ರ ಹರೆಯದ ಪಂಜಾಬಿ ರಾಪ್ ಗಾಯಕ ಶುಬ್ದೀಪ್ ಸಿಂಗ್ ಸಿಧು (ಸಿಧು ಮೂಸೆ ವಾಲ) ಅವರನ್ನು ದುಷ್ಕರ್ಮಿಗಳು ಭಾನುವಾರ ಸಂಜೆ ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಪಂಜಾಬ್ ಸರ್ಕಾರವು ಮೂಸೆ ವಾಲಾರಿಗೆ ಇದ್ದ ಭದ್ರತೆ ಕಡಿತಗೊಳಿಸಿದ ಮರುದಿನವೇ ಈ ದಾಳಿ ನಡೆದಿದೆ. ಗಾಯಕ ಪಂಜಾಬ್‌ನಲ್ಲಿ ನಡೆದ 2022 ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ಗೆ ಸೇರಿಕೊಂಡಿದ್ದರು.

ಗ್ಯಾಂಗ್​​ಸ್ಟರ್​​ಗೆ ಆಮ್ ಆದ್ಮಿ ಪಕ್ಷದ ಸರ್ಕಾರದೊಂದಿಗೆ ನಂಟಿದೆ ಎಂಬ ಶೀರ್ಷಿಕೆಯೊಂದಿಗೆ ಉದ್ಯಮಿಯ ಫೋಟೊ ಶೇರ್ ಆಗುತ್ತಿದೆ. ಭಗವಂತ್ ಮನ್ ಪಕ್ಕದಲ್ಲಿ ನಿಂತಿರುವ ಈ ವ್ಯಕ್ತಿ ಗೋಲ್ಡಿ ಬ್ರಾರ್ ಆಗಿದ್ದು, ಈತ ಸಿಧು ಮೂಸ್ ವಾಲಾ ಅವರ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ವೈರಲ್  ಫೋಟೊಗೆ ವಿವರಣೆ ನೀಡಲಾಗಿದೆ.

ಇದನ್ನೂ ಓದಿ
Image
ಪಂಜಾಬಿ ಗಾಯಕ ಮೂಸೆ ವಾಲಾ ಹತ್ಯೆ ಹೊಣೆ ಹೊತ್ತ ಕೆನಡಾದ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್
Image
Sidhu Moose Wala: ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಗುಂಡೇಟಿನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ
Image
Fact Check: ರಸ್ತೆ ಮೇಲೆ ಬರೆದ Go Back Modi ಬರಹದ ಚಿತ್ರದ ಅಸಲಿಯತ್ತು ಇಲ್ಲಿದೆ
Image
Fact Check ‘ಇವತ್ತಲ್ಲ ನಾಳೆ ಅಲ್ಲಿಯೂ ಅಗೆಯಲಾಗುತ್ತದೆ’ ಎಂದು ಮೋದಿ ಭಾಷಣದಲ್ಲಿ ಹೇಳಿದ್ದು ಜ್ಞಾನವಾಪಿ ಬಗ್ಗೆ ಅಲ್ಲ, ಇನ್ಯಾವುದರ ಬಗ್ಗೆ?

ಫ್ಯಾಕ್ಟ್ ಚೆಕ್ ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್  ತಂಡ ಇದು ಮಾರ್ಚ್ 10 ರಂದು ಗೋಲ್ಡಿ ಬ್ರಾರ್ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಿದ ಫೇಸ್‌ಬುಕ್ ಚಿತ್ರ ಎಂದು ಹೇಳಿದೆ. ಗೋಲ್ಡಿ ಬ್ರಾರ್ ಹೆಸರನ್ನು ಫೇಸ್​​ಬುಕ್​​ನಲ್ಲಿ ಹುಡುಕಾಡಿದಾಗ ಈ ಚಿತ್ರ ಸಿಕ್ಕಿದೆ ಎಂದು ಬೂಮ್ ವರದಿ ಮಾಡಿದೆ. ಮೊಹಾಲಿಯ ಉದ್ಯಮಿ ಗೋಲ್ಡಿ ಬ್ರಾರ್ ಎಂಬವರ ಖಾತೆಯಲ್ಲಿ ಮನ್ ಜತೆಗಿರುವ ಫೋಟೊವನ್ನು ಮಾರ್ಚ್ 10, 2022 ಪೋಸ್ಟ್ ಮಾಡಲಾಗಿದ್ದು – Congratulations Cm Saab ಎಂದು ಬರೆಯಲಾಗಿದೆ. (Source) ಈ ನಂತರ ಬೂಮ್ ತಂಡ ಉದ್ಯಮಿ ಬ್ರಾರ್ ಅವರನ್ನು ಸಂಪರ್ಕಿಸಿದಾಗ “ನನ್ನ ಹೆಸರು ಸಹ ಗೋಲ್ಡಿ ಬ್ರಾರ್, ನಾನು ಫಾಜಿಲ್ಕಾ ನಿವಾಸಿ. ಭಗವಂತ್ ಮಾನ್ ಅವರೊಂದಿಗಿನ ನನ್ನ ಫೋಟೊ ನಿನ್ನೆ ವೈರಲ್ ಆಗಿದೆ. ಪಂಜಾಬ್ ಚುನಾವಣೆಯ ಸಮಯದಲ್ಲಿ ಆ ಫೋಟೊ ತೆಗೆದಿದ್ದು” ಎಂದು ಹೇಳಿದರು. ನನಗೂ ಸಿಧು ಮೂಸೆ ವಾಲಾ ಹತ್ಯೆಯ ಆರೋಪಿ ಗೋಲ್ಡಿ ಬ್ರಾರ್ ಜತೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಅವರು.

ಬ್ರಾರ್ ತಮ್ಮ ಖಾತೆಯಲ್ಲಿ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದು ಜನರು ತಮ್ಮ ಫೋಟೋವನ್ನು ಹಂಚಿಕೊಳ್ಳದಂತೆ ಕೇಳಿಕೊಂಡಿದ್ದಾರೆ. ಅದೇ ವೇಳೆ ಹಂಚಿಕೊಳ್ಳುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂಡಿಯಾ ಟುಡೆ ಆರೋಪಿ ಗೋಲ್ಡಿ ಬ್ರಾರ್‌ನ ಸಂಗ್ರಹ ಫೋಟೊವನ್ನು ಪ್ರಕಟಿಸಿದ್ದು ವೈರಲ್ ಫೋಟೊದಲ್ಲಿರುವ ಉದ್ಯಮಿ ಬ್ರಾರ್ ಫೋಟೊಗೂ ಇದಕ್ಕೂ ಯಾವುದೇ ಸಾಮ್ಯವಿಲ್ಲ ಎಂಬುದನ್ನು ತೋರಿಸುತ್ತದೆ.

ಹೆಚ್ಚಿನ ಫ್ಯಾಕ್ಟ್  ಚೆಕ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ