AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Water Crisis: ದೆಹಲಿ ನೀರಿನ ಬಿಕ್ಕಟ್ಟು; ಹೆಚ್ಚುವರಿ ನೀರು ಬಿಡಲು ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ದೆಹಲಿಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟನ್ನು ಕಡಿಮೆ ಮಾಡಲು ಹತ್ನಿಕುಂಡ್‌ನಿಂದ ವಜೀರಾಬಾದ್‌ಗೆ ಹೆಚ್ಚುವರಿ ನೀರನ್ನು ಹರಿಯುವಂತೆ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

Delhi Water Crisis: ದೆಹಲಿ ನೀರಿನ ಬಿಕ್ಕಟ್ಟು; ಹೆಚ್ಚುವರಿ ನೀರು ಬಿಡಲು ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ನೀರಿನ ಬಿಕ್ಕಟ್ಟು
ಸುಷ್ಮಾ ಚಕ್ರೆ
|

Updated on: Jun 06, 2024 | 2:57 PM

Share

ನವದೆಹಲಿ: ದೆಹಲಿಯಲ್ಲಿ ನೀರಿನ ಬಿಕ್ಕಟ್ಟು (Delhi Water Crisis)  ಹೆಚ್ಚಾಗಿದ್ದು, 137 ಕ್ಯೂಸೆಕ್ ನೀರು ಬಿಡುವಂತೆ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಇಂದು (ಗುರುವಾರ) ನಿರ್ದೇಶನ ನೀಡಿದೆ. ಈ ನೀರನ್ನು ದೆಹಲಿಗೆ ಹರಿಸಲು ಅನುಕೂಲ ಮಾಡಿಕೊಡುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ. ಆ ಪ್ರಕಾರ, ಶುಕ್ರವಾರ ನೀರು ಬಿಡಬೇಕಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಹೆಚ್ಚುವರಿ ನೀರು ಸರಬರಾಜನ್ನು ಹಂಚಿಕೊಳ್ಳಲು ಹಿಮಾಚಲ ಪ್ರದೇಶವು ಒಪ್ಪಿಗೆ ನೀಡಿದೆ ಎಂದು ದೆಹಲಿ ಸರ್ಕಾರವು ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ಹರಿಯಾಣ ಮತ್ತು ಹಿಮಾಚಲ ಪ್ರದೇಶವು ದೆಹಲಿಯೊಂದಿಗೆ ಗಡಿಯನ್ನು ಹಂಚಿಕೊಳ್ಳದ ಕಾರಣ, ವಜೀರಾಬಾದ್ ಬ್ಯಾರೇಜ್‌ನಿಂದ ರಾಜಧಾನಿ ದೆಹಲಿಗೆ ನೀರು ಪಡೆಯಲು ಹರಿಯಾಣ ಸಹಕರಿಸಬೇಕು.

ಬಿಸಿಗಾಳಿ ಮತ್ತು ದಾಖಲೆಯ ಅಧಿಕ ತಾಪಮಾನವು ದೆಹಲಿಯಲ್ಲಿ ನೀರಿನ ಸಮಸ್ಯೆಯನ್ನು ಉಂಟುಮಾಡುತ್ತಿದೆ. ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪಿದೆ. ತೀವ್ರವಾದ ಶಾಖದಿಂದಾಗಿ ದೆಹಲಿಗೆ ನೆರೆಹೊರೆಯ ರಾಜ್ಯಗಳಿಂದ ಆಗಾಗ ನೀರು ಸರಬರಾಜಿನ ಸ್ಥಗಿತ ಉಂಟಾಗುತ್ತಿತ್ತು. ಇದು ಕುಡಿಯುವ ನೀರಿಗೆ ಬೇಡಿಕೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: No Water Supply: ಬೆಂಗಳೂರಿನಲ್ಲಿ ಈ ಎರಡು ದಿನ ಕಾವೇರಿ ನೀರು ಬರಲ್ಲ

ತಮ್ಮ ಮನವಿಯಲ್ಲಿ, ರಾಜ್ಯ ಆಡಳಿತವು ತನ್ನ ಉದ್ಯೋಗಿಗಳನ್ನು ಮತ್ತು ವಲಸಿಗ ಜನರನ್ನು ಬೆಂಬಲಿಸಲು ಹೆಚ್ಚಿನ ನೀರು ಸರಬರಾಜಿನ ಅಗತ್ಯವಿದೆ ಎಂದು ಹೇಳಿದೆ.

“ಹಿಮಾಚಲಕ್ಕೆ ಯಾವುದೇ ಅಭ್ಯಂತರವಿಲ್ಲದ ಕಾರಣ, ನಾವು 137 ಕ್ಯೂಸೆಕ್‌ಗಳನ್ನು ಅಪ್‌ಸ್ಟ್ರೀಮ್‌ನಿಂದ ವರ್ಗಾಯಿಸುವಂತೆ ನಿರ್ದೇಶಿಸುತ್ತೇವೆ. ಆದ್ದರಿಂದ ನೀರು ಹತ್ನಿಕುಂಡ್ ಬ್ಯಾರೇಜ್‌ಗೆ ತಲುಪುತ್ತದೆ ಮತ್ತು ವಜೀರಾಬಾದ್ ಮೂಲಕ ದೆಹಲಿ ತಲುಪುತ್ತದೆ” ಎಂದು ನ್ಯಾಯಾಲಯ ಗುರುವಾರ ನಿರ್ದೇಶಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಇದನ್ನೂ ಓದಿ: Viral Video: ನೀರಿನಲ್ಲಿ ಮುಳುಗುತ್ತಿದ್ದ  ತನ್ನ ಮುದ್ದು ಕಂದಮ್ಮನನ್ನು  ರಕ್ಷಿಸಿದ ತಾಯಿ ಆನೆ 

ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಅವರ ಪೀಠದ ಪ್ರಕಾರ, ಹರಿಯಾಣಕ್ಕೆ ಪೂರ್ವ ಸೂಚನೆಯೊಂದಿಗೆ ಜೂನ್ 7ರಂದು ಹಿಮಾಚಲ ಪ್ರದೇಶದಿಂದ ನೀರು ನೀಡಲಾಗುವುದು. ಹೆಚ್ಚಿನ ನೀರು ಪೂರೈಕೆಗಾಗಿ ಯಮುನಾ ನದಿಯ ಮೇಲಿನ ಮಂಡಳಿಯು ನೀರನ್ನು ಅಳೆಯುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ