AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವಿನ ಮರಿಗಳಿಗೆ ಜನ್ಮ ನೀಡಿದರೇ ಮಹಿಳೆ? ನಿಜವಾಗಿ ನಡೆದಿದ್ದೇನು?

ಮಧ್ಯಪ್ರದೇಶದ ಛತ್ತರ್​ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಆ ಮಹಿಳೆ ಗರ್ಭಿಣಿಯೂ ಆಗಿರಲಿಲ್ಲ, ಯಾವುದೇ ಹಾವಿನ ಮರಿಗಳಿಗೂ ಜನ್ಮ ನೀಡಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಅದು ಅದು ಹಾವಿನಂತೆ ಕಾಣುವ ರಕ್ತ ಹೆಪ್ಪುಗಟ್ಟುವಿಕೆಯಿಂದಾದ ಮುದ್ದೆಯಷ್ಟೇ ಎಂಬುದು ತಿಳಿದುಬಂದಿದೆ.

ಹಾವಿನ ಮರಿಗಳಿಗೆ ಜನ್ಮ ನೀಡಿದರೇ ಮಹಿಳೆ? ನಿಜವಾಗಿ ನಡೆದಿದ್ದೇನು?
ಆಸ್ಪತ್ರೆ Image Credit source: Free Press Journal
ನಯನಾ ರಾಜೀವ್
|

Updated on: Aug 08, 2025 | 10:54 AM

Share

ಛತ್ತರ್​​ಪುರ್,ಆಗಸ್ಟ್ 08: ಮಧ್ಯಪ್ರದೇಶದ ಛತ್ತರ್​ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ಆ ಮಹಿಳೆ ಗರ್ಭಿಣಿ(Pregnant)ಯೂ ಆಗಿರಲಿಲ್ಲ, ಯಾವುದೇ ಹಾವಿನ ಮರಿಗಳಿಗೂ ಜನ್ಮ ನೀಡಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಅದು ಅದು ಹಾವಿನಂತೆ ಕಾಣುವ ರಕ್ತ ಹೆಪ್ಪುಗಟ್ಟುವಿಕೆಯಿಂದಾದ ಮುದ್ದೆಯಷ್ಟೇ ಎಂಬುದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ರಿಂಕಿ ಅಹಿರ್ವಾರ್ ಎಂಬ ಮಹಿಳೆ ತಾನು ಹಾವಿನ ಮರಿಗಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾಳೆ. ಆ ಪ್ರದೇಶದ ಎಲ್ಲರಿಗೂ ಇದು ಆಘಾತ ಉಂಟು ಮಾಡಿತ್ತು. ಆದರೆ ವೈದ್ಯಕೀಯ ತನಿಖೆ ಬಳಿಕ ವೈದ್ಯರು ಸತ್ಯವು ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಿದ್ದಾರೆ.

ಖಜುರಾಹೋ ಪ್ರದೇಶದ ಮೌಮಸಾನಿಯಾ ಗ್ರಾಮದಲ್ಲಿ ಈ ವಿಷಿತ್ರ ಘಟನೆ ವರದಿಯಾಗಿದ್ದು, ಇದು ಭೀತಿ ಮತ್ತು ಕುತೂಹಲದ ಅಲೆಯನ್ನು ಸೃಷ್ಟಿಸಿದೆ.

ಘಟನೆ ಏನಿದು? ಹಲ್ಕೆ ಅಹಿರ್ವಾರ್ ಪತ್ನಿ ರಿಂಕಿ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬಳಿಕ ಎರಡು ಹಾವಿನ ಮರಿಗಳಿಗೆ ನಮ್ಮ ನೀಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಸುದ್ದಿ ಹರಡುತ್ತಿದ್ದಂತೆ, ಗ್ರಾಮಸ್ಥರು ತಮ್ಮ ಮನೆಯಲ್ಲಿ ಜಮಾಯಿಸಿದರು ಮತ್ತು ಹಾವಿನ ಮರಿಗಳು ಎಂದು ಕರೆಯಲ್ಪಡುವ ಹಾವುಗಳನ್ನು ಪ್ಲಾಸ್ಟಿಕ್ ಬಟ್ಟಲಿನ ಕೆಳಗೆ ಇಡಲಾಗಿತ್ತು.

ನಂತರ ರಿಂಕಿಯನ್ನು ರಾಜನಗರ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಕೇಂದ್ರದ ಬಿಎಂಒ ಡಾ. ಅವಧೇಶ್ ಚತುರ್ವೇದಿ ಮಾತನಾಡಿ, ರಿಂಕಿ ನಮ್ಮ ಆಸ್ಪತ್ರೆಗೆ ಬಂದಿದ್ದರು, ಇತ್ತೀಚೆಗೆ ತಮಗೆ ಮುಟ್ಟು ಆಗಿತ್ತು ಎಂದು ಹೇಳಿಕೊಂಡಿದ್ದರು. ಅದು ಬಳಿಕ ನಿಂತು ಹೋಗಿತ್ತು. ಪರೀಕ್ಷೆಯ ನಂತರ, ಅವಳು ಗರ್ಭಿಣಿಯಲ್ಲ ಎಂಬುದು ಸ್ಪಷ್ಟವಾಯಿತು.

ಮರಿ ಹಾವುಗಳು ಎಂದು ಆಕೆ ಭಾವಿಸಿದ್ದು ವಾಸ್ತವವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿತ್ತು. ಅವು ಕೆಲವೊಮ್ಮೆ ದಾರದಂತಹ ಅಥವಾ ಉದ್ದವಾದ ಆಕಾರದಲ್ಲಿ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ.

ಮತ್ತಷ್ಟು ಓದಿ: Video: ಬೆಡ್ ರೂಮಿನ ಹಾಸಿಗೆ ಮೇಲೆ ರಾಶಿ ರಾಶಿ ಹಾವುಗಳು, ಈ ಯುವತಿ ಏನ್ ಮಾಡ್ತಿದ್ದಾಳೆ ನೋಡಿ

ಹಾವಿನಂತಹ ವಸ್ತು ಸ್ವಲ್ಪ ಸಮಯದ ನಂತರ ಕರಗಿತು ಮತ್ತು ಮಹಿಳೆ ಕೂಡ ಇದನ್ನು ಒಪ್ಪಿಕೊಂಡರು. ಅವರಿಗೆ ಇನ್ನೂ ಸೌಮ್ಯವಾದ ಹೊಟ್ಟೆ ನೋವು ಇತ್ತು ಮತ್ತು ಛತ್ತರ್ಪುರದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್‌ಗೆ ಶಿಫಾರಸು ಮಾಡಲಾಯಿತು. ಮನುಷ್ಯರು ಹಾವುಗಳಂತಹ ಸರಿಸೃಪಗಳಿಗೆ ಜನ್ಮ ನೀಡುವುದು ಜೈವಿಕವಾಗಿ ಅಸಾಧ್ಯ ಎಂದು ತಜ್ಞರು ವಿವರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!