ದೆಹಲಿ: ಹೆಚ್ಚುತ್ತಿರುವ ಹಣದುಬ್ಬರ (inflation )ಮತ್ತು ನಿರುದ್ಯೋಗದ ಬಗ್ಗೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಬುಧವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರತವು “ಶ್ರೀಲಂಕಾದಂತೆ” (Sri Lanka) ಕಾಣುತ್ತದೆ ಎಂದು ಹೇಳಿದ್ದಾರೆ.ಅದೇ ವೇಳೆ ಕೇಂದ್ರವು ಜನರ ಗಮನವನ್ನು ಬೇರೆಡೆಗೆ ಸೆಳೆಯಬಾರದು ಎಂದಿದ್ದಾರೆ. ಸರ್ಕಾರವು ತನ್ನ ವೈಫಲ್ಯ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಮರೆಮಾಡಲು ಇತರ ವಿಷಯಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. “ಜನರ ಗಮನ ಬೇರೆಡೆಗೆ ಸೆಳೆಯುವುದರಿಂದ ಸತ್ಯಗಳು ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆಯೇ ಕಾಣುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಸಶಸ್ತ್ರ ಸಂಘರ್ಷದ ಸ್ಥಳ , ಈವೆಂಟ್ ಡೇಟಾ ಪ್ರಾಜೆಕ್ಟ್, ಲೋಕಸಭೆಯ ಅನ್ ಸ್ಟಾರ್ಡ್ ಪ್ರಶ್ನೆ, ಸಿಎಂಐಇ, ಪೆಟ್ರೋಲಿಯಂ ಪ್ಲಾನಿಂಗ್ ಆಂಡ್ ಅನಾಲಿಸಿಸ್ ಸೆಲ್ ಮತ್ತು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ವಿವಿಧ ಮೂಲಗಳನ್ನು ಉಲ್ಲೇಖಿಸಿ ಅವರು ಭಾರತ ಮತ್ತು ಶ್ರೀಲಂಕಾದ ಒಂದೇ ರೀತಿಯ ಎಂದುತೋರಿಸುವ ನಿರುದ್ಯೋಗ, ಪೆಟ್ರೋಲ್ ಬೆಲೆ ಮತ್ತು ಕೋಮು ಹಿಂಸಾಚಾರದ ಗ್ರಾಫ್ಗಳನ್ನು ಹಂಚಿಕೊಂಡಿದ್ದಾರೆ.
ಬೆಲೆ ಏರಿಕ ಮತ್ತು ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗದ ವಿಷಯದ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು ಭಾರತದ ಪರಿಸ್ಥಿತಿ ಶ್ರೀಲಂಕಾದ ರೀತಿಯಲ್ಲಿ ಹೋಗುತ್ತಿದೆ ಎಂದು ಹೇಳಿದೆ.ಶ್ರೀಲಂಕಾದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರಧಾನಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು.