Diwali: ದೀಪಾವಳಿಯಂದು ಭಕ್ತರಿಗಿಲ್ಲ ಏಳು ಬೆಟ್ಟಗಳ ಒಡೆಯನ ಸೇವಾ ಭಾಗ್ಯ

ಸೂರ್ಯ ಗ್ರಹಣ ಪರಿಣಾಮ ಅಕ್ಟೋಬರ್ 25 ರಂದು ಭಕ್ತರಿಗೆ ತಿರುಪತಿ ತಿರುಮಲನ ದರ್ಶನ ಭಾಗ್ಯ ಇರುವುದಿಲ್ಲ. ಈ ಬಗ್ಗೆ ಟಿಟಿಡಿ ಆಡಳಿತ ಮಂಡಳಿಯಿಂದ ಮಾಹಿತಿ ನೀಡಲಾಗಿದೆ.

Diwali: ದೀಪಾವಳಿಯಂದು ಭಕ್ತರಿಗಿಲ್ಲ ಏಳು ಬೆಟ್ಟಗಳ ಒಡೆಯನ ಸೇವಾ ಭಾಗ್ಯ
ಸೂರ್ಯ ಗ್ರಹಣ ಹಿನ್ನೆಲೆ ದೀಪಾವಳಿಯಂದು ತಿರುಪತಿ ದೇಗುಲ ಬಂದ್
Edited By: Rakesh Nayak Manchi

Updated on: Oct 21, 2022 | 11:54 AM

ತಿರುಪತಿ: ಸೂರ್ಯ ಗ್ರಹಣ ಹಿನ್ನೆಲೆ ದೀಪಾವಳಿ ಹಬ್ಬದಂದು ತಿರಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು ಎಂದು ಯೋಚಿಸುತ್ತಿದ್ದ ಭಕ್ತರಲ್ಲಿ ನಿರಾಸೆ ಉಂಟಾಗಿದೆ. ಅಕ್ಟೋಬರ್ 25 ರಂದು ದೇಶಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇದೇ ಸಮಯದಲ್ಲಿ ಒಂದಷ್ಟು ಭಕ್ತರ ಸಮೂಹ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಅಂದು ಸೂರ್ಯಗ್ರಹಣ ಹಿನ್ನೆಲೆ ದೇಗುಲದ ಬಾಗಿಲು ಮುಚ್ಚಿರಲಿದ್ದು, ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇರುವುದಿಲ್ಲ. ಅದರ ಹಿಂದಿನ ದಿನ ದೇಗಲುಕ್ಕೆ ಹೋದರಾಯ್ತು ಎಂದರೂ ಅಂದು (ಅ.24) ಕೂಡ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬೆಳಗ್ಗೆ 8ರಿಂದ ರಾತ್ರಿ 7.30ರವರೆಗೆ ದೇಗುಲ ಮುಚ್ಚಿರಲಿದ್ದು, ಈ ಕುರಿತು ಟಿಟಿಡಿ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇನ್ನೊಂದೆಡೆ ನವೆಂಬರ್ 8ರಂದು ಕೂಡ ತಿರುಪತಿ ದೇಗುಲ ಮುಚ್ಚಿರಲಿದೆ. ಅಂದು ಚಂದ್ರ ಗ್ರಹಣ ಸಂಭವಿಸಲಿರುವುದರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಚಂದ್ರ ಗ್ರಹಣ ಇರುವುದರಿಂದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನವನ್ನು ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಹೀಗಾಗಿ ತಿಮ್ಮಪ್ಪನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರಲು ಆರಂಭವಾಗಿದ್ದು, ತಿಮ್ಮಪ್ಪನ ದರ್ಶನಕ್ಕಾಗಿ 8 ಗಂಟೆಗೂ ಅಧಿಕ ಕಾಲ ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ವಿಶೇಷ ದರ್ಶನಕ್ಕೂ 2-3 ಗಂಟೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಟಿಟಿಡಿ ಪ್ರಕಾರ, ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ತಿರುಮಲ ದೇವಸ್ಥಾನದಲ್ಲಿ ಹೇಳಿದ ದಿನಗಳಲ್ಲಿ ವಿಐಪಿ, ಶ್ರೀವಾಣಿ, 300 ವಿಶೇಷ ಪ್ರವೇಶ ದರ್ಶನವನ್ನು ಮತ್ತು ಇತರ ಎಲ್ಲಾ ರೀತಿಯ ಸವಲತ್ತು ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ. ಶುದ್ಧಿ ಮತ್ತು ಪುಣ್ಯಾಹವಾಚನದಂತಹ ಆಚರಣೆಗಳ ನಂತರ ಬೆಟ್ಟದ ದೇವಾಲಯದಲ್ಲಿ ಪೂಜೆ ಪುನರಾರಂಭವಾಗುತ್ತದೆ. ಕೇವಲ ತಿರುಪತಿ ದೇವಾಲಯ ಮಾತ್ರವಲ್ಲದೆ ದೇಶಾದ್ಯಂತ ತಿರುಮಲ ತಿರುಪತಿ ದೇವಸ್ಥಾನಗಳ ಆಡಳಿತದಲ್ಲಿರುವ ಸುಮಾರು 60 ಇತರ ದೇವಾಲಯಗಳು ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಮತ್ತು ನವೆಂಬರ್ 8ರಂದು ಬಂದ್​ ಮಾಡಲಾಗುತ್ತದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us