AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಯಾ ಬದಲು ಮಾಯಾ, ಅಲಿ ಬದಲು ಆರ್ಯ; ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳಿರುವ ವಾರ್ಡ್ ಹೆಸರು ಬದಲಾವಣೆಗೆ ನಿರ್ಧಾರ

ಅಶ್ಫಾಕುಲ್ಲಾ ಖಾನ್, ಶಿವಸಿಂಗ್ ಚೆಟ್ರಿ, ಬಾಬಾ ಗಂಭೀರ್ ನಾಥ್, ಬಾಬಾ ರಾಘವದಾಸ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮದನ್ ಮೋಹನ್ ಮಾಳವೀಯ ಅವರಂತಹ ವ್ಯಕ್ತಿಗಳ ಹೆಸರನ್ನು ವಾರ್ಡ್‌ಗಳಿಗೆ ಇರಿಸಲಾಗಿದೆ.

ಮಿಯಾ ಬದಲು ಮಾಯಾ, ಅಲಿ ಬದಲು ಆರ್ಯ; ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳಿರುವ ವಾರ್ಡ್ ಹೆಸರು ಬದಲಾವಣೆಗೆ ನಿರ್ಧಾರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 04, 2022 | 3:42 PM

Share

ಗೋರಖ್‌ಪುರ ಮುನ್ಸಿಪಲ್ ಕಾರ್ಪೊರೇಷನ್ (Gorakhpur Municipal Corporation) ಹೊರಡಿಸಿದ ಕರಡು ಡಿಲಿಮಿಟೇಶನ್ ಆದೇಶವು ಸುಮಾರು ಹನ್ನೆರಡು ವಾರ್ಡ್‌ಗಳ “ಮುಸ್ಲಿಂ ಹೆಸರುಗಳಂತೆ ಧ್ವನಿಸುವ ಹೆಸರುಗಳನ್ನು” ಬದಲಾಯಿಸಲು ನಿರ್ಧರಿಸಿದೆ. ಇದನ್ನು ಸಮಾಜವಾದಿ ಪಕ್ಷ (Samajwadi Party) ಮತ್ತು ಕಾಂಗ್ರೆಸ್‌ನ ನಾಯಕರು ಖಂಡಿಸಿದ್ದಾರೆ. ಹೆಸರುಗಳ ಬದಲಾವಣೆಯು ಡಿಲಿಮಿಟೇಶನ್ ಪ್ರಕ್ರಿಯೆಯ ಭಾಗವಾಗಿದ್ದು ಗೋರಖ್‌ಪುರದಲ್ಲಿ ವಾರ್ಡ್‌ಗಳ ಸಂಖ್ಯೆ 80 ಕ್ಕೆ ಏರಿದೆ. ಹೆಸರು ಬದಲಾವಣೆ ಮಾಡಿದಾಗ ಹಲವಾರು ಅಪ್ರತಿಮ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗಿದೆ. ಒಂದು ವಾರದೊಳಗೆ ಜನರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಮತ್ತು ಅವುಗಳ ವಿಲೇವಾರಿ ನಂತರ ಡಿಲಿಮಿಟೇಶನ್ ಅನುಮೋದನೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ತಲತ್ ಅಜೀಜ್ ಹೆಸರು ಬದಲಾಯಿಸುವ ಕಸರತ್ತು ಹಣವನ್ನು ವ್ಯರ್ಥ ಮಾಡುವ ಕಾರ್ಯ ಎಂದು ಬಣ್ಣಿಸಿದ್ದಾರೆ. “ಈ ಪ್ರಕ್ರಿಯೆ ಮೂಲಕ ಸರ್ಕಾರವು ಏನನ್ನು ಸಾಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ವಿಫಲನಾಗಿದ್ದೇನೆ” ಎಂದಿದ್ದಾರೆ ಅವರು.

ಹೊಸ ಹೆಸರುಗಳು ಹೆಮ್ಮೆಯ ಭಾವನೆಯನ್ನು ಮೂಡಿಸುತ್ತವೆ ಎಂದು ಮೇಯರ್ ಸೀತಾರಾಮ್ ಜೈಸ್ವಾಲ್ ಹೇಳಿದ್ದಾರೆ. ಅಶ್ಫಾಕುಲ್ಲಾ ಖಾನ್, ಶಿವಸಿಂಗ್ ಚೆಟ್ರಿ, ಬಾಬಾ ಗಂಭೀರ್ ನಾಥ್, ಬಾಬಾ ರಾಘವದಾಸ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮದನ್ ಮೋಹನ್ ಮಾಳವೀಯ ಅವರಂತಹ ವ್ಯಕ್ತಿಗಳ ಹೆಸರನ್ನು ವಾರ್ಡ್‌ಗಳಿಗೆ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಕ್ಷೇಪಣೆಗಳನ್ನು ಒಂದು ವಾರದೊಳಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಲಖನೌಗೆ ಕಳುಹಿಸಬಹುದು ಎಂದು ಪಾಲಿಕೆ ಆಯುಕ್ತ ಅವಿನಾಶ್ ಸಿಂಗ್ ತಿಳಿಸಿದ್ದಾರೆ. ಆಕ್ಷೇಪಣೆಗಳ ವಿಲೇವಾರಿ ನಂತರ ವಿಂಗಡಣೆಗೆ ಅನುಮೋದನೆ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಗೋರಖ್‌ಪುರ ಈಗ 80 ವಾರ್ಡ್‌ಗಳನ್ನು ಹೊಂದಿರುತ್ತದೆ.

ಮಿಯಾ ಬಜಾರ್, ಮುಫ್ತಿಪುರ್, ಅಲಿನಗರ, ತುರ್ಕಮನ್‌ಪುರ್, ಇಸ್ಮಾಯಿಲ್‌ಪುರ್, ರಸ್ಸೋಲ್‌ಪುರ್, ಹುಮಾಯೂನ್‌ಪುರ್ ನಾರ್ಥ್, ಘೋಸಿಪುರ್ವ, ದೌದ್‌ಪುರ್, ಜಾಫ್ರಾ ಬಜಾರ್, ಖಾಜಿಪುರ್ ಖುರ್ದ್ ಮತ್ತು ಚಕ್ಸಾ ಹುಸೇನ್ ಎಂಬ ಹೆಸರುಗಳನ್ನು ಬದಲಾಯಿಸಲಾಗಿದೆ. ನಾಗರಿಕ ಸಂಸ್ಥೆ ಹೊರಡಿಸಿದ ಆದೇಶದ ಪ್ರಕಾರ, ಇಲಾಹಿ ಬಾಗ್ ಅನ್ನು ಈಗ ಬಂಧು ಸಿಂಗ್ ನಗರ ಎಂದೂ ಇಸ್ಮಾಯಿಲ್‌ಪುರವನ್ನು ಸಾಹಬ್‌ಗಂಜ್ ಎಂದು ಮತ್ತು ಜಾಫ್ರಾ ಬಜಾರ್ ಅನ್ನು ಆತ್ಮ ರಾಮ್ ನಗರ ಎಂದು ಬದಲಾವಣೆ ಮಾಡಲಾಗಿದೆ.

Published On - 3:42 pm, Sun, 4 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ