AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಯಾ ಬದಲು ಮಾಯಾ, ಅಲಿ ಬದಲು ಆರ್ಯ; ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳಿರುವ ವಾರ್ಡ್ ಹೆಸರು ಬದಲಾವಣೆಗೆ ನಿರ್ಧಾರ

ಅಶ್ಫಾಕುಲ್ಲಾ ಖಾನ್, ಶಿವಸಿಂಗ್ ಚೆಟ್ರಿ, ಬಾಬಾ ಗಂಭೀರ್ ನಾಥ್, ಬಾಬಾ ರಾಘವದಾಸ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮದನ್ ಮೋಹನ್ ಮಾಳವೀಯ ಅವರಂತಹ ವ್ಯಕ್ತಿಗಳ ಹೆಸರನ್ನು ವಾರ್ಡ್‌ಗಳಿಗೆ ಇರಿಸಲಾಗಿದೆ.

ಮಿಯಾ ಬದಲು ಮಾಯಾ, ಅಲಿ ಬದಲು ಆರ್ಯ; ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳಿರುವ ವಾರ್ಡ್ ಹೆಸರು ಬದಲಾವಣೆಗೆ ನಿರ್ಧಾರ
TV9 Web
| Edited By: |

Updated on:Sep 04, 2022 | 3:42 PM

Share

ಗೋರಖ್‌ಪುರ ಮುನ್ಸಿಪಲ್ ಕಾರ್ಪೊರೇಷನ್ (Gorakhpur Municipal Corporation) ಹೊರಡಿಸಿದ ಕರಡು ಡಿಲಿಮಿಟೇಶನ್ ಆದೇಶವು ಸುಮಾರು ಹನ್ನೆರಡು ವಾರ್ಡ್‌ಗಳ “ಮುಸ್ಲಿಂ ಹೆಸರುಗಳಂತೆ ಧ್ವನಿಸುವ ಹೆಸರುಗಳನ್ನು” ಬದಲಾಯಿಸಲು ನಿರ್ಧರಿಸಿದೆ. ಇದನ್ನು ಸಮಾಜವಾದಿ ಪಕ್ಷ (Samajwadi Party) ಮತ್ತು ಕಾಂಗ್ರೆಸ್‌ನ ನಾಯಕರು ಖಂಡಿಸಿದ್ದಾರೆ. ಹೆಸರುಗಳ ಬದಲಾವಣೆಯು ಡಿಲಿಮಿಟೇಶನ್ ಪ್ರಕ್ರಿಯೆಯ ಭಾಗವಾಗಿದ್ದು ಗೋರಖ್‌ಪುರದಲ್ಲಿ ವಾರ್ಡ್‌ಗಳ ಸಂಖ್ಯೆ 80 ಕ್ಕೆ ಏರಿದೆ. ಹೆಸರು ಬದಲಾವಣೆ ಮಾಡಿದಾಗ ಹಲವಾರು ಅಪ್ರತಿಮ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗಿದೆ. ಒಂದು ವಾರದೊಳಗೆ ಜನರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಮತ್ತು ಅವುಗಳ ವಿಲೇವಾರಿ ನಂತರ ಡಿಲಿಮಿಟೇಶನ್ ಅನುಮೋದನೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ತಲತ್ ಅಜೀಜ್ ಹೆಸರು ಬದಲಾಯಿಸುವ ಕಸರತ್ತು ಹಣವನ್ನು ವ್ಯರ್ಥ ಮಾಡುವ ಕಾರ್ಯ ಎಂದು ಬಣ್ಣಿಸಿದ್ದಾರೆ. “ಈ ಪ್ರಕ್ರಿಯೆ ಮೂಲಕ ಸರ್ಕಾರವು ಏನನ್ನು ಸಾಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ವಿಫಲನಾಗಿದ್ದೇನೆ” ಎಂದಿದ್ದಾರೆ ಅವರು.

ಹೊಸ ಹೆಸರುಗಳು ಹೆಮ್ಮೆಯ ಭಾವನೆಯನ್ನು ಮೂಡಿಸುತ್ತವೆ ಎಂದು ಮೇಯರ್ ಸೀತಾರಾಮ್ ಜೈಸ್ವಾಲ್ ಹೇಳಿದ್ದಾರೆ. ಅಶ್ಫಾಕುಲ್ಲಾ ಖಾನ್, ಶಿವಸಿಂಗ್ ಚೆಟ್ರಿ, ಬಾಬಾ ಗಂಭೀರ್ ನಾಥ್, ಬಾಬಾ ರಾಘವದಾಸ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮದನ್ ಮೋಹನ್ ಮಾಳವೀಯ ಅವರಂತಹ ವ್ಯಕ್ತಿಗಳ ಹೆಸರನ್ನು ವಾರ್ಡ್‌ಗಳಿಗೆ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಕ್ಷೇಪಣೆಗಳನ್ನು ಒಂದು ವಾರದೊಳಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಲಖನೌಗೆ ಕಳುಹಿಸಬಹುದು ಎಂದು ಪಾಲಿಕೆ ಆಯುಕ್ತ ಅವಿನಾಶ್ ಸಿಂಗ್ ತಿಳಿಸಿದ್ದಾರೆ. ಆಕ್ಷೇಪಣೆಗಳ ವಿಲೇವಾರಿ ನಂತರ ವಿಂಗಡಣೆಗೆ ಅನುಮೋದನೆ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಗೋರಖ್‌ಪುರ ಈಗ 80 ವಾರ್ಡ್‌ಗಳನ್ನು ಹೊಂದಿರುತ್ತದೆ.

ಮಿಯಾ ಬಜಾರ್, ಮುಫ್ತಿಪುರ್, ಅಲಿನಗರ, ತುರ್ಕಮನ್‌ಪುರ್, ಇಸ್ಮಾಯಿಲ್‌ಪುರ್, ರಸ್ಸೋಲ್‌ಪುರ್, ಹುಮಾಯೂನ್‌ಪುರ್ ನಾರ್ಥ್, ಘೋಸಿಪುರ್ವ, ದೌದ್‌ಪುರ್, ಜಾಫ್ರಾ ಬಜಾರ್, ಖಾಜಿಪುರ್ ಖುರ್ದ್ ಮತ್ತು ಚಕ್ಸಾ ಹುಸೇನ್ ಎಂಬ ಹೆಸರುಗಳನ್ನು ಬದಲಾಯಿಸಲಾಗಿದೆ. ನಾಗರಿಕ ಸಂಸ್ಥೆ ಹೊರಡಿಸಿದ ಆದೇಶದ ಪ್ರಕಾರ, ಇಲಾಹಿ ಬಾಗ್ ಅನ್ನು ಈಗ ಬಂಧು ಸಿಂಗ್ ನಗರ ಎಂದೂ ಇಸ್ಮಾಯಿಲ್‌ಪುರವನ್ನು ಸಾಹಬ್‌ಗಂಜ್ ಎಂದು ಮತ್ತು ಜಾಫ್ರಾ ಬಜಾರ್ ಅನ್ನು ಆತ್ಮ ರಾಮ್ ನಗರ ಎಂದು ಬದಲಾವಣೆ ಮಾಡಲಾಗಿದೆ.

Published On - 3:42 pm, Sun, 4 September 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ