AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧ ಸಡಿಸಿಲಿದ ದುಬೈ; ಭಾರತದಿಂದ ಹೋಗುವವರಿದ್ದರೆ ಈ ನಿಯಮಗಳ ಪಾಲನೆ ಕಡ್ಡಾಯ

ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರೂ ಸಹ ನಾಲ್ಕು ಗಂಟೆ ಮೊದಲು ರ್ಯಾಪಿಡ್​ ಪಿಸಿಆರ್​ ಟೆಸ್ಟ್​​ಗೆ ಒಳಗಾಗಬೇಕು. ಹಾಗೇ ದುಬೈ ತಲುಪಿದ ನಂತರ ಇನ್ನೊಮ್ಮೆ ಪಿಸಿಆರ್​ ಟೆಸ್ಟ್ ಮಾಡಿಸಬೇಕು.   ಟೆಸ್ಟ್​ಗೆ ಒಳಗಾಗುವವರೆಗೂ ಅವರು ಸಾಂಸ್ಥಿಕ ಕ್ವಾರಂಟೈನ್​​ನಲ್ಲೇ ಇರಬೇಕಾಗುತ್ತದೆ.

ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧ ಸಡಿಸಿಲಿದ ದುಬೈ; ಭಾರತದಿಂದ ಹೋಗುವವರಿದ್ದರೆ ಈ ನಿಯಮಗಳ ಪಾಲನೆ ಕಡ್ಡಾಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 20, 2021 | 9:57 AM

Share

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತ ಸೇರಿ ಹಲವು ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ದುಬೈ ಸರ್ಕಾರ ಅದನ್ನೀಗ ಸಡಿಲಿಸಿದೆ. ಅಂದರೆ ದುಬೈನ ನಿವಾಸಿಗಳಾಗಿದ್ದು ಭಾರತದಕ್ಕೆ ಬಂದು, ಲಾಕ್​ಡೌನ್ ಕಾರಣದಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದವರು ಈಗ ದುಬೈಗೆ ತೆರಳಬಹುದು. ಆದರೆ ಯುಎಇ ಅನುಮೋದಿತ ಕೊವಿಡ್​ ಲಸಿಕೆ ಎರಡೂ ಡೋಸ್​ ಪಡೆದವರು ದುಬೈ ಪ್ರವೇಶಿಸಬಹುದಾಗಿದೆ ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಭಾರತ, ದಕ್ಷಿಣಾಫ್ರಿಕಾ, ನೈಜೀರಿಯಾ ದೇಶಗಳ ಪ್ರಯಾಣಿಕರು ಜೂ.23ರಿಂದ ದುಬೈನ್ನು ಪ್ರವೇಶಿಸಬಹುದಾಗಿದೆ. ಆದರೆ ಕೊವಿಡ್​ 19 ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಅದರೊಂದಿಗೆ ಕೆಲವು ಪರಿಷ್ಕೃತ ಶಿಷ್ಟಾಚಾರಗಳನ್ನು ದುಬೈ ಆಡಳಿತ ಪ್ರಕಟಿಸಿದ್ದು, ಅದನ್ನು ಪಾಲಿಸಲೇಬೇಕು ಎಂದು ಹೇಳಲಾಗಿದೆ.

ಭಾರತದಿಂದ ದುಬೈಗೆ ಪ್ರಯಾಣ ಬೆಳೆಸುವವರು ಮಾನ್ಯತೆ ಇರುವ ರೆಸಿಡೆನ್ಸ್​ ವೀಸಾ ಹೊಂದಿರಬೇಕು. ಯುಎಇಯಿಂದಲೂ ಅನುಮೋದನೆ ಹೊಂದಿದ ಕೊವಿಡ್​ 19 ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿರಬೇಕು. ಅಂದರೆ ಕೊವಿಶೀಲ್ಡ್​ ಲಸಿಕೆಯ ಎರಡೂ ಡೋಸ್​ ಪಡೆದಿರಬೇಕು. ಇನ್ನುಳಿದಂತೆ ಯುಎಇ ಸರ್ಕಾರ ಚೀನಾದ ಸಿನೋಫಾರ್ಮ್​ ಲಸಿಕೆ, ಫೈಝರ್​, ಸ್ಪುಟ್ನಿಕ್​ ವಿ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಹಾಗೇ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರೂ ಕೂಡ (ಇಲ್ಲಿನ ನಿವಾಸಿಗಳು ಅಲ್ಲದಿದ್ದರೂ) ದುಬೈಗೆ ಪ್ರವೇಶ ಮಾಡಬಹುದಾಗಿದ್ದು, ಲಸಿಕೆ ಹಾಕಿಸಿಕೊಂಡಿರಬೇಕು ಮತ್ತು ಪಿಸಿಆರ್​ ನೆಗೆಟಿವ್​ ರಿಪೋರ್ಟ್ ಹೊಂದಿರಬೇಕು.

ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರೂ ಸಹ ನಾಲ್ಕು ಗಂಟೆ ಮೊದಲು ರ್ಯಾಪಿಡ್​ ಪಿಸಿಆರ್​ ಟೆಸ್ಟ್​​ಗೆ ಒಳಗಾಗಬೇಕು. ಹಾಗೇ ದುಬೈ ತಲುಪಿದ ನಂತರ ಇನ್ನೊಮ್ಮೆ ಪಿಸಿಆರ್​ ಟೆಸ್ಟ್ ಮಾಡಿಸಬೇಕು.   ಟೆಸ್ಟ್​ಗೆ ಒಳಗಾಗುವವರೆಗೂ ಅವರು ಸಾಂಸ್ಥಿಕ ಕ್ವಾರಂಟೈನ್​​ನಲ್ಲೇ ಇರಬೇಕಾಗುತ್ತದೆ. ಟೆಸ್ಟ್​ಗೆ ಒಳಗಾಗಿ 24ಗಂಟೆಯಲ್ಲಿ ರಿಪೋರ್ಟ್​ ಬರುವುದರಿಂದ ಈ ನಿಯಮ ಪಾಲನೆ ಕಡ್ಡಾಯವಾಗಿದೆ.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರಿನಲ್ಲಿ ಎಲ್ಲವೂ ಬಹುತೇಕ ನಾರ್ಮಲ್.. ಹೋಟೆಲ್​ನಲ್ಲಿ ಟೇಬಲ್ ಸರ್ವಿಸ್ ಶುರು

Follow Us
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?