Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ ಯಶಸ್ಸಿನ ಬಗ್ಗೆ ಜಿಮ್ ಓ’ನೀಲ್ ಮೆಚ್ಚುಗೆ; ಮೋದಿ ಗ್ಲೋಬಲ್ ಸೌತ್ ಚಾಂಪಿಯನ್ ಎಂದ ಬ್ರಿಟನ್ ಅರ್ಥಶಾಸ್ತ್ರಜ್ಞ

ಜಾಗತಿಕ ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ನೀಡುವ ವ್ಯಾಪ್ತಿ ಮತ್ತು ನ್ಯಾಯಸಮ್ಮತತೆಯನ್ನು ಹೊಂದಿರುವ ಏಕೈಕ ಒಕ್ಕೂಟ ಜಿ20 ಎಂಬುದನ್ನು ನವದೆಹಲಿಯಲ್ಲಿ ಒಕ್ಕೂಟದ ನಾಯಕರು ಮಾಡಿರುವ ಘೋಷಣೆಯು ಮತ್ತಷ್ಟು ದೃಢೀಕರಿಸಿದೆ. ಈ ಮಟ್ಟಕ್ಕೆ ಸವಾಲುಗಳನ್ನು ನಿಭಾಯಿಸುವ ವಿಶ್ವಾಸಾರ್ಹತೆ ಅಥವಾ ಸಾಮರ್ಥ್ಯವನ್ನು ಬ್ರಿಕ್ಸ್ ಅಥವಾ ಜಿ7 ಒಕ್ಕೂಟ ಕೂಡ ಹೊಂದಿಲ್ಲ ಎಂದು ಬ್ರಿಟನ್ ಅರ್ಥಶಾಸ್ತ್ರಜ್ಞ ಓ'ನೀಲ್ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಜಿ20 ಶೃಂಗಸಭೆ ಯಶಸ್ಸಿನ ಬಗ್ಗೆ ಜಿಮ್ ಓ'ನೀಲ್ ಮೆಚ್ಚುಗೆ; ಮೋದಿ ಗ್ಲೋಬಲ್ ಸೌತ್ ಚಾಂಪಿಯನ್ ಎಂದ ಬ್ರಿಟನ್ ಅರ್ಥಶಾಸ್ತ್ರಜ್ಞ
ಜಿ20 ಶೃಂಗಸಭೆ ಯಶಸ್ಸಿನ ಬಗ್ಗೆ ಜಿಮ್ ಓ'ನೀಲ್ ಮೆಚ್ಚುಗೆ; ಮೋದಿ ಗ್ಲೋಬಲ್ ಸೌತ್ ಚಾಂಪಿಯನ್ ಎಂದ ಬ್ರಿಟನ್ ಅರ್ಥಶಾಸ್ತ್ರಜ್ಞ
Follow us
Ganapathi Sharma
|

Updated on: Sep 14, 2023 | 11:04 PM

ನವದೆಹಲಿ, ಸೆಪ್ಟೆಂಬರ್ 14: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ(G20 Summit) ಯಶಸ್ಸಿನ ಬಗ್ಗೆ ಬ್ರಿಟನ್ ಅರ್ಥಶಾಸ್ತ್ರಜ್ಞ, ಬ್ರಿಕ್ ಒಕ್ಕೂಟ (ಈಗ ಬ್ರಿಕ್ಸ್ ಆಗಿದೆ) ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜಿಮ್ ಓ’ನೀಲ್ (Jim O’Neill) ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪ್ರಾಜೆಕ್ಟ್ ಸಿಂಡಿಕೇಟ್’ ತಾಣದಲ್ಲಿ ಲೇಖನವೊಂದನ್ನು ಬರೆದಿರುವ ಅವರು, ಜಿ20 ಶೃಂಗಸಭೆಯ ಯಶಸ್ಸಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ನೀಡುವ ವ್ಯಾಪ್ತಿ ಮತ್ತು ನ್ಯಾಯಸಮ್ಮತತೆಯನ್ನು ಹೊಂದಿರುವ ಏಕೈಕ ಒಕ್ಕೂಟ ಜಿ20 ಎಂಬುದನ್ನು ನವದೆಹಲಿಯಲ್ಲಿ ಒಕ್ಕೂಟದ ನಾಯಕರು ಮಾಡಿರುವ ಘೋಷಣೆಯು ಮತ್ತಷ್ಟು ದೃಢೀಕರಿಸಿದೆ. ಈ ಮಟ್ಟಕ್ಕೆ ಸವಾಲುಗಳನ್ನು ನಿಭಾಯಿಸುವ ವಿಶ್ವಾಸಾರ್ಹತೆ ಅಥವಾ ಸಾಮರ್ಥ್ಯವನ್ನು ಬ್ರಿಕ್ಸ್ ಅಥವಾ ಜಿ7 ಒಕ್ಕೂಟ ಕೂಡ ಹೊಂದಿಲ್ಲ ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಉಕ್ರೇನ್​ ಯುದ್ಧ, ಹವಾಮಾನ ಬದಲಾವಣೆ ಇತ್ಯಾದಿ ವಿಚಾರಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಆರು ಹೊಸ ಸದಸ್ಯರನ್ನು ಸೇರಿಸಿಕೊಂಡ ಹೊಸ ಬ್ರಿಕ್ಸ್‌ಗೆ ಭಾರತ-ಚೀನಾ ಒಗ್ಗಟ್ಟಿನ ಕೊರತೆಯು ಒಂದು ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಓ’ನೀಲ್, ಜಿ 0 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಅನುಪಸ್ಥಿತಿಯು ಉಭಯ ದೇಶಗಳ ನಡುವಿನ ವಿಭಜನೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಜಿ7 ಮತ್ತು ಹೊಸ ವಿಸ್ತರಿತ ಬ್ರಿಕ್ಸ್​​​ನಂತಹ ಪರ್ಯಾಯ ಗುಂಪುಗಳು ಜಿ20 ಜತೆ ಹೋಲಿಸಿದರೆ ಸೈಡ್‌ಶೋಗಳಂತೆ ಕಾಣುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿಯೇ ಸ್ಪಷ್ಟ ವಿಜೇತ, ದೂರದೃಷ್ಟಿಯ ರಾಜಕಾರಣಿ ಎಂದ ಓ’ನೀಲ್

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಧಿಕ್ಕರಿಸುವ ಸಲುವಾಗಿ ಷಿ ಜಿನ್​ಪಿಂಗ್ ಶೃಂಗಸಭೆಯಿಂದ ಹೊರಗುಳಿದಿದ್ದಾರೆ ಎಂದು ಹಲವರು ಊಹಿಸುತ್ತಾರೆ. ಯಾವುದೇ ಉದ್ದೇಶವಿರಲಿ, ಅವರ ನಿರ್ಧಾರವು ಇತ್ತೀಚಿನ ಬ್ರಿಕ್ಸ್ ಸಭೆಯ ಮಹತ್ವವನ್ನು ದುರ್ಬಲಗೊಳಿಸುವ ಪರಿಣಾಮವನ್ನು ಬೀರಿದೆ ಎಂದು ಓ’ನೀಲ್ ಹೇಳಿದ್ದಾರೆ. ಇದನ್ನು ಅನೇಕರು ಚೀನಾದ ವಿಜಯವೆಂದು ಪರಿಗಣಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಏನೇ ಇದ್ದರೂ, ಜಿ20 ಸಭೆಯ ಯಶಸ್ಸು ಮೋದಿಯನ್ನು ಈ ಶೃಂಗಸಭೆಯ ಋತುವಿನಲ್ಲಿ ಸ್ಪಷ್ಟ ವಿಜೇತರನ್ನಾಗಿ ಮಾಡಿದೆ. ಗ್ರಹಿಕೆಗಳು ಮುಖ್ಯ, ಮತ್ತು ಇದೀಗ ಅವರು ಷಿ ಜಿನ್​ಪಿಂಗ್​ಗಿಂತಲೂ ದೂರದೃಷ್ಟಿಯ ರಾಜಕಾರಣಿಯಂತೆ ಕಾಣುತ್ತಾರೆ ಎಂದು ಅವರು ಹೇಳಿದರು.

‘ಗ್ಲೋಬಲ್ ಸೌತ್​ನಲ್ಲಿ ಮೋದಿ ಚಾಂಪಿಯನ್’

ಸೆಪ್ಟೆಂಬರ್ 9-10 ರಂದು ನಡೆದ ಜಿ20 ಶೃಂಗಸಭೆಯು ಆಫ್ರಿಕನ್ ಒಕ್ಕೂಟವನ್ನು ತನ್ನೊಡನೆ ನಿರ್ಣಯ ತೆಗೆದುಕೊಳ್ಳುವ ಮೂಲಕ ಮತ್ತೊಂದು ಸೂಕ್ಷ್ಮ ಹೆಜ್ಜೆಯನ್ನು ಮುಂದಿಟ್ಟಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಗತಿಯು ಮೋದಿಗೆ ಸ್ಪಷ್ಟವಾದ ರಾಜತಾಂತ್ರಿಕ ವಿಜಯವನ್ನು ನೀಡುತ್ತದೆ. ಇದು ಗ್ಲೋಬಲ್ ಸೌತ್ ಚಾಂಪಿಯನ್ ಆಗಿ ಅವರ ಇಮೇಜ್ ಅನ್ನು ವೃದ್ಧಿಸಲು ಅನುವು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವ ಮಟ್ಟಕ್ಕೆ ಜಿ20 ಶೃಂಗಸಭೆ ತಲುಪಿರಲಾರದು. ಆದರೆ ಸ್ಪಷ್ಟ ಸಂದೇಶ ಕಳುಹಿಸುವಷ್ಟು ದೃಢವಾಗಿ ಅಂತೂ ಇತ್ತು ಎಂದು ಅವರು ವಿಶ್ಲೇಷಿಸಿದ್ದಾರೆ. ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳನ್ನು ಉಲ್ಲಂಘಿಸಲು ಬಯಸುವ ಇತರರಿಗೆ ಸ್ಪಷ್ಟ ಸಂದೇಶವನ್ನಂತೂ ಜಿ20 ಶೃಂಗಸಭೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು

ಹವಾಮಾನ ಬದಲಾವಣೆ, ಪರಿಷ್ಕೃತ ವಿಶ್ವಬ್ಯಾಂಕ್‌ನ ಅಗತ್ಯತೆ, ಸಾಂಕ್ರಾಮಿಕ ರೋಗ ನಿಯಂತ್ರಣ, ಆರ್ಥಿಕ ಸ್ಥಿರತೆ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಇತರ ವಿಷಯಗಳಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ನವದೆಹಲಿಯ ಜಿ20 ಘೋಷಣೆಯು ಬಲವಾದ ಸಂಘಟಿತ ಪ್ರಯತ್ನದಲ್ಲಿ ಮೊದಲ ಹೆಜ್ಜೆಯಾಗಿರಬಹುದು. ಈ ಕಾರ್ಯಸೂಚಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಅನುಪಸ್ಥಿತಿಯಲ್ಲಿ ಒಪ್ಪಿಗೆ ನೀಡಲಾಗಿದೆ. ಭಾಗವಹಿಸಿದ ರಷ್ಯಾ ಮತ್ತು ಚೀನಾದ ಪ್ರತಿನಿಧಿಗಳು ಆಯಾ ಸರ್ಕಾರಗಳೊಂದಿಗೆ ಅದನ್ನು ಚರ್ಚಿಸದೆ ಯಾವುದಕ್ಕೂ ಸಹಿ ಹಾಕುತ್ತಿರಲಿಲ್ಲ ಎಂದೂ ಓ’ನೀಲ್ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು