AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM-KISAN: ಪ್ರಧಾನಮಂತ್ರಿ ಕಿಸಾನ್​ ಯೋಜನೆಯ 11ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ; ರೈತರು ತಪ್ಪದೇ ಈ ವಿಧಾನ ಅನುಸರಿಸಿ

10ನೇ ಕಂತಿನಲ್ಲಿ ಸುಮಾರು 48 ಲಕ್ಷ ರೈತರಿಗೆ ಹಣ ಇನ್ನೂ ಬಂದಿಲ್ಲ. ಇದಕ್ಕೆ ಕಾರಣ ಫಂಡ್​ ಟ್ರಾನ್ಸ್​ಫರ್​ ಆರ್ಡರ್​​​​​ ಸಮಸ್ಯೆ  ಎಂದು ಹೇಳಲಾಗಿದೆ. ಅಂದರೆ ಎಫ್​ಟಿಒ ಜನರೇಟ್​ ಆಗಿರುವ ಬಹುತೇಕರ ಖಾತೆಗೆ ಈಗಾಗಲೇ ಹಣ ತಲುಪಿದೆ.

PM-KISAN: ಪ್ರಧಾನಮಂತ್ರಿ ಕಿಸಾನ್​ ಯೋಜನೆಯ 11ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ; ರೈತರು ತಪ್ಪದೇ ಈ ವಿಧಾನ ಅನುಸರಿಸಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Feb 26, 2022 | 8:09 AM

Share

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಯೋಜನೆಯ (Pradhan Mantri Kisan Samman Nidhi Yojana) 10ನೇ ಕಂತಿನ ಹಣ  ಇನ್ನೂ ಸುಮಾರು 48 ಲಕ್ಷ ರೈತರಿಗೆ ತಲುಪಲಿಲ್ಲ ಎಂದು ಏಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi)ಯವರು 2022ರ ಜನವರಿ 1ರಂದು ಪಿಎಂ ಕಿಸಾನ್​ ಯೋಜನೆಯ 10ನೇ ಕಂತ ಹಣವನ್ನು ಬಿಡುಗಡೆ ಮಾಡಿದ್ದರು. ಅದರಡಿಯಲ್ಲಿ ಎಲ್ಲ ಫಲಾನುಭವಿ ರೈತರ ಖಾತೆಗಳಿಗೆ 2000 ರೂಪಾಯಿ ತಲುಪಬೇಕಿತ್ತು. ಆದರೆ ಎರಡು ತಿಂಗಳಾದರೂ 48 ಲಕ್ಷ ರೈತರು ಇನ್ನೂ ಹಣ ಸ್ವೀಕರಿಸಲಿಲ್ಲ ಎಂದು ಹೇಳಲಾಗಿದೆ.

ಪಿಎಂ ಕಿಸಾನ್​ ಯೋಜನೆಯಡಿ ಅರ್ಹ ಫಲಾನುಭವಿ ರೈತರ ಖಾತೆಗೆ 6000 ರೂಪಾಯಿ ಬರುತ್ತದೆ. ಇನ್ನು ಒಂದೇ ಬಾರಿಗೆ ಹಾಕುವ ಬದಲು 2 ಸಾವಿರದ ಕಂತಿನ ರೂಪದಲ್ಲಿ ನೀಡಲಾಗುತ್ತದೆ. 2019ರಲ್ಲಿ ಈ ಯೋಜನೆ ಶುರುವಾಗಿದ್ದು ಇಲ್ಲಿಯವರೆಗೆ ಒಟ್ಟು 10 ಕಂತುಗಳು ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ 11ನೇ ಕಂತನ್ನು ಪಿಎಂ ಮೋದಿ ಬಿಡುಗಡೆ ಮಾಡಲಿದ್ದಾರೆ. ಆದರೆ 11ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಕಡ್ಡಾಯವಾಗಿ ಇ ಕೆವೈಸಿ ಮಾಡಿಕೊಳ್ಳಬೇಕಾಗಿದೆ.

ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆ ವೆಬ್​​ಸೈಟ್​​ನಲ್ಲಿ ನೀಡಲಾದ ಮಾಹಿತಿ ಅನ್ವಯ ಈ ಯೋಜನೆಯಡಿ 12 ಕೋಟಿ 49 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ.  ಅಂದಹಾಗೇ ಈ ಯೋಜನೆಯಡಿ ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ಹಾಕುತ್ತದೆ.  ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಡಿಯಲ್ಲೇ ಬರುವ ಸ್ಕೀಮ್​ ಆಗಿದ್ದು, ಅದಕ್ಕಾಗಿ ಹಣವನ್ನು ಪ್ರತಿವರ್ಷ ಬಜೆಟ್​​ನಲ್ಲಿ ಮೀಸಲಾಗಿಡಲಾಗುತ್ತಿದೆ.

11ನೇ ಕಂತಿಗೆ ಇ-ಕೆವೈಸಿ ಕಡ್ಡಾಯ 10ನೇ ಕಂತಿನಲ್ಲಿ ಸುಮಾರು 48 ಲಕ್ಷ ರೈತರಿಗೆ ಹಣ ಬರುವುದು ವಿಳಂಬವಾಗಲು ಕಾರಣ ಫಂಡ್​ ಟ್ರಾನ್ಸ್​ಫರ್​ ಆರ್ಡರ್​​​​​ ಸಮಸ್ಯೆ  ಎಂದು ಹೇಳಲಾಗಿದೆ. ಅಂದರೆ ಎಫ್​ಟಿಒ ಜನರೇಟ್​ ಆಗಿರುವ ಬಹುತೇಕರ ಖಾತೆಗೆ ಈಗಾಗಲೇ ಹಣ ತಲುಪಿದೆ. ಜನರೇಟ್​ ಆಗದವರ ಖಾತೆಗೆ ಇನ್ನೂ ಹೋಗಿಲ್ಲ. ಸ್ವಲ್ಪ ವಿಳಂಬವಾದರೂ ಹಣ ಬರಲಿದೆ ಎನ್ನಲಾಗಿದೆ. ಈ ಮಧ್ಯೆ ಕೆಲವೇ ದಿನಗಳಲ್ಲಿ ಪಿಎಂ ಮೋದಿ 11ನೇ ಕಂತನ್ನು ಬಿಡುಗಡೆ ಮಾಡುವರು. ಈ 11ನೇ ಕಂತಿನ ಹಣ ಪಡೆಯಬೇಕು ಎಂದರೆ, ಪಿಎಂ ಕಿಸಾನ್​ ಸ್ಕೀಮ್​​ನಲ್ಲಿ ನೋಂದಣಿ ಮಾಡಿಕೊಂಡಿರುವ ಎಲ್ಲ ರೈತರೂ ಇ-ಕೆವೈಸಿ ಮಾಡಿಕೊಳ್ಳಲೇಬೇಕು..

ಇಲ್ಲಿದೆ ನೋಡಿ ಇ-ಕೆವೈಸಿ ಮಾಡುವ ವಿಧಾನ

1. ಮೊದಲಿಗೆ ಪಿಎಂ ಕಿಸಾನ್​ ವೆಬ್​ಸೈಟ್​ https://pmkisan.gov.in/ ಗೆ ಭೇಟಿ ಕೊಡಿ.

2. ಹೋಂಪೇಜ್​ ತೆರೆದುಕೊಳ್ಳುತ್ತದೆ. ಅಲ್ಲಿ ಬಲಭಾಗದಲ್ಲಿ Farmers Corner ಎಂಬ ಒಂದು ವಿಭಾಗ ಕಾಣಿಸಿಕೊಳ್ಳುತ್ತದೆ.

3. ಅದರ ಕೆಳಗೆ ಇ-ಕೆವೈಸಿ ಎಂದು ಬರೆದುಕೊಂಡಿರುವ ಬಾಕ್ಸ್​ ಇದೆ. ಅದರ ಮೇಲೆ ಕ್ಲಿಕ್​ ಮಾಡಿ.

4. ಆಗ ಒಂದು ಹೊಸದಾದ ಪೇಜ್​ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಆಧಾರ್​ ನಂಬರ್​ ತುಂಬಬೇಕು. ಆಗ ಕ್ಯಾಪ್ಚಾ ಕೋಡ್​ ಕಾಣಿಸಿಕೊಳ್ಳುತ್ತದೆ. ನೀವು ಆ ಅಕ್ಷರಗಳನ್ನು ಜಾಗರೂಕತೆಯಿಂದ ತುಂಬಿ ವೆರಿಫೈ ಮಾಡಬೇಕು.

5. ನಂತರ ನಿಮ್ಮ ಆಧಾರ್​ಕಾರ್ಡ್​ಗೆ ಲಿಂಕ್​ ಆಗಿರುವ ಮೊಬೈಲ್​​ ನಂಬರ್​ನ್ನು ತುಂಬಬೇಕು ಮತ್ತು ಒಟಿಪಿ ಬಟನ್​​ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಅದೇ ನಂಬರ್​ಗೆ ಒಂದು ಒಟಿಪಿ ಬರುತ್ತದೆ.

6. ದೃಢೀಕರಣಕ್ಕಾಗಿ ಅದೇ ಒಟಿಪಿಯನ್ನು ನೀವು ತುಂಬಿ. ಸಬ್​​ಮಿಟ್ ಮಾಡಿದರೆ ನಿಮ್ಮ ಪಿಎಂ ಕಿಸಾನ್​ ಕೆವೈಸಿ ಯಶಸ್ವಿಯಾಗಿ ಅಪ್​ಡೇಟ್​ ಆಗುತ್ತದೆ.

ಇದನ್ನೂ ಓದಿ: ಶಾಲೆಯಿಂದ ವಾಪಸಾಗುತ್ತಿದ್ದಾಗ ಹುಡುಗಿಯ ಅಡ್ಡಗಟ್ಟಿ, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

Follow Us
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ