AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಳವಾದ ಬಾವಿಗೆ ಬಿದ್ದ ತುಂಟ ಆನೆ ಮರಿಯ ರಕ್ಷಣೆ; ರಕ್ಷಣಾ ಕಾರ್ಯ ಹೇಗಿತ್ತು? ನೋಡಿ

Elephant calf rescued from open well: ಅದರಂತೆ ಬೃಹತ್ ಜೆಸಿಬಿ ಯಂತ್ರವನ್ನು ತಂದು ಬಾವಿಯ ಒಂದು ಮಗ್ಗಲಿಗೆ ಕಾಲುವೆ ಮಾದರಿ ತೋಡಲು ಆರಂಭಿಸಿದ್ದಾರೆ. ಅದೇ ವೇಳೆಗೆ ಮುಂದೆ ಇಂತಹ ಅನಾಹುತಗಳು ಆದಾಗ ರೆಫರೆನ್ಸ್​ಗೆ ಇರಲಿ ಅಂತಾ ವಿಡಿಯೋ ಸಹ ಮಾಡಿಸಿದ್ದಾರೆ ಅರಣ್ಯ ರಕ್ಷಕರು.

ಆಳವಾದ ಬಾವಿಗೆ ಬಿದ್ದ ತುಂಟ ಆನೆ ಮರಿಯ ರಕ್ಷಣೆ; ರಕ್ಷಣಾ ಕಾರ್ಯ ಹೇಗಿತ್ತು? ನೋಡಿ
ಆಳವಾದ ಬಾವಿಗೆ ಬಿದ್ದ ತುಂಟ ಆನೆ ಮರಿಯ ರಕ್ಷಣೆ; ರಕ್ಷಣಾ ಕಾರ್ಯ ಹೇಗಿತ್ತು? ನೋಡಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 05, 2021 | 3:07 PM

Share

ತುಂಟ ಆನೆ ಮರಿಯೊಂದು ಅಪ್ಪ-ಅಮ್ಮನ ಹಿಂಡಿನಿಂದ ಬೇರ್ಪಟ್ಟು ಅದು ಹೇಗೋ ಸೀದಾ ಆಳವಾದ ಬಾವಿಗೆ ಬಿದ್ದುಬಿಟ್ಟಿದೆ. ಅದು ಹೇಗೋ ಮಾನವೀಯತೆಯ ಜನರ ಕಣ್ಣಿಗೆ ಬಿದ್ದಿದೆ. ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅದೇನು ಅಷ್ಟು ಸುಲಭದ ಕೆಲಸವಾ? ರಕ್ಷಣಾ ಕಾರ್ಯ ಹೇಗಿತ್ತು? ನೀವೂ ನೋಡಿ..

ಅದು ಜಾರ್ಖಂಡ್​ನ ಗ್ರಾಮ. ಆ ಗ್ರಾಮದಲ್ಲೊಂದು ತೆರೆದ ವಿಶಾಲವಾದ ಆಳವಾದ ಬಾವಿ. ವಾರದ ಹಿಂದೆ ಆ ಬಾವಿಯೊಳಕ್ಕೆ ಆನೆ ಮರಿಯೊಂದು ಬಂದು ಬಿದ್ದುಬಿಟ್ಟಿದೆ. ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳ ಕಿವಿಗೆ ಸಂಗತಿ ತಿಳಿಸಿದ್ದಾರೆ. ಅಷ್ಟೇ ಅರಣ್ಯಾಧಿಕಾರಿಗಳೋ ಸೀದಾ ಗ್ರಾಮಕ್ಕೆ ಬಂದು ಬಾವಿಯಲ್ಲಿ ಬಗ್ಗಿ ನೋಡಿದ್ದಾರೆ. ಆಗಲೇ ಅವರಿಗೆ ಅನ್ನಿಸಿದ್ದು.. ಅದು ಬಡಪಟ್ಟಿಗೆ ಎಟುಕುವಂಥದ್ದಲ್ಲಾ.. ಸರಿಯಾಗಿ ಯೋಚಿಸಿಯೇ, ಸಾವಕಾಶವಾಗಿ ಆ ಮರಿಯನ್ನು ರಕ್ಷಣೆ ಮಾಡಬೇಕು ಎಂದು. ಅದಕ್ಕಾಗಿ ಬಾವಿ ಕಟ್ಟೆ ಮೇಲೆ ಕುಳಿತು ಯೋಜನೆ ರೂಪಿಸಿದ್ದಾರೆ.

ಅದರಂತೆ ಬೃಹತ್ ಜೆಸಿಬಿ ಯಂತ್ರವನ್ನು ತಂದು ಬಾವಿಯ ಒಂದು ಮಗ್ಗಲಿಗೆ ಕಾಲುವೆ ಮಾದರಿ ತೋಡಲು ಆರಂಭಿಸಿದ್ದಾರೆ. ಅದೇ ವೇಳೆಗೆ ಮುಂದೆ ಇಂತಹ ಅನಾಹುತಗಳು ಆದಾಗ ರೆಫರೆನ್ಸ್​ಗೆ ಇರಲಿ ಅಂತಾ ವಿಡಿಯೋ ಸಹ ಮಾಡಿಸಿದ್ದಾರೆ ಅರಣ್ಯ ರಕ್ಷಕರು.

ಬಾವಿಯ ಒಂದು ಭಾಗಕ್ಕೆ ಕಾಲುವೆ ಮಾದರಿ ತೋಡಿದ್ದು, 8 ಗಂಟೆಗಳ ಕಾರ್ಯಾಚರಣೆ ಮುಗಿದ ಮೇಲೆ ಆನೆ ಮರಿ ತನ್ನಷ್ಟಕ್ಕೆ ತಾನೇ ಮೇಲಕ್ಕೆ ನಡೆದು ಬರಲು ಸಹಾಯ ಮಾಡಿದ್ದಾರೆ. ಮಧ್ಯೆ ಮಧ್ಯೆ ಇದೆಲ್ಲವನ್ನೂ ವಿಡಿಯೋ/ಫೋಟೋಗ್ರಫಿ ಮಾಡಿದ್ದಾರೆ. ಅತ್ತ ಆನೆ ಮರಿ ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಮೇಲಕ್ಕೆ ಬಂದು, ಅತ್ತಿತ್ತ ನೋಡಿ ಆನೆ ನಡೆದಿದ್ದೇ ದಾರಿ ಎನ್ನುತ್ತಾ ಸ್ಥಳದಿಂದ ಪರಾರಿಯಾಗಿದೆ. ಇತ್ತ ಅದೆಲ್ಲ ಫೋಟೋಗಳನ್ನು ಸಾಮಾಝಿಕ ಜಾಲತಾಣದಲ್ಲಿ ಹರಿಯಬಿಟ್ಟು ಹೆಂಗೆ ನಾವು ಆನೆ ಮರೀನಾ ರಕ್ಷಿಸಿಬಿಟ್ಟಿವಿ ಎಂದು ಅರಣ್ಯ ಇಲಾಖೆಯವರು ಗಜಗಾಂಭೀರ್ಯದಿಂದ ಹೇಳಿದ್ದನ್ನು ನೆಟ್ಟಿಗರು ಶಹಭಾಸ್​ ಅನ್ನುತ್ತಾ.. ಷೇರು, ಲೈಕು ಒತ್ತುತ್ತಾ ಜೈ ಜೈ ಅಂದಿದ್ದಾರೆ.

ಇದನ್ನೆಲ್ಲ ವೃತ್ತಿ ಸಹಜವಾಗಿ ಪ್ರಾಣಿ-ಪಕ್ಷಿಗಳು, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್​ ಕಶ್ವಾನ್​ (Parveen Kaswan, IFS) ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಮಧ್ಯೆ ಒಬ್ಬರು ‘ಅದಕ್ಕೇ ನಾನು ಅಪ್ಪ-ಅಮ್ಮನಿಂದ ದೂರವಾಗುವುದಿಲ್ಲ’ ಎಂದು ಷರಾ ಬರೆದಿರುವುದು ಮನೋಜ್ಞವಾಗಿದೆ.  ಎಚ್ಚರಿಕೆಯ ಪಾಠವೂ ಇದೆ ಆ ಒಂದು ಸಾಲಿನಲ್ಲಿ… ಅಲ್ವಾ?

(Elephant calf rescued from open well in Jharkhand village IFS Parveen Kaswan shares story that goes Viral)

ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ

Published On - 3:03 pm, Wed, 5 May 21

Follow Us
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ