AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸೇರಲು ಹೋಗಿದ್ದ ಮಾಜಿ ಸಚಿವ ಈಟಲ ರಾಜೇಂದರ್​ ಭಾರಿ ಅನಾಹುತದಿಂದ ಪಾರು: ಪೈಲೆಟ್ ಅಲರ್ಟ್, ಎಲ್ಲರೂ ಸೇಫ್

ಈಟಲ ರಾಜೇಂದರ್ ದೆಹಲಿಯಿಂದ ಬರುತ್ತಿದ್ದ ವಿಮಾನದಲ್ಲಿ ಸಾಂಕೇತಿಕ ಸಮಸ್ಯೆ ಕಾಣಿಸಿಕೊಂಡಿದ್ದು ಪೈಲಟ್ ಅಲರ್ಟ್ ಆದ ಕಾರಣ ಭಾರಿ ಅನಾಹುತ ತಪ್ಪಿದೆ. ವಿಮಾನ ಟೇಕಪ್ ವೇಳೆ ರನ್ ವೇ ಮೇಲಿರುವಾಗಲೇ ಸಾಂಕೇತಿಕ ಲೋಪ ಗುರುತಿಸಿದ ಪೈಲೆಟ್, ಗಾಳಿಯಲ್ಲಿ ಹಾರುವಾಗ ಅಲರ್ಟ್ ಆಗಿದ್ದಾರೆ....

ಬಿಜೆಪಿ ಸೇರಲು ಹೋಗಿದ್ದ ಮಾಜಿ ಸಚಿವ ಈಟಲ ರಾಜೇಂದರ್​ ಭಾರಿ ಅನಾಹುತದಿಂದ ಪಾರು: ಪೈಲೆಟ್ ಅಲರ್ಟ್, ಎಲ್ಲರೂ ಸೇಫ್
ಎಟೆಲಾ ರಾಜೇಂದರ್​
TV9 Web
| Edited By: ಆಯೇಷಾ ಬಾನು|

Updated on: Jun 15, 2021 | 2:16 PM

Share

ದೆಹಲಿ: ತೆಲಂಗಾಣದ ಮಾಜಿ ಸಚಿವ ಈಟಲ ರಾಜೇಂದರ್ ಸೋಮವಾರ ಬಿಜೆಪಿ ಸೇರಿದ್ದಾರೆ. ಸದ್ಯ ಅದೃಷ್ಟವಶಾತ್ ದೆಹಲಿಯಲ್ಲಿ ಬಿಜೆಪಿ ಪಕ್ಷ ಸೇರಲು ಹೋಗಿದ್ದ ಈಟಲ ರಾಜೇಂದರ್ಗೆ ಭಾರಿ ಪ್ರಮಾದ ತಪ್ಪಿದೆ.

ಈಟಲ ರಾಜೇಂದರ್ ದೆಹಲಿಯಿಂದ ಬರುತ್ತಿದ್ದ ವಿಮಾನದಲ್ಲಿ ಸಾಂಕೇತಿಕ ಸಮಸ್ಯೆ ಕಾಣಿಸಿಕೊಂಡಿದ್ದು ಪೈಲಟ್ ಅಲರ್ಟ್ ಆದ ಕಾರಣ ಭಾರಿ ಅನಾಹುತ ತಪ್ಪಿದೆ. ವಿಮಾನ ಟೇಕಪ್ ವೇಳೆ ರನ್ ವೇ ಮೇಲಿರುವಾಗಲೇ ಸಾಂಕೇತಿಕ ಲೋಪ ಗುರುತಿಸಿದ ಪೈಲೆಟ್, ಗಾಳಿಯಲ್ಲಿ ಹಾರುವಾಗ ಅಲರ್ಟ್ ಆಗಿದ್ದಾರೆ. ನಂತರ ಸಣ್ಣ ಸಮಸ್ಯೆ ಎಂದು ಗಂಟೆಗಟ್ಟಲೇ ಕಾಯುವಂತೆ ಮಾಡಿದ್ದಾರೆ. ಕಾದು ಕಾದು ಸುಸ್ತಾದ ಈಟಲ ರಾಜೇಂದರ್ ದೆಹಲಿಯಿಂದ ವಿದೇಶಿ ವಿಮಾನದಲ್ಲಿ ಹೈದರಾಬಾದ್ಗೆ ಹೊರಟ್ಟಿದ್ದಾರೆ. ಈ ವೇಳೆ ವಿಮಾನದಲ್ಲಿ ಈಟಲ ರಾಜೇಂದರ್ ಜೊತೆಯಲ್ಲಿ ಶಾಸಕ ರಘುನಂದನ್, ವಿವೇಕ್, ಎನುಗು ರವೀಂದರ್ ರೆಡ್ಡಿ, ತುಲಾ ಉಮಾ ಸೇರಿ ಒಟ್ಟು 184 ಜನರಿದ್ದರು.

ಬಿಜೆಪಿ ಸೇರಿದ ಮಾಜಿ ಸಚಿವ ಟಿಆರ್ಎಸ್ನಲ್ಲಿ ಹಿರಿಯ ನಾಯಕರಾಗಿದ್ದ ರಾಜೇಂದರ್ ಕೆಲ ದಿನಗಳ ಹಿಂದೆ ಹುಜುರಾಬಾದ್ ಶಾಸಕ ಸ್ಥಾನಕ್ಕೆ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಇವರು ಕೆ.ಚಂದ್ರಶೇಖರ್ ಅವರ ಸರ್ಕಾರದಲ್ಲಿ ಸಚಿವರಾಗಿ ಹಣಕಾಸು, ಆರೋಗ್ಯ ಸೇರಿದಂತೆ ಪ್ರಮುಖ ಖಾತೆಗಳನ್ನು ನೋಡಿಕೊಳ್ಳುತ್ತಿದ್ದರು. ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿದ್ದರಿಂದ ಸಂಪುಟದಿಂದ ಅವರನ್ನು ಕೈಬಿಡಲಾಗಿತ್ತು.

ಇದನ್ನೂ ಓದಿ: ಗ್ರಾಮದಿಂದ ರೈತ ಕುಟುಂಬವನ್ನು ಬಹಿಷ್ಕರಿಸಿದ ಆರೋಪ; ನ್ಯಾಯಕ್ಕಾಗಿ ಆಗ್ರಹಿಸಿ ಗದಗ ಜಿಲ್ಲಾ ಕಚೇರಿ ಮುಂದೆ ಧರಣಿ

Follow Us
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ