AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19 Vaccine: ಭಾರತದ ಕೊರೊನಾ ಲಸಿಕೆ ವಾಪಾಸ್​ ಮಾಡುವ ವಿಚಾರ ಸತ್ಯಕ್ಕೆ ದೂರ: ದಕ್ಷಿಣ ಆಫ್ರಿಕಾ

Coronavirus Vaccine: ಭಾರತದಲ್ಲಿ 4 ಮಂದಿಗೆ ಸೌತ್​ ಆಫ್ರಿಕಾ ಮೂಲದ ರೂಪಾಂತರಿ ಕೊರೊನಾ ಸೋಂಕು ತಗುಲಿದ್ದು, ತಳಮಳ ಹುಟ್ಟುಹಾಕಿದೆ. ಇದು ಯುವಕರಿಗೂ ಅಪಾಯ ಉಂಟುಮಾಡುವಷ್ಟು ಶಕ್ತಿಶಾಲಿಯಾಗಿದೆ.

Covid 19 Vaccine: ಭಾರತದ ಕೊರೊನಾ ಲಸಿಕೆ ವಾಪಾಸ್​ ಮಾಡುವ ವಿಚಾರ ಸತ್ಯಕ್ಕೆ ದೂರ: ದಕ್ಷಿಣ ಆಫ್ರಿಕಾ
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on: Feb 17, 2021 | 2:41 PM

Share

ಕೊರೊನಾ ಲಸಿಕೆ ವಿತರಣೆ ಆರಂಭವಾದ ನಂತರ ಕೊಂಚ ತಹಬದಿಗೆ ಬಂದಿದ್ದ ಕೊವಿಡ್​ 19 ಇದೀಗ ಮತ್ತೆ ಸದ್ದು ಮಾಡುತ್ತಿದೆ. ದಕ್ಷಿಣಾ ಆಫ್ರಿಕಾದಲ್ಲಿ ಹೊಸ ಬಗೆಯ ಕೊರೊನಾ ವೈರಾಣು ಪತ್ತೆಯಾಗಿದ್ದು, ಅದು ಮೊದಲಿದ್ದ ವೈರಾಣುಗಳಿಗಿಂತಲೂ ತುಸು ಅಪಾಯಕಾರಿ ಎಂಬ ವಿಷಯ ಆತಂಕ ಸೃಷ್ಟಿಸಿದೆ. ಏತನ್ಮಧ್ಯೆ ದಕ್ಷಿಣ ಆಫ್ರಿಕಾ ದೇಶವು ಭಾರತದಿಂದ ಆಮದು ಮಾಡಿಕೊಂಡ ಕೊವಿಶೀಲ್ಡ್ ಲಸಿಕೆಯನ್ನು ಹಿಂತಿರುಗಿಸುತ್ತಿದೆ ಎಂಬುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇದೀಗ ಈ ವಿಷಯದ ಬಗ್ಗೆ ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಡಾ.ಜ್ವೇಲಿ ಕೈಜ್ ಪ್ರತಿಕ್ರಿಯೆ ನೀಡಿದ್ದಾರೆ.

ಆಕ್ಸ್​ಫರ್ಡ್​-ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದ, ಸೆರಮ್​ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾ ತಯಾರಿಸಿದ ಕೊವಿಶೀಲ್ಡ್​ ಲಸಿಕೆಯನ್ನು ನಾವು ಭಾರತಕ್ಕೆ ಹಿಂತಿರುಗಿಸುತ್ತಿದ್ದೇವೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಭಾರತ ಲಸಿಕೆಯನ್ನು ಆಫ್ರಿಕನ್​ ಒಕ್ಕೂಟಕ್ಕೆ ಕಳುಹಿಸಿಕೊಟ್ಟಿದ್ದು, ನಾವು ಅದರಲ್ಲೊಂದು ಭಾಗವಷ್ಟೇ. ಆದ್ದರಿಂದ ಕೊವಿಶೀಲ್ಡ್​ ಲಸಿಕೆಯನ್ನು ಒಕ್ಕೂಟದ ಸದಸ್ಯರ ಅವಶ್ಯಕತೆಗೆ ಅನುಸಾರವಾಗಿ ಹಂಚಲಾಗುತ್ತದೆಯೇ ವಿನಃ ವಾಪಾಸು ಕಳಿಸುವ ಪ್ರಮೇಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ನಡುವೆ ಭಾರತದಲ್ಲಿ 4 ಮಂದಿಗೆ ಸೌತ್​ ಆಫ್ರಿಕಾ ಮೂಲದ ರೂಪಾಂತರಿ ಕೊರೊನಾ ಸೋಂಕು ತಗುಲಿದ್ದು, ತಳಮಳ ಹುಟ್ಟುಹಾಕಿದೆ. ಈ ಹೊಸ ಬಗೆಯ ಸೋಂಕು ಯುವಕರಿಗೂ ಅಪಾಯ ಉಂಟುಮಾಡುವಷ್ಟು ಶಕ್ತಿಶಾಲಿಯಾಗಿದೆ ಎನ್ನುವುದು ಜನರ ಭಯಕ್ಕೆ ಕಾರಣವಾಗಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಬೆರಳೆಣಿಕೆಯಷ್ಟು ಸೋಂಕಿತರಿರುವಾಗಲೇ ಸರಿಯಾಗಿ ನಿಯಂತ್ರಣ ಮಾಡಬೇಕಿದೆ. ಸೋಂಕು ವ್ಯಾಪಿಸದಂತೆ ತಡೆಗಟ್ಟುವ ಬಗ್ಗೆ ಯೋಚಿಸಬೇಕೇ ವಿನಃ ಭಯಪಡುವುದು ಬೇಕಿಲ್ಲ. ಆದರೆ, ಒಂದುವೇಳೆ ನಿಯಂತ್ರಣ ತಪ್ಪಿ ದೇಶಾದ್ಯಂತ ಹಬ್ಬಿದರೆ ಮಾತ್ರ ಈಗಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಉಪಯೋಗಿಸಿ ತಡೆಗಟ್ಟುವುದೂ ಕಷ್ಟವಾಗಬಹುದು.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‌ಮೆಂಟ್​ನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಆನೇಕಲ್‌ನಲ್ಲಿಯೂ ಕಾಲಿಟ್ಟಿದೆ!

ಈ ಹಿಂದೆ ಭಾರತ್ ಬಯೋಟೆಕ್ ಸಂಸ್ಥೆ ತಾನು ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆ ಬ್ರಿಟನ್​ ದೇಶದ ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಶಕ್ಯವಾಗಿದೆ ಎಂದು ಹೇಳಿಕೆ ನೀಡಿತ್ತು. ಆದರೆ, ಅದೇ ಲಸಿಕೆ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಾಣುವನ್ನೂ ಮಣಿಸಬಲ್ಲದಾ? ಎನ್ನುವ ಬಗ್ಗೆ ಸಂಸ್ಥೆಯಿಂದಾಗಲೀ, ತಜ್ಞರಿಂದಾಗಲೀ ಯಾವುದೇ ಬಗೆಯ ಮಾಹಿತಿ ಲಭಿಸಿಲ್ಲ.

Follow Us
Skanda
Skanda
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ