AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ

ಆಂಬುಲೆನ್ಸ್​​ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್​ಶಾರ್ಟ್ಸ್ ಸುದ್ದಿಯ ಸ್ಕ್ರೀನ್​ಶಾಟ್ ಫೇಕ್.

Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ
ವೈರಲ್ ಆಗಿರುವ ಸ್ಕ್ರೀನ್​ಶಾಟ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 14, 2021 | 5:53 PM

Share

ಆಂಬುಲೆನ್ಸ್​​ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್​ಶಾರ್ಟ್ಸ್ ಸುದ್ದಿಯ ಸ್ಕ್ರೀನ್​ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಪಕ್ಷಗಳಲ್ಲೊಂದಾದ ಇಂದು ಮಕ್ಕಳ್ ಕಟ್ಚಿ ಈ ಸ್ಕ್ರೀನ್​ಶಾಟ್​ನ್ನು ಶೇರ್ ಮಾಡಿದ್ದು, ಇದು ನಿಜವೇ? ಯಾರಾದರೂ ದೃಢೀಕರಿಸಿ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕಟ್ಟಾ ಬೆಂಬಲಿಗ ಎಂದು ಟ್ವಿಟರ್ ನಲ್ಲಿ ಬರೆದಿರುವ ಟ್ವೀಟಿಗ ಎಂ.ಶ್ರೀನಿವಾಸುಲು ರೆಡ್ಡಿ ಇದನ್ನು ಟ್ವೀಟ್ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಈ ಗ್ರಾಫಿಕ್ಸ್ ವ್ಯಾಪಕವಾಗಿ ಶೇರ್ ಆಗಿದೆ.

ಫ್ಯಾಕ್ಟ್ ಚೆಕ್ ವೈರಲ್ ಆಗಿರುವ ಈ ಸ್ಕ್ರೀನ್​​ಶಾಟ್ ಬಗ್ಗೆ ಆಲ್ಟ್ ನ್ಯೂಸ್  ಫ್ಯಾಕ್ಟ್​ಚೆಕ್ ಮಾಡಿದ್ದು ಈ ಚಿತ್ರ ಫೇಕ್ ಎಂದಿದೆ. ವೈರಲ್ ಆಗಿರುವ ಸ್ಕ್ರೀನ್​ಶಾಟ್​ನಲ್ಲಿ ಸುದ್ದಿಮೂಲ ಹಿಂದೂಸ್ತಾನ್ ಟೈಮ್ಸ್ ಎಂದು ಇದೆ. ಆದರೆ ಹಿಂದೂಸ್ತಾನ್ ಟೈಮ್ಸ್​ನಲ್ಲಿ ಈ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಫೋಟೊ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾಗಿದ್ದು, ಕೇರಳದ ದಂಪತಿ ಬಗ್ಗೆ ಇರುವ ಸುದ್ದಿಯಲ್ಲಿ ಅಲ್ಲ. ಕೊವಿಡ್ ಹೈಲೈಟ್ಸ್ ಸುದ್ದಿಗಾಗಿ ಈ ಫೋಟೊ ಬಳಸಲಾಗಿದೆ. ಇತರ ಯಾವುದೇ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿ ಪ್ರಕಟ ಆಗಿಲ್ಲ.

ಫೋಟೊ ಬೆಂಗಳೂರಿನದ್ದು 2021 ರ ಮೇ 8 ರಂದು ಬೆಂಗಳೂರಿನ ಹೊರವಲಯದಲ್ಲಿರುವ ಗ್ರಾನೈಟ್ ಕಲ್ಲುಗಣಿಯೊಳಗೆ ಕೊರೊನಾವೈರಸ್ ಸಂತ್ರಸ್ತರಿಗಾಗಿ ಸ್ಥಾಪಿಸಲಾದ ತೆರೆದ ಸ್ಮಶಾನದಲ್ಲಿ ಕೊರೊನಾವೈರಸ್‌ನಿಂದ ಮೃತಪಟ್ಟ ಸಂತ್ರಸ್ತೆಯ ಶವವನ್ನು ಕುಟುಂಬ ಸದಸ್ಯರು ಮತ್ತು ಕೆಲಸಗಾರರು ಒಯ್ಯುತ್ತಿರುವುದು ಎಂದು ಹಿಂದುಸ್ತಾನ್ ಟೈಮ್ಸ್ ಚಿತ್ರದ ಅಡಿಬರಹ ನೀಡಿದೆ. ಎಎಫ್​ಪಿ ಸುದ್ದಿಸಂಸ್ಥೆಯ ಮಂಜುನಾಥ್ ಕಿರಣ್ ಕ್ಲಿಕ್ಕಿಸಿದ ಚಿತ್ರ ಇದಾಗಿದ್ದು, ಆಂಬುಲೆನ್ಸ್ ಮೇಲೆ ಪ್ರಸನ್ನ ಆಂಬುಲೆನ್ಸ್ ಎಂದು ಇದೆ. ಈ ಆಂಬುಲೆನ್ಸ್ ಸೇವೆ ಬೆಂಗಳೂರಿನಲ್ಲಿರುವುದರಿಂದ ಇದು ಬೆಂಗಳೂರಲ್ಲಿ ಸೆರೆ ಹಿಡಿದ ಚಿತ್ರ ಎಂಬುದು ಸ್ಪಷ್ಟ.

ಇನ್​ಶಾರ್ಟ್ಸ್​ನಲ್ಲಿ ಅಂತಹ ಯಾವುದೇ ಸುದ್ದಿ ಕಂಡುಬಂದಿಲ್ಲ. ಇದಲ್ಲದೆ, ವೈರಲ್ ಗ್ರಾಫಿಕ್ಸ್​ನ ಸ್ವರೂಪವು ಇನ್​ಶಾರ್ಟ್ಸ್ ಗ್ರಾಫಿಕ್ಸ್ ಗೆ ಹೊಂದಿಕೆಯಾಗುವುದಿಲ್ಲ. ಆಲ್ಟ್ ನ್ಯೂಸ್ ವೈರಲ್ ಗ್ರಾಫಿಕ್ಸ್​ ಅನ್ನು ನಿಜವಾದ ಇನ್​ಶಾರ್ಟ್ಸ್ ಗ್ರಾಫಿಕ್ಸ್ ನೊಂದಿಗೆ ಹೋಲಿಸಿದೆ. ಸಾರಾಂಶದ ಪಠ್ಯವು ನಿಜವಾದ ಗ್ರಾಫಿಕ್ಸ್​ನಲ್ಲಿ​ರುವುದಕ್ಕಿಂತ ಹೆಚ್ಚು ಗಾಢವಾಗಿದೆ. ವೈರಲ್ ಗ್ರಾಫಿಕ್ಸ್​ನಲ್ಲಿ ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್​ಶಾರ್ಟ್ಸ್ ಪ್ರತಿನಿಧಿಯೊಬ್ಬರು ಆಲ್ಟ್ ನ್ಯೂಸ್‌ ಜತೆ ಮಾತನಾಡಿದ್ದು ಈ ಸುದ್ದಿಯನ್ನು ನಾವು ಇನ್​ಶಾರ್ಟ್ಸ್ನಲ್ಲಿ ಪ್ರಕಟಿಸಿಲ್ಲ. ಇದು ನಕಲಿ ಚಿತ್ರ ಎಂದಿದ್ದಾರೆ.

ಇದನ್ನೂ ಓದಿ: Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ

Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ

Follow Us
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು