AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ

ಆಂಬುಲೆನ್ಸ್​​ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್​ಶಾರ್ಟ್ಸ್ ಸುದ್ದಿಯ ಸ್ಕ್ರೀನ್​ಶಾಟ್ ಫೇಕ್.

Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ
ವೈರಲ್ ಆಗಿರುವ ಸ್ಕ್ರೀನ್​ಶಾಟ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 14, 2021 | 5:53 PM

Share

ಆಂಬುಲೆನ್ಸ್​​ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್​ಶಾರ್ಟ್ಸ್ ಸುದ್ದಿಯ ಸ್ಕ್ರೀನ್​ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಪಕ್ಷಗಳಲ್ಲೊಂದಾದ ಇಂದು ಮಕ್ಕಳ್ ಕಟ್ಚಿ ಈ ಸ್ಕ್ರೀನ್​ಶಾಟ್​ನ್ನು ಶೇರ್ ಮಾಡಿದ್ದು, ಇದು ನಿಜವೇ? ಯಾರಾದರೂ ದೃಢೀಕರಿಸಿ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕಟ್ಟಾ ಬೆಂಬಲಿಗ ಎಂದು ಟ್ವಿಟರ್ ನಲ್ಲಿ ಬರೆದಿರುವ ಟ್ವೀಟಿಗ ಎಂ.ಶ್ರೀನಿವಾಸುಲು ರೆಡ್ಡಿ ಇದನ್ನು ಟ್ವೀಟ್ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಈ ಗ್ರಾಫಿಕ್ಸ್ ವ್ಯಾಪಕವಾಗಿ ಶೇರ್ ಆಗಿದೆ.

ಫ್ಯಾಕ್ಟ್ ಚೆಕ್ ವೈರಲ್ ಆಗಿರುವ ಈ ಸ್ಕ್ರೀನ್​​ಶಾಟ್ ಬಗ್ಗೆ ಆಲ್ಟ್ ನ್ಯೂಸ್  ಫ್ಯಾಕ್ಟ್​ಚೆಕ್ ಮಾಡಿದ್ದು ಈ ಚಿತ್ರ ಫೇಕ್ ಎಂದಿದೆ. ವೈರಲ್ ಆಗಿರುವ ಸ್ಕ್ರೀನ್​ಶಾಟ್​ನಲ್ಲಿ ಸುದ್ದಿಮೂಲ ಹಿಂದೂಸ್ತಾನ್ ಟೈಮ್ಸ್ ಎಂದು ಇದೆ. ಆದರೆ ಹಿಂದೂಸ್ತಾನ್ ಟೈಮ್ಸ್​ನಲ್ಲಿ ಈ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಫೋಟೊ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾಗಿದ್ದು, ಕೇರಳದ ದಂಪತಿ ಬಗ್ಗೆ ಇರುವ ಸುದ್ದಿಯಲ್ಲಿ ಅಲ್ಲ. ಕೊವಿಡ್ ಹೈಲೈಟ್ಸ್ ಸುದ್ದಿಗಾಗಿ ಈ ಫೋಟೊ ಬಳಸಲಾಗಿದೆ. ಇತರ ಯಾವುದೇ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿ ಪ್ರಕಟ ಆಗಿಲ್ಲ.

ಫೋಟೊ ಬೆಂಗಳೂರಿನದ್ದು 2021 ರ ಮೇ 8 ರಂದು ಬೆಂಗಳೂರಿನ ಹೊರವಲಯದಲ್ಲಿರುವ ಗ್ರಾನೈಟ್ ಕಲ್ಲುಗಣಿಯೊಳಗೆ ಕೊರೊನಾವೈರಸ್ ಸಂತ್ರಸ್ತರಿಗಾಗಿ ಸ್ಥಾಪಿಸಲಾದ ತೆರೆದ ಸ್ಮಶಾನದಲ್ಲಿ ಕೊರೊನಾವೈರಸ್‌ನಿಂದ ಮೃತಪಟ್ಟ ಸಂತ್ರಸ್ತೆಯ ಶವವನ್ನು ಕುಟುಂಬ ಸದಸ್ಯರು ಮತ್ತು ಕೆಲಸಗಾರರು ಒಯ್ಯುತ್ತಿರುವುದು ಎಂದು ಹಿಂದುಸ್ತಾನ್ ಟೈಮ್ಸ್ ಚಿತ್ರದ ಅಡಿಬರಹ ನೀಡಿದೆ. ಎಎಫ್​ಪಿ ಸುದ್ದಿಸಂಸ್ಥೆಯ ಮಂಜುನಾಥ್ ಕಿರಣ್ ಕ್ಲಿಕ್ಕಿಸಿದ ಚಿತ್ರ ಇದಾಗಿದ್ದು, ಆಂಬುಲೆನ್ಸ್ ಮೇಲೆ ಪ್ರಸನ್ನ ಆಂಬುಲೆನ್ಸ್ ಎಂದು ಇದೆ. ಈ ಆಂಬುಲೆನ್ಸ್ ಸೇವೆ ಬೆಂಗಳೂರಿನಲ್ಲಿರುವುದರಿಂದ ಇದು ಬೆಂಗಳೂರಲ್ಲಿ ಸೆರೆ ಹಿಡಿದ ಚಿತ್ರ ಎಂಬುದು ಸ್ಪಷ್ಟ.

ಇನ್​ಶಾರ್ಟ್ಸ್​ನಲ್ಲಿ ಅಂತಹ ಯಾವುದೇ ಸುದ್ದಿ ಕಂಡುಬಂದಿಲ್ಲ. ಇದಲ್ಲದೆ, ವೈರಲ್ ಗ್ರಾಫಿಕ್ಸ್​ನ ಸ್ವರೂಪವು ಇನ್​ಶಾರ್ಟ್ಸ್ ಗ್ರಾಫಿಕ್ಸ್ ಗೆ ಹೊಂದಿಕೆಯಾಗುವುದಿಲ್ಲ. ಆಲ್ಟ್ ನ್ಯೂಸ್ ವೈರಲ್ ಗ್ರಾಫಿಕ್ಸ್​ ಅನ್ನು ನಿಜವಾದ ಇನ್​ಶಾರ್ಟ್ಸ್ ಗ್ರಾಫಿಕ್ಸ್ ನೊಂದಿಗೆ ಹೋಲಿಸಿದೆ. ಸಾರಾಂಶದ ಪಠ್ಯವು ನಿಜವಾದ ಗ್ರಾಫಿಕ್ಸ್​ನಲ್ಲಿ​ರುವುದಕ್ಕಿಂತ ಹೆಚ್ಚು ಗಾಢವಾಗಿದೆ. ವೈರಲ್ ಗ್ರಾಫಿಕ್ಸ್​ನಲ್ಲಿ ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್​ಶಾರ್ಟ್ಸ್ ಪ್ರತಿನಿಧಿಯೊಬ್ಬರು ಆಲ್ಟ್ ನ್ಯೂಸ್‌ ಜತೆ ಮಾತನಾಡಿದ್ದು ಈ ಸುದ್ದಿಯನ್ನು ನಾವು ಇನ್​ಶಾರ್ಟ್ಸ್ನಲ್ಲಿ ಪ್ರಕಟಿಸಿಲ್ಲ. ಇದು ನಕಲಿ ಚಿತ್ರ ಎಂದಿದ್ದಾರೆ.

ಇದನ್ನೂ ಓದಿ: Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ

Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ

Follow Us
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ