AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ISIS ಎಂದು ಬರೆದ ಟಿ ಶರ್ಟ್ ಧರಿಸಿ ಬೆಂಬಲ ಸೂಚಿಸಿದ ಯುವಕರು; ವೈರಲ್ ಚಿತ್ರ ಕೇರಳದ್ದಲ್ಲ

ಈ ಫೋಟೊ ಕೇರಳದ್ದು ಅಲ್ಲ ತಮಿಳುನಾಡಿನ ರಾಮನಾಥಪುರದ್ದು. ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಹಳೆಯ ವರದಿಗಳು ಪತ್ತೆಯಾಗಿವೆ.

Fact Check: ISIS ಎಂದು ಬರೆದ ಟಿ ಶರ್ಟ್ ಧರಿಸಿ ಬೆಂಬಲ ಸೂಚಿಸಿದ ಯುವಕರು; ವೈರಲ್ ಚಿತ್ರ ಕೇರಳದ್ದಲ್ಲ
ವೈರಲ್ ಆಗಿರುವ ಸ್ಕ್ರೀನ್ ಶಾಟ್
ರಶ್ಮಿ ಕಲ್ಲಕಟ್ಟ
|

Updated on: May 08, 2023 | 8:58 PM

Share

ಮುಸ್ಲಿಂ ಪುರುಷರ ಗುಂಪೊಂದು ಐಸಿಸ್  ಎಂದು ಬರೆದ ಟೀ-ಶರ್ಟ್‌ಗಳನ್ನು ಧರಿಸಿರುವ ಚಿತ್ರವನ್ನು ಶೆಫಾಲಿ ವೈದ್ಯ (Shefali Vaidya) ಟ್ವೀಟ್ ಮಾಡಿದ್ದರು. ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿವಾದಾತ್ಮಕ ಚಿತ್ರವಾದ ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಯಾದ ನಂತರ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಗೆ ತಮ್ಮ ಬೆಂಬಲವನ್ನು ತೋರಿಸುತ್ತಿರುವ ಈ ಜನರು ಕೇರಳದವರು ಎಂದು ಶೆಫಾಲಿ ಟ್ವೀಟ್ ನಲ್ಲಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಬಗ್ಗೆ ಅಪ್ ಡೇಟ್ ಮಾಡಿದ ವೈದ್ಯ ಈ ಚಿತ್ರ ಕೇರಳದದ್ದಲ್ಲ ಎಂದು ಹೇಳಿದ್ದಾರೆ.

ಫ್ಯಾಕ್ಟ್ ಚೆಕ್

ಈ ವೈರಲ್ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್ ಡಾಟ್ ಕಾಮ್ ಇದು 2014ರಲ್ಲಿ ಚಿತ್ರ. ಈ ಫೋಟೊ ಕೇರಳದ್ದು ಅಲ್ಲ ತಮಿಳುನಾಡಿನ ರಾಮನಾಥಪುರದ್ದು ಎಂದು ಹೇಳಿದೆ. ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಹಳೆಯ ವರದಿಗಳು ಪತ್ತೆಯಾಗಿವೆ.

ದಿ ಹಿಂದೂ, ದಿ ಸ್ಕ್ರಾಲ್ ಮತ್ತು ಎನ್‌ಡಿಟಿವಿಯಂತಹ ಹಲವಾರು ಸುದ್ದಿ ಮಾಧ್ಯಮಗಳು ವೈರಲ್ ಫೋಟೊ ಬಗ್ಗೆ ಸುದ್ದಿ ಮಾಡಿದೆ. 26 ಮುಸ್ಲಿಂ ಯುವಕರ ಗುಂಪು “ಐಸಿಸ್” ಎಂದು ಬರೆಯಲಾದ ಕಪ್ಪು ಟೀ ಶರ್ಟ್‌ಗಳಲ್ಲಿ ಪೋಸ್ ನೀಡಿದ್ದರಿಂದ ಉಂಟಾದ ಈ ವಿವಾದದ ಬಗ್ಗೆ ಈ ಮಾಧ್ಯಮಗಳು ವರದಿ ಮಾಡಿದೆ.

ಈ ಚಿತ್ರವು ತಮಿಳುನಾಡಿನ ರಾಮನಾಥಪುರಂನ ತೊಂಡಿ ಪಟ್ಟಣದ್ದು, ಇದನ್ನು 2014ರ ಈದ್ ದಿನದಂದು ಕ್ಲಿಕ್ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

6 ಆಗಸ್ಟ್ 2014 ರ ಹಿಂದೂ ವರದಿಯ ಪ್ರಕಾರ, ಫೋಟೋದಲ್ಲಿರುವ ಯಾವುದೇ ಯುವಕರು ಐಸಿಸ್ ಜತೆ ಸಂಪರ್ಕ ಹೊಂದಿಲ್ಲ. ಈ ವಿವಾದಕ್ಕೆ ಸಂಬಂಧಿಸಿದಂತೆಟಿ ಶರ್ಟ್‌ಗಳನ್ನು ಖರೀದಿಸಿದ ತಿರುಪುರ್ ಮೂಲದ ಇಮಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: Fact Check: ಮಣಿಪುರದಲ್ಲಿ ಬುಡಕಟ್ಟು ಜನರು ಅಂಗಡಿ ಲೂಟಿ ಮಾಡುತ್ತಿರುವುದು ಎಂಬ ವೈರಲ್ ವಿಡಿಯೊ ಫಿಲಿಪೈನ್ಸ್​​​ನದ್ದು

ಇರಾಕ್‌ನಲ್ಲಿ ಸೆರೆಯಲ್ಲಿದ್ದ ಭಾರತೀಯ ನರ್ಸ್ ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಐಸಿಸ್‌ಗೆ ಧನ್ಯವಾದ ಅರ್ಪಿಸಲು ಈ ರೀತಿ ಫೋಟೊ ತೆಗೆಯಲಾಗಿದೆ ಎಂದು ಫೋಟೊದಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಇದೇ ಚಿತ್ರವು 2019 ರ ಲೋಕಸಭಾ ಚುನಾವಣೆಯ ನಂತರ ಕೇರಳದ ವಯನಾಡಿನಲ್ಲಿ ತೆಗೆದದ್ದು ಎಂಬ ಹೇಳಿಕೆಯೊಂದಿಗೆ 2019 ರಲ್ಲಿ ವೈರಲ್ ಆಗಿತ್ತು.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ