AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಬುಲಂದ್‌ಶಹರ್ ದೇವಾಲಯದ ವಿಗ್ರಹ ಧ್ವಂಸಗೊಳಿಸಿದ ಆರೋಪಿಗಳು ಮುಸ್ಲಿಂ ಸಮುದಾಯದವರೇ?

ದೇವಾಲಯದಲ್ಲಿನ ವಿಗ್ರಹಗಳ ಧ್ವಂಸ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ಕೃತ್ಯವೆಸಗಿದವರು ಮುಸ್ಲಿಮರು ಎಂದು ಹೇಳುವ ಹಲವಾರು ಪೋಸ್ಟ್​​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಬಂಧಿತ ಆರೋಪಿಗಳು ಮುಸ್ಲಿಮರೇ? ಪೊಲೀಸರು ಹೇಳಿದ್ದೇನು? ಇಲ್ಲಿದೆ ಫ್ಯಾಕ್ಟ್ ಚೆಕ್.

Fact Check: ಬುಲಂದ್‌ಶಹರ್ ದೇವಾಲಯದ ವಿಗ್ರಹ ಧ್ವಂಸಗೊಳಿಸಿದ ಆರೋಪಿಗಳು ಮುಸ್ಲಿಂ ಸಮುದಾಯದವರೇ?
ಬುಲಂದ್‌ಶಹರ್‌ನಲ್ಲಿರುವ ದೇವಾಲಯದ ವಿಗ್ರಹ ಧ್ವಂಸ ಬಗ್ಗೆ ವೈರಲ್ ಪೋಸ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 09, 2023 | 9:00 PM

ಜೂನ್ 1ರ ನಸುಕಿನ ವೇಳೆ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ (Bulandshahr) ನಾಲ್ಕು ದೇವಾಲಯಗಳಲ್ಲಿ ಸುಮಾರು ಹನ್ನೆರಡು ಹಿಂದೂ ದೇವರ ವಿಗ್ರಹಗಳನ್ನು (temple vandalism) ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಸುದ್ದಿ ವರದಿಗಳ ಪ್ರಕಾರ, ಬುಲಂದ್‌ಶಹರ್ ಜಿಲ್ಲೆಯ ಬರಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ವಿಗ್ರಹಗಳ ಧ್ವಂಸಗೊಳಿಸಿದ ವಿಡಿಯೊ ಹಂಚಿಕೊಂಡಿದ್ದು ಇದು ಹಿಂದೂಗಳ ಮೇಲಿನ ದಾಳಿ ಎಂದಿದ್ದಾರೆ. ಇನ್ನು ಕೆಲವು ಇದು ಮುಸ್ಲಿಂ ಸಮುದಾಯದ (Muslim community) ಕೃತ್ಯ ಎಂದು ಹೇಳಿದ್ದು ,ಕೆಲವು ಸುದ್ದಿ ಮಾಧ್ಯಮಗಳು ಕೂಡಾ ಹೀಗೆ ವಾದಿಸಿವೆ.

हम लोग We The People (@ajaychauhan41) ಎಂಬ ಟ್ವೀಟಿಗರು ಜೂನ್ 1 ರಂದು ವಿಡಿಯೊವೊಂದನ್ನು ಶೇರ್ ಮಾಡಿದ್ದು ಕಳೆದ ರಾತ್ರಿ ಬುಲಂದ್‌ಶಹರ್‌ನಲ್ಲಿ ನಾಲ್ಕು ದೇವಾಲಯಗಳ ಮೇಲೆ ದಾಳಿ ನಡೆಸಲಾಯಿತು ಮತ್ತು ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಚರ್ಚ್/ಮಸೀದಿಗಳ ಮೇಲಿನ ದಾಳಿಯ ನಕಲಿ ವರದಿಗಳು ಅಂತಾರಾಷ್ಟ್ರೀಯ ಸುದ್ದಿಯಾಗುತ್ತವೆ. ಅವರು ಹಿಂದೂಗಳನ್ನು ಅಸಹಿಷ್ಣು ಎಂದು ಕರೆಯಲು ಪ್ರಾರಂಭಿಸುತ್ತಾರೆ. ನಮ್ಮ ದೇವಸ್ಥಾನಗಳ ಮೇಲಿನ ದಾಳಿಯ ಸುದ್ದಿ ಯಾವಾಗ ಬರುತ್ತೆ? ಎಂದು ಬರೆದಿದ್ದಾರೆ. ಎರಡನೇ ಟ್ವೀಟ್‌ನಲ್ಲಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ‘ಜಿಹಾದಿಗಳು’ ಇದನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಬ್ಲೂಟಿಕ್ ಹೊಂದಿರುವ ಟ್ವಿಟರ್ ಬಳಕೆದಾರ BALA (@erbmjha) ಅವರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಾಲ್ಕು ವಿಭಿನ್ನ ದೇವಾಲಯಗಳಲ್ಲಿ 12 ಕ್ಕೂ ಹೆಚ್ಚು ವಿಭಿನ್ನ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಅಪರಿಚಿತ ದುಷ್ಕರ್ಮಿಗಳಿಂದ 100 ವರ್ಷ ಹಳೆಯ ದೇವಾಲಯ ಧ್ವಂಸವಾಗಿದೆ. ಅವರು ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ, ಅವರು ನಮ್ಮ ದೇವಾಲಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ಅವರು ನಮ್ಮ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡುತ್ತಿದ್ದಾರೆ, ಅದೇ ಸಮಯದಲ್ಲಿ, ನಾವು ಹಿಂಬದಿಯಲ್ಲಿ ಕುಳಿತು ನಮ್ಮ ವಿನಾಶವನ್ನು ವೀಕ್ಷಿಸುತ್ತಿದ್ದೇವೆ. ಇಲ್ಲದಿದ್ದರೆ ನಾವು ಅಸಹಿಷ್ಣುತೆ, ಕೋಮುವಾದಿ ಎಂದು ಹೇಳಲಾಗುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್

ಈ ವೈರಲ್ ಪೋಸ್ಟ್​​ಗಳ ವಾದ ಮತ್ತು ಅಲ್ಲಿ ನಡೆದಿದ್ದು ಏನು ಎಂಬುದರ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ. ಈ ಬಗ್ಗೆ ಹಿಂದಿಯಲ್ಲಿ ಕೀವರ್ಡ್ ಹುಡುಕಾಟ ಮಾಡಿದ ಜೂನ್ 8 ರಂದು ಪ್ರಕಟವಾದ ದೈನಿಕ್ ಭಾಸ್ಕರ್ ವರದಿ ಸಿಕ್ಕಿದೆ. ವರದಿಯಲ್ಲಿ ಧಾರ್ಮಿಕ ವಿಗ್ರಹ ಧ್ವಂಸ ಆರೋಪದ ತಪ್ಪೊಪ್ಪಿಗೆ: ನಾವು ಪೂಜಿಸುತ್ತಿರುವ ವಿಗ್ರಹಗಳನ್ನು ಮುರಿದಿದ್ದೇವೆ. ಹೊಸ ವಿಗ್ರಹಗಳಿಗಾಗಿ ನಾನು ಈ ರೀತಿ ಮಾಡಿದ್ದೇವೆ. 4 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದೆ. ಎಲ್ಲಾ ನಾಲ್ವರು ಆರೋಪಿಗಳು ಬರಾಲ್ ನಿವಾಸಿಗಳಾಗಿದ್ದು, ಅವರ ಹೆಸರುಗಳು – ಹರೀಶ್ ಶರ್ಮಾ, ಶಿವಂ, ಕೇಶವ್ ಮತ್ತು ಅಜಯ್ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ಶ್ಲೋಕ್ ಕುಮಾರ್ ದೃಢಪಡಿಸಿದ ಬುಲಂದ್‌ಶಹರ್ ಪೊಲೀಸರ ಟ್ವೀಟ್ ಕೂಡಾ ಇದನ್ನೇ ಕೇಳುತ್ತದೆ. ಈ ಕೃತ್ಯಕ್ಕೆ ಹರೀಶ್ ಶರ್ಮಾ ನೇತೃತ್ವ ವಹಿಸಿದ್ದು, ಇತರ ಮೂವರಿಗೆ ಆಗಾಗ್ಗೆ ಆತಿಥ್ಯ ನೀಡುತ್ತಿದ್ದರು. ಅವರು ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು ಎಂದು ಎಸ್‌ಎಸ್‌ಪಿ ಉಲ್ಲೇಖಿಸಿದ್ದಾರೆ. ಕೃತ್ಯ ನಡೆದ ದಿನವೂ ಅವರು ಕುಡಿದ ಮತ್ತಿನಲ್ಲಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ ಬುಲಂದ್‌ಶಹರ್ ಪೊಲೀಸರು ನಾಲ್ವರ ಬಂಧನದ ಅಧಿಕೃತ ಸೂಚನೆಯನ್ನು ಹಂಚಿಕೊಂಡಿದ್ದಾರೆ. ದೈನಿಕ್ ಭಾಸ್ಕರ್ ವರದಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ನಾಲ್ವರು ಆರೋಪಿಗಳ ಹೆಸರನ್ನೇ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Fact Check: ‘ಮಸೀದಿಗಳಲ್ಲಿ ಸಂಗ್ರಹವಾದ ಹಣಕ್ಕೆ ತೆರಿಗೆ ಇಲ್ಲ’, ಚೀಲಗಳಲ್ಲಿ ನೋಟು ತುಂಬುತ್ತಿರುವ ವಿಡಿಯೊ ಭಾರತದ್ದಲ್ಲ

ನಾಲ್ವರು ಆರೋಪಿಗಳನ್ನು ಬಂಧಿಸಿದ ನಂತರ ಆಜ್ ತಕ್, ದುಷ್ಕರ್ಮಿಗಳು ಹಿಂದೂಗಳು ಎಂಬ ವಿಷಯವನ್ನು ಹಂಚಿಕೊಂಡಿದೆ. ಆದ್ದರಿಂದ ಬುಲಂದ್‌ಶಹರ್‌ನ ನಾಲ್ಕು ದೇವಾಲಯಗಳಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು ಮುಸ್ಲಿಮರಲ್ಲ, ಹಿಂದೂಗಳು ಎಂಬುದು ಈ ವರದಿಗಳಿಂದ ಸ್ಪಷ್ಟವಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ