Fact Check: India Is Doing It ವಿಡಿಯೊ ಲಿಂಕ್ ತೆರೆದರೆ ನಿಮ್ಮ ಫೋನ್ ಹ್ಯಾಕ್; ವಾಟ್ಸ್​ಆ್ಯಪ್​ನಲ್ಲಿ ಹರಿದಾಡಿದ್ದು ಸುಳ್ಳು ಸಂದೇಶ

WhatsApp Message Fact Check : ಕಳೆದ ವರ್ಷ ಅರ್ಜೆಂಟಿನಾದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಸಂದೇಶ ವೈರಲ್ ಆಗಿತ್ತು. ಈಗ ಅದೇ ಸಂದೇಶದಲ್ಲಿ ಅರ್ಜೆಂಟಿನಾ ಬದಲು ಭಾರತ ಎಂದು ಬದಲಿಸಿ ಫಾರ್ವರ್ಡ್ ಮಾಡಲಾಗುತ್ತಿದೆ.

Fact Check: India Is Doing It ವಿಡಿಯೊ ಲಿಂಕ್ ತೆರೆದರೆ ನಿಮ್ಮ ಫೋನ್ ಹ್ಯಾಕ್; ವಾಟ್ಸ್​ಆ್ಯಪ್​ನಲ್ಲಿ ಹರಿದಾಡಿದ್ದು ಸುಳ್ಳು ಸಂದೇಶ
ವಾಟ್ಸ್​ಆ್ಯಪ್ ಸಂದೇಶದ ಫ್ಯಾಕ್ಟ್​ಚೆಕ್
Follow us
|

Updated on: Feb 11, 2021 | 3:47 PM

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತೋರಿಸುವ ವಿಡಿಯೊವೊಂದನ್ನು ಅವರು ವಾಟ್ಸ್​ಆ್ಯಪ್​ನಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. India Is Doing It ಎಂಬ ಶೀರ್ಷಿಕೆಯ ಫೈಲ್ ಅದು. ಅದನ್ನು ತೆರೆದು ನೋಡಬೇಡಿ. ಅದು ನಿಮ್ಮ ಫೋನ್ ನ್ನು 10 ಸೆಕೆಂಡ್ ಗಳಲ್ಲಿ ಹ್ಯಾಕ್ ಮಾಡುತ್ತದೆ. ಇದನ್ನು ಯಾವುದೇ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲ. ಈ ಮಾಹಿತಿಯನ್ನು ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸಿ. ಟಿವಿ ಸುದ್ದಿಯಲ್ಲಿಯೂ ಇದೇ ವಿಷಯ ಬಂದಿದೆ ಎಂಬ ಒಕ್ಕಣೆ ಇರುವ ಸಂದೇಶವೊಂದು ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿದೆ.

ಈ ವೈರಲ್ ಸಂದೇಶದ ಫ್ಯಾಕ್ಟ್​ಚೆಕ್ ನಡೆಸಿರುವ ಬೂಮ್​ಲೈವ್ ಇದು ಸುಳ್ಳು ಸಂದೇಶ ಎಂದು ಹೇಳಿದೆ. ಕಳೆದ ವರ್ಷ ಅರ್ಜೆಂಟಿನಾದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದರ ವಿಡಿಯೊ ಲಿಂಕ್ ಕ್ಲಿಕ್ ಮಾಡಿ ನೋಡಿದರೆ 10 ಸೆಕೆಂಡ್​ಗಳಲ್ಲಿ ಫೋನ್ ಹ್ಯಾಕ್ ಆಗುತ್ತದೆ ಎಂಬ ಸಂದೇಶ ಹರಿದಾಡಿತ್ತು. ಇದೀಗ ಅರ್ಜೆಂಟಿನಾ ಬದಲು ಭಾರತ ಎಂದು ಬದಲಿಸಲಾಗಿದೆ.

ಸುಳ್ಳು ಸಂದೇಶ ಎಂದು ಪತ್ತೆ ಹಚ್ಚುವುದು ಹೇಗೆ ನಿಮಗೆ ಬಂದಿರುವ ಸಂದೇಶವನ್ನು ಯಾರು ಕಳಿಸಿದ್ದಾರೆ ಎಂಬುದನ್ನು ಮೊದಲು ನೋಡಿಕೊಳ್ಳಿ. ಈ ಸಂದೇಶ ನಿಜವೇ ಎಂದು ಅವರಲ್ಲಿ ಪ್ರಶ್ನೆ ಕೇಳಿ. ಆಗ ಅವರು ನನಗೆ ಹೀಗೊಂದು ಫಾರ್ವರ್ಡ್ ಸಂದೇಶ ಬಂತು ಅದನ್ನೂ ನಿಮಗೂ ಕಳಿಸಿದ್ದಾರೆ ಎಂದು ಹೇಳಿದರೆ ಆ ಸಂದೇಶವನ್ನು ಕಣ್ಣು ಮುಚ್ಚಿ ನಂಬುವಂತಿಲ್ಲ. ಫಾರ್ವರ್ಡ್ ಮೆಸೇಜ್ ಆಗಿದ್ದರೆ ವಾಟ್ಸ್ಆ್ಯಪ್ ನಲ್ಲಿ ಸಂದೇಶ ಫಾರ್ವರ್ಡ್ ಎಂದು ತೋರಿಸುತ್ತದೆ.

ಆ ಸಂದೇಶವನ್ನು ಗೂಗಲಲ್ಲಿ ಹುಡುಕಿ ನಿಮಗೆ ಬಂದ ಸಂದೇಶದ ವಿಶ್ವಾಸರ್ಹತೆ ಪತ್ತೆ ಹಚ್ಚಲು ಆ ಸಂದೇಶವನ್ನು ಕಾಪಿ ಮಾಡಿ ಗೂಗಲ್ ನಲ್ಲಿ ಹುಡುಕಿ. ಉದಾಹರಣೆಗೆ ಮೇಲಿನ ಸಂದೇಶ India Is Doing It ಎಂಬುದನ್ನು ಗೂಗಲ್ ಮಾಡಿ. ಇದಕ್ಕೆ ಸಂಬಂಧ ಪಟ್ಟ ಸುದ್ದಿಗಳು ನಿಮಗೆ ಸಿಗುತ್ತವೆ. ಈಗಾಗಲೇ ಇದು ಸುಳ್ಳು ಸುದ್ದಿ ಎಂದು ಹೇಳುವ ಫ್ಯಾಕ್ಟ್​ಚೆಕ್ ವರದಿಯ ಲಿಂಕ್ ಗಳನ್ನು ನೀವಿಲ್ಲಿ ಕಾಣಬಹುದು.

Google search

ಗೂಗಲಲ್ಲಿ ಹೀಗೆ ಹುಡುಕಿ

ರೋಚಕತೆಯ ಸಂದೇಶಗಳನ್ನು ಗಮನಿಸಿ ಸಾಮಾನ್ಯವಾಗಿ ಸುಳ್ಳು ಸುದ್ದಿ ಅಥವಾ ಸಂದೇಶಗಳು ರೋಚಕತೆಯಿಂದ ಕೂಡಿರುತ್ತವೆ. ನಿಮಗೆ ಗೊತ್ತಾ? ಹಾಗಾಗುತ್ತದೆ ಹೀಗಾಗುತ್ತದೆ ಎಂಬ ಪದಗಳೊಂದಿಗೆ ಇರುವ ಈ ಸಂದೇಶಗಳು ಇದುವೇ ನಿಜ ಸಂದೇಶ ಎಂದು ನಂಬಿಸಲು ಪ್ರಯತ್ನಿಸುತ್ತಿರುತ್ತವೆ. ಅಷ್ಟೇ ಅಲ್ಲದೆ ಇದು ತುಂಬಾ ಪ್ರಧಾನ ಸಂಗತಿ, ಇದನ್ನು ನಿಮ್ಮ ಕುಟುಂಬದವರಿಗೆ, ಗೆಳೆಯರಿಗೆ ಫಾರ್ವರ್ಡ್ ಮಾಡಿ ಎಂಬ ವಿನಂತಿಯ ಸಾಲುಗಳು ಇರುತ್ತವೆ. ಸಿಕ್ಕಾಪಟ್ಟೆ ಅಕ್ಷರ ದೋಷವಿರುವ, ಸುದ್ದಿಯ ಮೂಲ ಯಾವುದು ಎಂದು ತಿಳಿಸದೆ ಫಾರ್ವರ್ಡ್ ಆಗುವ ಸಂದೇಶಗಳ ಬಗ್ಗೆಯೂ ಎಚ್ಚರದಿಂದಿರಿ.

ಇದನ್ನೂ ಓದಿ: Fact Check | ಮಿಯಾ ಖಲೀಫಾ ಪೋಸ್ಟರ್​ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್  

ಸುಳ್ಳು ಸುದ್ದಿ ಹರಡದಂತೆ ಎಚ್ಚರಿಸಿ ನಿಮಗೆ ಯಾರಾದರೂ ಸುಳ್ಳು ಸುದ್ದಿ ಅಥವಾ ಸಂದೇಶ ಕಳುಹಿಸಿದ್ದರೆ, ಅದರ ಸತ್ಯಾಸತ್ಯತೆ ತಿಳಿಸುವ ಮಾಹಿತಿಗಳೊಂದಿಗೆ ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿ. ಸುಳ್ಳು ಸುದ್ದಿಗಳು ಹರಡಬೇಡಿ ಎಂಬ ಕಿವಿಮಾತು ಕೂಡಾ ಹೇಳಿ.

ತಾಜಾ ಸುದ್ದಿ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ