AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಮ್ಮಗಳು ಹುಟ್ಟಿದ್ದಕ್ಕೆ ಅಜ್ಜ ಫುಲ್​ ಖುಷ್​​; ಮನೆಗೆ ಕರೆದುಕೊಂಡು ಬರಲು ಹೆಲಿಕಾಪ್ಟರ್​ ಸಿದ್ಧ ಮಾಡಿಟ್ಟ ರೈತ !

ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್​ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು.

ಮೊಮ್ಮಗಳು ಹುಟ್ಟಿದ್ದಕ್ಕೆ ಅಜ್ಜ ಫುಲ್​ ಖುಷ್​​; ಮನೆಗೆ ಕರೆದುಕೊಂಡು ಬರಲು ಹೆಲಿಕಾಪ್ಟರ್​ ಸಿದ್ಧ ಮಾಡಿಟ್ಟ ರೈತ !
ಮೊಮ್ಮಗಳನ್ನು ಕರೆತರಲು ಅಜ್ಜ ಬಾಡಿಗೆ ಪಡೆದ ಹೆಲಿಕಾಪ್ಟರ್​
TV9 Web
| Updated By: Lakshmi Hegde|

Updated on:Apr 27, 2022 | 10:59 AM

Share

ಕಾಲ ಮೊದಲಿನಂತೆ ಇಲ್ಲ. ಗಂಡು ಮಗುವೇ ಬೇಕೆಂಬ ಬಯಕೆ ಸ್ವಲ್ಪ ದೂರವಾಗುತ್ತಿದೆ. ಹೆಣ್ಣು ಮಗು ಹುಟ್ಟಿದರೆ ಮನಸ್ಪೂರ್ತಿಯಾಗಿ ಸಂಭ್ರಮಿಸುವ ಜನರು ಹೆಚ್ಚಾಗುತ್ತಿದ್ದಾರೆ. ಹೀಗೆ ಪುಣೆಯಲ್ಲೊಬ್ಬರು ರೈತ ತನಗೆ ಹೆಣ್ಣು ಮೊಮ್ಮಗು ಹುಟ್ಟಿತು ಎಂಬ ಸಂತೋಷಕ್ಕೆ ಸಿಕ್ಕಾಪಟೆ ಖುಷಿಗೊಂಡು, ಆಕೆಯನ್ನು ಕರೆದುಕೊಂಡು ಬರಲು ಒಂದು ಹೆಲಿಕಾಪ್ಟರ್​​ನ್ನೇ ಬಾಡಿಗೆಗೆ ಪಡೆದಿದ್ದಾರೆ.  ಹೆಲಿಕಾಪ್ಟರ್ ಬಾಡಿಗೆ ಪಡೆದವರು, ಬಾಳೆವಾಡಿ ಪ್ರದೇಶದ ನಿವಾಸಿ ಅಜಿತ್​ ಪಾಂಡುರಂಗ ಬಾಲ್ವಾಡ್ಕರ್​ ಎಂಬುವರು. ಸೊಸೆಗೆ ಹೆಣ್ಣು ಮಗು ಹುಟ್ಟಿತು ಎಂಬುದನ್ನು ಸಂಭ್ರಮಿಸುತ್ತಿರುವ ಇವರೀಗ ಮೊಮ್ಮಗಳನ್ನು ಮನೆಗೆ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸದ್ಯ ಸೊಸೆ ತನ್ನ ಮಗುವೊಂದಿಗೆ ತವರು ಮನೆಯಾದ ಶೇವಲ್ ವಾಡಿಯಲ್ಲಿ ಇದ್ದು, ಅವರಿಬ್ಬರನ್ನೂ ಹೆಲಿಕಾಪ್ಟರ್​​ನಲ್ಲಿ ಕರೆದುಕೊಂಡು ಬರಬೇಕು ಎಂಬುದು ಅಜಿತ್​ ಪಾಂಡುರಂಗ ಅವರ ಆಸೆ. ಹೀಗಾಗಿ ಈಗಾಗಲೇ ಹೆಲಿಕಾಪ್ಟರ್​ ಬಾಡಿಗೆ ಪಡೆದು ಸಿದ್ಧವಾಗಿಟ್ಟುಕೊಂಡಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್​ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು. ಈ ಫೋಟೋ, ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದವು. ನಮ್ಮ ಕುಟುಂಬದಲ್ಲಿ ಹುಟ್ಟುತ್ತಿರುವ ಮೊದಲ ಹೆಣ್ಣು ಮಗು ಇದು. ಹೀಗಾಗಿ ಆಕೆಯನ್ನು ತುಂಬ ವಿಶೇಷ ರೀತಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಸುಮಾರು 1 ಲಕ್ಷ ರೂಪಾಯಿ ಕೊಟ್ಟು ಚಾಪರ್ ಸಿದ್ಧಗೊಳಿಸಿದ್ದೇವೆ ಎಂದು ಹೆಣ್ಣು ಮಗುವಿನ ತಂದೆ ವಿಶಾಲ್​ ಜಾರೇಕರ್​ ತಿಳಿಸಿದ್ದರು.

ಇದನ್ನೂ ಓದಿ: ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

Published On - 10:59 am, Wed, 27 April 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ