AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಮ್ಮಗಳು ಹುಟ್ಟಿದ್ದಕ್ಕೆ ಅಜ್ಜ ಫುಲ್​ ಖುಷ್​​; ಮನೆಗೆ ಕರೆದುಕೊಂಡು ಬರಲು ಹೆಲಿಕಾಪ್ಟರ್​ ಸಿದ್ಧ ಮಾಡಿಟ್ಟ ರೈತ !

ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್​ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು.

ಮೊಮ್ಮಗಳು ಹುಟ್ಟಿದ್ದಕ್ಕೆ ಅಜ್ಜ ಫುಲ್​ ಖುಷ್​​; ಮನೆಗೆ ಕರೆದುಕೊಂಡು ಬರಲು ಹೆಲಿಕಾಪ್ಟರ್​ ಸಿದ್ಧ ಮಾಡಿಟ್ಟ ರೈತ !
ಮೊಮ್ಮಗಳನ್ನು ಕರೆತರಲು ಅಜ್ಜ ಬಾಡಿಗೆ ಪಡೆದ ಹೆಲಿಕಾಪ್ಟರ್​
TV9 Web
| Edited By: |

Updated on:Apr 27, 2022 | 10:59 AM

Share

ಕಾಲ ಮೊದಲಿನಂತೆ ಇಲ್ಲ. ಗಂಡು ಮಗುವೇ ಬೇಕೆಂಬ ಬಯಕೆ ಸ್ವಲ್ಪ ದೂರವಾಗುತ್ತಿದೆ. ಹೆಣ್ಣು ಮಗು ಹುಟ್ಟಿದರೆ ಮನಸ್ಪೂರ್ತಿಯಾಗಿ ಸಂಭ್ರಮಿಸುವ ಜನರು ಹೆಚ್ಚಾಗುತ್ತಿದ್ದಾರೆ. ಹೀಗೆ ಪುಣೆಯಲ್ಲೊಬ್ಬರು ರೈತ ತನಗೆ ಹೆಣ್ಣು ಮೊಮ್ಮಗು ಹುಟ್ಟಿತು ಎಂಬ ಸಂತೋಷಕ್ಕೆ ಸಿಕ್ಕಾಪಟೆ ಖುಷಿಗೊಂಡು, ಆಕೆಯನ್ನು ಕರೆದುಕೊಂಡು ಬರಲು ಒಂದು ಹೆಲಿಕಾಪ್ಟರ್​​ನ್ನೇ ಬಾಡಿಗೆಗೆ ಪಡೆದಿದ್ದಾರೆ.  ಹೆಲಿಕಾಪ್ಟರ್ ಬಾಡಿಗೆ ಪಡೆದವರು, ಬಾಳೆವಾಡಿ ಪ್ರದೇಶದ ನಿವಾಸಿ ಅಜಿತ್​ ಪಾಂಡುರಂಗ ಬಾಲ್ವಾಡ್ಕರ್​ ಎಂಬುವರು. ಸೊಸೆಗೆ ಹೆಣ್ಣು ಮಗು ಹುಟ್ಟಿತು ಎಂಬುದನ್ನು ಸಂಭ್ರಮಿಸುತ್ತಿರುವ ಇವರೀಗ ಮೊಮ್ಮಗಳನ್ನು ಮನೆಗೆ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸದ್ಯ ಸೊಸೆ ತನ್ನ ಮಗುವೊಂದಿಗೆ ತವರು ಮನೆಯಾದ ಶೇವಲ್ ವಾಡಿಯಲ್ಲಿ ಇದ್ದು, ಅವರಿಬ್ಬರನ್ನೂ ಹೆಲಿಕಾಪ್ಟರ್​​ನಲ್ಲಿ ಕರೆದುಕೊಂಡು ಬರಬೇಕು ಎಂಬುದು ಅಜಿತ್​ ಪಾಂಡುರಂಗ ಅವರ ಆಸೆ. ಹೀಗಾಗಿ ಈಗಾಗಲೇ ಹೆಲಿಕಾಪ್ಟರ್​ ಬಾಡಿಗೆ ಪಡೆದು ಸಿದ್ಧವಾಗಿಟ್ಟುಕೊಂಡಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್​ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು. ಈ ಫೋಟೋ, ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದವು. ನಮ್ಮ ಕುಟುಂಬದಲ್ಲಿ ಹುಟ್ಟುತ್ತಿರುವ ಮೊದಲ ಹೆಣ್ಣು ಮಗು ಇದು. ಹೀಗಾಗಿ ಆಕೆಯನ್ನು ತುಂಬ ವಿಶೇಷ ರೀತಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಸುಮಾರು 1 ಲಕ್ಷ ರೂಪಾಯಿ ಕೊಟ್ಟು ಚಾಪರ್ ಸಿದ್ಧಗೊಳಿಸಿದ್ದೇವೆ ಎಂದು ಹೆಣ್ಣು ಮಗುವಿನ ತಂದೆ ವಿಶಾಲ್​ ಜಾರೇಕರ್​ ತಿಳಿಸಿದ್ದರು.

ಇದನ್ನೂ ಓದಿ: ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

Published On - 10:59 am, Wed, 27 April 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!