AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2006ರಲ್ಲಿ ನಡೆದಿದ್ದ ಆ ದುರಂತದ ಬಗ್ಗೆ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್​ಐಆರ್​..

ಸಜೀದ್​ ರೈನಾ ಶ್ರೀನಗರ ಮೂಲದ ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸ್ಟೇಟಸ್​ ಹಾಕಿದ ಬಳಿಕ ಅವರಿಗೆ ಪೊಲೀಸರು ಕರೆಮಾಡಿದ್ದರು. ಪೊಲೀಸರು ಕರೆ ಮಾಡುತ್ತಿದ್ದಂತೆ ತಮ್ಮ ಸ್ಟೇಟಸ್​ನ್ನು ಡಿಲೀಟ್ ಮಾಡಿದ್ದಾರೆ.

2006ರಲ್ಲಿ ನಡೆದಿದ್ದ ಆ ದುರಂತದ ಬಗ್ಗೆ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್​ಐಆರ್​..
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 06, 2021 | 5:15 PM

Share

ಜಮ್ಮು-ಕಾಶ್ಮೀರದಲ್ಲಿ 23 ವರ್ಷದ ಪತ್ರಕರ್ತನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎಫ್​ಐಆರ್​ ದಾಖಲಿಸಿದ್ದಾರೆ. ಆತ 2006ರಲ್ಲಿ ನಡೆದಿದ್ದ ಘಟನೆಯೊಂದರ ಬಗ್ಗೆ ವಾಟ್ಸ್​​ಆ್ಯಪ್​​ ಸ್ಟೇಟಸ್​ ಹಾಕಿದ್ದೇ ಇದಕ್ಕೆ ಕಾರಣ. 15ವರ್ಷಗಳ ವಾಲೂರು ಸರೋವರದಲ್ಲಿ ನಡೆದ ದೋಣಿ ದುರಂತದಲ್ಲಿ 22 ಮಕ್ಕಳು ಮೃತಪಟ್ಟಿದ್ದರು. ಅದರ ಫೋಟೋ ಹಾಕಿದ್ದ ಬಂಡೀಪೋರಾದ ಪತ್ರಕರ್ತ, ವಾಲೂರು ಲೇಕ್​ ಹುತಾತ್ಮರು ಎಂದು ಹಾಕಿದ್ದರು. ಅದೇ ಈಗ ಅವರ ವಿರುದ್ಧ ಕೇಸ್​ ದಾಖಲಾಗಲೂ ಕಾರಣ.

ಈ ಪತ್ರಕರ್ತನ ಹೆಸರು ಸಜೀದ್​ ರೈನಾ. ಇವರು ಮೇ 30ರಂದು ವಾಲೂರು ದೋಣಿ ದುರಂತಕ್ಕೆ ಸಂಬಂಧಪಟ್ಟ ವಾಟ್ಸ್​ಆ್ಯಪ್ ಸ್ಟೇಟಸ್​ ಹಾಕಿದ್ದರು. ಈಗ್ಯಾಕೆ ಮತ್ತೆ ಆ ದುರಂತದ ಫೋಟೋ ಹಾಕಿದ್ದಾರೆ ಎಂಬುದು ತನಿಖಾರ್ಹವಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ. ಹಾಗಾಗಿ ವಿಚಾರಣೆ ಅಗತ್ಯವಿದೆ ಎಂದು ಬಂಡಿಪೋರಾ ಠಾಣೆ ಪೊಲೀಸರು ಟ್ವೀಟ್​ ಮಾಡಿದ್ದಾರೆ.

ಸಜೀದ್​ ರೈನಾ ಶ್ರೀನಗರ ಮೂಲದ ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸ್ಟೇಟಸ್​ ಹಾಕಿದ ಬಳಿಕ ಅವರಿಗೆ ಪೊಲೀಸರು ಕರೆಮಾಡಿದ್ದರು. ಪೊಲೀಸರು ಕರೆ ಮಾಡುತ್ತಿದ್ದಂತೆ ತಮ್ಮ ಸ್ಟೇಟಸ್​ನ್ನು ಡಿಲೀಟ್ ಮಾಡಿದ್ದಾರೆ. ವಾಲೂರು ದೋಣಿ ದುರಂತಕ್ಕೆ ಮೇ 30ರಂದು ಸರಿಯಾಗಿ 15 ವರ್ಷ ತುಂಬಿತ್ತು. ಹಾಗಾಗಿ ಅದರಲ್ಲಿ ಮೃತಪಟ್ಟ ಮಕ್ಕಳ ಫೋಟೋವನ್ನು ವಾಟ್ಸ್​ಆ್ಯಪ್ ಸ್ಟೇಟಸ್​​ಗೆ ಹಾಕಿದ್ದೆ. ಸಂಜೆ ಹೊತ್ತಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿದರು. ನಾನು ಸ್ಟೇಟಸ್​ ಹಾಕಿದ್ದರ ಹಿಂದೆ ಯಾವುದೇ ಬೇರೆ ಉದ್ದೇಶವಿಲ್ಲ ಎಂದು ಕ್ಷಮೆ ಕೇಳಿದೆ. ಕೇವಲ 20 ಜನರಷ್ಟೇ ನೋಡಿದ್ದಾಗ ನಾನು ಅದನ್ನು ಡಿಲೀಟ್ ಮಾಡಿದ್ದೆ ಎಂದು ಪತ್ರಕರ್ತ ತಿಳಿಸಿದ್ದಾರೆ. ನಾನಂದುಕೊಂಡೆ ಆ ವಿಷಯ ಅಲ್ಲಿಗೇ ಮುಗಿಯಿತೆಂದು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂಬುದು ಎರಡು ದಿನಗಳ ಬಳಿಕವಷ್ಟೇ ಗೊತ್ತಾಯಿತು ಎಂದು ಹೇಳಿಕೊಂಡಿದ್ದಾರೆ.

ಏನಾಗಿತ್ತು 2006ರಲ್ಲಿ? 2006ರ ಮೇ 30ರಂದು ಹಂದ್ವಾರಾದಲ್ಲಿರುವ ಬರ್ನಿಂಗ್​ ಕ್ಯಾಂಡಲ್​ ಸ್ಕೂಲ್​​ನ ಮಕ್ಕಳು ವಾಲೂರು ನದಿ ದಡಕ್ಕೆ ಪಿಕ್ನಿಕ್​​ಗೆ ಹೋಗಿದ್ದರು. ಅದರಲ್ಲಿ ಒಂದು ಗುಂಪು ಸರೋವರದಲ್ಲಿ ಬೋಟಿಂಗ್​​ಗೆ ಹೋದಾಗ ದೋಣಿ ಮಗುಚಿ 22 ಮಕ್ಕಳು ಮೃತಪಟ್ಟಿದ್ದರು. ಅವತ್ತು ಬೋಟಿಂಗ್​ಗೆ ಕರೆದುಕೊಂಡು ಹೋಗಿದ್ದು ನೌಕಾಪಡೆಯ ಮಾರ್ಕೋಸ್ ಬೋಟ್ ಆಗಿತ್ತು. ಅಂದು ಮೃತಪಟ್ಟವರೆಲ್ಲ 10 ವರ್ಷದ ಒಳಗಿನ ಮಕ್ಕಳೇ ಆಗಿದ್ದರು. ಹೀಗೆ ಮೃತಪಟ್ಟವರ ನೆನಪಲ್ಲಿ ನೌಕಾದಳ, ಹಂದ್ವಾರಾದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗವನ್ನು ಸ್ಥಾಪಿಸಿದೆ.

ಇದನ್ನೂ ಓದಿ: ಲಾಕ್​ಡೌನ್​ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ

Published On - 5:14 pm, Sun, 6 June 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?