AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಟ್ರೇನುಗಳ 2ಎಸ್ ಕೋಚ್​ಗಳು ಇನ್ನುಮುಂದೆ ಅನ್​ರಿಸರ್ವ್ಡ್​ ಕ್ಲಾಸ್ ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್

2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ.

ಎಲ್ಲ ಟ್ರೇನುಗಳ 2ಎಸ್ ಕೋಚ್​ಗಳು ಇನ್ನುಮುಂದೆ ಅನ್​ರಿಸರ್ವ್ಡ್​ ಕ್ಲಾಸ್ ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್
ಇಂಡಿಯನ್ ರೇಲ್ವೇಸ್
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 01, 2022 | 12:10 AM

Share

ನಿಮಗೆ ಗೊತ್ತಿದೆ, ಕೋವಿಡ್-19 ಪಿಡುಗು ರೈಲು ಸಂಚಾರ, ಸೀಟು ಆಥವಾ ಬರ್ತ್​ಗಳ ಬುಕಿಂಗ್ ಮೇಲೂ ಪ್ರಭಾವ ಬೀರಿತ್ತು. ಕೋವಿಡ್ ಸೋಂಕಿನ ಪ್ರಭಾವ ಈಗ ತಗ್ಗಿರುವ ಕಾರಣ ಇಂಡಿಯನ್ ರೇಲ್ವೇಸ್ (Indian Railways) ಎಲ್ಲ ಟ್ರೇನುಗಳು ಮೊದಲು ಅಂಕಿತಗೊಂಡಿದ್ದ ರೈಲುಗಾಡಿಯ ನಂಬರ್ ಅನುಸಾರವಾಗಿಯೇ ಸಂಚಾರ ಆರಂಭಿಸಿವೆ. ಸಾಮಾನ್ಯ ಟ್ರೇನ್​ಗಳಲ್ಲಿ ಮೊದಲಿನ ಹಾಗೆ ಅಂದರೆ, ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಇರುತ್ತಿದ್ದ ಹಾಗೆ ಸಾಮಾನ್ಯ ಕೋಚ್ಗಳನ್ನು (general coaches), ರಿಸರ್ವ್ಡ್ (reserved) (ಕಾಯ್ದಿಟ್ಟ) ಮತ್ತು ಅನ್​ರಿಸರ್ವ್ಡ್​(ಸಾಮಾನ್ಯ) (unreserved) ಎಂದು ಗುರುತಿಲಸಲಾಗಿದೆ. ಇದನ್ನು ಮತ್ತಷ್ಟು ಸರಳ ಭಾಷೆಯಲ್ಲಿ ಹೇಳುವುದಾದರೆ, ಕೋವಿಡ್ ಪಿಡುಗುಗಿಂತ ಮುಂಚೆ ಒಂದು ನಿರ್ದಿಷ್ಟ ಟ್ರೇನು 4 ಅನ್ರಿಸರ್ವ್ಡ್ ಜನರಲ್ ಸೀಟಿಂಗ್ ಕೋಚ್ಗಳನ್ನು ಹೊಂದಿದ್ದರೆ ಅವನ್ನು ಈಗ 2ಎಸ್ (ಸೆಕೆಂಡ್ ಸೀಟಿಂಗ್) ಅನ್​ರಿಸರ್ವ್ಡ್​ ವರ್ಗ (ಕ್ಲಾಸ್) ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ ಅಂತ ರೇಲ್ವೆ ಇಲಾಖೆ ಪ್ರಕಟಣೆಯೊಂದು ತಿಳಿಸುತ್ತದೆ.

2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ. ನೀವು ಸೀಟನ್ನು 120 ದಿನಗಳಷ್ಟು ಮೊದಲು ಮುಂಗಡ ಬುಕಿಂಗ್ ಮಾಡಬಹುದಿತ್ತು. ಅಂದರೆ ಈಗಾಗಲೇ ಬುಕಿಂಗ್ ಆಗಿರುವುದು ಕೊನೆಗೊಂಡ ಕೂಡಲೇ ಈ ಕೋಚ್ ಗಳು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿಬಿಡುತ್ತವೆ.

Railways circular

ರೇಲ್ವೇಸ್ ಪ್ರಕಟಣೆ

ಅಷ್ಟಾಗಿಯೂ ಒಂದು ರೈಲು ಕೆಲ ಜಿಎಸ್​ಸಿಜೆಡ್ ಅಥವಾ ಅದೇ ರೀತಿಯ ಕೋಚ್‌ಗಳನ್ನು ಕಾಯ್ದಿರಿಸಿದ ಎರಡನೇ ಸಿಟ್ಟಿಂಗ್ ಕೋಚ್‌ಗಳಾಗಿ (2S ವರ್ಗ) ಕೋವಿಡ್ ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಓಡುತ್ತಿದ್ದರೆ, ಅವುಗಳು ಈಗಲೂ ಆ ರೈಲುಗಳಲ್ಲಿ ಕಾಯ್ದಿರಿಸಿದ ಸಿಟ್ಟಿಂಗ್ ಕೋಚ್‌ಗಳಾಗಿ ಮುಂದುವರಿಯುತ್ತವೆ.

ರಜಾದಿನ ವಿಶೇಷ (Holiday Special) ಅಥವಾ ಇತರ ವಿಶೇಷ ರೈಲುಗಳಲ್ಲಿ, ಸಾಂಕ್ರಾಮಿಕ ರೋಗದ ಮುಂಚಿನ ಅವಧಿಯಲ್ಲಿ ಚಾಲ್ತಿಯಲ್ಲಿರುವಂತೆ ಸಾಮಾನ್ಯ ಕೋಚ್‌ಗಳನ್ನು ಕಾಯ್ದಿರಿಸಲಾಗಿದೆ ಅಥವಾ ಕಾಯ್ದಿರಿಸಲಾಗಿಲ್ಲ ಅಂತಲೇ ಪರಿಗಣಿಸಲಾಗುವುದು.

ಇದನ್ನೂ ಓದಿ:   ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ