AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಟ್ರೇನುಗಳ 2ಎಸ್ ಕೋಚ್​ಗಳು ಇನ್ನುಮುಂದೆ ಅನ್​ರಿಸರ್ವ್ಡ್​ ಕ್ಲಾಸ್ ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್

2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ.

ಎಲ್ಲ ಟ್ರೇನುಗಳ 2ಎಸ್ ಕೋಚ್​ಗಳು ಇನ್ನುಮುಂದೆ ಅನ್​ರಿಸರ್ವ್ಡ್​ ಕ್ಲಾಸ್ ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್
ಇಂಡಿಯನ್ ರೇಲ್ವೇಸ್
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 01, 2022 | 12:10 AM

Share

ನಿಮಗೆ ಗೊತ್ತಿದೆ, ಕೋವಿಡ್-19 ಪಿಡುಗು ರೈಲು ಸಂಚಾರ, ಸೀಟು ಆಥವಾ ಬರ್ತ್​ಗಳ ಬುಕಿಂಗ್ ಮೇಲೂ ಪ್ರಭಾವ ಬೀರಿತ್ತು. ಕೋವಿಡ್ ಸೋಂಕಿನ ಪ್ರಭಾವ ಈಗ ತಗ್ಗಿರುವ ಕಾರಣ ಇಂಡಿಯನ್ ರೇಲ್ವೇಸ್ (Indian Railways) ಎಲ್ಲ ಟ್ರೇನುಗಳು ಮೊದಲು ಅಂಕಿತಗೊಂಡಿದ್ದ ರೈಲುಗಾಡಿಯ ನಂಬರ್ ಅನುಸಾರವಾಗಿಯೇ ಸಂಚಾರ ಆರಂಭಿಸಿವೆ. ಸಾಮಾನ್ಯ ಟ್ರೇನ್​ಗಳಲ್ಲಿ ಮೊದಲಿನ ಹಾಗೆ ಅಂದರೆ, ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಇರುತ್ತಿದ್ದ ಹಾಗೆ ಸಾಮಾನ್ಯ ಕೋಚ್ಗಳನ್ನು (general coaches), ರಿಸರ್ವ್ಡ್ (reserved) (ಕಾಯ್ದಿಟ್ಟ) ಮತ್ತು ಅನ್​ರಿಸರ್ವ್ಡ್​(ಸಾಮಾನ್ಯ) (unreserved) ಎಂದು ಗುರುತಿಲಸಲಾಗಿದೆ. ಇದನ್ನು ಮತ್ತಷ್ಟು ಸರಳ ಭಾಷೆಯಲ್ಲಿ ಹೇಳುವುದಾದರೆ, ಕೋವಿಡ್ ಪಿಡುಗುಗಿಂತ ಮುಂಚೆ ಒಂದು ನಿರ್ದಿಷ್ಟ ಟ್ರೇನು 4 ಅನ್ರಿಸರ್ವ್ಡ್ ಜನರಲ್ ಸೀಟಿಂಗ್ ಕೋಚ್ಗಳನ್ನು ಹೊಂದಿದ್ದರೆ ಅವನ್ನು ಈಗ 2ಎಸ್ (ಸೆಕೆಂಡ್ ಸೀಟಿಂಗ್) ಅನ್​ರಿಸರ್ವ್ಡ್​ ವರ್ಗ (ಕ್ಲಾಸ್) ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ ಅಂತ ರೇಲ್ವೆ ಇಲಾಖೆ ಪ್ರಕಟಣೆಯೊಂದು ತಿಳಿಸುತ್ತದೆ.

2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ. ನೀವು ಸೀಟನ್ನು 120 ದಿನಗಳಷ್ಟು ಮೊದಲು ಮುಂಗಡ ಬುಕಿಂಗ್ ಮಾಡಬಹುದಿತ್ತು. ಅಂದರೆ ಈಗಾಗಲೇ ಬುಕಿಂಗ್ ಆಗಿರುವುದು ಕೊನೆಗೊಂಡ ಕೂಡಲೇ ಈ ಕೋಚ್ ಗಳು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿಬಿಡುತ್ತವೆ.

Railways circular

ರೇಲ್ವೇಸ್ ಪ್ರಕಟಣೆ

ಅಷ್ಟಾಗಿಯೂ ಒಂದು ರೈಲು ಕೆಲ ಜಿಎಸ್​ಸಿಜೆಡ್ ಅಥವಾ ಅದೇ ರೀತಿಯ ಕೋಚ್‌ಗಳನ್ನು ಕಾಯ್ದಿರಿಸಿದ ಎರಡನೇ ಸಿಟ್ಟಿಂಗ್ ಕೋಚ್‌ಗಳಾಗಿ (2S ವರ್ಗ) ಕೋವಿಡ್ ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಓಡುತ್ತಿದ್ದರೆ, ಅವುಗಳು ಈಗಲೂ ಆ ರೈಲುಗಳಲ್ಲಿ ಕಾಯ್ದಿರಿಸಿದ ಸಿಟ್ಟಿಂಗ್ ಕೋಚ್‌ಗಳಾಗಿ ಮುಂದುವರಿಯುತ್ತವೆ.

ರಜಾದಿನ ವಿಶೇಷ (Holiday Special) ಅಥವಾ ಇತರ ವಿಶೇಷ ರೈಲುಗಳಲ್ಲಿ, ಸಾಂಕ್ರಾಮಿಕ ರೋಗದ ಮುಂಚಿನ ಅವಧಿಯಲ್ಲಿ ಚಾಲ್ತಿಯಲ್ಲಿರುವಂತೆ ಸಾಮಾನ್ಯ ಕೋಚ್‌ಗಳನ್ನು ಕಾಯ್ದಿರಿಸಲಾಗಿದೆ ಅಥವಾ ಕಾಯ್ದಿರಿಸಲಾಗಿಲ್ಲ ಅಂತಲೇ ಪರಿಗಣಿಸಲಾಗುವುದು.

ಇದನ್ನೂ ಓದಿ:   ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!

Follow Us
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ