AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಬದುಕಿದ್ದೇನೆ: ವ್ಯಕ್ತಿ ಸತ್ತಿದ್ದಾರೆ ಅಂದುಕೊಂಡ 6 ತಿಂಗಳ ಬಳಿಕ ಪೊಲೀಸ್​ ಠಾಣೆಗೆ ಬಂತೊಂದು ಪತ್ರ

ನಾನು ಬದುಕಿದ್ದೇನೆ ಸರ್ ಸತ್ತಿಲ್ಲ, ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ 6 ತಿಂಗಳ ಬಳಿಕ ಪೊಲೀಸ್​ ಠಾಣೆಗೆ ಒಂದು ಪತ್ರ ಬಂದಿತ್ತು.

ನಾನು ಬದುಕಿದ್ದೇನೆ: ವ್ಯಕ್ತಿ ಸತ್ತಿದ್ದಾರೆ ಅಂದುಕೊಂಡ 6 ತಿಂಗಳ ಬಳಿಕ ಪೊಲೀಸ್​ ಠಾಣೆಗೆ ಬಂತೊಂದು ಪತ್ರ
ಪೊಲೀಸ್​ Image Credit source: India.com
ನಯನಾ ರಾಜೀವ್
|

Updated on:May 02, 2023 | 8:19 AM

Share

ನಾನು ಬದುಕಿದ್ದೇನೆ ಸರ್ ಸತ್ತಿಲ್ಲ, ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ 6 ತಿಂಗಳ ಬಳಿಕ ಪೊಲೀಸ್​ ಠಾಣೆಗೆ ಒಂದು ಪತ್ರ ಬಂದಿತ್ತು. ಆರು ತಿಂಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ಬಿಹಾರದ ವ್ಯಕ್ತಿ ಗಾಜಿಯಾಬಾದ್​ನಲ್ಲಿ ಪತ್ತೆಯಾಗಿದ್ದಾರೆ. ಸೋನು ಕುಮಾರ್ ಶ್ರೀವಾಸ್ತವ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಡಿಜಿಪಿ, ಗೋಪಾಲ್​ಗಂಜ್ ಹಾಗೂ ಎಸ್​ಎಚ್​ಒ ಡಿಯೋರಿಯಾ ಪೊಲೀಸ್​ ಠಾಣೆಗೆ ಪತ್ರ ಬಂದಿತ್ತು. ನಾನು ಜೀವಂತವಾಗಿದ್ದೇನೆ ಮತ್ತು ಗಾಜಿಯಾಬಾದ್​ನಲ್ಲಿ ಪತ್ನಿಯೊಂದಿಗೆ ವಾಸವಿದ್ದೇನೆ ಎಂದು ಬರೆದಿದ್ದಾರೆ, ಫೋಟೊವನ್ನು ಕೂಡ ಕಳುಹಿಸಿದ್ದಾರೆ.

ಪಕ್ಕದ ಹಳ್ಳಿಯ ನೀಲಂ ಕುಮಾರಿ ಎಂಬಾಕೆ ಜತೆಗೆ ಓಡಿ ಹೋಗಿ ಗಾಜಿಯಾಬಾದ್​ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಹಾಗೂ ಕೊಲೆ ಪ್ರಕರಣ ಸುಳ್ಳು ಎಂದು ಹೇಳಿದ್ದಾರೆ. 5 ತಿಂಗಳ ಹಿಂದೆ ಸೋನು ನಾಪತ್ತೆಯಾಗಿದ್ದರು, ಕೆಲವು ವಸ್ತುಗಳನ್ನು ಖರೀದಿಸಲು ಪಾಟ್ನಾಗೆ ಹೋಗಿದ್ದರು, ಆದರೆ ಮನೆಗೆ ಹಿಂದಿರುಗಿರಲಿಲ್ಲ, ಎರಡು ದಿನಗಳ ನಂತರ ಡಿಯೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹವೊಂದು ಕತ್ತು ಸೀಳಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮತ್ತಷ್ಟು ಓದಿ: Bihar: 3 ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

ಆತನ ತಂದೆ ಹಾಗೂ ಕುಟುಂಬ ಸದಸ್ಯರು ಶವವನ್ನು ಗುರುತಿಸಿ ಅಪಹರಣ ಹಾಗೂ ಕೊಲೆಯ ಎಫ್​ಐಆರ್​ ದಾಖಲಿಸಿದ್ದರು. ಸೋನು ಅವರು ಪೊಲೀಸರಿಗೆ ಬರೆದ ಪತ್ರದ ಪ್ರಕಾರ, ಪಾಟ್ನಾದಿಂದ ಕೆಲವು ಸರಕುಗಳನ್ನು ಖರೀದಿಸಲು 50 ಸಾವಿರ ರೂ, ತೆಗೆದುಕೊಂಡು ಬಸ್ ಹತ್ತಿದ್ದರು, ಡಿಯೋರಿಯಾ ಚೌಕ್​ ತಲುಪಿದಾಗ ಯಾರೋ ಕರೆ ಮಾಡಿದ್ದಕ್ಕೆ ಅವರು ಬಸ್​ ಇಂದ ಇಳಿದಿದ್ದರು.

ಕೆಲ ಮೀಟರ್​ಗಳಷ್ಟು ನಡೆದ ನಂತರ ಕಣ್ಮರೆಯಾದರು, ಕೊನೆಯ ಮೊಬೈಲ್ ಕರೆ ಲೊಕೇಷನ್​ ಆಧಾರದ ಮೇಲೆ ಶೋಧ ನಡೆಸಲಾಯಿತು, ಮೃತ ದೇಹವನ್ನು ಶ್ರೀವಾಸ್ತವ್​ದು ಎಂದು ಪೋಷಕರು ಹೇಳಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಈಗ ಅವರ ಸಂದೇಶವನ್ನು ಕುಟುಂಬಕ್ಕೆ ರವಾನಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:19 am, Tue, 2 May 23

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!