Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘಾಜಿಯಾಬಾದ್: ಗೆಳೆಯರ ಹುಡುಗಾಟಕ್ಕೆ ಯುವಕನ ಕರುಳು ಛಿದ್ರ

ಘಾಜಿಯಾಬಾದ್​ನಲ್ಲಿ ತಮಾಷೆಗೆಂದು ಈರ್ವರು ಗೆಳೆಯರು 28 ವರ್ಷದ ಯುವಕನ ಗುಪ್ತಾಂಗಕ್ಕೆ ಏರ್ ಕಂಪ್ರೆಸರ್​ ಅನ್ನು ಹಾಕಿದ್ದರಿಂದ ಆತನ ಕರುಳಿನ ಭಾಗವು ಗಂಭೀರವಾಗಿ ಹಾನಿಗೊಳಗಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೆಳೆಯರನ್ನು ಬಂಧಿಸಿದ್ದಾರೆ.

ಘಾಜಿಯಾಬಾದ್: ಗೆಳೆಯರ ಹುಡುಗಾಟಕ್ಕೆ ಯುವಕನ ಕರುಳು ಛಿದ್ರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 03, 2021 | 8:45 PM

ಘಾಜಿಯಾಬಾದ್​ನಲ್ಲಿ ತಮಾಷೆಗೆಂದು ಈರ್ವರು ಗೆಳೆಯರು 28 ವರ್ಷದ ಯುವಕನ ಗುಪ್ತಾಂಗಕ್ಕೆ ಏರ್ ಕಂಪ್ರೆಸರ್​ ಅನ್ನು ಹಾಕಿದ್ದರಿಂದ ಆತನ ಕರುಳಿನ ಭಾಗವು ಗಂಭೀರವಾಗಿ ಹಾನಿಗೊಳಗಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಕೃತ್ಯಕ್ಕೆ ಒಳಗಾಗಿರುವ ಸಂದೀಪ್ ಎಂಬ ಯುವಕ ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಆತ ಗುಣಮುಖನಾಗಲು ಆರು ತಿಂಗಳೇ ಬೇಕಾಗಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಯುವಕನ ಸ್ನೇಹಿತರಾದ ಅಂಕಿತ್ ಮತ್ತು ಗೌತಮ್ ಎಂಬ ಈರ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ನೋಯ್ಡಾದಲ್ಲಿ ಹಾನಿಗೊಳಗಾದ ಯುವಕನೊಂದಿಗೆ ಲಘು ಆಹಾರಗಳನ್ನು ತಯಾರಿಸುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಅಂಕಿತ್ ಮತ್ತು ಗೌತಮ್ ಏರ್ ಕಂಪ್ರೆಸರ್​ ಪೈಪ್​ಅನ್ನು ತಮಾಷೆಗೆಂದು ಸಂದೀಪ್ ಅವರ ಗುಪ್ತಾಂಗಕ್ಕೆ ಹಾಕಿ ಅದರಿಂದ ಪ್ರೆಶರ್ ರಿಲೀಸ್ ಮಾಡಿದ್ದಾರೆ. ಈ ನಡುವೆ ಸಂದೀಪ್ ಓಡಲು ಪ್ರಯತ್ನಿಸಿದರೂ ತಕ್ಷಣವೇ ರಕ್ತ ವಾಂತಿಯಾಗಲು ಪ್ರಾರಂಭವಾಗಿದೆ. ಸ್ಥಳದಲ್ಲಿದ್ದವರೆಲ್ಲರೂ ದೌಡಾಯಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಂದೀಪ್​ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಂದೀಪ್​ನನ್ನು ಆಸ್ಪತ್ರೆಗೆ ಕರೆತರುವಾಗ ಆತನ ಹೊಟ್ಟೆ ಊದಿಕೊಂಡಿತ್ತು. ಸಣ್ಣ ಕರುಳು ಹಾಗೂ ಗುಪ್ತಾಂಗವು ಛಿದ್ರಗೊಂಡಿತ್ತು ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕಾಶ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಅರುಣಾ ರೆಡ್ಡಿ ತಿಳಿಸಿದ್ದಾರೆ. ಆತನ ಗೆಳೆಯರನ್ನು ಬಂಧಿಸಿರುವ ಪೊಲೀಸರು ಐಪಿಸಿ 307(ಕೊಲೆಗೆ ಯತ್ನ) ಮತ್ತು ಐಪಿಸಿ 323 (ಸ್ವಯಂಪ್ರೇರಣೆಯಿಂದ ಹಾನಿಗೆ ಯತ್ನ)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹರಿಹರದಲ್ಲಿ 3 ವರ್ಷದ ಹೆಣ್ಣು ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ

ಕೊವಿಡ್​ 19 ಮಾತ್ರೆಯೆಂದು ವಿಷದ ಮಾತ್ರೆ ಕೊಟ್ಟು ಮೂವರ ಹತ್ಯೆ; ಆರೋಗ್ಯ ಕಾರ್ಯಕರ್ತೆಯೂ ಕೊಲೆ ಸಂಚಿನಲ್ಲಿ ಭಾಗಿ

(Ghaziabad Man’s intestines burst when friends inserted air compressor)

ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ