AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಸೇರಿದ 10 ಶಾಸಕರ ಅನರ್ಹತೆ ಬಗ್ಗೆ ಏಪ್ರಿಲ್ 20ಕ್ಕೆ ಗೋವಾ ಸ್ಪೀಕರ್ ನಿರ್ಣಯ

Goa Politics: ಏಪ್ರಿಲ್ 20ಕ್ಕೆ ಸ್ಪೀಕರ್ ಆದೇಶ ನೀಡುತ್ತಾರೆ, ಏಪ್ರಿಲ್ 21ಕ್ಕೆ ನಾವು ವಿಚಾರಣೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರ ಒಳಗೆ ತೀರ್ಪು ನಿರೀಕ್ಷಿಸಬಹುದು ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು.

ಬಿಜೆಪಿಗೆ ಸೇರಿದ 10 ಶಾಸಕರ ಅನರ್ಹತೆ ಬಗ್ಗೆ ಏಪ್ರಿಲ್ 20ಕ್ಕೆ ಗೋವಾ ಸ್ಪೀಕರ್ ನಿರ್ಣಯ
ಸುಪ್ರೀಂ ಕೋರ್ಟ್​
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 07, 2021 | 3:44 PM

Share

ದೆಹಲಿ: ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದ 10 ಶಾಸಕರ ಬಗ್ಗೆ ನಡೆಯುತ್ತಿರುವ ಅನರ್ಹತೆ ವಿಚಾರಣೆಯ ಅಂತಿಮ ಆದೇಶವನ್ನು ಏಪ್ರಿಲ್ 20ಕ್ಕೆ ನೀಡುತ್ತೇನೆ ಎಂದು ಗೋವಾ ವಿಧಾನಸಭೆಯ ಸ್ಪೀಕರ್ ರಾಜೇಶ್​ ಪಟ್ನೇಕರ್ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು ಗೋವಾ ಸ್ಪೀಕರ್ ನೀಡಿದ ಅಂತಿಮ ದಿನಾಂಕದ ಮಾಹಿತಿಯನ್ನು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬಡೆ ಎರಡು ಬಾರಿ ತಳ್ಳಿಹಾಕಿದ್ದರು.

ವಿಚಾರಣೆ ಆರಂಭವಾದಾಗ ಗೋವಾ ಸ್ಪೀಕರ್ ಪರವಾಗಿ ನ್ಯಾಯಾಲಯ ಸಭಾಂಗಣದಲ್ಲಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಸಕರ ವಿಚಾರಣೆ ಕುರಿತು ಸ್ಪೀಕರ್​ ಏಪ್ರಿಲ್ 29ರಂದು ಅಂತಿಮ ಆದೇಶ ಹೊರಡಿಸಲಿದ್ದಾರೆ ಎಂದರು. ಆದರೆ ಈ ದಿನಾಂಕವನ್ನು ಮುಖ್ಯನ್ಯಾಯಮೂರ್ತಿ ಒಪ್ಪಿಕೊಳ್ಳಲಿಲ್ಲ. ಅಷ್ಟು ತಡ ಏಕೆ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

‘ಎರಡು ವಾರಗಳ ಒಳಗೆ ತೀರ್ಪು ನೀಡಲು ಸಾಧ್ಯವೇ ಎಂದು ಸ್ಪೀಕರ್​ ಅವರನ್ನು ಕೇಳಿನೋಡಿ’ ಎಂದು ತುಷಾರ್ ಮೆಹ್ತಾರಿಗೆ ಮುಖ್ಯ ನ್ಯಾಯಮೂರ್ತಿ ಬೊಬಡೆ ಸೂಚಿಸಿದರು. ‘ಏಪ್ರಿಲ್ 22ಕ್ಕೆ ಸ್ಪೀಕರ್ ನೀಡುತ್ತಾರೆ’ ಎಂದು ತುಷಾರ್ ಮೆಹ್ತಾ ಉತ್ತರಿಸಿದರು. ಆದರೆ ಈ ದಿನಾಂಕಕ್ಕೂ ನ್ಯಾಯಮೂರ್ತಿ ಒಪ್ಪಿಕೊಳ್ಳಲಿಲ್ಲ. ಏಪ್ರಿಲ್ 20ರ ಒಳಗೆ ತೀರ್ಪು ನೀಡಲು ಸ್ಪೀಕರ್​ಗೆ ಸಾಧ್ಯವೇ ಎಂದು ಕೇಳಿನೋಡಲು ಸೂಚಿಸಿದರು. ಇದಕ್ಕೆ ತುಷಾರ್ ಮೆಹ್ತಾ ಒಪ್ಪಿಕೊಂಡರು.

‘ಏಪ್ರಿಲ್ 20ಕ್ಕೆ ಸ್ಪೀಕರ್ ಆದೇಶ ನೀಡುತ್ತಾರೆ, ಏಪ್ರಿಲ್ 21ಕ್ಕೆ ನಾವು ವಿಚಾರಣೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರ ಒಳಗೆ ತೀರ್ಪು ನಿರೀಕ್ಷಿಸಬಹುದು’ ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು. ಜುಲೈ 2019ರಂದು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ 10 ಶಾಸಕರನ್ನು ಅನರ್ಹಗೊಳಿಸುವಂತೆ ನೀಡಿದ್ದ ಮನವಿಯ ಬಗ್ಗೆ ಶೀಘ್ರ ವಿಚಾರಣೆ ನಡೆಸಲು ಗೋವಾ ವಿಧಾನಸಭೆಯ ಸ್ಪೀಕರ್​ಗೆ ಸೂಚಿಸಬೇಕು ಎಂದು ಕೋರಿ ಕಾಂಗ್ರೆಸ್ ಗೋವಾ ಘಟಕದ ಅಧ್ಯಕ್ಷ ಗಿರೀಶ್ ಚೋಡಾಂಕರ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಪಕ್ಷಾಂತರದ ನಂತರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಥಾನವು ಕೇವಲ 5ಕ್ಕೆ ಇಳಿಯಿತು. ಈ ಶಾಸಕರು ಮೂಲ ಪಕ್ಷದ ಜೊತೆಗೆ ವಿಲೀನಗೊಂಡಿಲ್ಲ. ಹೀಗಾಗಿ ಇದು ಸಂವಿಧಾನದ 10ನೇ ಅನುಚ್ಛೇದದ ಅನ್ವಯ ಪಕ್ಷಾಂತರವಾಗುತ್ತದೆ ಎಂದು ಕಾಂಗ್ರೆಸ್​ ವಾದಿಸಿತ್ತು.

ಪಕ್ಷಾಂತರ ನಿಷೇಧ ಕಾನೂನಿನ ಪ್ರಕಾರ ಶಾಸಕಾಂಗ ಪಕ್ಷದ ಮೂರನೇ ಎರಡು ಭಾಗದಷ್ಟು ಸಂಖ್ಯೆಯ ಶಾಸಕರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ. ಹೀಗೆ ಆದ ಪಕ್ಷದಲ್ಲಿ ಅವರ ಶಾಸಕಸ್ಥಾನ ಅನರ್ಹಗೊಳ್ಳುವುದಿಲ್ಲ. ಈ ಕಾಯ್ದೆಗೆ ಜನವರಿ 2004ರಂದು ತಂದ ತಿದ್ದುಪಡಿ ಪ್ರಕಾರ ಶಾಸಕಾಂಗ ಪಕ್ಷದಿಂದ ಸಿಡಿದು ಮತ್ತೊಂದು ಪಕ್ಷದ ಜೊತೆಗೆ ಗುರುತಿಸಿಕೊಂಡರೆ ಮಾನ್ಯತೆ ಸಿಗುವುದಿಲ್ಲ.

ಗೋವಾ ವಿಧಾನಸಭೆಯ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಕಾವ್​ಲೆಕಾರ್ ಜುಲೈ 19ರಂದು ಇತರ ಒಂಬತ್ತು ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಚಂದ್ರಕಾಂತ್​ ಜೊತೆಗೆ ಅಟನಸಿಯೊ ಮೊನ್ಸೆರಟೆ, ಜೆನ್ನಿಫರ್ ಮೊನ್ಸೆರಟೆ, ಫಿಲಿಪ್ ನೆರಿ ರೊಡ್ರಿಗಸ್, ನೀಲ್​ಕಾಂತ್ ಹರ್ಲಂಕರ್, ಫ್ರಾನ್ಸಿಸ್ಕೊ ಸಿಲ್​ವರೆರಿಯಾ, ಕ್ಲಾಫಸಿಯೊ ಡಯಾಸ್, ಇಸಿದೊರ್ ಫರ್ನಾಂಡಿಸ್, ವಿಲ್​ಫ್ರೆಡ್ ಡಿಸೋಜಾ ಮತ್ತು ಟೊನಿ ಫರ್ನಾಂಡಿಸ್​ ಕಾಂಗ್ರೆಸ್​ ತೊರೆದಿದ್ದರು. ಈ 10 ಶಾಸಕರೂ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದರಿಂದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 27ಕ್ಕೆ ಏರಿಕೆಯಾಗಿತ್ತು.

(Goa Speaker to decide on disqualification of 10 MLAs who joined BJP on April 20)

ಇದನ್ನೂ ಓದಿ: ಬುದ್ಧಿಜೀವಿಗಳೇ ಗೋವಾಕ್ಕೆ ಬನ್ನಿ, ಏಕರೂಪ ನಾಗರಿಕ ಸಂಹಿತೆ ಇಲ್ಲಿ ಹೇಗೆ ಕೆಲಸ ಮಾಡುತ್ತೆ ನೋಡಿ: ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಕರೆ

ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ

Follow Us
Ghanashyam D M | ಡಿ.ಎಂ.ಘನಶ್ಯಾಮ
Ghanashyam D M | ಡಿ.ಎಂ.ಘನಶ್ಯಾಮ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!