AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಸೇರಿದ 10 ಶಾಸಕರ ಅನರ್ಹತೆ ಬಗ್ಗೆ ಏಪ್ರಿಲ್ 20ಕ್ಕೆ ಗೋವಾ ಸ್ಪೀಕರ್ ನಿರ್ಣಯ

Goa Politics: ಏಪ್ರಿಲ್ 20ಕ್ಕೆ ಸ್ಪೀಕರ್ ಆದೇಶ ನೀಡುತ್ತಾರೆ, ಏಪ್ರಿಲ್ 21ಕ್ಕೆ ನಾವು ವಿಚಾರಣೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರ ಒಳಗೆ ತೀರ್ಪು ನಿರೀಕ್ಷಿಸಬಹುದು ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು.

ಬಿಜೆಪಿಗೆ ಸೇರಿದ 10 ಶಾಸಕರ ಅನರ್ಹತೆ ಬಗ್ಗೆ ಏಪ್ರಿಲ್ 20ಕ್ಕೆ ಗೋವಾ ಸ್ಪೀಕರ್ ನಿರ್ಣಯ
ಸುಪ್ರೀಂ ಕೋರ್ಟ್​
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 07, 2021 | 3:44 PM

Share

ದೆಹಲಿ: ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದ 10 ಶಾಸಕರ ಬಗ್ಗೆ ನಡೆಯುತ್ತಿರುವ ಅನರ್ಹತೆ ವಿಚಾರಣೆಯ ಅಂತಿಮ ಆದೇಶವನ್ನು ಏಪ್ರಿಲ್ 20ಕ್ಕೆ ನೀಡುತ್ತೇನೆ ಎಂದು ಗೋವಾ ವಿಧಾನಸಭೆಯ ಸ್ಪೀಕರ್ ರಾಜೇಶ್​ ಪಟ್ನೇಕರ್ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು ಗೋವಾ ಸ್ಪೀಕರ್ ನೀಡಿದ ಅಂತಿಮ ದಿನಾಂಕದ ಮಾಹಿತಿಯನ್ನು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬಡೆ ಎರಡು ಬಾರಿ ತಳ್ಳಿಹಾಕಿದ್ದರು.

ವಿಚಾರಣೆ ಆರಂಭವಾದಾಗ ಗೋವಾ ಸ್ಪೀಕರ್ ಪರವಾಗಿ ನ್ಯಾಯಾಲಯ ಸಭಾಂಗಣದಲ್ಲಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಸಕರ ವಿಚಾರಣೆ ಕುರಿತು ಸ್ಪೀಕರ್​ ಏಪ್ರಿಲ್ 29ರಂದು ಅಂತಿಮ ಆದೇಶ ಹೊರಡಿಸಲಿದ್ದಾರೆ ಎಂದರು. ಆದರೆ ಈ ದಿನಾಂಕವನ್ನು ಮುಖ್ಯನ್ಯಾಯಮೂರ್ತಿ ಒಪ್ಪಿಕೊಳ್ಳಲಿಲ್ಲ. ಅಷ್ಟು ತಡ ಏಕೆ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

‘ಎರಡು ವಾರಗಳ ಒಳಗೆ ತೀರ್ಪು ನೀಡಲು ಸಾಧ್ಯವೇ ಎಂದು ಸ್ಪೀಕರ್​ ಅವರನ್ನು ಕೇಳಿನೋಡಿ’ ಎಂದು ತುಷಾರ್ ಮೆಹ್ತಾರಿಗೆ ಮುಖ್ಯ ನ್ಯಾಯಮೂರ್ತಿ ಬೊಬಡೆ ಸೂಚಿಸಿದರು. ‘ಏಪ್ರಿಲ್ 22ಕ್ಕೆ ಸ್ಪೀಕರ್ ನೀಡುತ್ತಾರೆ’ ಎಂದು ತುಷಾರ್ ಮೆಹ್ತಾ ಉತ್ತರಿಸಿದರು. ಆದರೆ ಈ ದಿನಾಂಕಕ್ಕೂ ನ್ಯಾಯಮೂರ್ತಿ ಒಪ್ಪಿಕೊಳ್ಳಲಿಲ್ಲ. ಏಪ್ರಿಲ್ 20ರ ಒಳಗೆ ತೀರ್ಪು ನೀಡಲು ಸ್ಪೀಕರ್​ಗೆ ಸಾಧ್ಯವೇ ಎಂದು ಕೇಳಿನೋಡಲು ಸೂಚಿಸಿದರು. ಇದಕ್ಕೆ ತುಷಾರ್ ಮೆಹ್ತಾ ಒಪ್ಪಿಕೊಂಡರು.

‘ಏಪ್ರಿಲ್ 20ಕ್ಕೆ ಸ್ಪೀಕರ್ ಆದೇಶ ನೀಡುತ್ತಾರೆ, ಏಪ್ರಿಲ್ 21ಕ್ಕೆ ನಾವು ವಿಚಾರಣೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರ ಒಳಗೆ ತೀರ್ಪು ನಿರೀಕ್ಷಿಸಬಹುದು’ ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು. ಜುಲೈ 2019ರಂದು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ 10 ಶಾಸಕರನ್ನು ಅನರ್ಹಗೊಳಿಸುವಂತೆ ನೀಡಿದ್ದ ಮನವಿಯ ಬಗ್ಗೆ ಶೀಘ್ರ ವಿಚಾರಣೆ ನಡೆಸಲು ಗೋವಾ ವಿಧಾನಸಭೆಯ ಸ್ಪೀಕರ್​ಗೆ ಸೂಚಿಸಬೇಕು ಎಂದು ಕೋರಿ ಕಾಂಗ್ರೆಸ್ ಗೋವಾ ಘಟಕದ ಅಧ್ಯಕ್ಷ ಗಿರೀಶ್ ಚೋಡಾಂಕರ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಪಕ್ಷಾಂತರದ ನಂತರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಥಾನವು ಕೇವಲ 5ಕ್ಕೆ ಇಳಿಯಿತು. ಈ ಶಾಸಕರು ಮೂಲ ಪಕ್ಷದ ಜೊತೆಗೆ ವಿಲೀನಗೊಂಡಿಲ್ಲ. ಹೀಗಾಗಿ ಇದು ಸಂವಿಧಾನದ 10ನೇ ಅನುಚ್ಛೇದದ ಅನ್ವಯ ಪಕ್ಷಾಂತರವಾಗುತ್ತದೆ ಎಂದು ಕಾಂಗ್ರೆಸ್​ ವಾದಿಸಿತ್ತು.

ಪಕ್ಷಾಂತರ ನಿಷೇಧ ಕಾನೂನಿನ ಪ್ರಕಾರ ಶಾಸಕಾಂಗ ಪಕ್ಷದ ಮೂರನೇ ಎರಡು ಭಾಗದಷ್ಟು ಸಂಖ್ಯೆಯ ಶಾಸಕರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ. ಹೀಗೆ ಆದ ಪಕ್ಷದಲ್ಲಿ ಅವರ ಶಾಸಕಸ್ಥಾನ ಅನರ್ಹಗೊಳ್ಳುವುದಿಲ್ಲ. ಈ ಕಾಯ್ದೆಗೆ ಜನವರಿ 2004ರಂದು ತಂದ ತಿದ್ದುಪಡಿ ಪ್ರಕಾರ ಶಾಸಕಾಂಗ ಪಕ್ಷದಿಂದ ಸಿಡಿದು ಮತ್ತೊಂದು ಪಕ್ಷದ ಜೊತೆಗೆ ಗುರುತಿಸಿಕೊಂಡರೆ ಮಾನ್ಯತೆ ಸಿಗುವುದಿಲ್ಲ.

ಗೋವಾ ವಿಧಾನಸಭೆಯ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಕಾವ್​ಲೆಕಾರ್ ಜುಲೈ 19ರಂದು ಇತರ ಒಂಬತ್ತು ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಚಂದ್ರಕಾಂತ್​ ಜೊತೆಗೆ ಅಟನಸಿಯೊ ಮೊನ್ಸೆರಟೆ, ಜೆನ್ನಿಫರ್ ಮೊನ್ಸೆರಟೆ, ಫಿಲಿಪ್ ನೆರಿ ರೊಡ್ರಿಗಸ್, ನೀಲ್​ಕಾಂತ್ ಹರ್ಲಂಕರ್, ಫ್ರಾನ್ಸಿಸ್ಕೊ ಸಿಲ್​ವರೆರಿಯಾ, ಕ್ಲಾಫಸಿಯೊ ಡಯಾಸ್, ಇಸಿದೊರ್ ಫರ್ನಾಂಡಿಸ್, ವಿಲ್​ಫ್ರೆಡ್ ಡಿಸೋಜಾ ಮತ್ತು ಟೊನಿ ಫರ್ನಾಂಡಿಸ್​ ಕಾಂಗ್ರೆಸ್​ ತೊರೆದಿದ್ದರು. ಈ 10 ಶಾಸಕರೂ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದರಿಂದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 27ಕ್ಕೆ ಏರಿಕೆಯಾಗಿತ್ತು.

(Goa Speaker to decide on disqualification of 10 MLAs who joined BJP on April 20)

ಇದನ್ನೂ ಓದಿ: ಬುದ್ಧಿಜೀವಿಗಳೇ ಗೋವಾಕ್ಕೆ ಬನ್ನಿ, ಏಕರೂಪ ನಾಗರಿಕ ಸಂಹಿತೆ ಇಲ್ಲಿ ಹೇಗೆ ಕೆಲಸ ಮಾಡುತ್ತೆ ನೋಡಿ: ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಕರೆ

ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ

ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!