AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banjara hills: ಛೇ ಇವನೆಂಥಾ ಮನುಷ್ಯ.. ಮದ್ಯ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊಮ್ಮಗನನ್ನೇ ಮಾರಿಬಿಟ್ಟಿದ್ದಾನೆ!

ಮನೆಯಲ್ಲಿ ಮೊಮ್ಮಗು ಸಂಭ್ರಮ, ಕೆಲಸಗಳು ನಡೆಯುತ್ತಿದ್ದಾಗ ಖಲೀಲ್ ಸದ್ದು ಮಾಡದೆ ಮೊಮ್ಮಗನನ್ನು ಎತ್ತಿಕೊಂಡು ಹೊರಹೋಗಿದ್ದಾನೆ. ಕೊನೆಗೆ ಆ ಮಗುವನ್ನು ದಾರಿಯಲ್ಲಿ ಯಾರಿಗೋ ಮಾರಿ ಬಂದ ಹಣದಲ್ಲಿ ಮದ್ಯ ಸೇವಿಸಿದ್ದಾನೆ.

Banjara hills: ಛೇ ಇವನೆಂಥಾ ಮನುಷ್ಯ.. ಮದ್ಯ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊಮ್ಮಗನನ್ನೇ ಮಾರಿಬಿಟ್ಟಿದ್ದಾನೆ!
ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊಮ್ಮಗನನ್ನೇ ಮಾರಿಬಿಟ್ಟಿದ್ದಾನೆ!
ಸಾಧು ಶ್ರೀನಾಥ್​
|

Updated on:May 17, 2023 | 2:37 PM

Share

ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆ ನಡೆದಿದೆ. ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ತನ್ನ ಮೊಮ್ಮಗನನ್ನೇ ಮದ್ಯಕ್ಕಾಗಿ ಮಾರಾಟ ಮಾಡಿರುವ ಆಘಾತಕಾರಿ ಪ್ರಸಂಗ ನಡೆದಿದೆ. ವಿವರಕ್ಕೆ ಹೋಗುವುದಾದರೆ ಹಕೀಂಪೇಟೆಯಲ್ಲಿ ಖಲೀಲ್ (40) ಎಂಬುವರು ವಾಸವಾಗಿದ್ದಾರೆ. ಕುಡಿತದ ವ್ಯಸನಿಯಾಗಿದ್ದ ಖಲೀಲ್, ಆಗಾಗ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಜಗಳವಾಡುತ್ತಿದ್ದ. ಸದಾ ಮದ್ಯ ಸೇವಿಸಿ ಸೋಮಾರಿಯಾಗಿ ಓಡಾಡುತ್ತಿದ್ದನಂತೆ. ಕುಟುಂಬ ಸದಸ್ಯರಿಗೆ ಕುಡಿಯಲು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ. ಹಣ ಕೊಡಲು ಒಪ್ಪದಿದ್ದರೆ ಮನೆಯಲ್ಲಿದ್ದ ಸಾಮಾನುಗಳನ್ನು ಮಾರಿ ಮದ್ಯಪಾನ ಮಾಡುತ್ತಿದ್ದ.

ಇದೇ ಸಮಯದಲ್ಲಿ ಖಲೀಲ್ ಮಗಳು ಹೆರಿಗೆಗೆಂದು ತವರಿಗೆ ಬಂದಿದ್ದಳು. ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಈ ನಡುವೆ ಎರಡು ದಿನಗಳ ಹಿಂದೆ ಹಣದ ವಿಚಾರವಾಗಿ ಖಲೀಲ್ ಮಗಳು, ಮೊಮ್ಮಗನ ಸಮ್ಮುಖದಲ್ಲಿಯೇ ಮನೆಯಲ್ಲಿ ಜಗಳವಾಡಿಕೊಂಡಿದ್ದ. ಕುಟುಂಬದವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದಾಗ ಖಲೀಲ್ ಕೋಪಗೊಂಡಿದ್ದ.

ಮನೆಯಲ್ಲಿ ಮೊಮ್ಮಗು ಸಂಭ್ರಮ, ಕೆಲಸಗಳು ನಡೆಯುತ್ತಿದ್ದಾಗ ಖಲೀಲ್ ಸದ್ದು ಮಾಡದೆ ಮೊಮ್ಮಗನನ್ನು ಎತ್ತಿಕೊಂಡು ಹೊರಹೋಗಿದ್ದಾನೆ. ಕೊನೆಗೆ ಆ ಮಗುವನ್ನು ದಾರಿಯಲ್ಲಿ ಯಾರಿಗೋ ಮಾರಿ ಬಂದ ಹಣದಲ್ಲಿ ಮದ್ಯ ಸೇವಿಸಿದ್ದಾನೆ. ಅದೇ ವೇಳೆ ಮನೆಯಲ್ಲಿದ್ದ ಮಗು ನಾಪತ್ತೆಯಾದ ಕಾರಣ ಕುಟುಂಬಸ್ಥರು ಸುತ್ತಮುತ್ತ ಹುಡುಕಾಡಿದ್ದಾರೆ.

ಎಲ್ಲೂ ಮಗ ಪತ್ತೆಯಾಗದಿದ್ದಾಗ ಖಲೀಲ್ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಸತ್ಯಾಂಶ ಹೊರಬಿದ್ದಿದೆ. ಖಲೀಲ್ ತನ್ನ ಮೊಮ್ಮಗನನ್ನು ಮಾರಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಹೇಳಿದ ಮೇಲೆ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ಹಣಕ್ಕಾಗಿ ತನ್ನ ಮೊಮ್ಮಗನನ್ನೇ ಮಾರಾಟ ಮಾಡಿದ ಖಲೀಲ್ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Wed, 17 May 23

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ