Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾದ್ರಿ ಗುಂಪು ಹತ್ಯೆ ಪ್ರಕರಣ; 5 ವರ್ಷಗಳ ನಂತರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್-ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸನೇನಾ?

ಗ್ರೇಟರ್​​ ನೋಯ್ಡಾದ ದಾದ್ರಿಯಲ್ಲಿ 2015ರ ಸೆಪ್ಟೆಂಬರ್​ 28ರಂದು ಮೊಹಮ್ಮದ್ ಅಕ್ಲಾಖ್ (52) ಎಂಬುವರ ಹತ್ಯೆ ನಡೆದಿತ್ತು. ಅಕ್ಲಾಖ್ ಹಾಗೂ ಅವರ ಮಕ್ಕಳು ಮನೆಯಲ್ಲಿ ಗೋ ಹತ್ಯೆ ಮಾಡಿ, ಮಾಂಸ ಶೇಖರಣೆ ಮಾಡುತ್ತಾರೆ ಎಂದು ರೊಚ್ಚಿಗೆದ್ದ ಗುಂಪು ಹಲ್ಲೆ ನಡೆಸಿತ್ತು.

ದಾದ್ರಿ ಗುಂಪು ಹತ್ಯೆ ಪ್ರಕರಣ; 5 ವರ್ಷಗಳ ನಂತರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್-ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸನೇನಾ?
ಮೃತ ಅಕ್ಲಾಖ್​ ಮತ್ತು ಅವರ ಕುಟುಂಬದವರು
Follow us
Lakshmi Hegde
|

Updated on: Mar 27, 2021 | 2:55 PM

ಐದು ವರ್ಷಗಳ ಹಿಂದೆ ಮೊಹಮ್ಮದ್ ಅಕ್ಲಾಖ್​ ಎಂಬುವರನ್ನು ಗುಂಪು ಹತ್ಯೆ ಮಾಡಿದ ಪ್ರಕರಣದ ವಿಚಾರಣೆಯನ್ನು ಗ್ರೇಟರ್​ ನೋಯ್ಡಾದ ಫಾಸ್ಟ್​ಟ್ರ್ಯಾಕ್ ಕೋರ್ಟ್​ ಕೈಗೆತ್ತಿಕೊಂಡಿದೆ. 2015ರ ಸೆಪ್ಟೆಂಬರ್​​​ 28ರಂದು ನಡೆದಿದ್ದ ಕೊಲೆಯ ವಿಚಾರಣೆ ಬರೋಬ್ಬರಿ 5ವರ್ಷಗಳ ನಂತರ ಅಂದರೆ 2021ರ ಮಾರ್ಚ್​ 25ರಿಂದ ಪ್ರಾರಂಭವಾಗಿದೆ. ಬಹುಶಃ ಈ ಘಟನೆಯನ್ನು ಬಹುತೇಕರು ಮರೆತಿರಬಹುದು. ನ್ಯಾಯ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದ ಕುಟುಂಬದವರೂ ನಿರಾಸೆಯಿಂದ ಮೌನವಾಗಿದ್ದರೇನೋ? ಇದೀಗ ಫಾಸ್ಟ್​ಟ್ರ್ಯಾಕ್​ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದೆ.

ಏನಾಗಿತ್ತು 2015ರಲ್ಲಿ? ಗ್ರೇಟರ್​​ ನೋಯ್ಡಾದ ದಾದ್ರಿಯಲ್ಲಿ 2015ರ ಸೆಪ್ಟೆಂಬರ್​ 28ರಂದು ಮೊಹಮ್ಮದ್ ಅಕ್ಲಾಖ್ (52) ಎಂಬುವರ ಹತ್ಯೆ ನಡೆದಿತ್ತು. ಅಕ್ಲಾಖ್ ಹಾಗೂ ಅವರ ಮಕ್ಕಳು ಮನೆಯಲ್ಲಿ ಗೋ ಹತ್ಯೆ ಮಾಡಿ, ಮಾಂಸ ಶೇಖರಣೆ ಮಾಡುತ್ತಾರೆ. ಗೋಮಾಂಸ ಸೇವನೆ ಮಾಡುತ್ತಾರೆ ಎಂದು ಆರೋಪಿಸಿ, ರೊಚ್ಚಿಗೆದ್ದು ಅಕ್ಲಾಖ್ ಮನೆಯೊಳಗೆ ಗುಂಪೊಂದು ನುಗ್ಗಿತ್ತು. ಅಕ್ಲಾಖ್​ ಹಾಗೂ ಅವರ ಕಿರಿಯ ಪುತ್ರ ದನೀಶ್​ಗೆ ಹಿಗ್ಗಾಮುಗ್ಗಾ ಥಳಿಸಿತ್ತು. ತತ್ಪರಿಣಾಮ ಅಕ್ಲಾಖ್​ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹಾಕಿದ್ದ ಚಾರ್ಜ್​ ಶೀಟ್ ಅನ್ವಯ ಸ್ಥಳೀಯ ಬಿಜೆಪಿ ಮುಖಂಡ ಸಂಜ್​ ರಾಣಾ ಪುತ್ರ ವಿಶಾಲ್ ರಾಣಾ ಪ್ರಮುಖ ಆರೋಪಿಯಾಗಿದ್ದಾರೆ.

ಇಷ್ಟೆಲ್ಲ ಆದರೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಕಾಲವೇ ಕೂಡಿ ಬಂದಿರಲಿಲ್ಲ. ಇನ್ನೇನು ಅರ್ಜಿ ವಿಚಾರಣೆ ಶುರು ಮಾಡಬೇಕು ಎನ್ನುವಷ್ಟರಲ್ಲಿ ಒಂದಿಬ್ಬರು ನ್ಯಾಯಾಧೀಶರೆಲ್ಲ ಟ್ರಾನ್ಸ್​ಫರ್ ಆಗಿದ್ದರು ಎಂದು ಅಕ್ಲಾಖ್​ ಕುಟುಂಬದ ಪರ ವಕೀಲ ಯೂಸುಫ್​ ಸೈಫಿ ತಿಳಿಸಿದ್ದಾರೆ. ಸದ್ಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಏಪ್ರಿಲ್​ 12ಕ್ಕೆ ನಿಗದಿಪಡಿಸಿದೆ. ಈ ಘಟನೆಯಲ್ಲಿ ಅಕ್ಲಾಖ್​ ಮಗಳು ಸಾಹಿಸ್ತಾ, ಪತ್ನಿ ಇಕ್ರಾಮಾನ್​, ಮಗ ದನೀಶ್​ ಮತ್ತು ತಾಯಿ ಅಸ್ಗರಿ ಪ್ರತ್ಯಕ್ಷದರ್ಶಿಗಳು ಎಂದು ಹೇಳಿದ್ದಾರೆ. ಇನ್ನು ಅಕ್ಲಾಖ್ ಮನೆಯಲ್ಲಿ ಸಿಕ್ಕಿದ್ದ ಮಾಂಸವನ್ನು ಪರಿಶೀಲನೆಗೆ ಕಳಿಸಲಾಗಿತ್ತು. ಅದು ಹಸುಗಳದ್ದೇ ಆಗಿತ್ತೋ ಅಥವಾ ಕುರಿಯದ್ದೋ ಎಂಬುದರ ಬಗ್ಗೆ ಸ್ಪಷ್ಟ ವರದಿಯೇ ಇಲ್ಲ ಎಂದೂ ಹೇಳಿದ್ದಾರೆ.

JEE Main 2021: ಜೆಇಇ ಮೇನ್ಸ್​ನಲ್ಲಿ 300ಕ್ಕೆ 300 ಅಂಕ ಪಡೆದ ಮೊದಲ ವಿದ್ಯಾರ್ಥಿನಿ ದೆಹಲಿಯ ಕಾವ್ಯಾ ಚೋಪ್ರಾ

12 ದೇವಾಲಯಗಳಲ್ಲಿ ಗಂಡಸರಿಗೆ ಪ್ರವೇಶ ಇಲ್ಲ, ಅಂತಹ ಮಂದಿರಗಳು ಯಾವುವು?

ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್​ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು..

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!