AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​​ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ​; 24 ಮಂತ್ರಿಗಳ ಪಟ್ಟಿ ಹೀಗಿದೆ

ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ.

ಗುಜರಾತ್​​ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ​; 24 ಮಂತ್ರಿಗಳ ಪಟ್ಟಿ ಹೀಗಿದೆ
ಗುಜರಾತ್​ ಕ್ಯಾಬಿನೆಟ್​ ಸಚಿವರು
TV9 Web
| Edited By: |

Updated on:Sep 16, 2021 | 10:38 PM

Share

ಗಾಂಧಿನಗರ: ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪ್ರಮಾಣ ವಚನ ಸ್ವೀಕಾರ ಮಾಡಿ ಮೂರು ದಿನಗಳ ಬಳಿಕ ಇಂದು ನೂತನ ಕ್ಯಾಬಿನೆಟ್​ ಕೂಡ ರಚನೆಯಾಗಿದೆ. 24 ಸಚಿವರು ಇಂದು ಗಾಂಧಿನಗರದಲ್ಲಿರುವ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುಜರಾತ್​​ನಲ್ಲಿ ವಿಧಾನಸಭೆ ಚುನಾವಣೆ ಒಂದೇ ವರ್ಷ ಬಾಕಿ ಇರುವಾಗ ಮುಖ್ಯಮಂತ್ರಿಯನ್ನು ಬದಲು ಮಾಡಿದ್ದಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದವರೂ ಕೂಡ  ಹೊಸಬರೇ ಆಗಿದ್ದಾರೆ.  ಗುಜರಾತ್​ ರಾಜ್ಯಪಾಲ ಆಚಾರ್ಯ ದೇವವೃತ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್​ ರೂಪಾನಿ, ಉಪಮುಖ್ಯಮಂತ್ರಿ ನಿತಿನ್​ ಪಟೇಲ್​, ಬಿಜೆಪಿ ಗುಜರಾತ್​ ಅಧ್ಯಕ್ಷ ಸಿ.ಆರ್.ಪಾಟೀಲ್​, ಬಿಜೆಪಿ ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವರ್​ ಮತ್ತು ಕೇಂದ್ರದ ವೀಕ್ಷಕರಾದ ಬಿ.ಎಲ್​.ಸಂತೋಷ್​ ಹಾಜರಿದ್ದರು.

ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಈ 14 ಜನರಲ್ಲಿ ಐವರಿಗೆ ಸ್ವತಂತ್ರ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಸಂಪುಟ ದರ್ಜೆಯ ಸಚಿವ ಸ್ಥಾನಮಾನ ಪಡೆದವರ ಪಟ್ಟಿ ಹೀಗಿದೆ.. ರಾಜೇಂದ್ರ ತ್ರಿವೇದಿ, ಜಿತು ವಾಘನಿ, ಋಷಿಕೇಶ ಪಟೇಲ್​, ರಾಘವ್​​ಜಿ ಪಟೇಲ್​, ಪೂರ್ಣೇಶ್​ ಮೋದಿ, ಕಾನುಭಾಯಿ ದೇಸಾಯಿ, ಕಿರೀಟ್​ಸಿನ್ಹಾ ರಾಣಾ, ನರೇಶ್​ ಪಟೇಲ್​, ಪ್ರದೀಪ್​ಸಿನ್ಹ್​ ಪಾರ್ಮಾರ್​ ಮತ್ತು ಅರ್ಜುನ್​ ಸಿಂಗ್​ ಚೌಹಾಣ್​.

ರಾಜ್ಯ ದರ್ಜೆಯ ಸ್ಥಾನಮಾನ ಪಡೆದವರ ಪಟ್ಟಿ ಹೀಗಿದೆ.. ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​, ಮುಕೇಶ್​ ಪಟೇಲ್​, ನಿಮಿಶಾ ಸುತಾರ್​, ಅರವಿಂದ್ ರೈಯಾನಿ, ಕುಬೇರ್ ದಿಂಡೋರ್, ಕೀರ್ತಿಸಿನ್ಹ ವಘೇಲಾ, ರಾಜೇಂದ್ರಸಿನ್ಹ ಪರ್ಮಾರ್, ರಾಘವ ಜಿ ಮಕ್ವಾನಾ, ವಿನೋದ್ ಮೊರಾದಿಯಾ ಮತ್ತು ದೇವಭಾಯಿ ಮಲಮ್. ಇವರಲ್ಲಿ ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​ ಅವರಿಗೆ ಸ್ವತಂತ್ರ ಕಾರ್ಯ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.

ಇಂದು ಮೊದಲ ಸಭೆ ಇಂದು ಮಧ್ಯಾಹ್ನದ ವೇಳೆಗೆ ಹೊಸ ಸಚಿವರೆಲ್ಲ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಾದ ಬಳಿಕ ಕ್ಯಾಬಿನೆಟ್​ನ ಮೊದಲ ಸಭೆ ಸಂಜೆ 4ಗಂಟೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ನೇತೃತ್ವದಲ್ಲಿ ಸರ್ಣಿಮ್​ ಸಂಕುಲ್​​ನಲ್ಲಿ ನಡೆದಿದೆ.

ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್

ರಸ್ತೆ ಆಗುವವರೆಗೂ ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿಗೆ ಗುಡ್ ನ್ಯೂಸ್; ರಸ್ತೆ ಮಾತ್ರವಲ್ಲ ನಿನ್ನ ಮದುವೆ ಕೂಡಾ ಮಾಡುತ್ತೇನೆ ಎಂದ ದಾವಣಗೆರೆ ಡಿಸಿ

Published On - 5:03 pm, Thu, 16 September 21

Follow Us
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ