AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Char Dham Yatra 2021: ಚಾರ್​ಧಾಮ್​ ಯಾತ್ರೆಯ ಮೇಲಿನ ನಿಷೇಧ ತೆರವುಗೊಳಿಸಿದ ಉತ್ತರಾಖಂಡ್ ಹೈಕೋರ್ಟ್​; ಈ ಷರತ್ತುಗಳ ಪಾಲನೆ ಕಡ್ಡಾಯ

ಕೊವಿಡ್​ 19 ಮೂರನೇ ಅಲೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್​ಧಾಮ್​ ಯಾತ್ರೆಗೆ ಅವಕಾಶ ನೀಡಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ವಿಜ್ಞಾನಿಗಳ ಸಮುದಾಯ ನೀಡಿದ ಎಚ್ಚರಿಕೆ ಅನ್ವಯ ತನ್ನ ತೀರ್ಪು ಪ್ರಕಟಿಸಿತ್ತು.

Char Dham Yatra 2021: ಚಾರ್​ಧಾಮ್​ ಯಾತ್ರೆಯ ಮೇಲಿನ ನಿಷೇಧ ತೆರವುಗೊಳಿಸಿದ ಉತ್ತರಾಖಂಡ್ ಹೈಕೋರ್ಟ್​; ಈ ಷರತ್ತುಗಳ ಪಾಲನೆ ಕಡ್ಡಾಯ
ಬದ್ರಿನಾಥ ದೇಗುಲ
TV9 Web
| Updated By: Lakshmi Hegde|

Updated on:Sep 16, 2021 | 6:26 PM

Share

ಡೆಹ್ರಾಡೂನ್​: ಚಾರ್​ಧಾಮ್​ ಯಾತ್ರೆಯ ಮೇಲಿನ ನಿಷೇಧವನ್ನು ಉತ್ತಾರಖಂಡ ಹೈಕೋರ್ಟ್​ ಇಂದು ತೆರವುಗೊಳಿಸಿದೆ. ಆದರೆ ಕೊವಿಡ್​ 19 ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯ ಮಾಡಿದೆ. ಯಾತ್ರೆಗೆ ಬರುವವರು ಕಡ್ಡಾಯವಾಗಿ ಕೊರೊನಾ ವೈರಸ್​ ನೆಗೆಟಿವ್​ ರಿಪೋರ್ಟ್​ ತರಬೇಕು. ಎರಡೂ ಡೋಸ್​ ಲಸಿಕೆ ಪಡೆದ ಸರ್ಟಿಫಿಕೇಟ್​ ಹೊಂದಿರಬೇಕು ಎಂದು ಆದೇಶಿಸಿದೆ. ಹಾಗೇ, ಒಂದು ದಿನದಲ್ಲಿ ಕೇದಾರನಾಥ್​ ದೇಗುಲಕ್ಕೆ 800 ಭಕ್ತರು, ಬದ್ರಿನಾಥ್​​ ದೇವಾಲಯಕ್ಕೆ 1200ಜನರು, ಗಂಗೋತ್ರಿಗೆ 600 ಭಕ್ತರು ಮತ್ತು ಯಮುನೋತ್ರಿ ಧಾಮಕ್ಕೆ 400 ಭಕ್ತರಷ್ಟೇ ಆಗಮಿಸಬಹುದು ಎಂದೂ ಹೈಕೋರ್ಟ್​ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.   

ಕೊವಿಡ್​ 19 ಮೂರನೇ ಅಲೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್​ಧಾಮ್​ ಯಾತ್ರೆಗೆ ಅವಕಾಶ ನೀಡಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ವಿಜ್ಞಾನಿಗಳ ಸಮುದಾಯ ನೀಡಿದ ಎಚ್ಚರಿಕೆ ಅನ್ವಯ ತನ್ನ ತೀರ್ಪು ಪ್ರಕಟಿಸಿತ್ತು. ಅವಕಾಶ ಕೊಡಲು ಸರ್ಕಾರ ಮುಂದಾಗಿದ್ದರೂ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಇದೀಗ ಮತ್ತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಉತ್ತರಾಖಂಡ್​ ಸರ್ಕಾರ, ಕೊವಿಡ್​ 19 ಪರಿಸ್ಥಿತಿ ಇದೀಗ ಸುಧಾರಿಸಿದೆ.  ಚಾರ್​ಧಾಮ್​ ಯಾತ್ರೆ ಯಾತ್ರಾರ್ಥಿಗಳಿಗೆ ಎಷ್ಟು ಮುಖ್ಯವೋ, ಹಾಗೇ, ಅದನ್ನು ನೆಚ್ಚಿಕೊಂಡು ಬದುಕು ಸಾಗಿಸುವವರೂ ಅನೇಕರು ಇದ್ದಾರೆ. ಈ ಕಾರಣಕ್ಕಾಗಿ ಯಾತ್ರೆಯನ್ನು ಅನುಮತಿಸಬೇಕು ಎಂದು ಮನವಿ ಮಾಡಿತ್ತು.  ಸದ್ಯ ಉತ್ತರಾಖಂಡ್​ನಲ್ಲಿ 296 ಮಾತ್ರ ಕೊವಿಡ್​ ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ಉತ್ತರಾಖಂಡ್ ಹೈಕೋರ್ಟ್ ಇದೀಗ ಯಾತ್ರೆಗೆ ಅನುಮತಿ ನೀಡಿದೆ.

ಇದನ್ನೂ ಓದಿ: ರೋಹಿತ್ ಮುಂದೆ ಕೊಹ್ಲಿ ಕೂಡ ಸೈಲೆಂಟ್! ಐಪಿಎಲ್‌ನಲ್ಲಿ ಯಾವ ತಂಡ ಯಾರ ವಿರುದ್ಧ ಹೆಚ್ಚು ಪಂದ್ಯ ಗೆದ್ದಿದೆ? ಇಲ್ಲಿದೆ ವಿವರ

ಆನ್​ಲೈನ್​ ಮೂಲಕ ಊಟ ತರಿಸಿಕೊಳ್ಳುವವರಲ್ಲಿ ನೀವೂ ಸೇರಿದ್ದರೆ, ನಿಮ್ಮ ಊಟಕ್ಕೆ ಹೆಚ್ಚು ಹಣ ನೀಡಲು ತಯಾರಾಗಿರಿ!

Published On - 6:19 pm, Thu, 16 September 21

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್