AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತಪಾಸಣೆ ಮಾಡಲು ಪೊಲೀಸರು ಹಾಲಿನ ಟ್ಯಾಂಕರ್ ತಡೆದರು.. ಒಳಗಿನದನ್ನು ಕಂಡು ಮನಸು ಬೇಸರಗೊಂಡಿತು, ಅಂಥದ್ದೇನಿತ್ತು?

Viral News: ಕಲಬೆರಕೆ ಹಾಲು, ನಕಲಿ ಹಾಲುಗಳಿಗೆ ಕೊರತೆಯೇನೂ ಇಲ್ಲ. ಖ್ಯಾತ ಕಂಪನಿಗಳ ಲೇಬಲುಗಳನ್ನು ಅಂಟಿಸಿಬಿಟ್ಟರೆ (ಮುದ್ರಿಸಿಬಿಟ್ಟರೆ) ಮುಗೀತು . ಅಂತಹ ಹಾಲು ಸೀದಾ ಚಾಯ್ ಅಂಗಡಿಗಳು, ರೆಸ್ಟೋರೆಂಟ್‌ಗಳು, ಕಿರಾಣಿ ಅಂಗಡಿಗಳಿಗೆ ಸರಾಗವಾಗಿ ಸರಬರಾಜು ಆಗಿಬಿಡುತ್ತದೆ. ಗಮನಾರ್ಹವೆಂದರೆ ಕಡಿಮೆ ಬೆಲೆಗೆ ಬರುವುದರಿಂದ ಅಂಗಡಿ ವ್ಯಾಪಾರಸ್ಥರೂ ಇದರತ್ತ ವಾಲುತ್ತಿದ್ದಾರೆ.

Shocking News: ತಪಾಸಣೆ ಮಾಡಲು ಪೊಲೀಸರು ಹಾಲಿನ ಟ್ಯಾಂಕರ್ ತಡೆದರು.. ಒಳಗಿನದನ್ನು ಕಂಡು ಮನಸು ಬೇಸರಗೊಂಡಿತು, ಅಂಥದ್ದೇನಿತ್ತು?
ತಪಾಸಣೆ ಮಾಡಲು ಪೊಲೀಸರು ಹಾಲಿನ ಟ್ಯಾಂಕರ್ ತಡೆದರು.. ಒಳಗಿನದನ್ನು ಕಂಡು ಮನಸು ಬೇಸರಗೊಂಡಿತು, ಅಂಥದ್ದೇನಿತ್ತು?
TV9 Web
| Edited By: |

Updated on: Aug 18, 2022 | 3:50 PM

Share

ಗುಜರಾತ್: ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಕಲಬೆರಕೆ ಸರಕುಗಳನ್ನು ಮಾರಾಟ ಮಾಡುವವರೇ ಹೆಚ್ಚು. ಆದರೆ ಅವರುಗಳು ಹಾಗೆ ವಂಚನೆ ಮಾಡುವ ಮೂಲಕ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ನಾವು ತಿನ್ನುವ ಆಹಾರ, ಕುಡಿಯುವ ನೀರು… ಯಾವುದೆಲ್ಲಾ ಸಾಧ್ಯವೋ ಅಷ್ಟೂ ಕಲಬೆರಕೆ/ ಕಲುಷಿತಗೊಳಿಸುತ್ತಿದ್ದಾರೆ. ಜನರು ಅಡುಗೆಯಲ್ಲಿ ಬಳಸುವ ಬಹುತೇಕ ವಸ್ತು ಕಲಬೆರಕೆಯಾಗುತ್ತದೆ. ಹಣದ ದುರಾಸೆಯಿಂದ.. ದಿನದಿಂದ ದಿನಕ್ಕೆ ಇಂತಹ ಅಪರಾಧಗಳ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಇತ್ತೀಚೆಗೆ ಗುಜರಾತ್‌ನ (gujarat police) ರಾಜ್‌ಕೋಟ್ ಪೊಲೀಸರು 4,000 ಲೀಟರ್ ಕಲಬೆರಕೆ ಹಾಲನ್ನು ವಶಪಡಿಸಿಕೊಂಡಿದ್ದಾರೆ. ಎಂದಿನಂತೆ ತಪಾಸಣೆ ನಡೆಸುತ್ತಿದ್ದಾಗ ಹಾಲಿನ ಟ್ಯಾಂಕರ್ ಒಂದು ಪೊಲೀಸರ ಕಣ್ಣಿಗೆ ಬಿದ್ದಿತ್ತು. ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದಾಗ ಒಳಗೆ ಕೆಮಿಕಲ್ ಹಾಕಿ ತಯಾರಿಸಿದ ಹಾಲು (adulterated milk) ಇರುವುದು ಪತ್ತೆಯಾಗಿದೆ.

ಕೂಡಲೇ ಹಾಲಿನ ಟ್ಯಾಂಕರ್ ನಲ್ಲಿ ಕಲಬೆರಕೆ ಹಾಲು ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಕಲಬೆರಕೆ ಹಾಲನ್ನು ಅಪಾಯಕಾರಿ ರಾಸಾಯನಿಕಗಳಾದ ಸಲ್ಫೇಟ್, ಫಾಸ್ಫೇಟ್ ಮತ್ತು ಕಾರ್ಬೊನೇಟೆಡ್ ಎಣ್ಣೆಯಿಂದ ತಯಾರಿಸಲಾಗಿದೆ ಎಂದು ಪೊಲೀಸರು ಬಳಿಕ ತಿಳಿಸಿದ್ದಾರೆ. ಇದೇ ಮಾದರಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಕಲಬೆರಕೆ ಹಾಲು ಪೂರೈಕೆಯಾಗುತ್ತಿದೆ ಎಂದು ರಾಜ್ ಕೋಟ್ ವಲಯ-1 ಡಿಸಿಪಿ ಪ್ರವೀಣ್ ಕುಮಾರ್ ಮೀನಾ ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಹಾಲು ತಯಾರಿಸುತ್ತಿರುವ ಪ್ರದೇಶವನ್ನು ಗುರುತಿಸಿ, ದಾಳಿ ನಡೆಸಲಾಗಿದೆ ಎಂದು ತಿಳಿಸಿದರು. ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದೆ.

ಕಲಬೆರಕೆ ಹಾಲು ಜನರನ್ನು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಕ್ಕಳಿಗೆ, ಹಾಲು ವಿಶೇಷವಾಗಿ ಮುಖ್ಯವಾಗಿದೆ. ಕಲಬೆರಕೆ ಹಾಲಿನ ಟ್ಯಾಂಕರ್ ಗಳು ನಿಮ್ಮ ಅಡುಗೆ ಮನೆಗೂ ದಾಂಗುಡಿಯಿಡಬಹುದು. ಅದಕೇ ಹೇದಳಿರುವುದು ಬೆಳ್ಳಗಿರುವುದೆಲ್ಲಾ ಹಾಲಲ್ಲ.. ಹುಷಾರಾಗಿರಿ.

To read more in Telugu click here

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ