AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ. ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ […]

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 07, 2020 | 3:55 PM

Share

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ.

ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ ಸರ್ಕಾರಕ್ಕೆ ಮನವಿ ಸಲ್ಲಿಸಿ.. ಗುರ್ಮಿತ್​ನ ತಾಯಿ 85 ವರ್ಷ ನಸೀಬ್ ಕೌರ್ ಅನಾರೋಗ್ಯದಿಂದ ಬಳಲುತ್ತಿದ್ದು, ಮಗನನ್ನು ನೋಡಲು ಹಂಬಲಿಸುತ್ತಿದ್ದಾರೆ. ಗುರುಗ್ರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ತನ್ನ ಪತಿ ಗುರ್ಮಿತ್​ಗೆ ಪರೋಲ್ ನೀಡಿ, ಕಳುಹಿಸಬೇಕು ಎಂದು ಕೋರಿದ್ದಳು. ಇದಕ್ಕೆ ಸ್ಪಂದಿಸಿದ ಹರಿಯಾಣದ  ಮನೋಹರ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಅಕ್ಟೋಬರ್ 24ರಂದು ಒಂದು ದಿನದ ಮಟ್ಟಿಗೆ ಪರೋಲ್​ ಮೇಲೆ ಬಿಗಿ ಭದ್ರತೆಯಲ್ಲಿ ಗುರ್ಮಿತ್​ನನ್ನು ಹೊರಬಿಟ್ಟಿತ್ತು.

54 ವರ್ಷದ ಗುರ್ಮಿತ್ ರಾಮ್​ ರಹೀಂ ಪ್ರಸ್ತುತ ರೋಹ್ಟಕ್​ನ ಸುನೇರಿಯಾ ಜೈಲಿನಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. 2017ರ ಆಗಸ್ಟ್ ತಿಂಗಳಿಂದ ಗುರ್ಮಿತ್ ರಾಮ್​ ರಹೀಂ ಜೈಲುವಾಸ ಅನುಭವಿಸುತ್ತಿದ್ದಾನೆ. ಆಗಸ್ಟ್ 25ರಂದು ಗುರ್ಮಿತ್ ರಾಮ್​ ರಹೀಂನನ್ನು ಜೈಲುಶಿಕ್ಷೆಗೆ ಗುರಿಪಡಿಸಿದಾಗ ಹಿಂಸಾಚಾರ ಭುಗಿಲೆದ್ದು 41 ಮಂದಿ ಅಸುನೀಗಿದ್ದರು.

Follow Us
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!