AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ. ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ […]

ಜೀವಾವಧಿ ಶಿಕ್ಷೆಯಲ್ಲಿದ್ದರೂ ರಹಸ್ಯವಾಗಿ ಹೊರಬಂದಿದ್ದ ರೇಪಿಸ್ಟ್ ಬಾಬಾ ರಾಮ್​ ರಹೀಮ್​!
ಸಾಧು ಶ್ರೀನಾಥ್​
|

Updated on: Nov 07, 2020 | 3:55 PM

Share

ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್​ ಸೌಧ ಬಾಬಾ ಗುರ್ಮಿತ್ ರಾಮ್​ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್​ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ.

ಆದ್ರೆ ಕಳೆದ ತಿಂಗಳು ಗುರ್ಮಿತ್ ರಾಮ್​ ರಹೀಂನ ಪತ್ನಿ ಹರ್ಜಿತ್ ಕೌರ್ ಹರಿಯಾಣ ಸರ್ಕಾರಕ್ಕೆ ಮನವಿ ಸಲ್ಲಿಸಿ.. ಗುರ್ಮಿತ್​ನ ತಾಯಿ 85 ವರ್ಷ ನಸೀಬ್ ಕೌರ್ ಅನಾರೋಗ್ಯದಿಂದ ಬಳಲುತ್ತಿದ್ದು, ಮಗನನ್ನು ನೋಡಲು ಹಂಬಲಿಸುತ್ತಿದ್ದಾರೆ. ಗುರುಗ್ರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ತನ್ನ ಪತಿ ಗುರ್ಮಿತ್​ಗೆ ಪರೋಲ್ ನೀಡಿ, ಕಳುಹಿಸಬೇಕು ಎಂದು ಕೋರಿದ್ದಳು. ಇದಕ್ಕೆ ಸ್ಪಂದಿಸಿದ ಹರಿಯಾಣದ  ಮನೋಹರ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಅಕ್ಟೋಬರ್ 24ರಂದು ಒಂದು ದಿನದ ಮಟ್ಟಿಗೆ ಪರೋಲ್​ ಮೇಲೆ ಬಿಗಿ ಭದ್ರತೆಯಲ್ಲಿ ಗುರ್ಮಿತ್​ನನ್ನು ಹೊರಬಿಟ್ಟಿತ್ತು.

54 ವರ್ಷದ ಗುರ್ಮಿತ್ ರಾಮ್​ ರಹೀಂ ಪ್ರಸ್ತುತ ರೋಹ್ಟಕ್​ನ ಸುನೇರಿಯಾ ಜೈಲಿನಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. 2017ರ ಆಗಸ್ಟ್ ತಿಂಗಳಿಂದ ಗುರ್ಮಿತ್ ರಾಮ್​ ರಹೀಂ ಜೈಲುವಾಸ ಅನುಭವಿಸುತ್ತಿದ್ದಾನೆ. ಆಗಸ್ಟ್ 25ರಂದು ಗುರ್ಮಿತ್ ರಾಮ್​ ರಹೀಂನನ್ನು ಜೈಲುಶಿಕ್ಷೆಗೆ ಗುರಿಪಡಿಸಿದಾಗ ಹಿಂಸಾಚಾರ ಭುಗಿಲೆದ್ದು 41 ಮಂದಿ ಅಸುನೀಗಿದ್ದರು.

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?