
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ನೀರಿನ ಬಿಕ್ಕಟ್ಟಿನ (Water Crisis) ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ (VK Saxena) ಇಂದು (ಶುಕ್ರವಾರ) ಆಮ್ ಆದ್ಮಿ ಪಕ್ಷದ (AAP) ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೆಹಲಿ ಸರ್ಕಾರಕ್ಕೆ (Delhi Government) ಅಸಮರ್ಥತೆಯನ್ನು ಮತ್ತು ವೈಫಲ್ಯವನ್ನು ಮರೆಮಾಚುವುದು ಮತ್ತು ಇತರರನ್ನು ದೂಷಿಸುವುದು ಅಭ್ಯಾಸವಾಗಿದೆ ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ನೀಡಿರುವ ಹೇಳಿಕೆಯಲ್ಲಿ “ಕಳೆದ 10 ವರ್ಷಗಳಲ್ಲಿ ತನ್ನ ವೈಫಲ್ಯ ಮತ್ತು ಅಸಮರ್ಥತೆಯನ್ನು ಮರೆಮಾಚುವುದು ದೆಹಲಿ ಸರ್ಕಾರದ ಅಭ್ಯಾಸವಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ತಮ್ಮ ಪ್ರತಿಯೊಂದು ವೈಫಲ್ಯಕ್ಕೂ ಇತರರನ್ನು ದೂಷಿಸುತ್ತಾರೆ. ಸಮಾವೇಶಗಳನ್ನು ಮಾಡುವ ಮೂಲಕ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾರೆ. ನ್ಯಾಯಾಲಯದ ಮೊಕದ್ದಮೆಗಳು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವುದು ಸರ್ಕಾರದ ನಿರ್ವಹಣೆಯಿಂದ ಮಾತ್ರ ದೆಹಲಿಯಲ್ಲಿ ನೀರಿನ ಕೊರತೆ ಕಡಿಮೆ ಮಾಡಬಹುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Water Crisis: ಇನ್ಮುಂದೆ ನೀರು ಪೋಲು ಮಾಡಿದ್ರೆ 2 ಸಾವಿರ ರೂ. ದಂಡ
ಕಳೆದ ಕೆಲವು ದಿನಗಳಿಂದ ದೆಹಲಿಯ ನೀರಿನ ಸಮಸ್ಯೆಯ ಬಗ್ಗೆ ದೆಹಲಿ ಸರ್ಕಾರದ ಬೇಜವಾಬ್ದಾರಿ ವರ್ತನೆಯನ್ನು ನಾವು ನೋಡುತ್ತಿದ್ದೇವೆ. ಇಂದು ದೆಹಲಿಯಲ್ಲಿ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೀರು ಪಡೆಯಲು ಟ್ಯಾಂಕರ್ಗಳ ಹಿಂದೆ ಓಡುತ್ತಿರುವುದು ಕಂಡು ಬರುತ್ತಿದೆ. ಆದರೆ, ದೆಹಲಿ ಸರ್ಕಾರ ತನ್ನ ವೈಫಲ್ಯಗಳಿಗೆ ಇತರ ರಾಜ್ಯಗಳನ್ನು ದೂಷಿಸುತ್ತಿದೆ. ದೆಹಲಿಯಲ್ಲಿ 24 ಗಂಟೆ ನೀರು ಪೂರೈಸುವ ಮುಖ್ಯಮಂತ್ರಿಯವರ ಭರವಸೆ ಕುತಂತ್ರವಾಗಿದೆ. ಹರಿಯಾಣ ಮತ್ತು ಉತ್ತರ ಪ್ರದೇಶಗಳು ತಮ್ಮ ನಿಗದಿತ ಪ್ರಮಾಣದ ನೀರನ್ನು ದೆಹಲಿಗೆ ನಿರಂತರವಾಗಿ ಪೂರೈಸುತ್ತಿವೆ. ಇದರ ಹೊರತಾಗಿಯೂ, ಇಂದು ದೆಹಲಿಯಲ್ಲಿ ನೀರಿನ ತೀವ್ರ ಕೊರತೆಗೆ ಬಹುದೊಡ್ಡ ಕಾರಣವೆಂದರೆ ಉತ್ಪಾದನೆಯಾಗುವ ನೀರಿನ ಶೇ. 54ರಷ್ಟು ಭಾಗಕ್ಕೆ ಲೆಕ್ಕವಿಲ್ಲ. ಹಳೆಯ ಮತ್ತು ಶಿಥಿಲಗೊಂಡ ಪೈಪ್ಲೈನ್ಗಳಿಂದ ಪೂರೈಕೆಯ ಸಮಯದಲ್ಲಿ ಶೇ. 40ರಷ್ಟು ನೀರು ವ್ಯರ್ಥವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೆಹಲಿ ಸರ್ಕಾರವು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಆದರೆ ಹಳೆಯ ಪೈಪ್ಲೈನ್ಗಳನ್ನು ಸರಿಪಡಿಸಲು ಅಥವಾ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಸಕ್ಸೇನಾ ಆರೋಪಿಸಿದ್ದಾರೆ.
ಇದನ್ನೂ ಓದಿ: Health Tips: ಅತಿಯಾಗಿ ನೀರು ಕುಡಿಯೋದು ಡೇಂಜರ್! ಜೀವಕ್ಕೆ ಅಪಾಯ ತರಬಹುದು ಎಚ್ಚರಿಕೆ ನೀಡಿದ ತಜ್ಞರು
ಟ್ಯಾಂಕರ್ ಮಾಫಿಯಾ ಈ ನೀರನ್ನು ಕದ್ದು ಬಡವರಿಗೆ ಮಾರಾಟ ಮಾಡುತ್ತಿದೆ. ಒಂದೆಡೆ, ದೆಹಲಿಯ ಶ್ರೀಮಂತ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 550 ಲೀಟರ್ ನೀರು ಸರಬರಾಜು ಆಗುತ್ತಿದೆ. ಮತ್ತೊಂದೆಡೆ, ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 15 ಲೀಟರ್ ನೀರು ಮಾತ್ರ ಸರಬರಾಜಾಗುತ್ತಿದೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ