Smriti Irani: ಮೋದಿ ವರ್ಚಸ್ಸು ಹಾಳು ಮಾಡಲು ರಾಹುಲ್ ಪಣ ತೊಟ್ಟಿದ್ದಾರೆ, ವಿದೇಶ, ಸಂಸತ್ತು ಎಲ್ಲೆಲ್ಲೂ ಸುಳ್ಳು ಸುಳ್ಳು: ಸ್ಮೃತಿ ಇರಾನಿ

|

Updated on: Mar 28, 2023 | 12:24 PM

ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ ಹಾಳು ಮಾಡಲು ರಾಹುಲ್ ಗಾಂಧಿ ಪಣತೊಟ್ಟಂತಿದೆ. ವಿದೇಶ, ದೇಶ, ಸಂಸತ್ತು ಎಲ್ಲಾ ಕಡೆಯೂ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ರಾಜಕೀಯ ದ್ವೇಷವು ದೇಶಕ್ಕೆ ಅವಮಾನ ಮಾಡುವ ಹಂತದ ವರೆಗೆ ತಲುಪುತ್ತಿದೆ.

Smriti Irani: ಮೋದಿ ವರ್ಚಸ್ಸು ಹಾಳು ಮಾಡಲು ರಾಹುಲ್ ಪಣ ತೊಟ್ಟಿದ್ದಾರೆ, ವಿದೇಶ, ಸಂಸತ್ತು ಎಲ್ಲೆಲ್ಲೂ ಸುಳ್ಳು ಸುಳ್ಳು: ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us on

ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹಾಳು ಮಾಡಲು ರಾಹುಲ್ ಗಾಂಧಿ ಪಣತೊಟ್ಟಂತಿದೆ. ವಿದೇಶ, ದೇಶ, ಸಂಸತ್ತು ಎಲ್ಲಾ ಕಡೆಯೂ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ರಾಜಕೀಯ ದ್ವೇಷವು ದೇಶಕ್ಕೆ ಅವಮಾನ ಮಾಡುವ ಹಂತದ ವರೆಗೆ ತಲುಪುತ್ತಿದೆ. ನರೇಂದ್ರ ಮೋದಿಯವರ ಶಕ್ತಿ ಅವರ ವರ್ಚಸ್ಸು ಎಂದು ರಾಹುಲ್ ಹೇಳಿದ್ದರು, ಅಷ್ಟೇ ಅಲ್ಲದೆ ನರೇಂದ್ರ ಮೋದಿಯವರ ವ್ಯಕ್ತಿತ್ವವನ್ನು ಹಾಳು ಮಾಡುವವರೆಗೂ ನಾನು ಅವರ ಮೇಲೆ ದಾಳಿ ಮಾಡುತ್ತಲೇ ಇರುತ್ತೇನೆ ಎಂದಿದ್ದರು.

ರಾಜಕೀಯ ಹತಾಶೆಯಿಂದಾಗಿ, ಪ್ರಧಾನಿ ಮೋದಿಯವರ ಮೇಲಿನ ರಾಹುಲ್ ಗಾಂಧಿಯವರ ದ್ವೇಷವು ಈಗ ಇಡೀ ರಾಷ್ಟ್ರಕ್ಕೆ ಅವಮಾನವಾಗಿ ಮಾರ್ಪಟ್ಟಿದೆ.

ಗಾಂಧಿ ಕುಟುಂಬ ದಲಿತ ಅಥವಾ ಹಿಂದುಳಿದ ಸಮುದಾಯಗಳ ಜನರನ್ನು ಅವಮಾನಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಬುಡಕಟ್ಟು ಕುಟುಂಬದ ಮಹಿಳೆಯೊಬ್ಬರು ರಾಷ್ಟ್ರಪತಿಯಾದಾಗ ಕಾಂಗ್ರೆಸ್ ಸದಸ್ಯರೊಬ್ಬರು ಅವರಿಗೆ ಅವಮಾನ ಮಾಡಿದ್ದರು.

ಮತ್ತಷ್ಟು ಓದಿ: ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದ ಸಚಿವೆ ಸ್ಮೃತಿ ಇರಾನಿ

ರಾಹುಲ್ ಗಾಂಧಿ ಮೋದಿ ಉಪನಾಮದ ಕುರಿತು ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು, ಇಚ್ಚೀಚೆಗಷ್ಟೇ ಸೂರತ್ ನ್ಯಾಯಾಲಯವು ಅವರು ದೋಷಿ ಎಂದು ತೀರ್ಪು ನೀಡಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 30 ದಿನಗಳ ಜಾಮೀನಿನ ಮೇಲೆ ಹೊರಗಿದ್ದಾರೆ.

ಇದೀಗ ನಾನು ಕ್ಷಮೆ ಕೇಳುವುದಿಲ್ಲ, ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ಹೇಳುವ ಮೂಲಕ ಮತ್ತೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ