AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ವಿಮಾಕಂತಿನಲ್ಲಿ ಗಣನೀಯ ಏರಿಕೆ.. ಕೊರೊನಾ ಕಾರಣನಾ?

ದೆಹಲಿ: ಕೊರೊನಾ, ವೈದ್ಯಕೀಯ ಕ್ಷೇತ್ರದ ಹಣದುಬ್ಬರ, ವಿಮೆಯ ವ್ಯಾಪ್ತಿ ವಿಸ್ತರಣೆ ಮೊದಲಾದ ಕಾರಣಗಳಿಂದ ಆರೋಗ್ಯ ವಿಮಾಕಂತಿನ ದರದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. ಆರೋಗ್ಯ ವಿಮಾ ಪಾಲಿಸಿಗಳ ಮಾರಾಟವು ಹೆಚ್ಚಳವಾಗಿದೆ. ಅದರಲ್ಲೂ ಹಿರಿಯ ನಾಗರಿಕರ ಕಂತಿನ ದರದಲ್ಲಿ ವಿಶೇಷ ವ್ಯತ್ಯಾಸ ಕಂಡುಬಂದಿದೆ. ಅಹ್ಮದಾಬಾದ್ ಮೂಲದ ಇನ್ಶೂರೆನ್ಸ್ ದಲ್ಲಾಳಿ ಪ್ರಭಾತ್ ವಿಜ್ ಪ್ರಕಾರ ಮಧ್ಯಮ ವಯಸ್ಕ ವರ್ಗದಲ್ಲಿ ಆರೋಗ್ಯ ವಿಮೆಯ ಖರೀದಿಯು ಸರಾಸರಿ ಶೇಕಡಾ 10ರಿಂದ 15ರಷ್ಟು ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿ ಆರೋಗ್ಯ ವಿಮೆಯ ಖರೀದಿ ಅತ್ಯಂತ ಹೆಚ್ಚಾಗಿದ್ದು, ಶೇಕಡಾ 100ರಷ್ಟು […]

ಆರೋಗ್ಯ ವಿಮಾಕಂತಿನಲ್ಲಿ ಗಣನೀಯ ಏರಿಕೆ.. ಕೊರೊನಾ ಕಾರಣನಾ?
ಆಯೇಷಾ ಬಾನು
ಆಯೇಷಾ ಬಾನು|

Updated on: Nov 16, 2020 | 4:45 PM

Share

ದೆಹಲಿ: ಕೊರೊನಾ, ವೈದ್ಯಕೀಯ ಕ್ಷೇತ್ರದ ಹಣದುಬ್ಬರ, ವಿಮೆಯ ವ್ಯಾಪ್ತಿ ವಿಸ್ತರಣೆ ಮೊದಲಾದ ಕಾರಣಗಳಿಂದ ಆರೋಗ್ಯ ವಿಮಾಕಂತಿನ ದರದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. ಆರೋಗ್ಯ ವಿಮಾ ಪಾಲಿಸಿಗಳ ಮಾರಾಟವು ಹೆಚ್ಚಳವಾಗಿದೆ. ಅದರಲ್ಲೂ ಹಿರಿಯ ನಾಗರಿಕರ ಕಂತಿನ ದರದಲ್ಲಿ ವಿಶೇಷ ವ್ಯತ್ಯಾಸ ಕಂಡುಬಂದಿದೆ.

ಅಹ್ಮದಾಬಾದ್ ಮೂಲದ ಇನ್ಶೂರೆನ್ಸ್ ದಲ್ಲಾಳಿ ಪ್ರಭಾತ್ ವಿಜ್ ಪ್ರಕಾರ ಮಧ್ಯಮ ವಯಸ್ಕ ವರ್ಗದಲ್ಲಿ ಆರೋಗ್ಯ ವಿಮೆಯ ಖರೀದಿಯು ಸರಾಸರಿ ಶೇಕಡಾ 10ರಿಂದ 15ರಷ್ಟು ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿ ಆರೋಗ್ಯ ವಿಮೆಯ ಖರೀದಿ ಅತ್ಯಂತ ಹೆಚ್ಚಾಗಿದ್ದು, ಶೇಕಡಾ 100ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ(2019-20)ದ ಅವಧಿಯಲ್ಲಿ ಹಿರಿಯ ನಾಗರಿಕರ ಕಂತಿನ ದರವು, ಇಬ್ಬರಿಗೆ 28,000 ರೂಪಾಯಿಗಳಷ್ಟಿತ್ತು. ಈಗ ಕಂತಿನ ದರವು 55,000-60,000 ರೂಪಾಯಿಗಳಾಗಿದ್ದು, ವಿಮೆಯ ಮೊತ್ತ ದ್ವಿಗುಣಗೊಂಡಿದೆ ಎಂದಿದ್ದಾರೆ.

ವಿಮೆ ಜಾಗೃತಿಗಾಗಿ ಇರುವ ಸ್ವತಂತ್ರ ಸಂಸ್ಥೆ, Beshak.org ಸಂಸ್ಥಾಪಕ ಮಹಾವೀರ್ ಚೋಪ್ರಾ, ಕಳೆದ ವರ್ಷ ವಿಮೆಯ ಕಂತಿನ ದರದಲ್ಲಿ ಕೇವಲ ಶೇಕಡಾ 10ರಷ್ಟು ಏರಿಕೆಯಾಗಿತ್ತು. ಈ ಬಾರಿ ಶೇಕಡಾ 25ರಿಂದ35 ರವರೆಗೆ ಹೆಚ್ಚಳಗೊಂಡಿದೆ. ವಿಶೇಷವಾಗಿ ಹಿರಿಯ ನಾಗರಿಕರ ವಿಮೆಯ ಕಂತಿನ ಮೊತ್ತವು ಶೇಕಡಾ 50ರಿಂದ 75ರವರೆಗೆ ಏರಿಕೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಕೊರೊನಾ ಕಾರಣ ಆಯ್ತಾ? ಕೊವಿಡ್-19ಗೂ ಮೊದಲು ಆರೋಗ್ಯ ವಿಮೆಯ ಮೊತ್ತವನ್ನು ಪಡೆದುಕೊಳ್ಳುವವರ ಸಂಖ್ಯೆ 8-9 ಶೇಕಡಾದಷ್ಟಿತ್ತು. ಅದರೆ ಈಗ ವಿಮಾ ಮೊತ್ತದ ಸೌಲಭ್ಯ ಬಳಸುವವರ ಸಂಖ್ಯೆ ಶೇಕಡಾ 15ರಿಂದ18ರಷ್ಟಾಗಿದೆ. ಕೊವಿಡ್ ವಿಮೆಯ ಮೂಲಕ ಸರಾಸರಿ 1.6ರಿಂದ2 ಲಕ್ಷ ಮೊತ್ತವನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಕೊರೊನಾ ಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತ ಬೇಕಾಗಬಹುದು ಎಂದು ಇನ್ಶೂರೆನ್ಸ್ ಕಂಪೆನಿಗಳು ಊಹಿಸಿರಲಿಲ್ಲ ಎಂದು ಪ್ರಭಾತ್ ವಿಜ್ ವಿವರಿಸಿದ್ದಾರೆ.

ಕೊವಿಡ್ ಕಾರಣದಿಂದ ವೈದ್ಯಕೀಯ ಕ್ಷೇತ್ರವು ಹಣದುಬ್ಬರ ಎದುರಿಸಿದೆ. ಕೊರೊನಾದಿಂದಾಗಿ ಇತರ ರೋಗಿಗಳಿಗೂ ಆರ್ಥಿಕ ಹೊಡೆತ ಬಿದ್ದಿದೆ. ಸ್ಯಾನಿಟೈಸೇಷನ್, ಸೋಂಕಿತರ ನಿರ್ವಾಹಣೆ ಮುಂತಾದ ಕಾರಣಗಳಿಂದ ಆಸ್ಪತ್ರೆಗಳ ಖರ್ಚು ಏರಿಕೆಯಾಗಿದೆ. ಹಲವೆಡೆ ಸಾರ್ವಜನಿಕರು, ಸರ್ಕಾರಿ ಆಸ್ಪತ್ರೆಗಳಿಗಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಇದರಿಂದ ಚಿಕಿತ್ಸಾ ವೆಚ್ಚವೂ ಹೆಚ್ಚು ಬರುತ್ತದೆ. ಆಸ್ಪತ್ರೆಯ ಬಿಲ್ಗೆ ನಿಯಮ, ನಿಬಂಧನೆಗಳಿಲ್ಲ. ಇದು ವೈದ್ಯಕೀಯ ವೆಚ್ಚದ ಏರಿಕೆಗೆ ಕಾರಣ ಎಂದು ಮಹಾವೀರ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್