AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ವಿಮಾಕಂತಿನಲ್ಲಿ ಗಣನೀಯ ಏರಿಕೆ.. ಕೊರೊನಾ ಕಾರಣನಾ?

ದೆಹಲಿ: ಕೊರೊನಾ, ವೈದ್ಯಕೀಯ ಕ್ಷೇತ್ರದ ಹಣದುಬ್ಬರ, ವಿಮೆಯ ವ್ಯಾಪ್ತಿ ವಿಸ್ತರಣೆ ಮೊದಲಾದ ಕಾರಣಗಳಿಂದ ಆರೋಗ್ಯ ವಿಮಾಕಂತಿನ ದರದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. ಆರೋಗ್ಯ ವಿಮಾ ಪಾಲಿಸಿಗಳ ಮಾರಾಟವು ಹೆಚ್ಚಳವಾಗಿದೆ. ಅದರಲ್ಲೂ ಹಿರಿಯ ನಾಗರಿಕರ ಕಂತಿನ ದರದಲ್ಲಿ ವಿಶೇಷ ವ್ಯತ್ಯಾಸ ಕಂಡುಬಂದಿದೆ. ಅಹ್ಮದಾಬಾದ್ ಮೂಲದ ಇನ್ಶೂರೆನ್ಸ್ ದಲ್ಲಾಳಿ ಪ್ರಭಾತ್ ವಿಜ್ ಪ್ರಕಾರ ಮಧ್ಯಮ ವಯಸ್ಕ ವರ್ಗದಲ್ಲಿ ಆರೋಗ್ಯ ವಿಮೆಯ ಖರೀದಿಯು ಸರಾಸರಿ ಶೇಕಡಾ 10ರಿಂದ 15ರಷ್ಟು ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿ ಆರೋಗ್ಯ ವಿಮೆಯ ಖರೀದಿ ಅತ್ಯಂತ ಹೆಚ್ಚಾಗಿದ್ದು, ಶೇಕಡಾ 100ರಷ್ಟು […]

ಆರೋಗ್ಯ ವಿಮಾಕಂತಿನಲ್ಲಿ ಗಣನೀಯ ಏರಿಕೆ.. ಕೊರೊನಾ ಕಾರಣನಾ?
Follow us
ಆಯೇಷಾ ಬಾನು
|

Updated on: Nov 16, 2020 | 4:45 PM

ದೆಹಲಿ: ಕೊರೊನಾ, ವೈದ್ಯಕೀಯ ಕ್ಷೇತ್ರದ ಹಣದುಬ್ಬರ, ವಿಮೆಯ ವ್ಯಾಪ್ತಿ ವಿಸ್ತರಣೆ ಮೊದಲಾದ ಕಾರಣಗಳಿಂದ ಆರೋಗ್ಯ ವಿಮಾಕಂತಿನ ದರದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. ಆರೋಗ್ಯ ವಿಮಾ ಪಾಲಿಸಿಗಳ ಮಾರಾಟವು ಹೆಚ್ಚಳವಾಗಿದೆ. ಅದರಲ್ಲೂ ಹಿರಿಯ ನಾಗರಿಕರ ಕಂತಿನ ದರದಲ್ಲಿ ವಿಶೇಷ ವ್ಯತ್ಯಾಸ ಕಂಡುಬಂದಿದೆ.

ಅಹ್ಮದಾಬಾದ್ ಮೂಲದ ಇನ್ಶೂರೆನ್ಸ್ ದಲ್ಲಾಳಿ ಪ್ರಭಾತ್ ವಿಜ್ ಪ್ರಕಾರ ಮಧ್ಯಮ ವಯಸ್ಕ ವರ್ಗದಲ್ಲಿ ಆರೋಗ್ಯ ವಿಮೆಯ ಖರೀದಿಯು ಸರಾಸರಿ ಶೇಕಡಾ 10ರಿಂದ 15ರಷ್ಟು ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿ ಆರೋಗ್ಯ ವಿಮೆಯ ಖರೀದಿ ಅತ್ಯಂತ ಹೆಚ್ಚಾಗಿದ್ದು, ಶೇಕಡಾ 100ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ(2019-20)ದ ಅವಧಿಯಲ್ಲಿ ಹಿರಿಯ ನಾಗರಿಕರ ಕಂತಿನ ದರವು, ಇಬ್ಬರಿಗೆ 28,000 ರೂಪಾಯಿಗಳಷ್ಟಿತ್ತು. ಈಗ ಕಂತಿನ ದರವು 55,000-60,000 ರೂಪಾಯಿಗಳಾಗಿದ್ದು, ವಿಮೆಯ ಮೊತ್ತ ದ್ವಿಗುಣಗೊಂಡಿದೆ ಎಂದಿದ್ದಾರೆ.

ವಿಮೆ ಜಾಗೃತಿಗಾಗಿ ಇರುವ ಸ್ವತಂತ್ರ ಸಂಸ್ಥೆ, Beshak.org ಸಂಸ್ಥಾಪಕ ಮಹಾವೀರ್ ಚೋಪ್ರಾ, ಕಳೆದ ವರ್ಷ ವಿಮೆಯ ಕಂತಿನ ದರದಲ್ಲಿ ಕೇವಲ ಶೇಕಡಾ 10ರಷ್ಟು ಏರಿಕೆಯಾಗಿತ್ತು. ಈ ಬಾರಿ ಶೇಕಡಾ 25ರಿಂದ35 ರವರೆಗೆ ಹೆಚ್ಚಳಗೊಂಡಿದೆ. ವಿಶೇಷವಾಗಿ ಹಿರಿಯ ನಾಗರಿಕರ ವಿಮೆಯ ಕಂತಿನ ಮೊತ್ತವು ಶೇಕಡಾ 50ರಿಂದ 75ರವರೆಗೆ ಏರಿಕೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಕೊರೊನಾ ಕಾರಣ ಆಯ್ತಾ? ಕೊವಿಡ್-19ಗೂ ಮೊದಲು ಆರೋಗ್ಯ ವಿಮೆಯ ಮೊತ್ತವನ್ನು ಪಡೆದುಕೊಳ್ಳುವವರ ಸಂಖ್ಯೆ 8-9 ಶೇಕಡಾದಷ್ಟಿತ್ತು. ಅದರೆ ಈಗ ವಿಮಾ ಮೊತ್ತದ ಸೌಲಭ್ಯ ಬಳಸುವವರ ಸಂಖ್ಯೆ ಶೇಕಡಾ 15ರಿಂದ18ರಷ್ಟಾಗಿದೆ. ಕೊವಿಡ್ ವಿಮೆಯ ಮೂಲಕ ಸರಾಸರಿ 1.6ರಿಂದ2 ಲಕ್ಷ ಮೊತ್ತವನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಕೊರೊನಾ ಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತ ಬೇಕಾಗಬಹುದು ಎಂದು ಇನ್ಶೂರೆನ್ಸ್ ಕಂಪೆನಿಗಳು ಊಹಿಸಿರಲಿಲ್ಲ ಎಂದು ಪ್ರಭಾತ್ ವಿಜ್ ವಿವರಿಸಿದ್ದಾರೆ.

ಕೊವಿಡ್ ಕಾರಣದಿಂದ ವೈದ್ಯಕೀಯ ಕ್ಷೇತ್ರವು ಹಣದುಬ್ಬರ ಎದುರಿಸಿದೆ. ಕೊರೊನಾದಿಂದಾಗಿ ಇತರ ರೋಗಿಗಳಿಗೂ ಆರ್ಥಿಕ ಹೊಡೆತ ಬಿದ್ದಿದೆ. ಸ್ಯಾನಿಟೈಸೇಷನ್, ಸೋಂಕಿತರ ನಿರ್ವಾಹಣೆ ಮುಂತಾದ ಕಾರಣಗಳಿಂದ ಆಸ್ಪತ್ರೆಗಳ ಖರ್ಚು ಏರಿಕೆಯಾಗಿದೆ. ಹಲವೆಡೆ ಸಾರ್ವಜನಿಕರು, ಸರ್ಕಾರಿ ಆಸ್ಪತ್ರೆಗಳಿಗಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಇದರಿಂದ ಚಿಕಿತ್ಸಾ ವೆಚ್ಚವೂ ಹೆಚ್ಚು ಬರುತ್ತದೆ. ಆಸ್ಪತ್ರೆಯ ಬಿಲ್ಗೆ ನಿಯಮ, ನಿಬಂಧನೆಗಳಿಲ್ಲ. ಇದು ವೈದ್ಯಕೀಯ ವೆಚ್ಚದ ಏರಿಕೆಗೆ ಕಾರಣ ಎಂದು ಮಹಾವೀರ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್