AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

26 ವರ್ಷದ ಈ ಯುವಕ.. ಅಭಿನವ ಕುಂಭಕರ್ಣ! ನಿದ್ದೆ ಮಾಡಲು ಶುರು ಮಾಡಿದವನು ಒಂದು ವಾರ ಕಾಲ ಎದ್ದಿಲ್ಲ! ಆ ಮೇಲೆ?

‘ಕುಂಭಕರ್ಣ ಸಿಂಡ್ರೋಮ್’ ಸುದೀರ್ಘ ನಿದ್ರೆ ಕಾಯಿಲೆಗೆ ಸರಿಯಾದ ಚಿಕಿತ್ಸೆ ಮತ್ತು ರೋಗದ ಕಾರಣಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಈ ರೋಗಕ್ಕೆ ಸ್ಪಷ್ಟ ಕಾರಣಗಳಿಲ್ಲ. ವೈರಲ್ ಸೋಂಕು ಸಹ ಕಾರಣ ಇರಬಹುದು ಎನ್ನಲಾಗಿದೆ. ಮನಸ್ಸಿಗೆ ಖುಷಿಯಾಗಬೇಕು ಎಂಬ ಉದ್ದೇಶದಿಂದ ಮಲಗಲು ಶುರು ಮಾಡಿದರೂ ದೇಹ ಏಳಲು ನೆರವಾಗುವುದಿಲ್ಲ.

26 ವರ್ಷದ ಈ ಯುವಕ.. ಅಭಿನವ ಕುಂಭಕರ್ಣ! ನಿದ್ದೆ ಮಾಡಲು ಶುರು ಮಾಡಿದವನು ಒಂದು ವಾರ ಕಾಲ ಎದ್ದಿಲ್ಲ! ಆ ಮೇಲೆ?
ನಿದ್ದೆ ಮಾಡಲು ಶುರು ಮಾಡಿದ ಈ ಯುವಕ.. ಒಂದು ವಾರ ಕಾಲ ಎದ್ದಿಲ್ಲ!
Follow us
ಸಾಧು ಶ್ರೀನಾಥ್​
|

Updated on:Nov 13, 2023 | 10:49 AM

26 ವರ್ಷದ ಯುವಕ ಸತತ ಎಂಟು ದಿನ ಮಲಗಿದ್ದ! ಈತನ ಅಸಹಜ ನಿದ್ದೆಯ ಪರಿಸ್ಥಿತಿಯನ್ನು ಕಂಡು ಮನೆಯವರು ಆತಂಕಗೊಂಡರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಆತ ಎಂಟು ದಿನಗಳ ಕಾಲ ನಿದ್ರೆಯಲ್ಲಿದ್ದ -ಆತ ತಿನ್ನುವುದಕ್ಕೆ ಮತ್ತು ಸ್ನಾನಕ್ಕೆ ಹೋಗುವುದು ಮುಂತಾದ ಮೂಲ ಚಟುವಟಿಕೆಗಳನ್ನು ಪೂರೈಸಲು ಕೆಲವೇ ಬಾರಿ ಎಚ್ಚರಗೊಂಡಿದ್ದ… ಅದೂ ಅರೆಪ್ರಜ್ಞಾವಸ್ಥೆಯಲ್ಲಿ. ವೈದ್ಯರು ಯುವಕ ಕ್ಲೈನ್-ಲೆವಿನ್ ಸಿಂಡ್ರೋಮ್ (ಕೆಎಲ್ಎಸ್) ರೋಗಕ್ಕೆ ತುತ್ತಾಗಿರುವುದಾಗಿ ನಿರ್ಣಯಿಸಿದರು. ಯುವಕನ ಆರೋಗ್ಯ ಸ್ಥಿತಿ ಕುರಿತು ವೋಕಾರ್ಡ್ ಆಸ್ಪತ್ರೆಯ ನರರೋಗ ತಜ್ಞ ಡಾ. ಪ್ರಶಾಂತ್ ಮಖಿಜ ಹೀಗೆ ವಿವರಿಸಿದ್ದಾರೆ: KLS ಒಂದು ಸಂಕೀರ್ಣ ರೋಗ. ಈ ರೋಗದ ನಿಖರವಾದ ಕಾರಣವನ್ನು ವೈದ್ಯಕೀಯ ವಿಜ್ಞಾನವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಈ ರೋಗ ಬಹಳ ಅಪರೂಪ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಯುವಕನ ಅಸಹಜ ನಿದ್ರೆಯನ್ನು ಗಮನಿಸಿದ ಕುಟುಂಬ ಸದಸ್ಯರು ಮೊದಲು ಸ್ಥಳೀಯ ವೈದ್ಯರು ಮತ್ತು ಮಂತ್ರ ಮಾಟಗಾತಿಯರನ್ನು ಸಂಪರ್ಕಿಸಿದರು. ಆದರೆ, ಯಾವುದೇ ಫಲ ಸಿಗಲಿಲ್ಲ. ಆತ ಅದೇ ರೀತಿಯಲ್ಲಿ ನಿದ್ರೆ ಮುಂದುವರೆಸಿದ್ದಾನೆ. ಆತಂಕಗೊಂಡ ಮನೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದರು. ಅವರ ವೈದ್ಯ ಲೋಕದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಕಳೆದ ವರ್ಷ ಎರಡು ಪ್ರಕರಣಗಳು ವರದಿಯಾಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಈ ರೋಗಕ್ಕೆ ಸ್ಪಷ್ಟ ಕಾರಣಗಳಿಲ್ಲ. ವೈರಲ್ ಸೋಂಕು ಸಹ ಕಾರಣ ಇರಬಹುದು ಎನ್ನಲಾಗಿದೆ. ಮನಸ್ಸಿಗೆ ಖುಷಿಯಾಗಬೇಕು ಎಂಬ ಉದ್ದೇಶದಿಂದ ಮಲಗಲು ಶುರು ಮಾಡಿದರೂ ದೇಹ ಏಳಲು ನೆರವಾಗುತ್ತಿಲ್ಲ. ಈ ಮೂಲಕ ದಿನಗಟ್ಟಲೆ ನಿದ್ರಾವಸ್ಥೆಯಲ್ಲಿ ಇರುವುದಾಗಿ ಹೇಳಿದರು.

Also Read: ಮಲಗುವಾಗ ಸ್ಮಾರ್ಟ್​ಫೋನ್ ಅನ್ನು ತಪ್ಪಿಯೂ ಈ ಸ್ಥಳದಲ್ಲಿ ಇಡಬೇಡಿ

KLS ಅನ್ನು ಪತ್ತೆ ಹಚ್ಚಲು ಯಾವುದೇ ನಿರ್ದಿಷ್ಟ ಪರೀಕ್ಷೆಗಳಿಲ್ಲ. ನರರೋಗ ತಜ್ಞ ಡಾ. ರಾಹುಲ್ ಚಾಕೋರ್ ಮಾತನಾಡಿ, 12ರಿಂದ 25 ವರ್ಷದೊಳಗಿನ ಹದಿಹರೆಯದವರು ಮತ್ತು ಯುವಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ವೈದ್ಯರು ಈ ರೋಗವನ್ನು ‘ಕುಂಭಕರ್ಣ ಸಿಂಡ್ರೋಮ್’ ಎಂದೂ ಕರೆಯುತ್ತಾರೆ. ಆದರೆ, ಈ ಅಪರೂಪದ ಕಾಯಿಲೆ ಜಗತ್ತಿನಲ್ಲಿ ಕೆಲವೇ ಕೆಲವು ಜನರಲ್ಲಿ ಮಾತ್ರ ಕಂಡುಬರುತ್ತದೆ. ಅಂಥವರಿಗೆ ಸೂಕ್ತ ಚಿಕಿತ್ಸೆ ಬೇಕು.. ಆದರೆ ಅದರಿಂದ ಚೇತರಿಸಿಕೊಳ್ಳುತ್ತಾರೋ, ಇಲ್ಲವೋ ಎಂಬುದನ್ನು ಖಚಿತವಾಗಿ ಹೇಳಲು ವೈದ್ಯರಿಗೂ ಸಾಧ್ಯವಾಗುತ್ತಿಲ್ಲ.

ಇತ್ತೀಚೆಗೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಭದ್ವಾ ಗ್ರಾಮದ ವ್ಯಕ್ತಿಯೊಬ್ಬರು ಇಂತಹ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಆತನೂ ಹೀಗೆಯೇ ದಿನಗಟ್ಟಲೆ ನಿದ್ದೆಗೆ ಜಾರಿದ್ದ. ಆತನನ್ನು ಎಬ್ಬಿಸಲು ಮನೆಯವರು ಮಾಡಿದ ತಂತ್ರಗಳುನ ಒಂದೆರಡಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ‘ಕುಂಭಕರ್ಣ ಸಿಂಡ್ರೋಮ್’ ಸುದೀರ್ಘ ನಿದ್ರೆ ಕಾಯಿಲೆಗೆ ಸರಿಯಾದ ಚಿಕಿತ್ಸೆ ಮತ್ತು ರೋಗದ ಕಾರಣಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 10:46 am, Mon, 13 November 23

ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್